ETV Bharat / state

ಶಾಮನೂರು ಶಿವಶಂಕರಪ್ಪನವರು ಗೊಂದಲ ಸೃಷ್ಟಿಸುವ ಹೇಳಿಕೆ ಕೊಡಬಾರದು: ಶಾಸಕ ಬೇಳೂರು ಗೋಪಾಲಕೃಷ್ಣ

author img

By ETV Bharat Karnataka Team

Published : Oct 2, 2023, 6:09 PM IST

Updated : Oct 2, 2023, 6:31 PM IST

ಸರ್ಕಾರದಲ್ಲಿ ಎಲ್ಲಾ ಜಾತಿಯವರಿಗೂ ಒತ್ತು ಕೊಡಬೇಕು. ಕೇವಲ ಲಿಂಗಾಯತರಿಗೆ ಮಾತ್ರ ಒತ್ತು ಕೊಡಬೇಕೆಂದೇನಿಲ್ಲ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದರು.

mla-beluru-gopalakrishna-reaction-on-shamanur-shivashankarappa-statement
ಶಾಮನೂರು ಶಿವಶಂಕರಪ್ಪನವರು ಗೊಂದಲ ಸೃಷ್ಟಿಸುವ ಹೇಳಿಕೆ ಕೊಡಬಾರದು: ಶಾಸಕ ಬೇಳೂರು ಗೋಪಾಲಕೃಷ್ಣ
ಶಾಸಕ ಬೇಳೂರು ಗೋಪಾಲಕೃಷ್ಣ

ಬೆಂಗಳೂರು: ರಾಜ್ಯದ ಮುಖ್ಯಮಂತ್ರಿಗಳು ಆದ್ಯತೆಯ ಮೇರೆಗೆ ಯಾವ ರೀತಿ ಅಧಿಕಾರಿಗಳನ್ನು ನೇಮಕ ಮಾಡಬೇಕೆಂದು ನಿರ್ಧರಿಸುತ್ತಾರೆಯೇ ಹೊರತು ಜಾತಿ ಆಧಾರದ ಮೇಲಲ್ಲ ಎಂದು ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ತಿಳಿಸಿದರು. ಸರ್ಕಾರದಲ್ಲಿ ಲಿಂಗಾಯತ ಅಧಿಕಾರಿಗಳಿಗೆ ಸೂಕ್ತ ಸ್ಥಾನಮಾನ ಸಿಗುತ್ತಿಲ್ಲ ಎಂದು ಶಾಮನೂರು ಶಿವಶಂಕರಪ್ಪನವರ ಆರೋಪದ ಬಗ್ಗೆ ವಿಧಾನಸೌಧದಲ್ಲಿ ಇಂದು ಮಾಧ್ಯಮದರೊಂದಿಗೆ ಅವರು ಮಾತನಾಡಿದರು.

ಬರೀ ಲಿಂಗಾಯತ ಅಧಿಕಾರಿಗಳು ಮಾತ್ರ ಇರ್ತಾರಾ?. ಎಲ್ಲಾ ಜಾತಿಯವರು ಇರುತ್ತಾರೆ. ಅವರಿಗೂ ಆದ್ಯತೆ ಕೊಡಬೇಕಾಗುತ್ತದೆ. ಶಾಮನೂರು ಶಿವಶಂಕಪ್ಪನವರು ಎಲ್ಲಾ ಜಾತಿಯವರ ಬಗ್ಗೆ ಮಾತನಾಡಬೇಕಾಗಿತ್ತು. ಅವರ ಹಿರಿತನಕ್ಕೆ ಗೌರವ ಇರಬೇಕು, ಈ ರೀತಿಯ ಹೇಳಿಕೆ ಕೊಡುವುದು ತಪ್ಪಾಗುತ್ತದೆ. ಶಾಮನೂರು ಶಿವಶಂಕರಪ್ಪ ಅವರಿಗೆ ಯಡಿಯೂರಪ್ಪನವರ ಸಾಥ್​ ಅಂತೆ, ಅವರಿಗೆ ಮಾನ,ಮರ್ಯಾದೆ ಇದ್ಯಾ?. ಅವರು ಅಧಿಕಾರದಲ್ಲಿದ್ದಾಗ ವಾಹನ ಚಾಲಕನಿಂದ ಹಿಡಿದು ಅಡುಗೆ ಭಟ್ಟನವರೆಗೂ ಲಿಂಗಾಯತರನ್ನೇ ಇಟ್ಕೊಂಡಿದ್ದರು ಎಂದು ಕಿಡಿಕಾರಿದರು.

ಮುಖ್ಯಮಂತ್ರಿಗಳು ಕುರುಬ ಸಮುದಾಯದ ಒಂದಿಷ್ಟು ಅಧಿಕಾರಿಗಳನ್ನು ನೇಮಕ ಮಾಡಿಕೊಂಡಿರುತ್ತಾರೆ, ಅದನ್ನು ಇಲ್ಲ ಅನ್ನಲಾಗುತ್ತಾ?. ಶಾಮನೂರು ಶಿವಶಂಕರಪ್ಪನವರ ಮಗನೂ ಮಂತ್ರಿಯಾಗಿದ್ದಾರೆ. ಅವರೆಲ್ಲ ಸೇರಿ ಮಾತನಾಡಬೇಕು. ಶಾಮನೂರು ಶಿವಶಂಕರಪ್ಪನವರು ಬರೀ ಲಿಂಗಾಯತ ಅಧಿಕಾರಿಗಳನ್ನು ಕಡೆಗಣಿಸಿದ್ದಾರೆ ಎಂದರೆ ಹೇಗೆ?, ಬೇರೆಯವರನ್ನು ಬಿಟ್ಟುಹೋಗಿದ್ದಾರಾ?, ಎಲ್ಲಾ ಜಾತಿಯವರನ್ನೂ ತೆಗೆದುಕೊಂಡಿದ್ದಾರೆ. ರಾಜ್ಯದ ಮುಖ್ಯಮಂತ್ರಿಗಳಿಗೆ ಏನು ಮಾಡಬೇಕು ಎಂದು ಗೊತ್ತಿದೆ, ಉಪ ಮುಖ್ಯಮಂತ್ರಿಗಳೂ ಇದ್ದಾರೆ, ಅವರು ನಿರ್ಧಾರ ಮಾಡುತ್ತಾರೆ ಎಂದರು.

ಕಾಂಗ್ರೆಸ್​ ಪಕ್ಷಕ್ಕೆ ಎಲ್ಲಾ ಜಾತಿಯವರು ಬೆಂಬಲ ನೀಡಿ 135 ಸ್ಥಾನಗಳನ್ನು ಗೆಲ್ಲಿಸಿದ್ದಾರೆ. ಹಾಗಾಗಿ ಎಲ್ಲಾ ಜಾತಿಯವರಿಗೂ ಒತ್ತು ಕೊಡಬೇಕು. ಕೇವಲ ಲಿಂಗಾಯತರಿಗೆ ಮಾತ್ರ ಒತ್ತು ಕೊಡಬೇಕೆಂದೇನಿಲ್ಲ. ಶಾಮನೂರು ಶಿವಶಂಕರಪ್ಪನವರು ಗೊಂದಲ ಸೃಷ್ಟಿ ಮಾಡುವ ಹೇಳಿಕೆ ಕೊಡುವುದನ್ನು ನಿಲ್ಲಿಸಬೇಕೆಂದು ಒತ್ತಾಯಿಸುತ್ತೇನೆ ಎಂದು ಹೇಳಿದರು.

ಎರಡೂವರೆ ವರ್ಷದ ಬಳಿಕ ಕೆಲವು ಸಚಿವರು ರಾಜೀನಾಮೆ ಕೊಡಬೇಕು ಎಂದು ಸಚಿವ ಕೆ.ಹೆಚ್. ಮುನಿಯಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿ, ಈ ಕುರಿತು ಯಾರು ಏನು ಹೇಳುವ ಅವಶ್ಯಕತೆ ಇಲ್ಲ, ರಾಜ್ಯದ ಮುಖ್ಯಮಂತ್ರಿಗಳು ಮತ್ತು ಉಪ ಮುಖ್ಯಮಂತ್ರಿಗಳು ಅಧಿಕಾರ ಹಂಚಿಕೆ ಬಗ್ಗೆ ತೀರ್ಮಾನ ಮಾಡುತ್ತಾರೆ. ಇವರು ಈ ರೀತಿ ಹೇಳಿಕೆ ಕೊಡುವುದು ತಪ್ಪು ಎಂದರು.

ಬರುವ ಜನವರಿಯಲ್ಲಿ ಸರ್ಕಾರ ಬಿದ್ದುಹೋಗುತ್ತದೆ ಎಂದು ಸಿ.ಪಿ.ಯೋಗೇಶ್ವರ್​ ಅವರ ಹೇಳಿಕೆ ಕುರಿತು ಮಾತನಾಡಿ, ಅವರು ಹಗಲುಗನಸು ಕಾಣಬೇಕಷ್ಟೇ. ಯೋಗೇಶ್ವರ್​ ಮತ್ತು ಕುಮಾರಸ್ವಾಮಿಗೆ ಧಮ್ಮಿದ್ದರೆ ಆಪರೇಷನ್​ಗೆ ಕೈ ಹಾಕಲಿ ನೋಡೋಣ ಎಂದು ಸವಾಲು ಹಾಕಿದರು.

ಇದನ್ನೂ ಓದಿ: ಕೆಲವರು ತಲೆ ಕೆಟ್ಟು ಈ ರೀತಿ ಮಾತನಾಡುತ್ತಾರೆ : ಶಾಮನೂರು ವಿರುದ್ಧ ಕೊತ್ತೂರು ಮಂಜುನಾಥ್​ ವಾಗ್ದಾಳಿ

ಶಾಸಕ ಬೇಳೂರು ಗೋಪಾಲಕೃಷ್ಣ

ಬೆಂಗಳೂರು: ರಾಜ್ಯದ ಮುಖ್ಯಮಂತ್ರಿಗಳು ಆದ್ಯತೆಯ ಮೇರೆಗೆ ಯಾವ ರೀತಿ ಅಧಿಕಾರಿಗಳನ್ನು ನೇಮಕ ಮಾಡಬೇಕೆಂದು ನಿರ್ಧರಿಸುತ್ತಾರೆಯೇ ಹೊರತು ಜಾತಿ ಆಧಾರದ ಮೇಲಲ್ಲ ಎಂದು ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ತಿಳಿಸಿದರು. ಸರ್ಕಾರದಲ್ಲಿ ಲಿಂಗಾಯತ ಅಧಿಕಾರಿಗಳಿಗೆ ಸೂಕ್ತ ಸ್ಥಾನಮಾನ ಸಿಗುತ್ತಿಲ್ಲ ಎಂದು ಶಾಮನೂರು ಶಿವಶಂಕರಪ್ಪನವರ ಆರೋಪದ ಬಗ್ಗೆ ವಿಧಾನಸೌಧದಲ್ಲಿ ಇಂದು ಮಾಧ್ಯಮದರೊಂದಿಗೆ ಅವರು ಮಾತನಾಡಿದರು.

ಬರೀ ಲಿಂಗಾಯತ ಅಧಿಕಾರಿಗಳು ಮಾತ್ರ ಇರ್ತಾರಾ?. ಎಲ್ಲಾ ಜಾತಿಯವರು ಇರುತ್ತಾರೆ. ಅವರಿಗೂ ಆದ್ಯತೆ ಕೊಡಬೇಕಾಗುತ್ತದೆ. ಶಾಮನೂರು ಶಿವಶಂಕಪ್ಪನವರು ಎಲ್ಲಾ ಜಾತಿಯವರ ಬಗ್ಗೆ ಮಾತನಾಡಬೇಕಾಗಿತ್ತು. ಅವರ ಹಿರಿತನಕ್ಕೆ ಗೌರವ ಇರಬೇಕು, ಈ ರೀತಿಯ ಹೇಳಿಕೆ ಕೊಡುವುದು ತಪ್ಪಾಗುತ್ತದೆ. ಶಾಮನೂರು ಶಿವಶಂಕರಪ್ಪ ಅವರಿಗೆ ಯಡಿಯೂರಪ್ಪನವರ ಸಾಥ್​ ಅಂತೆ, ಅವರಿಗೆ ಮಾನ,ಮರ್ಯಾದೆ ಇದ್ಯಾ?. ಅವರು ಅಧಿಕಾರದಲ್ಲಿದ್ದಾಗ ವಾಹನ ಚಾಲಕನಿಂದ ಹಿಡಿದು ಅಡುಗೆ ಭಟ್ಟನವರೆಗೂ ಲಿಂಗಾಯತರನ್ನೇ ಇಟ್ಕೊಂಡಿದ್ದರು ಎಂದು ಕಿಡಿಕಾರಿದರು.

ಮುಖ್ಯಮಂತ್ರಿಗಳು ಕುರುಬ ಸಮುದಾಯದ ಒಂದಿಷ್ಟು ಅಧಿಕಾರಿಗಳನ್ನು ನೇಮಕ ಮಾಡಿಕೊಂಡಿರುತ್ತಾರೆ, ಅದನ್ನು ಇಲ್ಲ ಅನ್ನಲಾಗುತ್ತಾ?. ಶಾಮನೂರು ಶಿವಶಂಕರಪ್ಪನವರ ಮಗನೂ ಮಂತ್ರಿಯಾಗಿದ್ದಾರೆ. ಅವರೆಲ್ಲ ಸೇರಿ ಮಾತನಾಡಬೇಕು. ಶಾಮನೂರು ಶಿವಶಂಕರಪ್ಪನವರು ಬರೀ ಲಿಂಗಾಯತ ಅಧಿಕಾರಿಗಳನ್ನು ಕಡೆಗಣಿಸಿದ್ದಾರೆ ಎಂದರೆ ಹೇಗೆ?, ಬೇರೆಯವರನ್ನು ಬಿಟ್ಟುಹೋಗಿದ್ದಾರಾ?, ಎಲ್ಲಾ ಜಾತಿಯವರನ್ನೂ ತೆಗೆದುಕೊಂಡಿದ್ದಾರೆ. ರಾಜ್ಯದ ಮುಖ್ಯಮಂತ್ರಿಗಳಿಗೆ ಏನು ಮಾಡಬೇಕು ಎಂದು ಗೊತ್ತಿದೆ, ಉಪ ಮುಖ್ಯಮಂತ್ರಿಗಳೂ ಇದ್ದಾರೆ, ಅವರು ನಿರ್ಧಾರ ಮಾಡುತ್ತಾರೆ ಎಂದರು.

ಕಾಂಗ್ರೆಸ್​ ಪಕ್ಷಕ್ಕೆ ಎಲ್ಲಾ ಜಾತಿಯವರು ಬೆಂಬಲ ನೀಡಿ 135 ಸ್ಥಾನಗಳನ್ನು ಗೆಲ್ಲಿಸಿದ್ದಾರೆ. ಹಾಗಾಗಿ ಎಲ್ಲಾ ಜಾತಿಯವರಿಗೂ ಒತ್ತು ಕೊಡಬೇಕು. ಕೇವಲ ಲಿಂಗಾಯತರಿಗೆ ಮಾತ್ರ ಒತ್ತು ಕೊಡಬೇಕೆಂದೇನಿಲ್ಲ. ಶಾಮನೂರು ಶಿವಶಂಕರಪ್ಪನವರು ಗೊಂದಲ ಸೃಷ್ಟಿ ಮಾಡುವ ಹೇಳಿಕೆ ಕೊಡುವುದನ್ನು ನಿಲ್ಲಿಸಬೇಕೆಂದು ಒತ್ತಾಯಿಸುತ್ತೇನೆ ಎಂದು ಹೇಳಿದರು.

ಎರಡೂವರೆ ವರ್ಷದ ಬಳಿಕ ಕೆಲವು ಸಚಿವರು ರಾಜೀನಾಮೆ ಕೊಡಬೇಕು ಎಂದು ಸಚಿವ ಕೆ.ಹೆಚ್. ಮುನಿಯಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿ, ಈ ಕುರಿತು ಯಾರು ಏನು ಹೇಳುವ ಅವಶ್ಯಕತೆ ಇಲ್ಲ, ರಾಜ್ಯದ ಮುಖ್ಯಮಂತ್ರಿಗಳು ಮತ್ತು ಉಪ ಮುಖ್ಯಮಂತ್ರಿಗಳು ಅಧಿಕಾರ ಹಂಚಿಕೆ ಬಗ್ಗೆ ತೀರ್ಮಾನ ಮಾಡುತ್ತಾರೆ. ಇವರು ಈ ರೀತಿ ಹೇಳಿಕೆ ಕೊಡುವುದು ತಪ್ಪು ಎಂದರು.

ಬರುವ ಜನವರಿಯಲ್ಲಿ ಸರ್ಕಾರ ಬಿದ್ದುಹೋಗುತ್ತದೆ ಎಂದು ಸಿ.ಪಿ.ಯೋಗೇಶ್ವರ್​ ಅವರ ಹೇಳಿಕೆ ಕುರಿತು ಮಾತನಾಡಿ, ಅವರು ಹಗಲುಗನಸು ಕಾಣಬೇಕಷ್ಟೇ. ಯೋಗೇಶ್ವರ್​ ಮತ್ತು ಕುಮಾರಸ್ವಾಮಿಗೆ ಧಮ್ಮಿದ್ದರೆ ಆಪರೇಷನ್​ಗೆ ಕೈ ಹಾಕಲಿ ನೋಡೋಣ ಎಂದು ಸವಾಲು ಹಾಕಿದರು.

ಇದನ್ನೂ ಓದಿ: ಕೆಲವರು ತಲೆ ಕೆಟ್ಟು ಈ ರೀತಿ ಮಾತನಾಡುತ್ತಾರೆ : ಶಾಮನೂರು ವಿರುದ್ಧ ಕೊತ್ತೂರು ಮಂಜುನಾಥ್​ ವಾಗ್ದಾಳಿ

Last Updated : Oct 2, 2023, 6:31 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.