ETV Bharat / state

ಪತ್ರಿಕಾಗೋಷ್ಠಿ: ಪೇಜಾವರ ಶ್ರೀಗಳ ಅಂತ್ಯಕ್ರಿಯೆಯ ಪೂರ್ಣ ಮಾಹಿತಿ - ಪೇಜಾವರ ಶ್ರೀ ವಿಶ್ವೇಶ ತೀರ್ಥರ ಅಗಲಿಕೆ

ಪೇಜಾವರ ಶ್ರೀಗಳು ಇಂದು ಉಡುಪಿ ಮಠದಲ್ಲಿ ಅನಾರೋಗ್ಯದಿಂದ ಬೃಂದಾವನಸ್ತರಾಗಿದ್ದಾರೆ. ಶ್ರೀಗಳ ಇಚ್ಚೆಯಂತೆ ಅವರ ಬೃಂದಾವನವನ್ನು ಬೆಂಗಳೂರಿನ ವಿದ್ಯಾಪೀಠ ಮಠದಲ್ಲಿ ನಿರ್ಮಿಸಲು ಮಠದ ಆಡಳಿತ ಮಂಡಳಿ ನಿರ್ಧರಿಸಿದೆ. ಈ ನಿಟ್ಟಿನಲ್ಲಿ ಈಗಾಗಲೇ ಮಠದಲ್ಲಿ ಸಕಲ ಸಿದ್ದತೆಗಳು ನಡೆಯುತ್ತಿದ್ದು, ಹೆಚ್ಚಿನ ಮಾಹಿತಿ ನೀಡಲು ಮಠದ ಆಡಳಿತ ಮಂಡಳಿ ಜೊತೆ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.

Press meet on Pejavara shree funeral
ಪತ್ರಿಕಾಗೋಷ್ಠಿ: ಪೇಜಾವರ ಶ್ರೀಗಳ ಅಂತ್ಯಕ್ರಿಯೆಯ ಪೂರ್ಣ ಮಾಹಿತಿ
author img

By

Published : Dec 29, 2019, 3:33 PM IST

ಬೆಂಗಳೂರು: ಪೇಜಾವರ ಶ್ರೀಗಳು ಇಂದು ಉಡುಪಿ ಮಠದಲ್ಲಿ ಅನಾರೋಗ್ಯದಿಂದ ಬೃಂದಾವನಸ್ತರಾಗಿದ್ದಾರೆ. ಶ್ರೀಗಳ ಇಚ್ಚೆಯಂತೆ ಅವರ ಬೃಂದಾವನವನ್ನು ಬೆಂಗಳೂರಿನ ವಿದ್ಯಾಪೀಠ ಮಠದಲ್ಲಿ ನಿರ್ಮಿಸಲು ಮಠದ ಆಡಳಿತ ಮಂಡಳಿ ನಿರ್ಧರಿಸಿದೆ. ಈ ನಿಟ್ಟಿನಲ್ಲಿ ಈಗಾಗಲೇ ಮಠದಲ್ಲಿ ಸಕಲ ಸಿದ್ದತೆಗಳು ನಡೆಯುತ್ತಿದ್ದು, ಹೆಚ್ಚಿನ ಮಾಹಿತಿ ನೀಡಲು ಮಠದ ಆಡಳಿತ ಮಂಡಳಿ ಜೊತೆ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.

ಪತ್ರಿಕಾಗೋಷ್ಠಿ: ಪೇಜಾವರ ಶ್ರೀಗಳ ಅಂತ್ಯಕ್ರಿಯೆಯ ಪೂರ್ಣ ಮಾಹಿತಿ

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿಸಿಎಂ ಗೋವಿಂದ ಕಾರಜೋಳ, ದೇಶ ಕಂಡ ಅಪರೂಪದ‌ ಯತಿಯಾಗಿದ್ದವರು ಶ್ರೀಗಳು. ಧರ್ಮ ಹಾಗೂ ಸಂಸ್ಕೃತಿ ಬಗ್ಗೆ ಶ್ರೀಗಳು ಅತೀವ ಕಾಳಜಿ ಹೊಂದಿದ್ದರು. ನನಗೆ 30 ವರ್ಷಗಳಿಂದ ಅವರ ಒಡನಾಟ ಇದೆ. ಬಿಜಾಪುರದ ಇಂಡಿಯಲ್ಲಿ ಒಂದು ಹಳ್ಳಿ ಪ್ರವಾಹದಿಂದ ಕೊಚ್ಚಿ ಹೋಗಿತ್ತು. ಆಗ ಪೂಜ್ಯರು‌ ಅಲ್ಲಿಗೆ ಬಂದು ಸಂತ್ರಸ್ತರಿಗೆ ಸಾಂತ್ವನ ಹೇಳಿ ನೆರವು ನೀಡಿದ್ರು. ಮಠದ ವತಿಯಿಂದ ಹೊಸ ಗ್ರಾಮವೇ ನಿರ್ಮಾಣವಾಯ್ತು.

ಉಡುಪಿಯಲ್ಲಿ ಕೆಲವು ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಲಾಗುತ್ತದೆ. ಅನಂತರ ಮಧ್ಯಾಹ್ನ 3.30ಕ್ಕೆ ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಸಂಜೆ 6 ಗಂಟೆಯಿಂದ ವಿದ್ಯಾಪೀಠದಲ್ಲಿ ಅಂತಿಮ ಸಂಸ್ಕಾರ ನೆರವೇರಲಿದೆ ಎಂದು ಮಾಹಿತಿ ನೀಡಿದರು.

ಅಲ್ಲದೇ, ಇದೇ ವೇಳೆ ಮಾತನಾಡಿದ ಮಠದ ಆಡಳಿತ ಮಂಡಳಿಯ ಸದಸ್ಯರಾದ ಕೇಶವಾಚಾರ್ಯ ಮಾತನಾಡಿ, ವಿದ್ಯಾಪೀಠದಲ್ಲಿ ಖಾಸಗಿ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸುತ್ತೇವೆ. ಕಾರ್ಯಕ್ರಮ ವಿಶ್ವ ಪ್ರಸನ್ನ ತೀರ್ಥ ಶ್ರೀಗಳ ಮಾರ್ಗದರ್ಶನದಲ್ಲಿ ಮಾಧ್ವ ಬ್ರಾಹ್ಮಣ ಸಂಪ್ರದಾಯದಂತೆ ಅಂತ್ಯ ಸಂಸ್ಕಾರ ರಾತ್ರಿ 8 ಗಂಟೆ ಒಳಗೆ ನೇರವೇರಲಿದೆ.

ಶ್ರೀಗಳ ಪಾರ್ಥೀವ ಶರೀರವನ್ನು ಹೆಚ್​ಎಎಲ್ ಏರ್ ಪೋರ್ಟ್ ನಲ್ಲಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರೇ ಸ್ವೀಕರಿಸಲಿದ್ದಾರೆ ಎಂದು ತಿಳಿಸಿದರು.

ಬೆಂಗಳೂರು: ಪೇಜಾವರ ಶ್ರೀಗಳು ಇಂದು ಉಡುಪಿ ಮಠದಲ್ಲಿ ಅನಾರೋಗ್ಯದಿಂದ ಬೃಂದಾವನಸ್ತರಾಗಿದ್ದಾರೆ. ಶ್ರೀಗಳ ಇಚ್ಚೆಯಂತೆ ಅವರ ಬೃಂದಾವನವನ್ನು ಬೆಂಗಳೂರಿನ ವಿದ್ಯಾಪೀಠ ಮಠದಲ್ಲಿ ನಿರ್ಮಿಸಲು ಮಠದ ಆಡಳಿತ ಮಂಡಳಿ ನಿರ್ಧರಿಸಿದೆ. ಈ ನಿಟ್ಟಿನಲ್ಲಿ ಈಗಾಗಲೇ ಮಠದಲ್ಲಿ ಸಕಲ ಸಿದ್ದತೆಗಳು ನಡೆಯುತ್ತಿದ್ದು, ಹೆಚ್ಚಿನ ಮಾಹಿತಿ ನೀಡಲು ಮಠದ ಆಡಳಿತ ಮಂಡಳಿ ಜೊತೆ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.

ಪತ್ರಿಕಾಗೋಷ್ಠಿ: ಪೇಜಾವರ ಶ್ರೀಗಳ ಅಂತ್ಯಕ್ರಿಯೆಯ ಪೂರ್ಣ ಮಾಹಿತಿ

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿಸಿಎಂ ಗೋವಿಂದ ಕಾರಜೋಳ, ದೇಶ ಕಂಡ ಅಪರೂಪದ‌ ಯತಿಯಾಗಿದ್ದವರು ಶ್ರೀಗಳು. ಧರ್ಮ ಹಾಗೂ ಸಂಸ್ಕೃತಿ ಬಗ್ಗೆ ಶ್ರೀಗಳು ಅತೀವ ಕಾಳಜಿ ಹೊಂದಿದ್ದರು. ನನಗೆ 30 ವರ್ಷಗಳಿಂದ ಅವರ ಒಡನಾಟ ಇದೆ. ಬಿಜಾಪುರದ ಇಂಡಿಯಲ್ಲಿ ಒಂದು ಹಳ್ಳಿ ಪ್ರವಾಹದಿಂದ ಕೊಚ್ಚಿ ಹೋಗಿತ್ತು. ಆಗ ಪೂಜ್ಯರು‌ ಅಲ್ಲಿಗೆ ಬಂದು ಸಂತ್ರಸ್ತರಿಗೆ ಸಾಂತ್ವನ ಹೇಳಿ ನೆರವು ನೀಡಿದ್ರು. ಮಠದ ವತಿಯಿಂದ ಹೊಸ ಗ್ರಾಮವೇ ನಿರ್ಮಾಣವಾಯ್ತು.

ಉಡುಪಿಯಲ್ಲಿ ಕೆಲವು ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಲಾಗುತ್ತದೆ. ಅನಂತರ ಮಧ್ಯಾಹ್ನ 3.30ಕ್ಕೆ ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಸಂಜೆ 6 ಗಂಟೆಯಿಂದ ವಿದ್ಯಾಪೀಠದಲ್ಲಿ ಅಂತಿಮ ಸಂಸ್ಕಾರ ನೆರವೇರಲಿದೆ ಎಂದು ಮಾಹಿತಿ ನೀಡಿದರು.

ಅಲ್ಲದೇ, ಇದೇ ವೇಳೆ ಮಾತನಾಡಿದ ಮಠದ ಆಡಳಿತ ಮಂಡಳಿಯ ಸದಸ್ಯರಾದ ಕೇಶವಾಚಾರ್ಯ ಮಾತನಾಡಿ, ವಿದ್ಯಾಪೀಠದಲ್ಲಿ ಖಾಸಗಿ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸುತ್ತೇವೆ. ಕಾರ್ಯಕ್ರಮ ವಿಶ್ವ ಪ್ರಸನ್ನ ತೀರ್ಥ ಶ್ರೀಗಳ ಮಾರ್ಗದರ್ಶನದಲ್ಲಿ ಮಾಧ್ವ ಬ್ರಾಹ್ಮಣ ಸಂಪ್ರದಾಯದಂತೆ ಅಂತ್ಯ ಸಂಸ್ಕಾರ ರಾತ್ರಿ 8 ಗಂಟೆ ಒಳಗೆ ನೇರವೇರಲಿದೆ.

ಶ್ರೀಗಳ ಪಾರ್ಥೀವ ಶರೀರವನ್ನು ಹೆಚ್​ಎಎಲ್ ಏರ್ ಪೋರ್ಟ್ ನಲ್ಲಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರೇ ಸ್ವೀಕರಿಸಲಿದ್ದಾರೆ ಎಂದು ತಿಳಿಸಿದರು.

Intro:ಪೂರ್ಣಪ್ರಜ್ಞ ವಿದ್ಯಾಪೀಠ ಟ್ರಸ್ಟ್ ನಿಂದ ಪತ್ರಿಕಾಗೋಷ್ಠಿ...


ಪೇಜಾವರ ಶ್ರೀಗಳು ಇಂದು ಉಡುಪಿ ಮಠದಲ್ಲಿ ಅನಾರೋಗ್ಯದಿಂದ ಬೃಂದಾವನಸ್ತರಾಗಿದ್ದು.ಶ್ರೀಗಳ ಇಚ್ಚೆಯಂತೆ ಶ್ರೀಗಳ ಬೃಂದಾವನವನ್ನು ಬೆಂಗಳೂರಿನ ವಿದ್ಯಾಪೀಠ ಮಠದಲ್ಲಿ ನಿರ್ಮಿಸಲು ಮಠದ ಆಡಳಿತ ಮಂಡಳಿ ನಿರ್ಧರಿಸಿದ್ದು.ಈಗಾಗಲೇ ಮಠದಲ್ಲಿ ಸಕಲ ಸಿದ್ದತೆ ಮಾಡಿಕೊಳ್ತಿದ್ದುಮೀ ಬಗ್ಗೆ ಮಾಹಿತಿ ನೀಡಲು ಮಠದ ಆಡಳಿತ ಮಂಡಳಿ ಜೊತೆ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ
ಡಿಸಿಎಮ್ ಡಿಸಿಎಂ ಗೋವಿಂದ ಕಾರಜೋಳ ದೇಶ ಕಂಡ ಅಪರೂಪದ‌ ಯತಿಯಾಗಿದ್ದವರು ಶ್ರೀಗಳು,
ಧರ್ಮದ ಹಾಗು ಸಂಸ್ಕೃತಿ ಬಗ್ಗೆ ಶ್ರೀಗಳು ಅತೀವ ಕಾಳಜಿ ಹೊಂದಿದ್ದರು.ಪೂಜ್ಯ ಶ್ರೀಗಳ ಒಡನಾಟ ನನಗೆ ೩೦ ವರ್ಷಗಳಿಂದ ಇದೆ. ಬಿಜಾಪುರದ ಇಂಡಿಯಲ್ಲಿ ಒಂದು ಹಳ್ಳಿ ಪ್ರವಾಹದಿಂದ ಕೊಚ್ಚಿ ಹೋಗಿತ್ತು.ಆಗ ಪೂಜ್ಯರು‌ ಬಿಜಾಪುರದ ಇಂಡಿಗೆ ಬಂದು ಸಂತ್ರಸ್ತರಿಗೆ ಸಾಂತ್ವನ ಹಾಗು ನೆರವು ನೀಡಿದ್ರು.ಮಠದ ವತಿಯಿಂದ ಹೊಸ ಗ್ರಾಮನಿರ್ಮಾಣಮಾಡಿದ್ರು.ಗೋವಿಂದಪುರಕ್ಕೆ ನಾನೂ ಹೋಗಿದ್ದೆ. ಶ್ರೀಗಳು ಅತ್ಯುತ್ತಮವಾದ ಸೇವೆ ನೀಡಿದ್ದಾರೆ.ಮನೆಗಳ ನಿರ್ಮಾಣ ಮಾಡಿಕೊಟ್ಟಿದ್ದರು.
ಶಾಲಾ ಕಾಲೇಜು, ಬಡವರಿಗೆ ನಿಲಯಗಳನ್ನುನಿರ್ಮಾಣ
ಮಾಡಿದ್ದಾರೆ,ಅನ್ನದಾಸೋಹ, ವಿಚಾರ ದಾಸೋಹ ಮಾಡಿದ್ದಾರೆ,ಮಕ್ಕಳನ್ನು ಉತ್ತಮ ಪ್ರಜೆಗಳನ್ನಾಗಿ ಮಾಡಿದ್ದಾರೆ ನೇರ ನಡೆನುಡಿಗೆ ಹೆಸರುವಾಸಿ ಅಲ್ಲದೆ
ಎಮೆರ್‌ಜೆನ್ಸಿ ಸಮಯದಲ್ಲಿ ಜೈಲಿನಲ್ಲಿದ್ದ ನಾಯಕರಿಗೆ ಯಾರೂ ಭೇಟಿಯಾಗುವ ಧೈರ್ಯ ಮಾಡುತ್ತಿರಲಿಲ್ಲ,
ಆದ್ರೆ ಶ್ರೀಗಳು ಆ ಧೈರ್ಯ ಮಾಡಿದ್ರು.Body:ಅನೇಕ ಹೋರಾಟದಲ್ಲಿ ಭಾಗವಹಿಸಿದ್ದರುಅವರ ಅಗಲಿಕೆ ಸಮಾಜಕ್ಕೆ ದೊಡ್ಡ ನಷ್ಟವಾಗಿದೆ ಎಂದು ಶ್ರೀಗಳ ಜೊತೆಗಿನ ಒಡನಾಟವನ್ನು ಮೆಲುಕು ಹಾಕಿದ್ರು.ನಂತರ ಮಾತನಾಡಿದ ಪೇಜಾವರ ಶ್ರೀ ಆಪ್ತ ಅನಂತ್
ಉಡುಪಿಯಲ್ಲಿ ಕೆಲವು ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಲಾಗುತ್ತದೆ.ನಂತರ ಮಧ್ಯಾಹ್ನ 3.30ಕ್ಕೆ ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಅಂತಿಮ ದರ್ಶನ ವ್ಯವಸ್ಥೆ ಮಾಡಲಾಗಿದೆ..ಸಂಜೆ 6 ಗಂಟೆಯಿಂದ ವಿದ್ಯಾಪೀಠದಲ್ಲಿ ಅಂತಿಮ ಸಂಸ್ಕಾರ ಮಾಡಲಾಗುವುದುಒಂದು ಖಾಸಗಿ ಕಾರ್ಯಕ್ರಮವಾಗಿ ಇದನ್ನ ನಡೆಸಲಾಗುವುದು ಎಂದು ಮಾಹಿತಿ ನೀಡಿದರು.
ಅಲ್ಲದೆ ಇದೇ ವೇಳೆ ಮಾತನಾಡಿದ ಮಠದ ಆಡಳಿತ ಮಂಡಳಿಯ ಸದಸ್ಯರಾದಕೇಶವಾಚಾರ್ಯವಿದ್ಯಾಪೀಠ
ದಲ್ಲಿ ಖಾಸಗಿ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸುತ್ತೇವೆ. ವಿಶ್ವ ಪ್ರಸನ್ನ ತೀರ್ಥ ಶ್ರೀಗಳ ಮಾರ್ಗದರ್ಶನದಲ್ಲಿ ನಡೆಯಲಿದೆ. ಒಂದು ಮಾತು, ಒಂದುನಗುವಿನಲ್ಲಿಎಲ್ಲರನ್ನುಮಂತ್ರಮುಘ್ದಗೊಳಿಸುತ್ತಿದ್ದರು.ತಮ್ಮ ಮುಗ್ಧತೆಯಿಂದಲೇ ವಾಜಪೇಯಿಯಿಂದ ಹಿಡಿದು ಎಲ್ಲ ನಾಯಕರನ್ನು ಸೆಳೆಯುತ್ತಿದ್ದರುಅವರಿಗೆ ಗಲಾಟೆ ಅಂದ್ರೆ ಆಗುತ್ತಿರಲಿಲ್ಲ, ಶಾಂತಿ ಶಾಂತಿ ಅಂತಲೇ ಹೇಳುತ್ತಿದ್ರು. ಇವರ ಅಗಲಿಕೆಯಿಂದ ಅಪರಿಮಿತ ಆಘಾತವಾಗಿದೆ. ಇನ್ನು ಶ್ರೀಗಳ ಅಂತಿಮ ವಿಧಿ
ವಿಧಾನವನ್ನು ಮಾಧ್ವ ಬ್ರಾಹ್ಮಣಸಂಪ್ರದಾಯದಂತೆ
ಇಂದು ರಾತ್ರಿ 8 ಗಂಟೆಒಳಗೆ ನೇರವೇರಿಸಲಾಗುತ್ತದೆ. ಅಲ್ಲದೆ ಶ್ರೀ ಗಳ ಪಾರ್ಥೀವ ಶರೀರವನ್ನು ಎಚ್ ಎ ಎಲ್ ಏರ್ ಪೋರ್ಟ್ ನಲ್ಲಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರೇ ಸ್ವೀಕರಿಸಲಿದ್ದಾರೆ. ಎಂದು ಹೇಳಿದರು

ಸತೀಶ ಎಂಬಿ

( ವಿಸ್ಯುವಲ್ಸ್ ಮೊಜೊದಲ್ಲಿ ಕೊಡಲಾಗಿದೆ)
Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.