ETV Bharat / state

ಪ್ಲಾಸ್ಟಿಕ್ ತ್ಯಜಿಸಿ ಪರಿಸರ ಉಳಿಸಿ ಅಂತಿದೆ‌ ಬಿಎಂಟಿಸಿ; ಎಲ್‌ಇಡಿ ಮೂಲಕ ವಿಶೇಷ ಜಾಗೃತಿ - ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ

ಪ್ಲಾಸ್ಟಿಕ್ ಬಳಕೆ ಮಾಡದಂತೆ ಬಿಎಂಟಿಸಿ‌ ತನ್ನ‌ ಪ್ರಯಾಣಿಕರಿಗೆ ಅರಿವು ಮೂಡಿಸುವ ಕೆಲಸಕ್ಕೆ ಕೈ ಹಾಕಿದೆ. ಈ ನಿಟ್ಟಿನಲ್ಲಿ ಬಸ್ಸುಗಳಲ್ಲಿರುವ ಎಲ್‌ಇಡಿ ಪರದೆ ಮೂಲಕ ಪ್ಲಾಸ್ಟಿಕ್ ತ್ಯಜಿಸಿ ಪರಿಸರ‌‌ ಉಳಿಸಿ ಅಂತ ಬಿಂಬಿಸುತ್ತಿದೆ. ಅಷ್ಟೇ ಅಲ್ಲದೇ ಟಿಟಿಎಂಸಿ ಹಾಗೂ ಬಸ್ಸು ನಿಲ್ದಾಣಗಳಲ್ಲೂ ಜಾಗೃತಿ ಮೂಡಿಸುವಂತೆ ತನ್ನ‌ ಸಿಬ್ಬಂದಿಗೆ ತಿಳಿಸಿದೆ.‌

ಪ್ಲಾಸ್ಟಿಕ್ ತ್ಯಜಿಸಿ ಪರಿಸರ ಉಳಿಸಿ ಅಂತಿದೆ‌ ಬಿಎಂಟಿಸಿ
author img

By

Published : Oct 1, 2019, 9:46 PM IST

ಬೆಂಗಳೂರು: ಪ್ಲಾಸ್ಟಿಕ್ ಬಳಕೆ ಮಾಡದಂತೆ ಬಿಎಂಟಿಸಿ‌ ತನ್ನ‌ ಪ್ರಯಾಣಿಕರಿಗೆ ಅರಿವು ಮೂಡಿಸುವ ಕೆಲಸಕ್ಕೆ ಕೈ ಹಾಕಿದೆ. ಈ ನಿಟ್ಟಿನಲ್ಲಿ ಬಸ್‌ಗಳಲ್ಲಿರುವ ಎಲ್‌ಇಡಿ ಪರದೆ ಮೂಲಕ ಪ್ಲಾಸ್ಟಿಕ್ ತ್ಯಜಿಸಿ-ಪರಿಸರ‌‌ ಉಳಿಸಿ ಅಂತ ಬಿಂಬಿಸುತ್ತಿದೆ. ಅಷ್ಟೇ ಅಲ್ಲದೇ ಟಿಟಿಎಂಸಿ ಹಾಗೂ ಬಸ್ಸು ನಿಲ್ದಾಣಗಳಲ್ಲೂ ಜಾಗೃತಿ ಮೂಡಿಸುವಂತೆ ತನ್ನ‌ ಸಿಬ್ಬಂದಿಗೆ ತಿಳಿಸಿದೆ.‌

ಕೇಂದ್ರೀಯ ಕಾರ್ಯಾಗಾರ, ತರಬೇತಿ ಕೇಂದ್ರ ಹಾಗೂ ಕೇಂದ್ರ ಕಚೇರಿಗಳಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧ ಪರಿಣಾಮಕಾರಿಯಾಗಿ ಜಾರಿಗೆ ತರುವಂತೆ ತಿಳಿಸಿದೆ. ಸಂಸ್ಥೆಯ ಘಟಕ ಮತ್ತು ಕೇಂದ್ರೀಯ ಕಾರ್ಯಾಗಾರಗಳ ದೈನಂದಿನ ಕಾರ್ಯಾಚರಣೆಯಿಂದ ಉತ್ಪತ್ತಿಯಾಗುವ ಘನ ತ್ಯಾಜ್ಯ ಮತ್ತು ಅಪಾಯಕಾರಿ ತ್ಯಾಜ್ಯದ ವಿಲೇವಾರಿಯನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ನಿಯಮಾವಳಿ ಹಾಗೂ ನ್ಯಾಯಾಲಯ ನಿರ್ದೇಶನದಂತೆ ವಿಲೇವಾರಿ ಮಾಡುತ್ತಿದೆ.

bmtc announcement for quit plastic and save envirnment
ಪ್ಲಾಸ್ಟಿಕ್ ತ್ಯಜಿಸಿ ಪರಿಸರ ಉಳಿಸಿ ಅಂತಿದೆ‌ ಬಿಎಂಟಿಸಿ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವಿಶೇಷ ಆಯುಕ್ತರು (ಆರೋಗ್ಯ) ಪಾಲಿಕೆ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಕ್ಯಾರಿಬಾಗ್, ಭಿತ್ತಿಪತ್ರ, ಫ್ಲಕ್ಸ್, ತಟ್ಟೆ, ಲೋಟ, ಚಮಚ, ಪ್ಲಾಸ್ಟಿಕ್ ಹಾಳೆ ಸೇರಿದಂತೆ ಬಳಕೆಯನ್ನು ಸಂರ್ಪೂಣವಾಗಿ ನಿಷೇಧಿಸಲು ಸುತ್ತೋಲೆ ಹೊರಡಿಸಿದೆ.

ಹೀಗಾಗಿ ಬಿಎಂಟಿಸಿ ವ್ಯಾಪ್ತಿಗೆ ಬರುವ ಕಚೇರಿಗಳಲ್ಲಿ ಪ್ಲಾಸ್ಟಿಕ್ ಬಳಕೆ ಸಂಪೂರ್ಣವಾಗಿ ನಿಷೇಧಿಸಿ ಈ ಬಗ್ಗೆ ಸಿಬ್ಬಂದಿಯಲ್ಲಿ ಅರಿವು ಮೂಡಿಸಿ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಲಾಗಿದೆ ಎಂಬ ಫಲಕ ಅಳವಡಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಆದೇಶಿಸಿದೆ.

ಬೆಂಗಳೂರು: ಪ್ಲಾಸ್ಟಿಕ್ ಬಳಕೆ ಮಾಡದಂತೆ ಬಿಎಂಟಿಸಿ‌ ತನ್ನ‌ ಪ್ರಯಾಣಿಕರಿಗೆ ಅರಿವು ಮೂಡಿಸುವ ಕೆಲಸಕ್ಕೆ ಕೈ ಹಾಕಿದೆ. ಈ ನಿಟ್ಟಿನಲ್ಲಿ ಬಸ್‌ಗಳಲ್ಲಿರುವ ಎಲ್‌ಇಡಿ ಪರದೆ ಮೂಲಕ ಪ್ಲಾಸ್ಟಿಕ್ ತ್ಯಜಿಸಿ-ಪರಿಸರ‌‌ ಉಳಿಸಿ ಅಂತ ಬಿಂಬಿಸುತ್ತಿದೆ. ಅಷ್ಟೇ ಅಲ್ಲದೇ ಟಿಟಿಎಂಸಿ ಹಾಗೂ ಬಸ್ಸು ನಿಲ್ದಾಣಗಳಲ್ಲೂ ಜಾಗೃತಿ ಮೂಡಿಸುವಂತೆ ತನ್ನ‌ ಸಿಬ್ಬಂದಿಗೆ ತಿಳಿಸಿದೆ.‌

ಕೇಂದ್ರೀಯ ಕಾರ್ಯಾಗಾರ, ತರಬೇತಿ ಕೇಂದ್ರ ಹಾಗೂ ಕೇಂದ್ರ ಕಚೇರಿಗಳಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧ ಪರಿಣಾಮಕಾರಿಯಾಗಿ ಜಾರಿಗೆ ತರುವಂತೆ ತಿಳಿಸಿದೆ. ಸಂಸ್ಥೆಯ ಘಟಕ ಮತ್ತು ಕೇಂದ್ರೀಯ ಕಾರ್ಯಾಗಾರಗಳ ದೈನಂದಿನ ಕಾರ್ಯಾಚರಣೆಯಿಂದ ಉತ್ಪತ್ತಿಯಾಗುವ ಘನ ತ್ಯಾಜ್ಯ ಮತ್ತು ಅಪಾಯಕಾರಿ ತ್ಯಾಜ್ಯದ ವಿಲೇವಾರಿಯನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ನಿಯಮಾವಳಿ ಹಾಗೂ ನ್ಯಾಯಾಲಯ ನಿರ್ದೇಶನದಂತೆ ವಿಲೇವಾರಿ ಮಾಡುತ್ತಿದೆ.

bmtc announcement for quit plastic and save envirnment
ಪ್ಲಾಸ್ಟಿಕ್ ತ್ಯಜಿಸಿ ಪರಿಸರ ಉಳಿಸಿ ಅಂತಿದೆ‌ ಬಿಎಂಟಿಸಿ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವಿಶೇಷ ಆಯುಕ್ತರು (ಆರೋಗ್ಯ) ಪಾಲಿಕೆ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಕ್ಯಾರಿಬಾಗ್, ಭಿತ್ತಿಪತ್ರ, ಫ್ಲಕ್ಸ್, ತಟ್ಟೆ, ಲೋಟ, ಚಮಚ, ಪ್ಲಾಸ್ಟಿಕ್ ಹಾಳೆ ಸೇರಿದಂತೆ ಬಳಕೆಯನ್ನು ಸಂರ್ಪೂಣವಾಗಿ ನಿಷೇಧಿಸಲು ಸುತ್ತೋಲೆ ಹೊರಡಿಸಿದೆ.

ಹೀಗಾಗಿ ಬಿಎಂಟಿಸಿ ವ್ಯಾಪ್ತಿಗೆ ಬರುವ ಕಚೇರಿಗಳಲ್ಲಿ ಪ್ಲಾಸ್ಟಿಕ್ ಬಳಕೆ ಸಂಪೂರ್ಣವಾಗಿ ನಿಷೇಧಿಸಿ ಈ ಬಗ್ಗೆ ಸಿಬ್ಬಂದಿಯಲ್ಲಿ ಅರಿವು ಮೂಡಿಸಿ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಲಾಗಿದೆ ಎಂಬ ಫಲಕ ಅಳವಡಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಆದೇಶಿಸಿದೆ.

Intro:ಕಳೆಗಟ್ಟಿದ ಚಾಮರಾಜನಗರ ದಸರಾ: ಮಹಿಳಾ ದಸರಾದಲ್ಲಿ ನಾರಿಯರು ಮಿಂಚಿಂಗೋ ಮಿಂಚಿಂಗ್!


ಚಾಮರಾಜನಗರ: ಜಿಲ್ಲಾ ದಸರಾಗೆ ದಸರಾ ಸಮಿತಿ ಉಪಾಧ್ಯಕ್ಷ ಹಾಗೂ ಗುಂಡ್ಲುಪೇಟೆ ಶಾಸಕ ಸಿ.ಎಸ್.ನಿರಂಜನಕುಮಾರ್ ಚಾಮರಾಜೇಶ್ಚರ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿ ಚಾಲನೆ ನೀಡಿದರು.

Body:ರಥದ ಬೀದಿ ಆವರಣದಲ್ಲಿ ಆಯೋಜಿಸಿದ್ದ ಮಹಿಳಾ ದಸರಾ ಈ ಬಾರಿ ರಂಗು ಪಡೆದುಕೊಂಡಿತ್ತು. ರಂಗೋಲಿ ಸ್ಪರ್ಧೆ, ಮ್ಯೂಸಿಕಲ್ ಚೇರ್, ಮಡಿಕೆ ಒಡೆಯುವ ಸ್ಪರ್ಧೆ, ಲೆಮನ್ ಇನ್ ಸ್ಫೂನ್ ಸ್ಪರ್ಧೆಗಳಲ್ಲಿ ವಯಸ್ಸಿನ ಹಂಗು ತೊರೆದು ಕಾಲೇಜು ವಿದ್ಯಾರ್ಥಿನಿಯರಿಂದ ಹಿರಿತಯರೂ ಪಾಲ್ಗೊಂಡು ಮಿಂಚಿದರು.

ಈ ಬಾರಿ ವಿಶೇಷವಾಗಿ ಸೋಬಾನೆ ಪದ, ರಾಗಿ ಬೀಸುವುದು, ಭತ್ತ ಕುಟ್ಟುವುದು ಗಮನ ಸೆಳೆದರೇ ದೇಸಿ ಖಾದ್ಯಗಳ ಪ್ರಾತ್ಯಕ್ಷಿಕೆ ಎಲ್ಲರ ಬಾಯಲ್ಲೂ ನೀರು ಸುರಿಸಿತು.

ಗ್ರಾಮೀಣ ಭಾಗದಲ್ಲಿ ಹಿಂದೆ ಮದುವೆಯಲ್ಲಿ ನಡೆಯುತ್ತಿದ್ದ ಶಾಸ್ತ್ತಗಳು, ಸೋಬಾನೆ ಪದಗಳು ಆಕರ್ಷಿಸಿತು. ಮದುವೆ, ಅರಿಶಿಣ ಶಾಸ್ತ್ರ, ಧಾರೆ ಎರೆಯುವುದು, ಆಶೀರ್ವಾದ ಪಡೆಯುವಾಗ ಹಾಡುತ್ತಿದ್ದ ಸೋಬಾನೆ ಪದಗಳನ್ನು ಹಿರಿಯ ಮಹಿಳೆಯರು ಉತ್ಸಾಹದಿಂದಲೇ ಹಾಡಿದ್ದು ಮಹಿಳಾ ದಸರಾ ಆಚರಣೆಗೆ ಮತ್ತಷ್ಟು ಮೆರಗು ತಂದಿತ್ತು.

ಉತ್ಸಾಹದಿಂದ ಇದೇ ಮೊದಲ ಬಾರಿಗೆ ರಂಗೋಲಿ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದು ಖುಷಿ ತಂದಿತು. ರಾಗಿ ಬೀಸುವುದು, ಭತ್ತ ಕುಟ್ಟುವ ಸ್ಪರ್ಧೆಯನ್ನು ಯುವತಿಯರಿಗೂ ನೀಡಿದ್ದರೇ ಚೆಂದವಿತ್ತು ಎಂದು ರಾಮಸಮುದ್ರದ ಚೈತ್ರಾ ಅಭಿಪ್ರಾಯಪಟ್ಟರು.

ಇನ್ನು, ರಂಗೋಲಿ ಸ್ಪರ್ಧೆಯಲ್ಲಿ ೬೦ ಕ್ಕೂ ಹೆಚ್ಚು ಮಂದಿ, ಮ್ಯೂಸಿಕಲ್ ಚೇರಿನಲ್ಲಿ ೧೦೦ ಮಂದಿ, ಲೆಮನ್ ಇನ್ ಸ್ಪೂನ್ ಸ್ಪರ್ಧೆಯಲ್ಲಿ ೬೦, ಮಡಿಕೆ ಒಡೆಯುವ ಸ್ಪರ್ಧೆಯಲ್ಲಿ ೬೦ ಮಂದಿ ಭಾಗವಹಿಸಿದ್ದರು.

ಮಹಿಳಾ ದಸರಾವನ್ನು ವೀಕ್ಷಿಸಿ ಬಳಿಕ ಶಾಸಕ ನಿರಂಜನಕುಮಾರ್ ಮಾತನಾಡಿ, ಈ ಬಾರಿ ದಸರಾದಲ್ಲಿ ಎಲ್ಲಾ ಕಾರ್ಯಕ್ರಮವನ್ನೂ ಆಳವಡಿಸಿಕೊಂಡಿದ್ದು ಮೈಸೂರಿನ ದಸರಾ ರೀತಿಯೇ ಚಾಮರಾಜನಗರ ದಸರಾ ರೂಪುಗೊಂಡಿದೆ. ಮಹಿಳಾ ದಸರಾದ ಅಚ್ಚುಕಟ್ಟಾಗಿದ್ದು ಇಂದಿನಿಂದ ವೇದಿಕೆ ಕಾರ್ಯಕ್ರಮ ಆರಂಭವಾಗಲಿದ್ದು ಜನರು ಹೆಚ್ಚಿನ ರೀತಿಯಲ್ಲಿ ಬರಬೇಕು ಎಂದರು.

ಬದಲಾದ ನಾಗರಹಾವು: ದಸರಾ ಚಲನಚಿತ್ರೋತ್ಸವದಲ್ಲಿ ಇಂದು ನಾಗರಹಾವು ಪ್ರದರ್ಶನವಾಗಲಿದೆ ಎಂದು ತಿಳಿಸಲಾಗಿತ್ತು.ಆದರೆ, ವಿಷ್ಣುವರ್ಧನ್ ನಟನೆಯ ನಾಗರಹಾವು ಎಂದು ಬಂದ ಸಭಿಕರು ಹೊಸ ನಾಗರಹಾವು ಚಿತ್ರ ಪ್ರದರ್ಶನ ಕಂಡು ಬೇಸರ ವ್ಯಕ್ತಪಡಿಸಿದರು. ಚಲನಚಿತ್ರೋತ್ಸವಕ್ಕೆ ಚಾಲನೆ ನೀಡಿದ ಶಾಸಕ ಪುಟ್ಟರಂಗಶೆಟ್ಟಿ ಅವರೂ ಕೂಡ ವಿಷ್ಣುವರ್ಧನ್ ನಟನೆ,ಹಾಡನ್ನು ಹೊಗಳಿ ಚಿತ್ರ ನೋಡಲು ಕುಳಿತಾಗ ಇರಿಸುಮುರಿಸು ಅನುಭವಿಸಿದರು.

Conclusion:ಇಂದು ಸಂಜೆ ಆಹಾರಮೇಳ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ದೊರಕಲಿದ್ದು ರ್ಯಾಪರ್ ಚಂದನಶೆಟ್ಟಿ ಭಾಗವಹಿಸಲಿದ್ದಾರೆ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.