ETV Bharat / state

ತನ್ನಿಂದಲೇ ಮನೆಯವರಿಗೆ ಕೊರೊನಾ ಹಬ್ಬಿದ ಪಶ್ಚಾತ್ತಾಪ: ಆಸ್ಪತ್ರೆ ಬಾತ್​ರೂಂನಲ್ಲಿ ಆತ್ಮಹತ್ಯೆಗೆ ಶರಣಾದ ವೃದ್ಧೆ!

ತನ್ನ ಕುಟುಂಬಸ್ಥರಿಗೆ ತನ್ನಿಂದಲೇ ಕೊರೊನಾ ಹಬ್ಬಿದೆ ಎಂದು ಮನನೊಂದ ವೃದ್ಧೆಯೊಬ್ಬರು ಆಸ್ಪತ್ರೆಯಲ್ಲೇ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

author img

By

Published : Jun 26, 2020, 8:11 AM IST

Updated : Jun 26, 2020, 9:36 AM IST

old woman committed suicide, old woman committed suicide for Corona fear, woman committed suicide for Corona fear in Bangalore, Bangalore corona fear suicide,  Bangalore corona fear suicide news,  Bangalore corona news, ಕೊರೊನಾ ಸೋಂಕಿತೆ ಸಾವು, ಬೆಂಗಳೂರಿನಲ್ಲಿ ಕೊರೊನಾ ಸೋಂಕಿತೆ ಸಾವು, ಬೆಂಗಳೂರಿನಲ್ಲಿ ಕೊರೊನಾ ಸೋಂಕಿತೆ ಸಾವು ಸುದ್ದಿ, ಬೆಂಗಳೂರು ಕೊರೊನಾ ಸಾವು ಸುದ್ದಿ,
ಕೊರೊನಾಗೆ ಹೆದರಿ ಮತ್ತೊಬ್ಬ ರೋಗಿ ಆಸ್ಪತ್ರೆಯಲ್ಲಿ ಆತ್ಮಹತ್ಯೆ

ಬೆಂಗಳೂರು: ತನ್ನಿಂದಲೇ ಕುಟುಂಬಸ್ಥರಿಗೆ ಕೊರೊನಾ ಸೋಂಕು ಹಬ್ಬಿದೆ ಎಂದು ‌ಮನನೊಂದು ವೃದ್ಧೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದ ಮಲ್ಲೇಶ್ವರಂನ ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ನಡೆದಿದೆ.

ಕುಣಿಗಲ್ ಮೂಲದ‌ ವೃದ್ಧೆ ನಗರದ ರಾಜಗೋಪಾಲ ನಗರ ಠಾಣಾ ವ್ಯಾಪ್ತಿಯಲ್ಲಿ ಕುಟುಂಬಸ್ಥರೊಂದಿಗೆ ವಾಸವಿದ್ದರು. ಇದೇ ತಿಂಗಳ 18ರಂದು ವೃದ್ಧೆಯಲ್ಲಿ ಸೋಂಕು ಕಾಣಿಸಿಕೊಂಡಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ವೃದ್ಧೆ ಆಸ್ಪತ್ರೆಗೆ ದಾಖಲಿಸಿದ ಕೆಲ ದಿನಗಳ ನಂತರ ಕುಟುಂಬಸ್ಥರ ಗಂಟಲು‌ ದ್ರವ ಪರೀಕ್ಷೆ ನಡೆಸಿದಾಗ ಮಗಳು, ಅಳಿಯ ಹಾಗೂ ಮೊಮ್ಮಗನಿಗೆ ಕೂಡ ಸೋಂಕು ತಗುಲಿರುವುದು ದೃಢವಾಗಿತ್ತು.

ತನ್ನಿಂದಲೇ ಕುಟುಂಬಸ್ಥರಿಗೆ ಕೊರೊನಾ ಹಬ್ಬಿದೆ ಎಂಬ ಭಾವನೆಯಿಂದ ಮನನೊಂದ ವೃದ್ಧೆ ತಡರಾತ್ರಿ 2.30ಕ್ಕೆ ಕೋವಿಡ್ ವಾರ್ಡ್​ನ ಬಾತ್ ರೂಂನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ವಿಚಾರ ತಿಳಿದು ಮಲ್ಲೇಶ್ವರಂ ಪೊಲೀಸರು ಹಾಗೂ ಉತ್ತರ ವಿಭಾಗ ಡಿಸಿಪಿ ಶಶಿಕುಮಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಘಟನೆ ಕುರಿತು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಬೆಂಗಳೂರು: ತನ್ನಿಂದಲೇ ಕುಟುಂಬಸ್ಥರಿಗೆ ಕೊರೊನಾ ಸೋಂಕು ಹಬ್ಬಿದೆ ಎಂದು ‌ಮನನೊಂದು ವೃದ್ಧೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದ ಮಲ್ಲೇಶ್ವರಂನ ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ನಡೆದಿದೆ.

ಕುಣಿಗಲ್ ಮೂಲದ‌ ವೃದ್ಧೆ ನಗರದ ರಾಜಗೋಪಾಲ ನಗರ ಠಾಣಾ ವ್ಯಾಪ್ತಿಯಲ್ಲಿ ಕುಟುಂಬಸ್ಥರೊಂದಿಗೆ ವಾಸವಿದ್ದರು. ಇದೇ ತಿಂಗಳ 18ರಂದು ವೃದ್ಧೆಯಲ್ಲಿ ಸೋಂಕು ಕಾಣಿಸಿಕೊಂಡಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ವೃದ್ಧೆ ಆಸ್ಪತ್ರೆಗೆ ದಾಖಲಿಸಿದ ಕೆಲ ದಿನಗಳ ನಂತರ ಕುಟುಂಬಸ್ಥರ ಗಂಟಲು‌ ದ್ರವ ಪರೀಕ್ಷೆ ನಡೆಸಿದಾಗ ಮಗಳು, ಅಳಿಯ ಹಾಗೂ ಮೊಮ್ಮಗನಿಗೆ ಕೂಡ ಸೋಂಕು ತಗುಲಿರುವುದು ದೃಢವಾಗಿತ್ತು.

ತನ್ನಿಂದಲೇ ಕುಟುಂಬಸ್ಥರಿಗೆ ಕೊರೊನಾ ಹಬ್ಬಿದೆ ಎಂಬ ಭಾವನೆಯಿಂದ ಮನನೊಂದ ವೃದ್ಧೆ ತಡರಾತ್ರಿ 2.30ಕ್ಕೆ ಕೋವಿಡ್ ವಾರ್ಡ್​ನ ಬಾತ್ ರೂಂನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ವಿಚಾರ ತಿಳಿದು ಮಲ್ಲೇಶ್ವರಂ ಪೊಲೀಸರು ಹಾಗೂ ಉತ್ತರ ವಿಭಾಗ ಡಿಸಿಪಿ ಶಶಿಕುಮಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಘಟನೆ ಕುರಿತು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Last Updated : Jun 26, 2020, 9:36 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.