ETV Bharat / state

ನಾನೇ ಬಿಜೆಪಿ ಅಭ್ಯರ್ಥಿಯೆಂದು ಭಾವಿಸಿ ಮತದಾನ ಮಾಡಿದೆ: ಸಚಿವ ಆರ್.ಅಶೋಕ್

author img

By

Published : Nov 3, 2020, 12:43 PM IST

Updated : Nov 3, 2020, 1:30 PM IST

ಸೈಂಟ್ ಕ್ಲಾರೆಟ್ ಶಾಲೆಯ ಮತಕೇಂದ್ರ 22ರಲ್ಲಿ ಕಂದಾಯ ಸಚಿವ ಆರ್. ಅಶೋಕ್‌ ಮತದಾನ ಮಾಡಿದ್ದಾರೆ. ಬಳಿಕ ಬೆಂಗಳೂರು, ಆರ್​ಆರ್​ ನಗರದ ಅಭಿವೃದ್ಧಿಗಾಗಿ ಮತ ಚಲಾಯಿಸಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡರು.

R Ashok
ಸಚಿವ ಆರ್.ಅಶೋಕ್

ಬೆಂಗಳೂರು: ಕಂದಾಯ ಸಚಿವ ಆರ್. ಅಶೋಕ್ ಪತ್ನಿ ಸಮೇತರಾಗಿ ಬಂದು ಜಾಲಹಳ್ಳಿಯ ಸೈಂಟ್ ಕ್ಲಾರೆಟ್ ಶಾಲೆಯ ಮತಕೇಂದ್ರ 22 ರಲ್ಲಿ ಮತದಾನ ಮಾಡಿದರು.

ಸಚಿವ ಆರ್.ಅಶೋಕ್ ಮತದಾನ

ಸ್ವಲ್ಪ ಹೊತ್ತು ಕ್ಯೂನಲ್ಲೇ ನಿಂತು ಬಳಿಕ ತಮ್ಮ ಮತ ಚಲಾವಣೆ ಮಾಡಿದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ, ನಾನೇ ಬಿಜೆಪಿ ಅಭ್ಯರ್ಥಿ ಎಂದು ಭಾವಿಸಿ ಇಂದು ಮತದಾನ‌ ಮಾಡಿದ್ದೇನೆ. ಕಳೆದ 15 ದಿನಗಳಲ್ಲಿ ಏನೇನು ಹೇಳಬೇಕು ಏನೇನು ಕೇಳಬೇಕು ಎಲ್ಲವೂ ಕೇಳಿ ಬಿಟ್ಟಿದ್ದೇವೆ. ಇಂದು ಮತದಾರರಾದ ನಿಮ್ಮ ಸರದಿ. ಹಗಾಗಿ ದಯವಿಟ್ಟು ಮತಗಟ್ಟೆಗೆ ಬಂದು ಮತದಾನ‌ ಮಾಡಿ. ಬೆಂಗಳೂರು, ಆರ್​ಆರ್​ ನಗರದ ಅಭಿವೃದ್ಧಿಗಾಗಿ ಮತ ಚಲಾಯಿಸಿ ಎಂದು ಮನವಿ ಮಾಡಿದರು.

ಸಂಜೆ ಆರು ಗಂಟೆಯೊಳಗೆ ಎಲ್ಲರೂ ಮತದಾನ ಮಾಡಲು ಬರುತ್ತಾರೆ ಎಂಬ ವಿಶ್ವಾಸ ಇದೆ. ಕೋವಿಡ್ ಹಿನ್ನೆಲೆ, ಚುನಾವಣಾ ಆಯೋಗ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಮತದಾನ ಮಾಡಲು ಯಾವುದೇ ಸಮಸ್ಯೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ಬೆಂಗಳೂರು: ಕಂದಾಯ ಸಚಿವ ಆರ್. ಅಶೋಕ್ ಪತ್ನಿ ಸಮೇತರಾಗಿ ಬಂದು ಜಾಲಹಳ್ಳಿಯ ಸೈಂಟ್ ಕ್ಲಾರೆಟ್ ಶಾಲೆಯ ಮತಕೇಂದ್ರ 22 ರಲ್ಲಿ ಮತದಾನ ಮಾಡಿದರು.

ಸಚಿವ ಆರ್.ಅಶೋಕ್ ಮತದಾನ

ಸ್ವಲ್ಪ ಹೊತ್ತು ಕ್ಯೂನಲ್ಲೇ ನಿಂತು ಬಳಿಕ ತಮ್ಮ ಮತ ಚಲಾವಣೆ ಮಾಡಿದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ, ನಾನೇ ಬಿಜೆಪಿ ಅಭ್ಯರ್ಥಿ ಎಂದು ಭಾವಿಸಿ ಇಂದು ಮತದಾನ‌ ಮಾಡಿದ್ದೇನೆ. ಕಳೆದ 15 ದಿನಗಳಲ್ಲಿ ಏನೇನು ಹೇಳಬೇಕು ಏನೇನು ಕೇಳಬೇಕು ಎಲ್ಲವೂ ಕೇಳಿ ಬಿಟ್ಟಿದ್ದೇವೆ. ಇಂದು ಮತದಾರರಾದ ನಿಮ್ಮ ಸರದಿ. ಹಗಾಗಿ ದಯವಿಟ್ಟು ಮತಗಟ್ಟೆಗೆ ಬಂದು ಮತದಾನ‌ ಮಾಡಿ. ಬೆಂಗಳೂರು, ಆರ್​ಆರ್​ ನಗರದ ಅಭಿವೃದ್ಧಿಗಾಗಿ ಮತ ಚಲಾಯಿಸಿ ಎಂದು ಮನವಿ ಮಾಡಿದರು.

ಸಂಜೆ ಆರು ಗಂಟೆಯೊಳಗೆ ಎಲ್ಲರೂ ಮತದಾನ ಮಾಡಲು ಬರುತ್ತಾರೆ ಎಂಬ ವಿಶ್ವಾಸ ಇದೆ. ಕೋವಿಡ್ ಹಿನ್ನೆಲೆ, ಚುನಾವಣಾ ಆಯೋಗ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಮತದಾನ ಮಾಡಲು ಯಾವುದೇ ಸಮಸ್ಯೆ ಇಲ್ಲ ಎಂದು ಸ್ಪಷ್ಟಪಡಿಸಿದರು.

Last Updated : Nov 3, 2020, 1:30 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.