ETV Bharat / state

ಯುವ ಜನತೆಯಿಂದ ಸದೃಢ ರಾಷ್ಟ್ರ ನಿರ್ಮಾಣ ಸಾಧ್ಯ: ಥಾವರ್ ಚಂದ್ ಗೆಹ್ಲೋಟ್ - ಯುವ ಸಂಘದ ಯುವ ಪಥ ಅಮೃತಮಹೋತ್ಸವ ಕಟ್ಟಡ ಲೋಕಾರ್ಪಣೆ

ಹೆಚ್ಚಿನ ಯುವಜನರು ಯಶಸ್ವಿ ಮತ್ತು ಅರ್ಥಪೂರ್ಣ ಜೀವನವನ್ನು ನಡೆಸಲು ಬಯಸುತ್ತಾರೆ, ಆದರೆ ಅವರು ಈ ಗುರಿಯನ್ನು ಸಾಧಿಸಲು ದೈಹಿಕವಾಗಿ ಮತ್ತು ಮಾನಸಿಕವಾಗಿ ಸಿದ್ಧರಾಗಿರುವುದಿಲ್ಲ ಎಂಬುದು ಸ್ವಾಮಿ ವಿವೇಕಾನಂದವರ ಅಭಿಪ್ರಾಯವಾಗಿತ್ತು, ಹಾಗಾಗಿ, ಸ್ವಾಮೀಜಿ ಅವರು ಯುವಕರು ನಿರ್ಭೀತರಾಗಿ ತಮ್ಮನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯವಂತರನ್ನಾಗಿ ಮಾಡಿಕೊಳ್ಳುವಂತೆ ರಾಜ್ಯಪಾಲರಾದ ಗೆಹ್ಲೋಟ್ ಮನವಿ ಮಾಡಿದರು.

young-people-can-build-a-strong-nation-governor-thavar-chand-gehlot
ಥಾವರ್ ಚಂದ್ ಗೆಹ್ಲೋಟ್
author img

By

Published : Oct 14, 2021, 2:49 AM IST

ಬೆಂಗಳೂರು: ಯುವಜನತೆಯ ಅಪಾರ ಶಕ್ತಿಯನ್ನು ಸಾಮಾಜಿಕ ಕಲ್ಯಾಣ ಮತ್ತು ರಾಷ್ಟ್ರ ನಿರ್ಮಾಣಕ್ಕೆ ಬಳಸುವುದು ಅಗತ್ಯವಾಗಿದ್ದು, ಸ್ವಾಮಿ ವಿವೇಕಾನಂದರ ಆಶಯದಂತೆ ಸಮಾಜದಲ್ಲಿ ಉತ್ತಮ ಬದಲಾವಣೆ ತರುವ ಸಾಮರ್ಥ್ಯವಿರುವಂತಹ ಯುವಜನರಲ್ಲಿ ಸಕರಾತ್ಮಕ ಶಕ್ತಿ ಮತ್ತು ಉತ್ಸಾಹವನ್ನು ತುಂಬುವ ಕಾರ್ಯವನ್ನು ನಾವೆಲ್ಲರೂ ಮಾಡಬೇಕಾಗಿದೆ ಎಂದು ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಹೇಳಿದರು.

ಜಯನಗರದಲ್ಲಿ ಯುವ ಸಂಘದ ಯುವ ಪಥ ಅಮೃತಮಹೋತ್ಸವ ಕಟ್ಟಡ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಯುವಜನತೆ ದೇಶದ ಭವಿಷ್ಯ ಹಾಗೂ ದೇಶದ ಅಭಿವೃದ್ಧಿಯ ಪ್ರಮುಖ ಭಾಗವಾಗಿದ್ದಾರೆ."ರಾಷ್ಟ್ರೀಯ ಯುವ ನೀತಿ -2014" ಅನ್ನು ಭಾರತ ಸರ್ಕಾರವು ಜಾರಿಗೆ ತಂದಿದೆ, ಇದರ ಉದ್ದೇಶ 'ಯುವಕರ ಸಾಮರ್ಥ್ಯವನ್ನು ಗುರುತಿಸುವುದು ಮತ್ತು ಸಬಲೀಕರಣಗೊಳಿಸುವುದು ಮತ್ತು ಈ ಮೂಲಕ ಭಾರತಕ್ಕೆ ವಿಶ್ವದಲ್ಲಿ ಸರಿಯಾದ ಸ್ಥಾನವನ್ನು ನೀಡುವುದು' ಎಂದು ರಾಜ್ಯಪಾಲರು ಮಾಹಿತಿ ನೀಡಿದರು.

ಭಾರತ ಯುವಕರ ದೇಶ. ದೇಶದ ಅಭಿವೃದ್ಧಿಗೆ ಯುವಕರು ಸಕ್ರಿಯವಾಗಿ ಕೊಡುಗೆ ನೀಡುವ ನಿರೀಕ್ಷೆಯಿದೆ. ದೇಶದ ಸ್ವಾತಂತ್ರ್ಯಕ್ಕಾಗಿ ಯುವಜನರಿಗೆ ನಿರ್ದೇಶನ ನೀಡುವ ಮತ್ತು ಸಮಾಜಕ್ಕಾಗಿ ಏನಾದರೂ ಮಾಡುವ ಉದ್ದೇಶದಿಂದ 1944ರಲ್ಲಿ ಈ ಸಂಸ್ಥೆಯು ಪತ್ರಿಕೆ ಓದುವ ಕೇಂದ್ರವಾಗಿ ಆರಂಭವಾಯಿತು. ಈ ಸ್ವಯಂಸೇವಾ ಸಂಸ್ಥೆಯು ತನ್ನ ಸ್ಥಾಪನೆಯ 75 ವರ್ಷಗಳಿಗಿಂತಲೂ ಹೆಚ್ಚು ಕಾಲ ಯುವಕರ ಸರ್ವತೋಮುಖ ಅಭಿವೃದ್ಧಿಗಾಗಿ ಮತ್ತು ದೇಶದ ಆಸಕ್ತಿಯ ಪ್ರಜ್ಞೆಯನ್ನು ಜಾಗೃತಗೊಳಿಸಲು ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು.

ಹೆಚ್ಚಿನ ಯುವಜನರು ಯಶಸ್ವಿ ಮತ್ತು ಅರ್ಥಪೂರ್ಣ ಜೀವನವನ್ನು ನಡೆಸಲು ಬಯಸುತ್ತಾರೆ, ಆದರೆ ಅವರು ಈ ಗುರಿಯನ್ನು ಸಾಧಿಸಲು ದೈಹಿಕವಾಗಿ ಮತ್ತು ಮಾನಸಿಕವಾಗಿ ಸಿದ್ಧರಾಗಿರುವುದಿಲ್ಲ ಎಂಬುದು ಸ್ವಾಮಿ ವಿವೇಕಾನಂದವರ ಅಭಿಪ್ರಾಯವಾಗಿತ್ತು, ಹಾಗಾಗಿ, ಸ್ವಾಮೀಜಿ ಅವರು ಯುವಕರು ನಿರ್ಭೀತರಾಗಿ ತಮ್ಮನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯವಂತರನ್ನಾಗಿ ಮಾಡಿಕೊಳ್ಳುವಂತೆ ಗೆಹ್ಲೋಟ್ ಮನವಿ ಮಾಡಿದರು.

'ನಾನು 100 ಶಕ್ತಿಯುತ ಯುವಕರನ್ನು ಪಡೆದರೆ, ನಾನು ಭಾರತವನ್ನು ಬದಲಾಯಿಸುತ್ತೇನೆ' ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದರು. ಅಂದರೆ ಸಮಾಜದಲ್ಲಿ ಬದಲಾವಣೆ ತರುವ ಸಾಮರ್ಥ್ಯವಿರುವ ಯುವಜನರಲ್ಲಿ ಇರುವ ಧನಾತ್ಮಕ ಶಕ್ತಿ ಮತ್ತು ಉತ್ಸಾಹವನ್ನು ಅವರು ಸೂಚಿಸಿದರು. ಸ್ವಾಮಿ ವಿವೇಕಾನಂದರು ಭಯಸಿದ್ದಂತಹ ಯುವಜನತೆ ಇಂದು ಭಾರತದಲ್ಲಿದ್ದು, ಅವರಿಗೆ ಸಕರಾತ್ಮಕ ನಿರ್ದೇಶನ ನೀಡಬೇಕಾಗಿದೆ ಎಂದು ರಾಜ್ಯಪಾಲರು ಅಭಿಪ್ರಾಯಪಟ್ಟರು.

ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹರಾದ ಶ್ರೀ ದತ್ತಾತ್ರೇಯ ಹೊಸಬಾಳೆ, ನ್ಯೂ ಹಾರಿಜನ್ ಶಿಕ್ಷಣ ಸಂಸ್ಥೆ ಅಧ್ಯಕ್ಷರಾದ ಡಾ. ಮೋಹನ್ ಮಂಘನಾನಿ, ಯುವಕ ಸಂಘದ ಅಧ್ಯಕ್ಷರಾದ ಪ್ರೊ. ಎಂ. ಕೆ. ಶ್ರೀಧರ್ ಸೇರಿದಂತೆ ಮುಂತಾದ ಗಣ್ಯರು ಉಪಸ್ಥಿತರಿದ್ದರು.

ಬೆಂಗಳೂರು: ಯುವಜನತೆಯ ಅಪಾರ ಶಕ್ತಿಯನ್ನು ಸಾಮಾಜಿಕ ಕಲ್ಯಾಣ ಮತ್ತು ರಾಷ್ಟ್ರ ನಿರ್ಮಾಣಕ್ಕೆ ಬಳಸುವುದು ಅಗತ್ಯವಾಗಿದ್ದು, ಸ್ವಾಮಿ ವಿವೇಕಾನಂದರ ಆಶಯದಂತೆ ಸಮಾಜದಲ್ಲಿ ಉತ್ತಮ ಬದಲಾವಣೆ ತರುವ ಸಾಮರ್ಥ್ಯವಿರುವಂತಹ ಯುವಜನರಲ್ಲಿ ಸಕರಾತ್ಮಕ ಶಕ್ತಿ ಮತ್ತು ಉತ್ಸಾಹವನ್ನು ತುಂಬುವ ಕಾರ್ಯವನ್ನು ನಾವೆಲ್ಲರೂ ಮಾಡಬೇಕಾಗಿದೆ ಎಂದು ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಹೇಳಿದರು.

ಜಯನಗರದಲ್ಲಿ ಯುವ ಸಂಘದ ಯುವ ಪಥ ಅಮೃತಮಹೋತ್ಸವ ಕಟ್ಟಡ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಯುವಜನತೆ ದೇಶದ ಭವಿಷ್ಯ ಹಾಗೂ ದೇಶದ ಅಭಿವೃದ್ಧಿಯ ಪ್ರಮುಖ ಭಾಗವಾಗಿದ್ದಾರೆ."ರಾಷ್ಟ್ರೀಯ ಯುವ ನೀತಿ -2014" ಅನ್ನು ಭಾರತ ಸರ್ಕಾರವು ಜಾರಿಗೆ ತಂದಿದೆ, ಇದರ ಉದ್ದೇಶ 'ಯುವಕರ ಸಾಮರ್ಥ್ಯವನ್ನು ಗುರುತಿಸುವುದು ಮತ್ತು ಸಬಲೀಕರಣಗೊಳಿಸುವುದು ಮತ್ತು ಈ ಮೂಲಕ ಭಾರತಕ್ಕೆ ವಿಶ್ವದಲ್ಲಿ ಸರಿಯಾದ ಸ್ಥಾನವನ್ನು ನೀಡುವುದು' ಎಂದು ರಾಜ್ಯಪಾಲರು ಮಾಹಿತಿ ನೀಡಿದರು.

ಭಾರತ ಯುವಕರ ದೇಶ. ದೇಶದ ಅಭಿವೃದ್ಧಿಗೆ ಯುವಕರು ಸಕ್ರಿಯವಾಗಿ ಕೊಡುಗೆ ನೀಡುವ ನಿರೀಕ್ಷೆಯಿದೆ. ದೇಶದ ಸ್ವಾತಂತ್ರ್ಯಕ್ಕಾಗಿ ಯುವಜನರಿಗೆ ನಿರ್ದೇಶನ ನೀಡುವ ಮತ್ತು ಸಮಾಜಕ್ಕಾಗಿ ಏನಾದರೂ ಮಾಡುವ ಉದ್ದೇಶದಿಂದ 1944ರಲ್ಲಿ ಈ ಸಂಸ್ಥೆಯು ಪತ್ರಿಕೆ ಓದುವ ಕೇಂದ್ರವಾಗಿ ಆರಂಭವಾಯಿತು. ಈ ಸ್ವಯಂಸೇವಾ ಸಂಸ್ಥೆಯು ತನ್ನ ಸ್ಥಾಪನೆಯ 75 ವರ್ಷಗಳಿಗಿಂತಲೂ ಹೆಚ್ಚು ಕಾಲ ಯುವಕರ ಸರ್ವತೋಮುಖ ಅಭಿವೃದ್ಧಿಗಾಗಿ ಮತ್ತು ದೇಶದ ಆಸಕ್ತಿಯ ಪ್ರಜ್ಞೆಯನ್ನು ಜಾಗೃತಗೊಳಿಸಲು ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು.

ಹೆಚ್ಚಿನ ಯುವಜನರು ಯಶಸ್ವಿ ಮತ್ತು ಅರ್ಥಪೂರ್ಣ ಜೀವನವನ್ನು ನಡೆಸಲು ಬಯಸುತ್ತಾರೆ, ಆದರೆ ಅವರು ಈ ಗುರಿಯನ್ನು ಸಾಧಿಸಲು ದೈಹಿಕವಾಗಿ ಮತ್ತು ಮಾನಸಿಕವಾಗಿ ಸಿದ್ಧರಾಗಿರುವುದಿಲ್ಲ ಎಂಬುದು ಸ್ವಾಮಿ ವಿವೇಕಾನಂದವರ ಅಭಿಪ್ರಾಯವಾಗಿತ್ತು, ಹಾಗಾಗಿ, ಸ್ವಾಮೀಜಿ ಅವರು ಯುವಕರು ನಿರ್ಭೀತರಾಗಿ ತಮ್ಮನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯವಂತರನ್ನಾಗಿ ಮಾಡಿಕೊಳ್ಳುವಂತೆ ಗೆಹ್ಲೋಟ್ ಮನವಿ ಮಾಡಿದರು.

'ನಾನು 100 ಶಕ್ತಿಯುತ ಯುವಕರನ್ನು ಪಡೆದರೆ, ನಾನು ಭಾರತವನ್ನು ಬದಲಾಯಿಸುತ್ತೇನೆ' ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದರು. ಅಂದರೆ ಸಮಾಜದಲ್ಲಿ ಬದಲಾವಣೆ ತರುವ ಸಾಮರ್ಥ್ಯವಿರುವ ಯುವಜನರಲ್ಲಿ ಇರುವ ಧನಾತ್ಮಕ ಶಕ್ತಿ ಮತ್ತು ಉತ್ಸಾಹವನ್ನು ಅವರು ಸೂಚಿಸಿದರು. ಸ್ವಾಮಿ ವಿವೇಕಾನಂದರು ಭಯಸಿದ್ದಂತಹ ಯುವಜನತೆ ಇಂದು ಭಾರತದಲ್ಲಿದ್ದು, ಅವರಿಗೆ ಸಕರಾತ್ಮಕ ನಿರ್ದೇಶನ ನೀಡಬೇಕಾಗಿದೆ ಎಂದು ರಾಜ್ಯಪಾಲರು ಅಭಿಪ್ರಾಯಪಟ್ಟರು.

ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹರಾದ ಶ್ರೀ ದತ್ತಾತ್ರೇಯ ಹೊಸಬಾಳೆ, ನ್ಯೂ ಹಾರಿಜನ್ ಶಿಕ್ಷಣ ಸಂಸ್ಥೆ ಅಧ್ಯಕ್ಷರಾದ ಡಾ. ಮೋಹನ್ ಮಂಘನಾನಿ, ಯುವಕ ಸಂಘದ ಅಧ್ಯಕ್ಷರಾದ ಪ್ರೊ. ಎಂ. ಕೆ. ಶ್ರೀಧರ್ ಸೇರಿದಂತೆ ಮುಂತಾದ ಗಣ್ಯರು ಉಪಸ್ಥಿತರಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.