ETV Bharat / state

ಕರ್ನಾಟಕ ಬಂದ್​ಗೆ ವಾಟಾಳ್​ ಸಾಥ್​.. ಕತ್ತೆಯನ್ನೇರಿ ಬಂದ್ರು ಕನ್ನಡ ಪರ ಹೋರಾಟಗಾರ - vatal nagaraj protest at bengalore

ಕೆಂಪೇಗೌಡ ಬಸ್ ನಿಲ್ದಾಣಕ್ಕೆ ತಲೆಗೆ ಪೇಟಾ ಹಾಕಿ ಮಹಾರಾಜನ ವೇಷಧಾರಿಯಾಗಿ ಎಂಟ್ರಿ ಕೊಟ್ಟ ವಾಟಾಳ್, ಕತ್ತೆಯ ಮೇಲೆ ಸವಾರಿ ಮಾಡುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿದರು.

vatal nagaraj
ವಾಟಾಳ್ ನಾಗರಾಜ್
author img

By

Published : Sep 28, 2020, 3:46 PM IST

ಬೆಂಗಳೂರು: ಕೇಂದ್ರ ಮತ್ತು ರಾಜ್ಯ ಸರ್ಕಾರದ ಭೂಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ ಹಾಗೂ ಕಾರ್ಮಿಕ ಕಾಯ್ದೆಗಳ ತಿದ್ದುಪಡಿ ವಿರೋಧಿಸಿ ರಾಜ್ಯಾದ್ಯಂತ ಕರೆ ನೀಡಿರುವ ಕರ್ನಾಟಕ ಬಂದ್​ಗೆ ಬೆಂಬಲ ನೀಡಿರುವ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ವಿನೂತನ ಪ್ರತಿಭಟನೆ ನಡೆಸಿದರು.‌

ಕತ್ತೆಯನ್ನೇರಿ ಕರ್ನಾಟಕ ಬಂದ್​ಗೆ ವಾಟಾಳ್​ ಬೆಂಬಲ

ಕೆಂಪೇಗೌಡ ಬಸ್ ನಿಲ್ದಾಣಕ್ಕೆ ತಲೆಗೆ ಪೇಟಾ ಹಾಕಿ ಮಹಾರಾಜನ ವೇಷಧಾರಿಯಾಗಿ ಎಂಟ್ರಿ ಕೊಟ್ಟ ವಾಟಾಳ್, ಕತ್ತೆಯ ಮೇಲೆ ಸವಾರಿ ಮಾಡುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿದರು. ಜೊತೆಗೆ ವಾದ್ಯಗೋಷ್ಟಿಯೊಂದಿಗೆ ಮೆಜೆಸ್ಟಿಕ್ ಸುತ್ತ ಮೆರವಣಿಗೆ ಮಾಡಿದರು.

ಈ ಹೋರಾಟದಲ್ಲಿ ಕನ್ನಡ ಒಕ್ಕೂಟದ ಮುಖಂಡರುಗಳಾದ ಸಾ ರಾ ಗೋವಿಂದು, ಕೆ ಆರ್ ಕುಮಾರ್, ಗಿರೀಶ್ ಗೌಡ ಸೇರಿದಂತೆ ಹಲವು ಮುಖಂಡರು ಪಾಲ್ಗೊಂಡು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಬೆಂಗಳೂರು: ಕೇಂದ್ರ ಮತ್ತು ರಾಜ್ಯ ಸರ್ಕಾರದ ಭೂಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ ಹಾಗೂ ಕಾರ್ಮಿಕ ಕಾಯ್ದೆಗಳ ತಿದ್ದುಪಡಿ ವಿರೋಧಿಸಿ ರಾಜ್ಯಾದ್ಯಂತ ಕರೆ ನೀಡಿರುವ ಕರ್ನಾಟಕ ಬಂದ್​ಗೆ ಬೆಂಬಲ ನೀಡಿರುವ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ವಿನೂತನ ಪ್ರತಿಭಟನೆ ನಡೆಸಿದರು.‌

ಕತ್ತೆಯನ್ನೇರಿ ಕರ್ನಾಟಕ ಬಂದ್​ಗೆ ವಾಟಾಳ್​ ಬೆಂಬಲ

ಕೆಂಪೇಗೌಡ ಬಸ್ ನಿಲ್ದಾಣಕ್ಕೆ ತಲೆಗೆ ಪೇಟಾ ಹಾಕಿ ಮಹಾರಾಜನ ವೇಷಧಾರಿಯಾಗಿ ಎಂಟ್ರಿ ಕೊಟ್ಟ ವಾಟಾಳ್, ಕತ್ತೆಯ ಮೇಲೆ ಸವಾರಿ ಮಾಡುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿದರು. ಜೊತೆಗೆ ವಾದ್ಯಗೋಷ್ಟಿಯೊಂದಿಗೆ ಮೆಜೆಸ್ಟಿಕ್ ಸುತ್ತ ಮೆರವಣಿಗೆ ಮಾಡಿದರು.

ಈ ಹೋರಾಟದಲ್ಲಿ ಕನ್ನಡ ಒಕ್ಕೂಟದ ಮುಖಂಡರುಗಳಾದ ಸಾ ರಾ ಗೋವಿಂದು, ಕೆ ಆರ್ ಕುಮಾರ್, ಗಿರೀಶ್ ಗೌಡ ಸೇರಿದಂತೆ ಹಲವು ಮುಖಂಡರು ಪಾಲ್ಗೊಂಡು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.