ETV Bharat / state

ಮಳೆಗಾಲದಲ್ಲಿ ನೆರೆ ಸಮಸ್ಯೆ ಆಗದಂತೆ ಕ್ರಮ ಕೈಗೊಂಡಿದ್ದೇವೆ, ಆತಂಕ ಬೇಡ: ಪರಮೇಶ್ವರ್​​

ಡೇಂಘಿ ಪ್ರಕರಣ 2018 ರಲ್ಲಿ 248 ಆಗಿತ್ತು. ಈ ಸಾರಿ 240 ವರದಿಯಾಗಿದೆ. ಮಹದೇವಪುರ ಸೇರಿದಂತೆ ಹೆಚ್ಚು ಡೇಂಘಿ ಕಾಣಿಸಿಕೊಳ್ಳುವ ಸಾಧ್ಯತೆ ಇರುವಲ್ಲಿ ಮುನ್ನೆಚ್ಚರಿಕೆ ವಹಿಸಿದ್ದೇವೆ. ಈ ಸಾರಿ ನಿಯಂತ್ರಣ ಸಾಧ್ಯವಾಗಲಿದೆ.

author img

By

Published : Apr 24, 2019, 8:33 PM IST

ಸಚಿವ ಡಾ. ಜಿ. ಪರಮೇಶ್ವರ್

ಬೆಂಗಳೂರು: ನಗರದಲ್ಲಿ ಈ ಸಾರಿ ಮಳೆಗಾಲದಲ್ಲಿ ಯಾವುದೇ ಸಮಸ್ಯೆ ಆಗದ ರೀತಿ ಕ್ರಮ ಕೈಗೊಳ್ಳಲಾಗಿದೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಡಾ. ಜಿ.ಪರಮೇಶ್ವರ್ ತಿಳಿಸಿದ್ದಾರೆ.

ವಿಧಾನಸೌಧ ಸಮಿತಿ ಕೊಠಡಿಯಲ್ಲಿ ಬಿಬಿಎಂಪಿ ವ್ಯಾಪ್ತಿಯ ಅಧಿಕಾರಿಗಳ ಜೊತೆ ಸಭೆ ನಡೆಸಿ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 8 ವಿಭಾಗ, 63 ಉಪ ವಿಭಾಗದಲ್ಲಿ ವಾರದ ಏಳೂ ದಿನ 24 ಗಂಟೆ ಕಾರ್ಯನಿರ್ವಣೆ, ಕೇಂದ್ರ ನಿಯಂತ್ರಣ ಕೊಠಡಿಯಲ್ಲಿ ಮೂರು ಶಿಫ್ಟ್​ನಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ನಗರದಲ್ಲಿ ಒಟ್ಟು 63 ನಿಯಂತ್ರಣ ಕೊಠಡಿ ನಿರ್ಮಿಸಿದ್ದೇವೆ. ಅರಣ್ಯ ಇಲಾಖೆಗೂ ಸೂಚಿಸಿದ್ದು, 21 ತಂಡ ರಚಿಸಲಾಗಿದೆ ಎಂದರು.

ರಸ್ತೆ ಗುಂಡಿ ಮುಚ್ಚಲು ಪ್ರತಿ ವಲಯ ಮುಖ್ಯ ಎಂಜಿನಿಯರ್​ಗೆ ಸೂಚನೆ ನೀಡಿದ್ದೇವೆ. ಈ ಸಾರಿ ನ್ಯಾಯಾಲಯದಿಂದ ಹೇಳಿಸಿಕೊಳ್ಳುವ ಸ್ಥಿತಿಗೆ ತಲುಪದಂತೆ ಸಿದ್ಧತೆ ಮಾಡಿಕೊಳ್ಳಿ ಎಂದು ಸೂಚಿಸಿದ್ದೇನೆ. ಭರವಸೆ ಸಿಕ್ಕಿದೆ. ನಗರದ ಒಳಚರಂಡಿ, ರಾಜಕಾಲುವೆ, ಕೆರೆ ಕುರಿತ ಸರ್ವೆ ಕೆಲಸ ಆಗಿದೆ. ನಗರದಲ್ಲಿ 167 ಕೆರೆಗಳು ಬಿಬಿಎಂಪಿ ವ್ಯಾಪ್ತಿಯಲ್ಲಿದೆ. 18 ಕೆರೆ ಕಾಮಗಾರಿ ಮುಗಿದಿದೆ, 31ಕ್ಕೆ ಟೆಂಡರ್ ಕರೆದಿದ್ದೇವೆ. 72 ಕೆರೆಗಳ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ. ಉಳಿದ ಕೆರೆಗಳ ಕೆಲಸ ನಡೆಯಲಿದೆ ಎಂದರು.

ಸಚಿವ ಡಾ. ಜಿ. ಪರಮೇಶ್ವರ್

ಕೆರೆಯಲ್ಲಿ ನೀರು ಸಂಗ್ರಹ ಆಗುವುದರಿಂದ ನೀರು ನುಗ್ಗುವ ಸಾಧ್ಯತೆ ಹೆಚ್ಚಿರುತ್ತದೆ. ಇದನ್ನು ತಡೆಯಲು ಕ್ರಮ ಕೈಗೊಂಡಿದ್ದೇವೆ. ರಾಜಕಾಲುವೆಯಲ್ಲಿ ತ್ಯಾಜ್ಯ ಸಂಗ್ರಹ ಹಾಗೂ ನಿರ್ಮಾಣ, ಒತ್ತುವರಿಯಿಂದ ಆಗಿರುವ ಸಮಸ್ಯೆ ತೆರವುಗೊಳಿಸುತ್ತಿದ್ದೇವೆ. 454 ಒತ್ತುವರಿ ತೆರವುಗೊಳಿಸಲಾಗಿದೆ. ನಾಲ್ವರು ಸರ್ವೇಯರ್​ಗಳನ್ನು ವಿಶೇಷವಾಗಿ ನೇಮಿಸಿದ್ದು, ಕಾಮಗಾರಿ ನಡೆಯುತ್ತಿದೆ ಎಂದರು.

ರಾಜಕಾಲುವೆಗೆ ಗೋಡೆ ಕಟ್ಟುವ ಕಾರ್ಯದಲ್ಲಿ 840 ಕಿ.ಮೀ. ಗುರುತಿಸಿದ್ದು, ಇವುಗಳಲ್ಲಿ 400 ಕಿ.ಮೀ.ನಷ್ಟು ಗೋಡೆ ಕಟ್ಟುವ ಕೆಲಸ ಮುಗಿದಿದೆ. ಉಳಿದ ರಾಜಕಾಲುವೆಗಳಿಗೆ ಗೋಡೆ ಕಟ್ಟುವ ಕೆಲಸ ಆಗಲಿದೆ. ಈ ಸಾರಿ ಈ ಕಾರಣದಿಂದ ಯಾವುದೇ ನೆರೆ, ನೀರು ನುಗ್ಗುವ ಸಮಸ್ಯೆ ಬಗೆಹರಿಯಲಿದೆ. ಹೊಸ ವಿಸ್ತರಣೆ ಪ್ರದೇಶದಲ್ಲೂ ಗಮನ ಹರಿಸುತ್ತಿದ್ದು, ಯೋಜನೆ ಇಲ್ಲದೇ ಒತ್ತುವರಿ ಮಾಡಿಕೊಂಡ ಕಡೆ ತೆರವುಗೊಳಿಸುತ್ತೇವೆ ಎಂದರು.

ಡೇಂಘಿ ಪ್ರಕರಣ 2018ರಲ್ಲಿ 248 ಆಗಿತ್ತು. ಈ ಸಾರಿ 240 ವರದಿಯಾಗಿದೆ. ಮಹದೇವಪುರ ಸೇರಿದಂತೆ ಎಲ್ಲಿ ಹೆಚ್ಚು ಡೇಂಘಿ ಕಾಣಿಸಿಕೊಳ್ಳುವ ಸಾಧ್ಯತೆ ಇರುವಲ್ಲಿ ಮುನ್ನೆಚ್ಚರಿಕೆ ವಹಿಸಿದ್ದೇವೆ. ಈ ಸಾರಿ ನಿಯಂತ್ರಣ ಸಾಧ್ಯವಾಗಲಿದೆ ಎಂದರು.

ಬೆಂಗಳೂರು: ನಗರದಲ್ಲಿ ಈ ಸಾರಿ ಮಳೆಗಾಲದಲ್ಲಿ ಯಾವುದೇ ಸಮಸ್ಯೆ ಆಗದ ರೀತಿ ಕ್ರಮ ಕೈಗೊಳ್ಳಲಾಗಿದೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಡಾ. ಜಿ.ಪರಮೇಶ್ವರ್ ತಿಳಿಸಿದ್ದಾರೆ.

ವಿಧಾನಸೌಧ ಸಮಿತಿ ಕೊಠಡಿಯಲ್ಲಿ ಬಿಬಿಎಂಪಿ ವ್ಯಾಪ್ತಿಯ ಅಧಿಕಾರಿಗಳ ಜೊತೆ ಸಭೆ ನಡೆಸಿ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 8 ವಿಭಾಗ, 63 ಉಪ ವಿಭಾಗದಲ್ಲಿ ವಾರದ ಏಳೂ ದಿನ 24 ಗಂಟೆ ಕಾರ್ಯನಿರ್ವಣೆ, ಕೇಂದ್ರ ನಿಯಂತ್ರಣ ಕೊಠಡಿಯಲ್ಲಿ ಮೂರು ಶಿಫ್ಟ್​ನಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ನಗರದಲ್ಲಿ ಒಟ್ಟು 63 ನಿಯಂತ್ರಣ ಕೊಠಡಿ ನಿರ್ಮಿಸಿದ್ದೇವೆ. ಅರಣ್ಯ ಇಲಾಖೆಗೂ ಸೂಚಿಸಿದ್ದು, 21 ತಂಡ ರಚಿಸಲಾಗಿದೆ ಎಂದರು.

ರಸ್ತೆ ಗುಂಡಿ ಮುಚ್ಚಲು ಪ್ರತಿ ವಲಯ ಮುಖ್ಯ ಎಂಜಿನಿಯರ್​ಗೆ ಸೂಚನೆ ನೀಡಿದ್ದೇವೆ. ಈ ಸಾರಿ ನ್ಯಾಯಾಲಯದಿಂದ ಹೇಳಿಸಿಕೊಳ್ಳುವ ಸ್ಥಿತಿಗೆ ತಲುಪದಂತೆ ಸಿದ್ಧತೆ ಮಾಡಿಕೊಳ್ಳಿ ಎಂದು ಸೂಚಿಸಿದ್ದೇನೆ. ಭರವಸೆ ಸಿಕ್ಕಿದೆ. ನಗರದ ಒಳಚರಂಡಿ, ರಾಜಕಾಲುವೆ, ಕೆರೆ ಕುರಿತ ಸರ್ವೆ ಕೆಲಸ ಆಗಿದೆ. ನಗರದಲ್ಲಿ 167 ಕೆರೆಗಳು ಬಿಬಿಎಂಪಿ ವ್ಯಾಪ್ತಿಯಲ್ಲಿದೆ. 18 ಕೆರೆ ಕಾಮಗಾರಿ ಮುಗಿದಿದೆ, 31ಕ್ಕೆ ಟೆಂಡರ್ ಕರೆದಿದ್ದೇವೆ. 72 ಕೆರೆಗಳ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ. ಉಳಿದ ಕೆರೆಗಳ ಕೆಲಸ ನಡೆಯಲಿದೆ ಎಂದರು.

ಸಚಿವ ಡಾ. ಜಿ. ಪರಮೇಶ್ವರ್

ಕೆರೆಯಲ್ಲಿ ನೀರು ಸಂಗ್ರಹ ಆಗುವುದರಿಂದ ನೀರು ನುಗ್ಗುವ ಸಾಧ್ಯತೆ ಹೆಚ್ಚಿರುತ್ತದೆ. ಇದನ್ನು ತಡೆಯಲು ಕ್ರಮ ಕೈಗೊಂಡಿದ್ದೇವೆ. ರಾಜಕಾಲುವೆಯಲ್ಲಿ ತ್ಯಾಜ್ಯ ಸಂಗ್ರಹ ಹಾಗೂ ನಿರ್ಮಾಣ, ಒತ್ತುವರಿಯಿಂದ ಆಗಿರುವ ಸಮಸ್ಯೆ ತೆರವುಗೊಳಿಸುತ್ತಿದ್ದೇವೆ. 454 ಒತ್ತುವರಿ ತೆರವುಗೊಳಿಸಲಾಗಿದೆ. ನಾಲ್ವರು ಸರ್ವೇಯರ್​ಗಳನ್ನು ವಿಶೇಷವಾಗಿ ನೇಮಿಸಿದ್ದು, ಕಾಮಗಾರಿ ನಡೆಯುತ್ತಿದೆ ಎಂದರು.

ರಾಜಕಾಲುವೆಗೆ ಗೋಡೆ ಕಟ್ಟುವ ಕಾರ್ಯದಲ್ಲಿ 840 ಕಿ.ಮೀ. ಗುರುತಿಸಿದ್ದು, ಇವುಗಳಲ್ಲಿ 400 ಕಿ.ಮೀ.ನಷ್ಟು ಗೋಡೆ ಕಟ್ಟುವ ಕೆಲಸ ಮುಗಿದಿದೆ. ಉಳಿದ ರಾಜಕಾಲುವೆಗಳಿಗೆ ಗೋಡೆ ಕಟ್ಟುವ ಕೆಲಸ ಆಗಲಿದೆ. ಈ ಸಾರಿ ಈ ಕಾರಣದಿಂದ ಯಾವುದೇ ನೆರೆ, ನೀರು ನುಗ್ಗುವ ಸಮಸ್ಯೆ ಬಗೆಹರಿಯಲಿದೆ. ಹೊಸ ವಿಸ್ತರಣೆ ಪ್ರದೇಶದಲ್ಲೂ ಗಮನ ಹರಿಸುತ್ತಿದ್ದು, ಯೋಜನೆ ಇಲ್ಲದೇ ಒತ್ತುವರಿ ಮಾಡಿಕೊಂಡ ಕಡೆ ತೆರವುಗೊಳಿಸುತ್ತೇವೆ ಎಂದರು.

ಡೇಂಘಿ ಪ್ರಕರಣ 2018ರಲ್ಲಿ 248 ಆಗಿತ್ತು. ಈ ಸಾರಿ 240 ವರದಿಯಾಗಿದೆ. ಮಹದೇವಪುರ ಸೇರಿದಂತೆ ಎಲ್ಲಿ ಹೆಚ್ಚು ಡೇಂಘಿ ಕಾಣಿಸಿಕೊಳ್ಳುವ ಸಾಧ್ಯತೆ ಇರುವಲ್ಲಿ ಮುನ್ನೆಚ್ಚರಿಕೆ ವಹಿಸಿದ್ದೇವೆ. ಈ ಸಾರಿ ನಿಯಂತ್ರಣ ಸಾಧ್ಯವಾಗಲಿದೆ ಎಂದರು.

Intro:newsBody:ಈ ಸಾರಿ ಮಳೆಗಾಲದಲ್ಲಿ ನೆರೆ ಸಮಸ್ಯೆ ಆಗದಂತೆ ಕ್ರಮ ಕೈಗೊಂಡಿದ್ದೇವೆ, ಜನರಲ್ಲಿ ಆತಂಕ ಬೇಡ: ಪರಮೇಶ್ವರ್



ಬೆಂಗಳೂರು: ನಗರದಲ್ಲಿ ಈ ಸಾರಿ ಮಳೆಗಾಲದಲ್ಲಿ ಯಾವುದೇ ಸಮಸ್ಯೆ ಆಗದ ರೀತಿ ಕ್ರಮ ಕೈಗೊಳ್ಳಲಾಗಿದೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ.
ವಿಧಾನಸೌಧ ಸಮಿತಿ ಕೊಠಡಿಯಲ್ಲಿ ಬಿಬಿಎಂಪಿ ವ್ಯಾಪ್ತಿಯ ಅಧಿಕಾರಿಗಳ ಜತೆ ಸಭೆ ನಂತರ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, 8 ವಿಭಾಗ 63 ಉಪ ವಿಭಾಗದಲ್ಲಿ ವಾರದ ಏಳೂ ದಿನ 24 ಗಂಟೆ ಕಾರ್ಯನಿರ್ವಣೆ, ಕೇಂದ್ರ ನಿಯಂತ್ರಣ ಕೊಠಡಿಯಲ್ಲಿ ಮೂರು ಶಿಫ್ಟ್ ನಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ. ನಗರದಲ್ಲಿ ಒಟ್ಟು 63 ನಿಯಂತ್ರಣ ಕೊಠಡಿ ನಿರ್ಮಿಸಿದ್ದೇವೆ. ಅರಣ್ಯ ಇಲಾಖೆಗೂ ಸೂಚಿಸಿದ್ದು ಬೀಳುವ ಸಾಧ್ಯತೆ, ಅನುಮಾನ ಇರುವೆಡೆ ಪತ್ತೆ ಮಾಡಲು 21 ತಂಡ ರಚಿಸಲಾಗಿದೆ ಎಂದರು.
ರಸ್ತೆ ಗುಂಡಿ ಮುಚ್ಚಲು ಪ್ರತಿ ವಲಯ ಮುಖ್ಯ ಎಂಜಿನಿಯರ್ ಗೆ ಸೂಚನೆ ನೀಡಿದ್ದೇವೆ. ಈ ಸಾರಿ ನ್ಯಾಯಾಲಯದಿಂದ ಹೇಳಿಸಿಕೊಳ್ಳುವ ಸ್ಥಿತಿಗೆ ತಲುಪದಂತೆ ಸಿದ್ಧತೆ ಮಾಡಿಕೊಳ್ಳಿ ಎಂದು ಸೂಚಿಸಿದ್ದೇನೆ. ಭರವಸೆ ಸಿಕ್ಕಿದೆ.
ನಗರದ ಒಳಚರಂಡಿ, ರಾಜಕಾಲುವೆ, ಕೆರೆ ಕುರಿತ ಸರ್ವೆ ಕೆಲಸ ಆಗಿದೆ. ನಗರದಲ್ಲಿ 167 ಕೆರೆಗಳು ಬಿಬಿಎಂಪಿ ವ್ಯಾಪ್ತಿಯಲ್ಲಿದೆ. 18 ಕೆರೆ ಕಾಮಗಾರಿ ಮುಗಿದಿದೆ, 31ಕ್ಕೆ ಟೆಂಡರ್ ಕರೆದಿದ್ದೇವೆ, 72 ಕೆರೆಗಳ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ. ಉಳಿದ ಕೆರೆಗಳ ಕೆಲಸ ನಡೆಯಲಿದೆ. ಕೆರೆಯಲ್ಲಿ ನೀರು ಸಂಗ್ರಹ ಆಗುವುದರಿಂದ ನೀರು ನುಗ್ಗುವ ಸಾಧ್ಯತೆ ಹೆಚ್ಚಿರುತ್ತದೆ. ಇದನ್ನು ತಡೆಯಲು ಕ್ರಮ ಕೈಗೊಂಡಿದ್ದೇವೆ. ರಾಜಕಾಲುವೆಯಲ್ಲಿ ತ್ಯಾಜ್ಯ ಸಂಗ್ರಹ ಹಾಗೂ ನಿರ್ಮಾಣ, ಒತ್ತುವರಿಯಿಂದ ಆಗಿರುವ ಸಮಸ್ಯೆ ತೆರವುಗೊಳಿಸುತ್ತಿದ್ದೇವೆ. 454 ಒತ್ತುವರಿ ತೆರವುಗೊಳಿಸಲಾಗಿದೆ. ನಾಲ್ವರು ಸರ್ವೇಯರ್ ಗಳನ್ನು ವಿಶೇಷವಾಗಿ ನೇಮಿಸಿದ್ದು, ಕಾಮಗಾರಿ ನಡೆಯುತ್ತಿದೆ ಎಂದರು.
ರಾಜಕಾಲುವೆಗೆ ಗೋಡೆ ಕಟ್ಟುವ ಕಾರ್ಯದಲ್ಲಿ 840ಕಿ.ಮಿ. ಗುರುತಿಸಿದ್ದು, ಇವುಗಳಲ್ಲಿ 400 ಕಿ.ಮಿ.ಯಷ್ಟು ಗೋಡೆ ಕಟ್ಟುವ ಕೆಲಸ ಮುಗಿದಿದೆ. ಉಳಿದ ರಾಜಕಾಲುವೆಗಳಿಗೆ ಗೋಡೆ ಕಟ್ಟುವ ಕೆಲಸ ಆಗಲಿದೆ. ಈ ಸಾರಿ ಈ ಕಾರಣದಿಂದ ಯಾವುದೇ ನೆರೆ, ನೀರು ನುಗ್ಗುವ ಸಮಸ್ಯೆ ಬಗೆಹರಿಯಲಿದೆ. ಹೊಸ ವಿಸ್ತರಣೆ ಪ್ರದೇಶದಲ್ಲೂ ಗಮನ ಹರಿಸುತ್ತಿದ್ದು, ಯೋಜನೆ ಇಲ್ಲದೇ ಒತ್ತುವರಿ ಮಾಡಿಕೊಂಡ ಕಡೆ ತೆರವುಗೊಳಿಸುತ್ತೇವೆ ಎಂದರು.
ಡೆಂಗ್ಯು ಹೆಚ್ಚಾಗಲಿದೆ. 2018 ಕ್ಕೆ 248 ಆಗಿತ್ತು, ಈ ಸಾರಿ 240 ವರದಿಯಾಗಿದೆ. ಮಹದೇವಪುರ ಸೇರಿದಂತೆ ಎಲ್ಲಿ ಹೆಚ್ಚು ಡೆಂಗ್ಯು ಕಾಣಿಸಿಕೊಳ್ಳುವ ಸಾಧ್ಯತೆ ಇರುವಲ್ಲಿ ಮುನ್ನೆಚ್ಚರಿಕೆ ವಹಿಸಿದ್ದೇವೆ. ಈ ಸಾರಿ ನಿಯಂತ್ರಣ ಸಾಧ್ಯವಾಗಲಿದೆ ಎಂದರು.
ಕಸದ ಸಮಸ್ಯೆ, ವೈಟ್ ಟ್ಯಾಪಿಂಗ್ ಕಾಮಗಾರಿ ಹಾಗೂ ಮಳೆಯ ಸಮಸ್ಯೆ ನೋಡಿಕೊಂಡು ಮೈಸೂರು ರಸ್ತೆ ಬಿಜಿಎಸ್ ಮೇಲುರಸ್ತೆ ಇನ್ನೊಂದು ಭಾಗದ ಡಾಂಬರೀಕರಣ ಕಾಮಗಾರಿ ನಡೆಯಲಿದೆ. ಬಹಳ ಕಡೆ ಅಂಡರ್ ಪಾಸ್ ಮಾಡಿದಲ್ಲಿ ಎದುರಾಗುವ ತಾಂತ್ರಿಕ ತೊಡಕು ನಿವಾರಿಸಲು ಸೂಚಿಸಿದ್ದೇವೆ. ಸಮಸ್ಯೆ ನಿವಾರಣೆಗೆ ಸೂಚಿಸಿದ್ದು, ಪರಿಹಾರ ಏನು ಸಿಗಲಿದೆ ಎಂದು ಗಮನಿಸುತ್ತೇವೆ. ಮಲ್ಲೇಶ್ವರ ಮಾರುಕಟ್ಟೆಯ ಪ್ರತ್ಯೇಕ ಸರ್ವೆ ಮಾಡುತ್ತೇನೆ. ನಂತರ ಕ್ರಮ ಕೈಗೊಳ್ಳುತ್ತೇವೆ. ಒಳಚರಂಡಿ ಮಾರ್ಗದ ಅಕ್ಕಪಕ್ಕ ಕೆಲ ವಲಸಿಗರು ಬಂದು ವಾಸವಾಗಿದ್ದಾರೆ. ಅದನ್ನು ತೆರವಿಗೆ ಸೂಚಿಸಿದ್ದೇನೆ. ಅವರು ಬಾಂಗ್ಲಾ ವಲಸಿಗರಿರಬಹುದು, ಬೇರೆ ರಾಜ್ಯದಿಂದ ಬಂದವರೂ ಇರಬಹುದು. ಎಲ್ಲಾ ಸಮಸ್ಯೆ ಪರಿಹರಿಸುತ್ತೇವೆ ಎಂದರು.
ಬಿಬಿಎಂಪಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಉಪಮೇಯರ್ ಭದ್ರೇಗೌಡ, ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್, ಬೆಸ್ಕಾಂ ಎಂಡಿ ಶಿಖಾ, ಹೆಚ್ಚುವರಿ ಪೊಲೀಸ್ ಆಯುಕ್ತ (ಟ್ರಾಫಿಕ್) ಹರಿಶೇಖರ್ ಸೇರಿದಂತೆ ಬಿಬಿಎಂಪಿ, ಬೆಸ್ಕಾಂ ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದರು. ಸಚಿವ ಕೃಷ್ಣ ಬೈರೇಗೌಡ, ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಕೂಡ ಭಾಗಿಯಾಗಿದ್ದಾರೆ. ಸಭೆ ನಂತರ ಪರಮೇಶ್ವರ ವಿವರ ನೀಡಲಿದ್ದಾರೆ.Conclusion:news
ETV Bharat Logo

Copyright © 2024 Ushodaya Enterprises Pvt. Ltd., All Rights Reserved.