ಬೆಂಗಳೂರು: ಅತೃಪ್ತ ಶಾಸಕರು ಸಂಜೆ 6 ಗಂಟೆ ಒಳಗೆ ಸ್ಪೀಕರ್ ಮುಂದೆ ಬರುವಂತೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ. ಹೀಗಾಗಿ ಸಂಜೆವರೆಗೆ ನಮಗೆ ಸಮಯವಿದೆ. ರಾಜಕೀಯ ಯಾವ ಕ್ಷಣದಲ್ಲೂ ಬದಲಾವಣೆ ಆಗಬಹುದು ಎಂದು ಶಾಸಕ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.
ನಗರದ ಕೆ.ಕೆ ಗೆಸ್ಟ್ ಹೌಸ್ನಲ್ಲಿ ಮಾತಾಡಿದ ಡಿಕೆಶಿ, ಶಾಸಕರು ನಮ್ಮ ಜೊತೆ ಇದ್ದಾರೆ. ಅವರು ರಾಜೀನಾಮೆ ಹಿಂಪಡೆದು ,ನಮ್ಮ ಜೊತೆ ಬರುತ್ತಾರೆ ಎಂದು ನಮಗೆ ವಿಶ್ವಾಸ ಇದೆ. ಎಲ್ಲರೂ ವಾಪಾಸ್ ಬರ್ತಾರೆ. ಯಾವುದೇ ಕ್ಷಣದಲ್ಲಿ ರಾಜಕೀಯ ಬದಲಾಗಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.