ETV Bharat / state

ಹೇಮಾವತಿ ಜಲಾಶಯ ಸಂತ್ರಸ್ತರಿಗೆ ಹಕ್ಕುಪತ್ರ ಮಂಜೂರಿಗೆ ಕಾನೂನು ತಿದ್ದುಪಡಿ: ಸಚಿವ ಅಶೋಕ್

author img

By

Published : Dec 26, 2022, 8:35 PM IST

ಹೇಮಾವತಿ ಜಲಾಶಯ ಮುಳುಗಡೆ ಸಂತ್ರಸ್ತರಿಗೆ ಹಕ್ಕುಪತ್ರ ನೀಡುವ ವಿಚಾರವಾಗಿ ಸಚಿವ ಆರ್‌.ಅಶೋಕ್‌ ವಿಧಾನಸಭೆಯಲ್ಲಿ ಮಾತನಾಡಿದರು.

Revenue Minister R Ashok
ಕಂದಾಯ ಸಚಿವ ಆರ್ ಅಶೋಕ್

ಬೆಳಗಾವಿ : ಹಾಸನ ಜಿಲ್ಲೆ ಹೇಮಾವತಿ ಜಲಾಶಯ ವ್ಯಾಪ್ತಿಯ ನಿರಾಶ್ರಿತರಿಗೆ ಹಕ್ಕುಪತ್ರ ನೀಡಲು ಕಾನೂನು ತಿದ್ದುಪಡಿ ಮಾಡಿ ನ್ಯಾಯ ಒದಗಿಸಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ್ ವಿಧಾನಸಭೆಯಲ್ಲಿ ತಿಳಿಸಿದರು. ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿದ ನಂತರ ಅನುಭೋಗದಾರರ ಪೂರ್ವಿಕರ ಮಹಜರು ಮಾಡಿ ಮುಳುಗಡೆ ಸಂತ್ರಸ್ತರನ್ನು ಗುರುತಿಸಿ ನೈಜ ಫಲಾನುಭವಿಗಳಿಗೆ ಹಕ್ಕುಪತ್ರ ನೀಡುತ್ತೇವೆ ಎಂದರು.

ಈ ಕುರಿತು ಪ್ರಶ್ನೋತ್ತರ ವೇಳೆಯಲ್ಲಿ ಸಕಲೇಶಪುರ ಶಾಸಕ ಹೆಚ್.ಕೆ.ಕುಮಾರಸ್ವಾಮಿ ಅವರು ಆರ್.ಅಶೋಕ್​ಗೆ ವಿಧಾನಸಭೆಯಲ್ಲಿ ಪ್ರಶ್ನೆ ಕೇಳಿದರು. ಹಾಸನ ಜಿಲ್ಲೆ ಆಲೂರು ತಾಲೂಕು ಬ್ಯಾಬಾ ಫಾರೆಸ್ಟ್ ಗ್ರಾಮದಲ್ಲಿ ಹೇಮಾವತಿ ಜಲಾಶಯ ಮುಳುಗಡೆ ಸಂತ್ರಸ್ತರಿಗೆ ಬದಲಿ ಜಮೀನು ಮಂಜೂರಾಗಿದ್ದರೂ ದುರಸ್ತು ಆಗದೇ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಅವರು ಮಾತನಾಡಿದರು.

ಸಚಿವ ಆರ್.ಅಶೋಕ್ ಉತ್ತರಿಸಿ, ಹೇಮಾವತಿ ಜಲಾಶಯ ಯೋಜನೆಯಡಿ 234 ಮುಳುಗಡೆ ಸಂತ್ರಸ್ತರಿಗೆ ಆಲೂರು ತಾಲೂಕಿನಲ್ಲಿ ಬದಲಿ ಜಮೀನು ನೀಡಲಾಗಿದೆ. ಬ್ಯಾಬಾ ಫಾರೆಸ್ಟ್ ಗ್ರಾಮದ ಸರ್ವೆ ನಂಬರ್ 1 ರ 1505 ಎಕರೆ ಜಮೀನಿನಲ್ಲಿ ಏಕವ್ಯಕ್ತಿ ಕೋರಿಕೆ ಮೇರೆಗೆ 58 ಜನರಿಗೆ 207 ಎಕರೆ 28 ಗುಂಟೆ ಜಮೀನು ದುರಸ್ತುಗೊಳಿಸಲಾಗಿದೆ.

ಸ್ವಾಧೀನಾನುಭವದ ಆಧಾರದ ಮೇಲೆ ದುರಸ್ತು(ಮೋಜಣಿ) ಮಾಡಲು ನಿಯಮಗಳಲ್ಲಿ ಅವಕಾಶವಿರುವುದಿಲ್ಲ, ಹಲವರಿಗೆ ಭೂಮಿ ಮಂಜೂರಾಗಿದ್ದರೂ ಕೂಡ, ಕೆಲವರ ಹಕ್ಕುಪತ್ರಗಳಲ್ಲಿ ನೈಜತೆ ಕೊರತೆಗಳಿವೆ. ಇದರಿಂದಾಗಿ ಜಮೀನಿನ ಅನುಭೋಗದಾರರಿಗೆ ಕೊಡಲು ಅವಕಾಶ ಇಲ್ಲ, ದಾಖಲೆ ಕೊಟ್ಟರೆ ಮಂಜೂರು ಮಾಡಲಾಗುವುದು ಎಂದರು. ಬಳಿಕ ಶಾಸಕ ಎ.ಟಿ ರಾಮಸ್ವಾಮಿ ಮಾತನಾಡಿ, ಸಂತ್ರಸ್ತರ ಹೆಸರಿನಲ್ಲಿ ಅಕ್ರಮಗಳಾಗಿವೆ, ಆ ಬಗ್ಗೆ ತನಿಖೆ ಆಗುತ್ತಿದೆ, ಮೂಲ ದಾಖಲೆಗಳು ಕಂದಾಯ ಇಲಾಖೆಯಲ್ಲಿರಬೇಕು, ದಾಖಲೆಗನ್ನು ಒದಗಿಸು ಹೊಣೆ ಕಂದಾಯ ಇಲಾಖೆಯದ್ದೇ ಆಗಿದೆ ಎಂದು ತಿಳಿಸಿದರು.

ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರತಿಕ್ರಿಯಿಸಿ, ಜಲಾಶಯ ಯೋಜನೆಗಳಿಗೆ ತಮ್ಮ ಆಸ್ತಿ-ಪಾಸ್ತಿ ಮುಳುಗಡೆಗೊಂಡು ತ್ಯಾಗ ಮಾಡಿದ ಜನರಿಗೆ ನ್ಯಾಯ ಒದಗಿಸಬೇಕು. ಇದನ್ನು ಸರಿಪಡಿಸಲು ಹಿರಿಯ ಐಎಎಸ್ ಅಧಿಕಾರಿಯೊಬ್ಬರನ್ನು ವಿಶೇಷಾಧಿಕಾರಿಯನ್ನಾಗಿ ನೇಮಿಸಿ ತ್ವರಿತವಾಗಿ ಪರಿಹಾರ ಒದಗಿಸಿ ಮಾನವೀಯತೆ ಮೆರೆಯಬೇಕು ಎಂದು ಹೇಳಿದರು.

ಇದನ್ನೂ ಓದಿ: ಹೇಮಾವತಿ ಜಲಾಶಯದಿಂದ ನೀರು ಹರಿಸುವುದನ್ನು ನಿಲ್ಲಿಸಲು ತೀರ್ಮಾನ: ಸಚಿವ ಗೋಪಾಲಯ್ಯ

ಸಾಲಿಗ್ರಾಮ ತಾಲೂಕು ಕೇಂದ್ರದಲ್ಲಿ ಆಡಳಿತ ಸೌಧ: ಮೈಸೂರು ಜಿಲ್ಲೆ ಸಾಲಿಗ್ರಾಮ ತಾಲೂಕು ಕೇಂದ್ರದಲ್ಲಿ ತಾಲೂಕು ಆಡಳಿತಸೌಧ ಹಾಗೂ ವಿವಿಧ ಇಲಾಖೆಗಳ ಆರಂಭಕ್ಕೆ ಚಾಲನೆ ನೀಡಲಾಗುವುದು ಎಂದು ಶಾಸಕ ಸಾ.ರಾ.ಮಹೇಶ್ ಅವರ ಪ್ರಶ್ನೆಗೆ ಸಚಿವ ಆರ್.ಆಶೋಕ್ ಉತ್ತರಿಸಿದರು. ಸಾಲಿಗ್ರಾಮ ನೂತನ ತಾಲೂಕಿನಲ್ಲಿ ಕಂದಾಯ ಇಲಾಖೆ ವತಿಯಿಂದ ತಹಸೀಲ್ದಾರ್ ಕಚೇರಿಯನ್ನು ಪ್ರಾರಂಭಿಸಲಾಗಿದೆ. ಇನ್ನುಳಿದ ಇಲಾಖೆಗಳ ತಾಲೂಕು ಮಟ್ಟದ ಕಚೇರಿಗಳನ್ನು ಪ್ರಾರಂಭಿಸಲು ಅನುವಾಗುವಂತೆ ಆರ್ಥಿಕ ಇಲಾಖೆಯ ಸಹಮತಿಯೊಂದಿಗೆ ಅಗತ್ಯ ಸಂಖ್ಯೆಯ ಹುದ್ದೆಗಳನ್ನು ಮಂಜೂರು ಮಾಡಿ ಕಚೇರಿಗಳನ್ನು ಪ್ರಾರಂಭಿಸಲು ಎಲ್ಲಾ ಇಲಾಖೆಗಳ ಅಪರ ಮುಖ್ಯ ಕಾರ್ಯದರ್ಶಿಗಳು ಹಾಗೂ ಪ್ರಧಾನ ಕಾರ್ಯದರ್ಶಿಗಳಿಗೆ ನಿರ್ದೇಶನ ನೀಡಲಾಗಿದೆ. ತಾಲೂಕುಗಳಲ್ಲಿ ಆಡಳಿತ ಭವನ ನಿರ್ಮಿಸಲು ಹಣಕಾಸಿನ ಲಭ್ಯತೆ ಆಧರಿಸಿ ಆಡಳಿತಾತ್ಮಕ ಅನುಮೋದನೆ ನೀಡಲಾಗುವುದು ಎಂದು ಸಚಿವರು ತಿಳಿಸಿದರು.

ಇದನ್ನೂ ಓದಿ: ಹೇಮಾವತಿ ಜಲಾಶಯ ಸಂತ್ರಸ್ತರ ಹೆಸರಲ್ಲಿ ಅಕ್ರಮ ಭೂ ಮಂಜೂರಾತಿ ಆರೋಪ; ಆರ್‌ಐ ಅರೆಸ್ಟ್

ಬೆಳಗಾವಿ : ಹಾಸನ ಜಿಲ್ಲೆ ಹೇಮಾವತಿ ಜಲಾಶಯ ವ್ಯಾಪ್ತಿಯ ನಿರಾಶ್ರಿತರಿಗೆ ಹಕ್ಕುಪತ್ರ ನೀಡಲು ಕಾನೂನು ತಿದ್ದುಪಡಿ ಮಾಡಿ ನ್ಯಾಯ ಒದಗಿಸಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ್ ವಿಧಾನಸಭೆಯಲ್ಲಿ ತಿಳಿಸಿದರು. ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿದ ನಂತರ ಅನುಭೋಗದಾರರ ಪೂರ್ವಿಕರ ಮಹಜರು ಮಾಡಿ ಮುಳುಗಡೆ ಸಂತ್ರಸ್ತರನ್ನು ಗುರುತಿಸಿ ನೈಜ ಫಲಾನುಭವಿಗಳಿಗೆ ಹಕ್ಕುಪತ್ರ ನೀಡುತ್ತೇವೆ ಎಂದರು.

ಈ ಕುರಿತು ಪ್ರಶ್ನೋತ್ತರ ವೇಳೆಯಲ್ಲಿ ಸಕಲೇಶಪುರ ಶಾಸಕ ಹೆಚ್.ಕೆ.ಕುಮಾರಸ್ವಾಮಿ ಅವರು ಆರ್.ಅಶೋಕ್​ಗೆ ವಿಧಾನಸಭೆಯಲ್ಲಿ ಪ್ರಶ್ನೆ ಕೇಳಿದರು. ಹಾಸನ ಜಿಲ್ಲೆ ಆಲೂರು ತಾಲೂಕು ಬ್ಯಾಬಾ ಫಾರೆಸ್ಟ್ ಗ್ರಾಮದಲ್ಲಿ ಹೇಮಾವತಿ ಜಲಾಶಯ ಮುಳುಗಡೆ ಸಂತ್ರಸ್ತರಿಗೆ ಬದಲಿ ಜಮೀನು ಮಂಜೂರಾಗಿದ್ದರೂ ದುರಸ್ತು ಆಗದೇ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಅವರು ಮಾತನಾಡಿದರು.

ಸಚಿವ ಆರ್.ಅಶೋಕ್ ಉತ್ತರಿಸಿ, ಹೇಮಾವತಿ ಜಲಾಶಯ ಯೋಜನೆಯಡಿ 234 ಮುಳುಗಡೆ ಸಂತ್ರಸ್ತರಿಗೆ ಆಲೂರು ತಾಲೂಕಿನಲ್ಲಿ ಬದಲಿ ಜಮೀನು ನೀಡಲಾಗಿದೆ. ಬ್ಯಾಬಾ ಫಾರೆಸ್ಟ್ ಗ್ರಾಮದ ಸರ್ವೆ ನಂಬರ್ 1 ರ 1505 ಎಕರೆ ಜಮೀನಿನಲ್ಲಿ ಏಕವ್ಯಕ್ತಿ ಕೋರಿಕೆ ಮೇರೆಗೆ 58 ಜನರಿಗೆ 207 ಎಕರೆ 28 ಗುಂಟೆ ಜಮೀನು ದುರಸ್ತುಗೊಳಿಸಲಾಗಿದೆ.

ಸ್ವಾಧೀನಾನುಭವದ ಆಧಾರದ ಮೇಲೆ ದುರಸ್ತು(ಮೋಜಣಿ) ಮಾಡಲು ನಿಯಮಗಳಲ್ಲಿ ಅವಕಾಶವಿರುವುದಿಲ್ಲ, ಹಲವರಿಗೆ ಭೂಮಿ ಮಂಜೂರಾಗಿದ್ದರೂ ಕೂಡ, ಕೆಲವರ ಹಕ್ಕುಪತ್ರಗಳಲ್ಲಿ ನೈಜತೆ ಕೊರತೆಗಳಿವೆ. ಇದರಿಂದಾಗಿ ಜಮೀನಿನ ಅನುಭೋಗದಾರರಿಗೆ ಕೊಡಲು ಅವಕಾಶ ಇಲ್ಲ, ದಾಖಲೆ ಕೊಟ್ಟರೆ ಮಂಜೂರು ಮಾಡಲಾಗುವುದು ಎಂದರು. ಬಳಿಕ ಶಾಸಕ ಎ.ಟಿ ರಾಮಸ್ವಾಮಿ ಮಾತನಾಡಿ, ಸಂತ್ರಸ್ತರ ಹೆಸರಿನಲ್ಲಿ ಅಕ್ರಮಗಳಾಗಿವೆ, ಆ ಬಗ್ಗೆ ತನಿಖೆ ಆಗುತ್ತಿದೆ, ಮೂಲ ದಾಖಲೆಗಳು ಕಂದಾಯ ಇಲಾಖೆಯಲ್ಲಿರಬೇಕು, ದಾಖಲೆಗನ್ನು ಒದಗಿಸು ಹೊಣೆ ಕಂದಾಯ ಇಲಾಖೆಯದ್ದೇ ಆಗಿದೆ ಎಂದು ತಿಳಿಸಿದರು.

ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರತಿಕ್ರಿಯಿಸಿ, ಜಲಾಶಯ ಯೋಜನೆಗಳಿಗೆ ತಮ್ಮ ಆಸ್ತಿ-ಪಾಸ್ತಿ ಮುಳುಗಡೆಗೊಂಡು ತ್ಯಾಗ ಮಾಡಿದ ಜನರಿಗೆ ನ್ಯಾಯ ಒದಗಿಸಬೇಕು. ಇದನ್ನು ಸರಿಪಡಿಸಲು ಹಿರಿಯ ಐಎಎಸ್ ಅಧಿಕಾರಿಯೊಬ್ಬರನ್ನು ವಿಶೇಷಾಧಿಕಾರಿಯನ್ನಾಗಿ ನೇಮಿಸಿ ತ್ವರಿತವಾಗಿ ಪರಿಹಾರ ಒದಗಿಸಿ ಮಾನವೀಯತೆ ಮೆರೆಯಬೇಕು ಎಂದು ಹೇಳಿದರು.

ಇದನ್ನೂ ಓದಿ: ಹೇಮಾವತಿ ಜಲಾಶಯದಿಂದ ನೀರು ಹರಿಸುವುದನ್ನು ನಿಲ್ಲಿಸಲು ತೀರ್ಮಾನ: ಸಚಿವ ಗೋಪಾಲಯ್ಯ

ಸಾಲಿಗ್ರಾಮ ತಾಲೂಕು ಕೇಂದ್ರದಲ್ಲಿ ಆಡಳಿತ ಸೌಧ: ಮೈಸೂರು ಜಿಲ್ಲೆ ಸಾಲಿಗ್ರಾಮ ತಾಲೂಕು ಕೇಂದ್ರದಲ್ಲಿ ತಾಲೂಕು ಆಡಳಿತಸೌಧ ಹಾಗೂ ವಿವಿಧ ಇಲಾಖೆಗಳ ಆರಂಭಕ್ಕೆ ಚಾಲನೆ ನೀಡಲಾಗುವುದು ಎಂದು ಶಾಸಕ ಸಾ.ರಾ.ಮಹೇಶ್ ಅವರ ಪ್ರಶ್ನೆಗೆ ಸಚಿವ ಆರ್.ಆಶೋಕ್ ಉತ್ತರಿಸಿದರು. ಸಾಲಿಗ್ರಾಮ ನೂತನ ತಾಲೂಕಿನಲ್ಲಿ ಕಂದಾಯ ಇಲಾಖೆ ವತಿಯಿಂದ ತಹಸೀಲ್ದಾರ್ ಕಚೇರಿಯನ್ನು ಪ್ರಾರಂಭಿಸಲಾಗಿದೆ. ಇನ್ನುಳಿದ ಇಲಾಖೆಗಳ ತಾಲೂಕು ಮಟ್ಟದ ಕಚೇರಿಗಳನ್ನು ಪ್ರಾರಂಭಿಸಲು ಅನುವಾಗುವಂತೆ ಆರ್ಥಿಕ ಇಲಾಖೆಯ ಸಹಮತಿಯೊಂದಿಗೆ ಅಗತ್ಯ ಸಂಖ್ಯೆಯ ಹುದ್ದೆಗಳನ್ನು ಮಂಜೂರು ಮಾಡಿ ಕಚೇರಿಗಳನ್ನು ಪ್ರಾರಂಭಿಸಲು ಎಲ್ಲಾ ಇಲಾಖೆಗಳ ಅಪರ ಮುಖ್ಯ ಕಾರ್ಯದರ್ಶಿಗಳು ಹಾಗೂ ಪ್ರಧಾನ ಕಾರ್ಯದರ್ಶಿಗಳಿಗೆ ನಿರ್ದೇಶನ ನೀಡಲಾಗಿದೆ. ತಾಲೂಕುಗಳಲ್ಲಿ ಆಡಳಿತ ಭವನ ನಿರ್ಮಿಸಲು ಹಣಕಾಸಿನ ಲಭ್ಯತೆ ಆಧರಿಸಿ ಆಡಳಿತಾತ್ಮಕ ಅನುಮೋದನೆ ನೀಡಲಾಗುವುದು ಎಂದು ಸಚಿವರು ತಿಳಿಸಿದರು.

ಇದನ್ನೂ ಓದಿ: ಹೇಮಾವತಿ ಜಲಾಶಯ ಸಂತ್ರಸ್ತರ ಹೆಸರಲ್ಲಿ ಅಕ್ರಮ ಭೂ ಮಂಜೂರಾತಿ ಆರೋಪ; ಆರ್‌ಐ ಅರೆಸ್ಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.