ಬೆಂಗಳೂರು: ಆನ್ಲೈನ್ ನಮ್ಮ ಮಕ್ಕಳಿಗೆ ಆಗೋದಿಲ್ಲ. ಸಣ್ಣ ಮಕ್ಕಳಿಗೆ ಅದು ಏನು ಅಂತ ಗೊತ್ತಾಗುವುದಿಲ್ಲ. ಇದರಿಂದ ಮಕ್ಕಳಿಗೆ ತೊಂದರೆ ಆಗುತ್ತೆ. ಇದನ್ನು ಸರ್ಕಾರ ಗಮನಿಸಿ ಆನ್ಲೈನ್ ಶಿಕ್ಷಣ ಕೂಡಲೇ ರದ್ದುಗೊಳಿಸಬೇಕೆಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಆನ್ಲೈನ್ ಶಿಕ್ಷಣವನ್ನು ವಿರೋಧಿಸಿ ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆ ಮಾಡಿದ ಅವರು, ಆನ್ಲೈನ್ ಶಿಕ್ಷಣ ಕಲಿಯಬೇಕಾದ್ರೆ 50 ಸಾವಿರ ಬೇಕು. ಹಳ್ಳಿ ಜನ ಬಡವರು ಏನ್ ಮಾಡಬೇಕು. ಆದರಿಂದ ಆನ್ಲೈನ್ ಶಿಕ್ಷಣ ಬೇಡವೆ ಬೇಡ ಎಂದು ಆಗ್ರಹಿಸಿದರು.
ಆನ್ಲೈನ್ ಶಿಕ್ಷಣ ಕುರಿತಾದ ತಜ್ಞರ ಸಮಿತಿಯ ವರದಿಯನ್ನು ಕಿತ್ತು ಬಿಸಾಕಿ. ತಜ್ಞರ ವರದಿಯನ್ನು ಸರ್ಕಾರ ಯಾವುದೇ ಕಾರಣಕ್ಕೂ ಪರಿಗಣಿಸಬಾರದು. ಆನ್ಲೈನ್ ಮಕ್ಕಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಆದರಿಂದ ಆನ್ಲೈನ್ ಬೇಡವೆಂದು ವಾಟಾಳ್ ನಾಗರಾಜ್ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ವಾಟಾಳ್ ಪಕ್ಷದ ಹೋರಾಟದ ಮಧ್ಯೆಯೂ ಸರ್ಕಾರ ಹತ್ತನೆ ತರಗತಿ ಪರೀಕ್ಷೆ ನಡೆಸಿದೆ. ಈಗ ಬರುವ ಎಸ್ಎಸ್ಎಲ್ಸಿ ಫಲಿತಾಂಶ ವ್ಯತಿರಿಕ್ತವಾಗಿ ಬರುತ್ತೆ. ನನಗೆ ಅನಿಸಿದ ಹಾಗೆ ಶೇ.70ರಷ್ಟು ಮಕ್ಕಳು ಅನುತ್ತೀರ್ಣರಾಗುತ್ತಾರೆ ಎಂದು ಕಳವಳ ವ್ಯಕ್ತಪಡಿಸಿದರು.