ETV Bharat / state

ಎಂಟಿಬಿ ನಾಗರಾಜ್​​​ ಹೇಳಿಕೆಯಿಂದ ಮಹಿಳೆಯರಿಗೆ ಅಪಮಾನ: ಮೋಟಮ್ಮ - ಬೆಂಗಳೂರು ವಿಧಾನ ಪರಿಷತ್ ಸದಸ್ಯೆ ಮೋಟಮ್ಮ ಸುದ್ದಿಗೋಷ್ಠಿ

ಮಹಿಳೆಯರ ಬಗ್ಗೆ ಹೊಸಕೋಟೆ ಉಪ ಚುನಾವಣೆ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್​ ಅವಹೇಳನಕಾರಿ ಹೇಳಿಕೆ ನೀಡಿ ಅಪಮಾನ ಮಾಡಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯೆ ಮೋಟಮ್ಮ ಆರೋಪಿಸಿದ್ದಾರೆ.

ವಿಧಾನ ಪರಿಷತ್ ಸದಸ್ಯೆ ಮೋಟಮ್ಮ
author img

By

Published : Nov 23, 2019, 2:29 PM IST

ಬೆಂಗಳೂರು: ಮಹಿಳೆಯರ ಬಗ್ಗೆ ಹೊಸಕೋಟೆ ಉಪ ಚುನಾವಣೆ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್​ ಅವಹೇಳನಕಾರಿ ಹೇಳಿಕೆ ನೀಡಿ ಅಪಮಾನ ಮಾಡಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯೆ ಮೋಟಮ್ಮ ಆರೋಪಿಸಿದ್ದಾರೆ.

ವಿಧಾನ ಪರಿಷತ್ ಸದಸ್ಯೆ ಮೋಟಮ್ಮ

ಕೆಪಿಸಿಸಿ ಕಚೇರಿಯಲ್ಲಿ ಮಹಿಳಾ ಮುಖಂಡರ ಜಂಟಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಎಂಟಿಬಿ ನಾಗರಾಜ್ ನಮ್ಮ ಜೊತೆ ರಾಜಕಾರಣ ಮಾಡಿದ್ದವರು. ಆದರೆ ಬಿಜೆಪಿಗೆ ಹೋಗ್ತಿದ್ದಂತೆ ಇಂತಹ ಹೇಳಿಕೆ ನೀಡ್ತಾರೆ. ಬುದ್ಧಿ ಭ್ರಮಣೆಯಾದಂತೆ ಅವರು ಹೇಳಿಕೆ ಕೊಟ್ಟಿದ್ದಾರೆ. ಮಹಿಳಾ ಅಭ್ಯರ್ಥಿ ನನ್ನ ಮುಂದೆ ಏನು ಮಾಡಬಲ್ಲರು ಎಂದು ಕಾಂಗ್ರೆಸ್ ಅಭ್ಯರ್ಥಿ ಪದ್ಮಾವತಿ ಸುರೇಶ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡ್ತಾರೆ. ನಾವೆಲ್ಲರೂ ರಾಜಕಾರಣ ಮಾಡಿಲ್ಲವೇ ಎಂದು ಪ್ರಶ್ನಿಸಿದರು.

ಅವರ ಹೇಳಿಕೆಗಳನ್ನು ತೀವ್ರವಾಗಿ ಖಂಡಿಸಬೇಕು. ಅವರಿಗೆ ಈ ಹೇಳಿಕೆಯೇ ಮುಳ್ಳಾಗುತ್ತದೆ. ಅವರ ಮನೆಯ ಮಹಿಳೆಯರ ಮೇಲೆ ಅವರಿಗೆ ಗೌರವ ಇಲ್ಲ ಅನ್ನೋದು ಇದು ತೋರಿಸುತ್ತದೆ. ಅವರು ಕ್ಷಮೆ ಕೇಳುವ ವಿಚಾರ ಅಲ್ಲ. ಅವರು ಮಹಿಳೆಯರ ಬಗ್ಗೆ ಅಗೌರವ ರೀತಿಯಲ್ಲಿ ಹೇಳಿಕೆ ನೀಡಿದ್ದಾರೆ. ಚುನಾವಣಾ ಆಯೋಗ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಮನವಿ ಮಾಡಿದರು.

ಬೆಂಗಳೂರು: ಮಹಿಳೆಯರ ಬಗ್ಗೆ ಹೊಸಕೋಟೆ ಉಪ ಚುನಾವಣೆ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್​ ಅವಹೇಳನಕಾರಿ ಹೇಳಿಕೆ ನೀಡಿ ಅಪಮಾನ ಮಾಡಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯೆ ಮೋಟಮ್ಮ ಆರೋಪಿಸಿದ್ದಾರೆ.

ವಿಧಾನ ಪರಿಷತ್ ಸದಸ್ಯೆ ಮೋಟಮ್ಮ

ಕೆಪಿಸಿಸಿ ಕಚೇರಿಯಲ್ಲಿ ಮಹಿಳಾ ಮುಖಂಡರ ಜಂಟಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಎಂಟಿಬಿ ನಾಗರಾಜ್ ನಮ್ಮ ಜೊತೆ ರಾಜಕಾರಣ ಮಾಡಿದ್ದವರು. ಆದರೆ ಬಿಜೆಪಿಗೆ ಹೋಗ್ತಿದ್ದಂತೆ ಇಂತಹ ಹೇಳಿಕೆ ನೀಡ್ತಾರೆ. ಬುದ್ಧಿ ಭ್ರಮಣೆಯಾದಂತೆ ಅವರು ಹೇಳಿಕೆ ಕೊಟ್ಟಿದ್ದಾರೆ. ಮಹಿಳಾ ಅಭ್ಯರ್ಥಿ ನನ್ನ ಮುಂದೆ ಏನು ಮಾಡಬಲ್ಲರು ಎಂದು ಕಾಂಗ್ರೆಸ್ ಅಭ್ಯರ್ಥಿ ಪದ್ಮಾವತಿ ಸುರೇಶ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡ್ತಾರೆ. ನಾವೆಲ್ಲರೂ ರಾಜಕಾರಣ ಮಾಡಿಲ್ಲವೇ ಎಂದು ಪ್ರಶ್ನಿಸಿದರು.

ಅವರ ಹೇಳಿಕೆಗಳನ್ನು ತೀವ್ರವಾಗಿ ಖಂಡಿಸಬೇಕು. ಅವರಿಗೆ ಈ ಹೇಳಿಕೆಯೇ ಮುಳ್ಳಾಗುತ್ತದೆ. ಅವರ ಮನೆಯ ಮಹಿಳೆಯರ ಮೇಲೆ ಅವರಿಗೆ ಗೌರವ ಇಲ್ಲ ಅನ್ನೋದು ಇದು ತೋರಿಸುತ್ತದೆ. ಅವರು ಕ್ಷಮೆ ಕೇಳುವ ವಿಚಾರ ಅಲ್ಲ. ಅವರು ಮಹಿಳೆಯರ ಬಗ್ಗೆ ಅಗೌರವ ರೀತಿಯಲ್ಲಿ ಹೇಳಿಕೆ ನೀಡಿದ್ದಾರೆ. ಚುನಾವಣಾ ಆಯೋಗ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಮನವಿ ಮಾಡಿದರು.

Intro:newsBody:ಮಹಿಳೆಯರ ಬಗ್ಗೆ ಅವಹೇಳನಕಾರಿ ಮಾತನಾಡಿದ ಎಂಟಿಬಿ ನಾಗರಾಜ್ ಗೆ ಜನರೇ ಪಾಠ ಕಲಿಸುತ್ತಾರೆ: ಮೋಟಮ್ಮ

ಬೆಂಗಳೂರು: ಮಹಿಳೆಯರ ಬಗ್ಗೆ ಹೊಸಕೋಟೆ ಉಪಚುನಾವಣೆ ಬಿಜೆಪಿ ಅಭ್ಯರ್ಥಿ ಎಂಟಿಬಿ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ. ಅವರ ಹೇಳಿಕೆ ಮಹಿಳೆಯರಿಗೆ ಅಪಮಾನ ಮಾಡಿದೆ ಎಂದು ಮಾಜಿ ಸಚಿವೆ ಹಾಗೂ ವಿಧಾನ ಪರಿಷತ್ ಸದಸ್ಯೆ ಮೋಟಮ್ಮ ತಿಳಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಮಹಿಳಾ ಮುಖಂಡರ ಜಂಟಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಎಂಟಿಬಿ ನಾಗರಾಜ್ ನಮ್ಮ ಜೊತೆ ರಾಜಕಾರಣ ಮಾಡಿದ್ದವರು. ಆದರೆ ಬಿಜೆಪಿಗೆ ಹೋಗ್ತಿದ್ದಂತೆ ಇಂತ ಹೇಳಿಕೆ ನೀಡ್ತಾರೆ. ಬುದ್ಧಿಭ್ರಮಣೆಯಾದಂತೆ ಅವರು ಹೇಳಿಕೆ ಕೊಟ್ಟಿದ್ದಾರೆ. ಬಿಜೆಪಿಯವರು ಭ್ರಮಾಲೋಕದಲ್ಲಿದ್ದಾರೆ. ಮಹಿಳಾ ಅಭ್ಯರ್ಥಿ ನನ್ನ ಮುಂದೆ ಏನು ಮಾಡಬಲ್ಲರು ಎಂದು ಕಾಂಗ್ರೆಸ್ ಅಭ್ಯರ್ಥಿ ಪದ್ಮಾವತಿ ಸುರೇಶ್ ಬಗ್ಗೆ ಇಂತ ಅವಹೇಳನ ಮಾಡ್ತಾರೆ. ನಾವೆಲ್ಲರೂ ರಾಜಕಾರಣ ಮಾಡಿಲ್ಲವೇ ಎಂದು ಪ್ರಶ್ನಿಸಿದರು.
ಮಹಿಳೆಯರಾಗಿ ಕುಟುಂಬ,ರಾಜಕಾರಣ ಎರಡೂ ಮಾಡಿದ್ದೇವೆ. ಹೊಸಕೋಟೆಯ ಮಹಿಳಾ ಮತದಾರರು ಬುದ್ಧಿಕಲಿಸಬೇಕು. ಎಂಟಿಬಿ ನಾಗರಾಜ್ ಗೆ ಬುದ್ಧಿ ಕಲಿಸಬೇಕು. ಹೊಸಕೋಟೆಯ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ ಮಹಿಳೆಯರಿಗೆ ಅವಮಾನ ಮಾಡೋ ರೀತಿಯಲ್ಲಿ ಹೇಳಿಕೆ ನೀಡಿದ್ದಾರೆ. ಅಂತಹ ಹೇಳಿಕೆ ನೀಡಿದ ಎಂಟಿಬಿ ನಾಗರಾಜ್ ಅವ್ರಿಗೆ ಜನ ತಕ್ಕ ಪಾಠ ಕಲಿಸ್ತಾರೆ ಎಂದು ಹೇಳಿದರು.
ಜನ ಬುದ್ಧಿ ಕಲಿಸಬೇಕು
ಮಾಜಿ ಸಚಿವೆ ರಾಣಿ ಸತೀಶ್ ಮಾತನಾಡಿ, ಎಂಟಿಬಿ ನಾಗರಾಜ್ ಮಹಿಳೆಯರಿಗೆ ಅಗೌರವ ತೋರಿದ್ದಾರೆ. 15 ಅನರ್ಹರು ಚುನಾವಣೆಗೆ ನಿಂತಿದ್ದಾರೆ. ಮತದಾರರು ಅರ್ಹರು ಅಂತ ಆರಿಸಿಕಳಿಸಿದ್ದರು. ಈಗ ಜನರಿಗೆ ಮೋಸ ಮಾಡಿ ಅಮಿಷಕ್ಕೆ ಒಳಗಾಗಿದ್ದಾರೆ. ಇಂತವರಿಗೆ ಈ ಚುನಾವಣೆಯಲ್ಲಿ ಜನ ಬುದ್ಧಿಕಲಿಸಬೇಕು. ಇಂದಿರಾ, ಸುಷ್ಮಾ ಸ್ವರಾಜ್ ರಾಜಕಾರಣ ಮಾಡಿಲ್ಲವೇ? ಅವರು ಸಮರ್ಥವಾಗಿ ಎಲ್ಲವನ್ನೂ ನಿಭಾಯಿಸಿಲ್ಲವೇ? ಹೆಣ್ಣುಮಕ್ಕಳ ಬಗ್ಗೆ ಎಂಟಿಬಿ ವ್ಯಂಗ್ಯ ಮಾಡಿದ್ದು ಸರಿಯಲ್ಲ. ಮಹಿಳಾ ಮತದಾರರು ಇವರಿಗೆ ಬುದ್ಧಿಕಲಿಸಬೇಕು ಎಂದರು.
ಅವರ ಹೇಳಿಕೆಗಳನ್ನು ತೀವ್ರವಾಗಿ ಖಂಡಿಸಬೇಕು. ಅವರಿಗೆ ಈ ಹೇಳಿಕೆಯೇ ಮುಳ್ಳಾಗುತ್ತದೆ. ಅವರ ಮನೆಯ ಮಹಿಳೆಯರ ಮೇಲೆ ಅವರಿಗೆ ಗೌರವ ಇಲ್ಲ ಅನದನೋದು ತೋರಿಸುತ್ತದೆ. ಅವರು ಕ್ಷಮೆ ಕೇಳುವ ವಿಚಾರ ಅಲ್ಲ. ಅವರು ಮಹಿಳೆಯರ ಬಗ್ಗೆ ಅಗೌರವ ರೀತಿಯಲ್ಲಿ ಹೇಳಿಕೆ ನೀಡಿದ್ದಾರೆ. ಚುನಾವಣಾ ಆಯೋಗ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಕರೆಕೊಟ್ಟರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಮೇಯರ್ ರಾಮಚಂದ್ರಪ್ಪ, ವಿಧಾನ ಪರಿಷತ್ ಮಾಜಿ ಸದಸ್ಯೆ ಗಾಯತ್ರಿ ಶಾಂತನಗೌಡರ್ ಮತ್ತಿತರರು ಉಪಸ್ಥಿತರಿದ್ದರು.Conclusion:news

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.