ಚಿಕ್ಕೋಡಿ : ಸರ್ಕಾರದ ಆದೇಶ ಮೇರೆಗೆ ಬೆಳಗಾವಿಯಲ್ಲಿ 144 ಜಾರಿಯಲ್ಲಿದ್ದರೂ ಕೂಡ ಸಾರ್ವಜನಿಕರು ಹುಕ್ಕೇರಿಯಲ್ಲಿ ಸಂತೆ ಮಾಡಲು ಮುಂದಾಗಿದ್ದು, ತಹಶೀಲ್ದಾರ್ ಅಶೋಕ್ ಗುರಾಣಿ ಹೆಚ್ಚು ಜನರು ಸೇರದಂತೆ ಮನವಿ ಮಾಡಿಕೊಂಡಿದ್ದಾರೆ.
ಸಾರ್ವಜನಿಕರು ಹುಕ್ಕೇರಿಯಲ್ಲಿ ಸಂತೆ ಮಾಡಲು ಮುಂದಾದಾಗ ಸ್ವತಃ ಹುಕ್ಕೇರಿ ತಹಶೀಲ್ದಾರ್ ಅಶೋಕ ಗುರಾಣಿ ಬಂದು ಸಂತೆ ನಡೆಸಬಾರದು ಎಂದು ಮನವಿ ಮಾಡಿಕೊಂಡರು. ಇನ್ನು ಹೋಟೆಲ್ನಲ್ಲಿ ಪಾರ್ಸಲ್ ಮಾತ್ರ ನೀಡಲು ಅವಕಾಶವಿದ್ದು, ಅಲ್ಲಿಯೇ ಜನರಿಗೆ ಆಹಾರ ನೀಡಿ ತಿನ್ನುವಂತೆ ಮಾಡುವುದು ಅಪರಾಧ. ಅಂತಹ ಹೋಟೆಲ್ಗಳಿಗೆ ತೆರಳಿ ತೆರವು ಮಾಡಿಸಿದರು.
ಈಗಾಗಲೇ ದೇವಸ್ಥಾನಗಳಲ್ಲಿ ಐದಕ್ಕಿಂತ ಹೆಚ್ಚು ಜನರು ಹೋಗುವುದನ್ನು ನಿಷೇಧಿಸಲಾಗಿದೆ. ಅದರಂತೆ ಮಸೀದಿಗಳಲ್ಲಿ ಕೂಡಾ ಐದಕ್ಕಿಂತ ಹೆಚ್ಚು ಜನರು ಸೇರ ಬೇಡಿ ಎಂದು ಹೇಳಿದರು.