ETV Bharat / state

ಆಗ ಸ್ಯಾಂಡಲ್​ವುಡ್​ ಮೇಕಪ್​​ಮ್ಯಾನ್.. ಈಗ ಒಂಟಿ ಮನೆಗಳನ್ನೇ ಟಾರ್ಗೆಟ್​ ಮಾಡುವ ಕಳ್ಳ!

author img

By

Published : Jan 17, 2023, 8:46 PM IST

ಸ್ಯಾಂಡಲ್​ವುಡ್​ ಮೇಕಪ್​​ಮ್ಯಾನ್ ಆಗಿದ್ದ ನವಾಜ್ ಷರೀಪ್​ ಎಂಬಾತನನ್ನು ಕಳ್ಳತನದ ಆರೋಪದ ಮೇರೆಗೆ ಬೇಗೂರು ಪೊಲೀಸರು ಸೆರೆ ಹಿಡಿದಿದ್ದಾರೆ.

ನವಾಜ್ ಷರೀಪ್​
ನವಾಜ್ ಷರೀಪ್​

ನಗರ ಆಗ್ನೇಯ ವಿಭಾಗದ ಡಿಸಿಪಿ ಸಿ ಕೆ ಬಾಬಾ

ಬೆಂಗಳೂರು: ಬೀಗ ಹಾಕಿದ ಒಂಟಿ ಮನೆಗಳನ್ನೇ ಟಾರ್ಗೆಟ್ ಮಾಡಿಕೊಂಡು ಕಳ್ಳತನ ಮಾಡುತ್ತಿದ್ದ ಕುಖ್ಯಾತ ಖದೀಮನನ್ನ ಬೇಗೂರು ಪೊಲೀಸರು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ನವಾಜ್ ಷರೀಪ್​ ಬಂಧಿತ ಚೋರನಾಗಿದ್ದು, ಈತನಿಂದ 350 ಗ್ರಾಂ ಚಿನ್ನಾಭರಣ ಜಪ್ತಿ ಮಾಡಿಕೊಳ್ಳಲಾಗಿದೆ. ಸುಮಾರು 25 ವರ್ಷಗಳಿಂದ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ಹಲವು ಬಾರಿ ಜೈಲಿಗೆ ಹೋಗಿ ಬಂದಿದ್ದರೂ ಪ್ರತಿ ಬಾರಿಯೂ ಜಾಮೀನು ಪಡೆದು ಹೊರ ಬರುತ್ತಿದ್ದರು.

ಈ ಕಳ್ಳ ಹೊರಗಡೆ ಬಂದಾಗಲೆಲ್ಲ ಮತ್ತೆ ಹಳೆ ಕಾಯಕದಲ್ಲಿ ತೊಡಗಿಸಿಕೊಳ್ಳುತ್ತಿದ್ದ. ರೂಢಿಗತ ಖದೀಮನ ವಿರುದ್ಧ ಬೇಗೂರು ಠಾಣೆಯಲ್ಲಿ 10 ಸೇರಿದಂತೆ‌ ನಗರ ವಿವಿಧ ಪೊಲೀಸ್ ಠಾಣೆಗಳಲ್ಲಿ ಒಟ್ಟು 27 ಕಳವು ಪ್ರಕರಣ ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಒಂಟಿ ಮನೆಯೇ ಈತನ ಟಾರ್ಗೆಟ್ : ಈತನನ್ನು ಕಳೆದ ಆರು ತಿಂಗಳ ಹಿಂದೆ ಕಾಮಾಕ್ಷಿಪಾಳ್ಯ ಪೊಲೀಸರು ಕಳ್ಳತನ ಕೃತ್ಯದಲ್ಲಿ ಅರೆಸ್ಟ್ ಮಾಡಿ ನ್ಯಾಯಾಂಗ ಬಂಧನಕ್ಕೆ‌ ಒಪ್ಪಿಸಿದ್ದರು. ಕಳೆದ ಎರಡು ತಿಂಗಳ ಹಿಂದೆ ಜಾಮೀನು‌ ಪಡೆದು ಹೊರಬಂದಿದ್ದ‌ ನವಾಜ್ ಮತ್ತೆ ಕಳ್ಳತನ‌ ಕೃತ್ಯಗಳನ್ನ ಎಸಗುತ್ತಿದ್ದ ಎಂಬುದು ತಿಳಿದುಬಂದಿದೆ.

ಈ ಕಳ್ಳ ಬೀಗ ಹಾಕಿದ ಸಣ್ಣಪುಟ್ಟ ಮನೆಗಳನ್ನೇ ಗುರಿಯಾಗಿಸಿಕೊಂಡು ಮನೆಯ ಹೂ ಕುಂಡ, ಕಿಟಕಿಯಲ್ಲಿ ಇಡುತ್ತಿದ್ದ ಬೀಗದ ಕೀ ಹುಡುಕಾಟ ನಡೆಸುತ್ತಿದ್ದ. ಮನೆಯ ಕೀ ಸಿಕ್ಕ ಬಳಿಕ ಸುಲಭವಾಗಿ ಒಳನುಗ್ಗಿ ನಗ-ನಾಣ್ಯ ದೋಚುತ್ತಿದ್ದ‌‌. ಕದ್ದ ಚಿನ್ನಾಭರಣ ಮಾರಾಟ ಮಾಡಿ ಬಂದ ಹಣದಲ್ಲಿ ಇಸ್ವೀಟ್​ ಆಡುವುದು ಹಾಗೂ ಮದ್ಯಪಾನವೆಸಗಿ ಎಂಜಾಯ್​ ಮಾಡುತ್ತಿದ್ದ. 56 ವರ್ಷದ ನವಾಜ್​ನ ಕ್ರಿಮಿನಲ್‌ ಹಿನ್ನೆಲೆ ಕಂಡು ಮನೆಯವರು ದೂರ ತಳ್ಳಿದ್ದರು ಎಂಬುದು ತಿಳಿದು ಬಂದಿದೆ.

ಓದಿ: ಕಳ್ಳತನಕ್ಕೆ ಸಿನಿಮಾ ಪ್ರೇರಣೆ: ಸ್ಪೋರ್ಟ್ಸ್‌ ಬೈಕ್‌ಗಳಲ್ಲಿ ಮೊಬೈಲ್‌ ದೋಚುತ್ತಿದ್ದ ಯುವಕರ ಬಂಧನ

ಸ್ಯಾಂಡಲ್​ವುಡ್​ ಮೇಕಪ್ ಮ್ಯಾನ್ ಆಗಿದ್ದನಂತೆ: ಕಳ್ಳತನ‌ ಪ್ರಕರಣದಲ್ಲಿ ಬಂಧಿತನಾಗಿದ್ದ ನವಾಜನ್‌ನನ್ನ ಹೆಚ್ಚಿನ ವಿಚಾರಣೆಗೊಳಪಡಿಸಿದಾಗ 25 ವರ್ಷಗಳ ಹಿಂದೆ ಸ್ಯಾಂಡಲ್​ವುಡ್​​ನಲ್ಲಿ ಮೇಕಪ್​ಮ್ಯಾನ್​ ಆಗಿರುವುದಾಗಿ ಹೇಳಿಕೊಂಡಿದ್ದಾನೆ‌. ನಿಖರವಾಗಿ ಇಂತಹ ಚಿತ್ರಗಳಲ್ಲಿ ಮೇಕಪ್‌ ಮ್ಯಾನ್ ಆಗಿರುವ ಬಗ್ಗೆ ಆರೋಪಿ ಮರೆತ್ತಿರುವುದಾಗಿ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪ್ರಕರಣ ಸಂಬಂಧ‌ ನಗರ ಆಗ್ನೇಯ ವಿಭಾಗದ ಡಿಸಿಪಿ ಸಿಕೆ ಬಾಬಾ, ನಿರಂತರವಾಗಿ ಕಳ್ಳತನ‌ ಕೃತ್ಯ ಎಸಗುತ್ತಿದ್ದ ಚೋರನನ್ನ ಬಂಧಿಸಿ 350 ಗ್ರಾಂ ಚಿನ್ನಾಭರಣ ವಶಕ್ಕೆ‌ ಪಡೆದುಕೊಳ್ಳಲಾಗಿದೆ. ಬೇಗೂರು ಸೇರಿದಂತೆ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ‌ ಸುಮಾರು 27 ಕೇಸ್​ಗಳು ದಾಖಲಾಗಿವೆ. ಒಂಟಿ ಮನೆಯನ್ನು ಟಾರ್ಗೆಟ್ ಮಾಡಿಕೊಂಡು ಒಬ್ಬಂಟಿಗನಾಗಿ ಹಾಡುಹಗಲೇ ಕಳ್ಳತನ‌ ಮಾಡುತ್ತಿದ್ದ. ಆರೋಪಿಯನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೊಳಪಡಿಸಲಾಗಿದೆ ಎಂದು ಡಿಸಿಪಿ ಮಾಹಿತಿ ನೀಡಿದ್ದಾರೆ‌. ಮನೆ ಕಳ್ಳತನ ಕುರಿತು ಬೇಗೂರು ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಹೆಚ್ಚಿನ ವಿಚಾರಣೆ ಕೈಗೊಂಡಿದ್ದಾರೆ.

ಓದಿ : ಕಳ್ಳತನಕ್ಕೆ ಸಿನಿಮಾ ಪ್ರೇರಣೆ: ಸ್ಪೋರ್ಟ್ಸ್‌ ಬೈಕ್‌ಗಳಲ್ಲಿ ಮೊಬೈಲ್‌ ದೋಚುತ್ತಿದ್ದ ಯುವಕರ ಬಂಧನ

ನಗರ ಆಗ್ನೇಯ ವಿಭಾಗದ ಡಿಸಿಪಿ ಸಿ ಕೆ ಬಾಬಾ

ಬೆಂಗಳೂರು: ಬೀಗ ಹಾಕಿದ ಒಂಟಿ ಮನೆಗಳನ್ನೇ ಟಾರ್ಗೆಟ್ ಮಾಡಿಕೊಂಡು ಕಳ್ಳತನ ಮಾಡುತ್ತಿದ್ದ ಕುಖ್ಯಾತ ಖದೀಮನನ್ನ ಬೇಗೂರು ಪೊಲೀಸರು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ನವಾಜ್ ಷರೀಪ್​ ಬಂಧಿತ ಚೋರನಾಗಿದ್ದು, ಈತನಿಂದ 350 ಗ್ರಾಂ ಚಿನ್ನಾಭರಣ ಜಪ್ತಿ ಮಾಡಿಕೊಳ್ಳಲಾಗಿದೆ. ಸುಮಾರು 25 ವರ್ಷಗಳಿಂದ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ಹಲವು ಬಾರಿ ಜೈಲಿಗೆ ಹೋಗಿ ಬಂದಿದ್ದರೂ ಪ್ರತಿ ಬಾರಿಯೂ ಜಾಮೀನು ಪಡೆದು ಹೊರ ಬರುತ್ತಿದ್ದರು.

ಈ ಕಳ್ಳ ಹೊರಗಡೆ ಬಂದಾಗಲೆಲ್ಲ ಮತ್ತೆ ಹಳೆ ಕಾಯಕದಲ್ಲಿ ತೊಡಗಿಸಿಕೊಳ್ಳುತ್ತಿದ್ದ. ರೂಢಿಗತ ಖದೀಮನ ವಿರುದ್ಧ ಬೇಗೂರು ಠಾಣೆಯಲ್ಲಿ 10 ಸೇರಿದಂತೆ‌ ನಗರ ವಿವಿಧ ಪೊಲೀಸ್ ಠಾಣೆಗಳಲ್ಲಿ ಒಟ್ಟು 27 ಕಳವು ಪ್ರಕರಣ ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಒಂಟಿ ಮನೆಯೇ ಈತನ ಟಾರ್ಗೆಟ್ : ಈತನನ್ನು ಕಳೆದ ಆರು ತಿಂಗಳ ಹಿಂದೆ ಕಾಮಾಕ್ಷಿಪಾಳ್ಯ ಪೊಲೀಸರು ಕಳ್ಳತನ ಕೃತ್ಯದಲ್ಲಿ ಅರೆಸ್ಟ್ ಮಾಡಿ ನ್ಯಾಯಾಂಗ ಬಂಧನಕ್ಕೆ‌ ಒಪ್ಪಿಸಿದ್ದರು. ಕಳೆದ ಎರಡು ತಿಂಗಳ ಹಿಂದೆ ಜಾಮೀನು‌ ಪಡೆದು ಹೊರಬಂದಿದ್ದ‌ ನವಾಜ್ ಮತ್ತೆ ಕಳ್ಳತನ‌ ಕೃತ್ಯಗಳನ್ನ ಎಸಗುತ್ತಿದ್ದ ಎಂಬುದು ತಿಳಿದುಬಂದಿದೆ.

ಈ ಕಳ್ಳ ಬೀಗ ಹಾಕಿದ ಸಣ್ಣಪುಟ್ಟ ಮನೆಗಳನ್ನೇ ಗುರಿಯಾಗಿಸಿಕೊಂಡು ಮನೆಯ ಹೂ ಕುಂಡ, ಕಿಟಕಿಯಲ್ಲಿ ಇಡುತ್ತಿದ್ದ ಬೀಗದ ಕೀ ಹುಡುಕಾಟ ನಡೆಸುತ್ತಿದ್ದ. ಮನೆಯ ಕೀ ಸಿಕ್ಕ ಬಳಿಕ ಸುಲಭವಾಗಿ ಒಳನುಗ್ಗಿ ನಗ-ನಾಣ್ಯ ದೋಚುತ್ತಿದ್ದ‌‌. ಕದ್ದ ಚಿನ್ನಾಭರಣ ಮಾರಾಟ ಮಾಡಿ ಬಂದ ಹಣದಲ್ಲಿ ಇಸ್ವೀಟ್​ ಆಡುವುದು ಹಾಗೂ ಮದ್ಯಪಾನವೆಸಗಿ ಎಂಜಾಯ್​ ಮಾಡುತ್ತಿದ್ದ. 56 ವರ್ಷದ ನವಾಜ್​ನ ಕ್ರಿಮಿನಲ್‌ ಹಿನ್ನೆಲೆ ಕಂಡು ಮನೆಯವರು ದೂರ ತಳ್ಳಿದ್ದರು ಎಂಬುದು ತಿಳಿದು ಬಂದಿದೆ.

ಓದಿ: ಕಳ್ಳತನಕ್ಕೆ ಸಿನಿಮಾ ಪ್ರೇರಣೆ: ಸ್ಪೋರ್ಟ್ಸ್‌ ಬೈಕ್‌ಗಳಲ್ಲಿ ಮೊಬೈಲ್‌ ದೋಚುತ್ತಿದ್ದ ಯುವಕರ ಬಂಧನ

ಸ್ಯಾಂಡಲ್​ವುಡ್​ ಮೇಕಪ್ ಮ್ಯಾನ್ ಆಗಿದ್ದನಂತೆ: ಕಳ್ಳತನ‌ ಪ್ರಕರಣದಲ್ಲಿ ಬಂಧಿತನಾಗಿದ್ದ ನವಾಜನ್‌ನನ್ನ ಹೆಚ್ಚಿನ ವಿಚಾರಣೆಗೊಳಪಡಿಸಿದಾಗ 25 ವರ್ಷಗಳ ಹಿಂದೆ ಸ್ಯಾಂಡಲ್​ವುಡ್​​ನಲ್ಲಿ ಮೇಕಪ್​ಮ್ಯಾನ್​ ಆಗಿರುವುದಾಗಿ ಹೇಳಿಕೊಂಡಿದ್ದಾನೆ‌. ನಿಖರವಾಗಿ ಇಂತಹ ಚಿತ್ರಗಳಲ್ಲಿ ಮೇಕಪ್‌ ಮ್ಯಾನ್ ಆಗಿರುವ ಬಗ್ಗೆ ಆರೋಪಿ ಮರೆತ್ತಿರುವುದಾಗಿ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪ್ರಕರಣ ಸಂಬಂಧ‌ ನಗರ ಆಗ್ನೇಯ ವಿಭಾಗದ ಡಿಸಿಪಿ ಸಿಕೆ ಬಾಬಾ, ನಿರಂತರವಾಗಿ ಕಳ್ಳತನ‌ ಕೃತ್ಯ ಎಸಗುತ್ತಿದ್ದ ಚೋರನನ್ನ ಬಂಧಿಸಿ 350 ಗ್ರಾಂ ಚಿನ್ನಾಭರಣ ವಶಕ್ಕೆ‌ ಪಡೆದುಕೊಳ್ಳಲಾಗಿದೆ. ಬೇಗೂರು ಸೇರಿದಂತೆ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ‌ ಸುಮಾರು 27 ಕೇಸ್​ಗಳು ದಾಖಲಾಗಿವೆ. ಒಂಟಿ ಮನೆಯನ್ನು ಟಾರ್ಗೆಟ್ ಮಾಡಿಕೊಂಡು ಒಬ್ಬಂಟಿಗನಾಗಿ ಹಾಡುಹಗಲೇ ಕಳ್ಳತನ‌ ಮಾಡುತ್ತಿದ್ದ. ಆರೋಪಿಯನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೊಳಪಡಿಸಲಾಗಿದೆ ಎಂದು ಡಿಸಿಪಿ ಮಾಹಿತಿ ನೀಡಿದ್ದಾರೆ‌. ಮನೆ ಕಳ್ಳತನ ಕುರಿತು ಬೇಗೂರು ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಹೆಚ್ಚಿನ ವಿಚಾರಣೆ ಕೈಗೊಂಡಿದ್ದಾರೆ.

ಓದಿ : ಕಳ್ಳತನಕ್ಕೆ ಸಿನಿಮಾ ಪ್ರೇರಣೆ: ಸ್ಪೋರ್ಟ್ಸ್‌ ಬೈಕ್‌ಗಳಲ್ಲಿ ಮೊಬೈಲ್‌ ದೋಚುತ್ತಿದ್ದ ಯುವಕರ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.