ETV Bharat / state

ವಿಧಾನಸಭೆ ಚುನಾವಣೆ.. ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುವಂತೆ ಸಂಸದರಿಗೆ ಕಟೀಲ್ ಸೂಚನೆ

author img

By

Published : Feb 23, 2023, 7:31 AM IST

ವಿಧಾನಸಭೆ ಚುನಾವಣೆ -2023 - ರಾಜ್ಯ ಬಿಜೆಪಿ ಕಚೇರಿಯಲ್ಲಿ ಸಂಸದರ ಸಭೆ - ಎಲೆಕ್ಷನ್​ ಕುರಿತು ಕಟೀಲರ್​ರಿಂದ ಹಲವು ಸೂಚನೆ

MPs meeting
ಸಂಸದರ ಸಭೆ

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ಎಲ್ಲ ಸಂಸದರೂ ಮಹತ್ವದ ಪಾತ್ರ ವಹಿಸಬೇಕು, ತಮ್ಮ ತಮ್ಮ ಕ್ಷೇತ್ರ ವ್ಯಾಪ್ತಿಯ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕು ಎಂದು ಸಂಸದರಿಗೆ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸೂಚನೆ ನೀಡಿದ್ದಾರೆ. ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಲ್ಲೇಶ್ವರ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಸಂಸದರ ಮಹತ್ವದ ಸಭೆ ನಡೆಯಿತು. ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸಂಸದರಾದ ಜಿ ಬಸವರಾಜು, ಜಿ ಎಂ ಸಿದ್ದೇಶ್ವರ್, ಪ್ರತಾಪ್ ಸಿಂಹ, ಕೇಂದ್ರ ಸಚಿವ ಭಗವಂತ್ ಖೂಬಾ, ರಮೇಶ್ ಜಿಗಜಿಣಗಿ ಸೇರಿದಂತೆ ಸುಮಾರು 15 ಸಂಸದರು ಸಭೆಯಲ್ಲಿ ಭಾಗಿಯಾಗಿದ್ದರು.

ಚುನಾವಣೆಯಲ್ಲಿ ಸಂಸದರ ಪಾತ್ರ ಹೇಗಿರಬೇಕು ಎನ್ನುವ ಕುರಿತು ಮಹತ್ವದ ಚರ್ಚೆ ನಡೆಸಲಾಯಿತು. ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಲು ಸಂಸದರಿಗೆ ಸೂಚನೆ ನೀಡಲಾಯಿತು. ಅಧಿವೇಶನದ ನಂತರ ಅಧಿಕೃತವಾಗಿ ಪೂರ್ಣ ಪ್ರಮಾಣದ ಚುನಾವಣಾ ಪ್ರಚಾರ ಕಾರ್ಯ ಆರಂಭಗೊಳ್ಳಲಿದ್ದು, ಸಂಸದರು ತಮ್ಮ ಪೂರ್ಣ ಸಮಯವನ್ನು ಪ್ರಚಾರಕ್ಕೆ ನೀಡಬೇಕು, ಅಭ್ಯರ್ಥಿಗಳ ಪರ ಪ್ರಚಾರ ನಡೆಸಬೇಕು ಎಂದು ಸೂಚಿಸಲಾಯಿತು.

ಪಕ್ಷ ಸೇರಿದವರಿಗೆ ಸ್ವಾಗತ ಕೋರಿದ ಕಟೀಲ್: ಸಂಸದರ ಸಭೆಗೂ ಮುನ್ನ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಮುಖಂಡರನ್ನು ನಳಿನ್ ಕುಮಾರ್ ಕಟೀಲ್ ಸ್ವಾಗತಿಸಿದರು. ಕಾಂಗ್ರೆಸ್ ವಿಚಾರಧಾರೆಯಲ್ಲಿ ಕೆಲಸ ಮಾಡಿ ಅಲ್ಲಿನ ಕಾರ್ಯವೈಖರಿ ಬಗ್ಗೆ ಬೇಸರಗೊಂಡು ಬಿಜೆಪಿ ಸೇರ್ಪಡೆಗೊಂಡ ಎಲ್ಲರಿಗೂ ಸ್ವಾಗತ, ಒಂದು ಪಾರ್ಟಿಯಲ್ಲಿ ಹತ್ತಾರು ವರ್ಷ ಇದ್ದು ಬೇರೆ ಪಕ್ಷ ಸೇರಿದಾಗ ಆತಂಕ ಇರುತ್ತದೆ. ಆದರೆ ನೀವು ಇಲ್ಲಿ ಸುಧಾಕರ್, ಮುನಿರತ್ನ ಎಲ್ಲರನ್ನು ನೋಡಿದಾಗ ಗೊತ್ತಾಗುತ್ತದೆ, ಅವರು ಇಲ್ಲಿ ಎಷ್ಟು ಖುಷಿಯಾಗಿದ್ದಾರೆ ನೋಡಿ, ಇನ್ನೊಂದು ವರ್ಷದ ನಂತರ ನಿಮಗೂ ಆ ಅನುಭವ ಆಗಲಿದೆ ಎಂದರು.

ಕಾಂಗ್ರೆಸ್ ಕುಟುಂಬ ಆಧಾರಿತ, ನಾಯಕ ಆಧಾರಿತ ಪಕ್ಷ. ಆದರೆ ನಮಲ್ಲಿ ಅಂತಹ ರಾಜಕೀಯ ಇಲ್ಲ, ಕಾರ್ಯಕರ್ತರಿಂದ ಬಿಜೆಪಿ ಇರುವುದು, ನಮ್ಮಲ್ಲಿ ಎಲ್ಲರೂ ಒಂದೇ, ಹೊರಗಿನವರು ಒಳಗಿನವರು ಅಂತ ಇಲ್ಲ. ಕಾಂಗ್ರೆಸ್ ನಲ್ಲಿ ಮೂಲ ಮತ್ತು ವಲಸಿಗ ಫೈಟ್ ನಡೆಯುತ್ತಿದೆ. ಆದರೆ ನಮ್ಮಲ್ಲಿ ಅಂತಹ ವಾತಾವರಣ ಇಲ್ಲ, ಮುಂದೆ ನಾವೇ ಅಧಿಕಾರಕ್ಕೆ ಬರುತ್ತೇವೆ, ನಿಮ್ಮನ್ನು ಪಕ್ಷ ಯಾವತ್ತೂ ಕೈ ಬಿಡಲ್ಲ ಎಂದು ಕಟೀಲ್​ ಭರವಸೆ ನೀಡಿದರು.

ಬಿಜೆಪಿಗೆ ಸೇರ್ಪಡೆಯಾದ ಕಾಂಗ್ರೆಸ್​ ಮುಖಂಡರು: ಚುನಾವಣೆ ಹತ್ತಿರ ಬರುತ್ತಿದ್ದಂತೆ ಪಕ್ಷಗಳ ಸ್ಥಾನಪಲ್ಲಟ ರಾಜ್ಯದಲ್ಲಿ ಹೊಸತೇನಲ್ಲ ಬಿಡಿ. ಆದರೂ ಈ ಬಾರಿ ಕಾಂಗ್ರೆಸ್​ ಮತ್ತು ಬಿಜೆಪಿ ಎರಡೂ ಪಕ್ಷದಲ್ಲೂ ಪಕ್ಷ ಸೇರ್ಪಡೆ ವಿಚಾರದಲ್ಲಿ ಸ್ಪರ್ಧೆ ಏರ್ಪಟ್ಟಂತೆ ಕಾಣುತ್ತಿದೆ. ಮೊನ್ನೆ ತಾನೆ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ರಾಜ್ಯ ಕಾಂಗ್ರೆಸ್​ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸಮ್ಮುಖದಲ್ಲಿ ಅಧಿಕೃತವಾಗಿ ಚಿಕ್ಕನಾಯಕನಹಳ್ಳಿ ಕ್ಷೇತ್ರದ ಬಿಜೆಪಿಯ ಮಾಜಿ ಶಾಸಕ ಕೆ.ಎಸ್ ಕಿರಣ್ ಕುಮಾರ್ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ ಸಂದೇಶ್ ನಾಗರಾಜ್, ತುಮಕೂರು ಗ್ರಾಮೀಣ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಹೆಚ್. ನಿಂಗಪ್ಪ ಕಾಂಗ್ರೆಸ್ ಸೇರ್ಪಡೆ ಆಗಿದ್ದರು.

ಇದೀಗ ನಿನ್ನೆಯ ದಿನ ಕಾಂಗ್ರೆಸ್​ ಪಕ್ಷದಿಂದ ನೆಲಮಂಗಲದ ಕಾಂಗ್ರೆಸ್​ ಮುಖಂಡರಾದ ರೇಣುಕಾ ಪ್ರಸಾದ್, ತುಳಸಿರಾಮ್​, ಸಪ್ತಗಿರಿ ಶಂಕರ್​ ನಾಯಕ್​, ಹಾಗೆ ಜಿಲ್ಲಾ ಕಾಂಗ್ರೆಸ್​ ಉಪಾದ್ಯಕ್ಷ ಉಮೇಶ್​ ಭಾರತೀಯ ಜನತಾ ಪಾರ್ಟಿಗೆ ಸೇರ್ಪಡೆಯಾದರು. ​ಅಲ್ಲದೆ ಬಿಜೆಪಿ ಪಕ್ಷಕ್ಕೆ ನಿನ್ನೆ ಮಾಜಿ ಸಚಿವ, ನಟನಾಗಿರುವ ಅನಂತ್​​ ನಾಗ್​ ಸೇರುತ್ತಾರೆ ಎಂಬ ವದಂತಿ ಸುದ್ದಿಯೂ ಹರಡಿದ್ದು, ಅವರ ಸ್ಪಷ್ಟ ನಿರ್ಧಾರ ಇನ್ನೂ ತಿಳಿದಿಲ್ಲ.

ಇದನ್ನೂ ಓದಿ: ನೆಲಮಂಗಲ: ಬಿಜೆಪಿ ಸೇರ್ಪಡೆಯಾದ ಕಾಂಗ್ರೆಸ್​ ಮುಖಂಡರು

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ಎಲ್ಲ ಸಂಸದರೂ ಮಹತ್ವದ ಪಾತ್ರ ವಹಿಸಬೇಕು, ತಮ್ಮ ತಮ್ಮ ಕ್ಷೇತ್ರ ವ್ಯಾಪ್ತಿಯ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕು ಎಂದು ಸಂಸದರಿಗೆ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸೂಚನೆ ನೀಡಿದ್ದಾರೆ. ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಲ್ಲೇಶ್ವರ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಸಂಸದರ ಮಹತ್ವದ ಸಭೆ ನಡೆಯಿತು. ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸಂಸದರಾದ ಜಿ ಬಸವರಾಜು, ಜಿ ಎಂ ಸಿದ್ದೇಶ್ವರ್, ಪ್ರತಾಪ್ ಸಿಂಹ, ಕೇಂದ್ರ ಸಚಿವ ಭಗವಂತ್ ಖೂಬಾ, ರಮೇಶ್ ಜಿಗಜಿಣಗಿ ಸೇರಿದಂತೆ ಸುಮಾರು 15 ಸಂಸದರು ಸಭೆಯಲ್ಲಿ ಭಾಗಿಯಾಗಿದ್ದರು.

ಚುನಾವಣೆಯಲ್ಲಿ ಸಂಸದರ ಪಾತ್ರ ಹೇಗಿರಬೇಕು ಎನ್ನುವ ಕುರಿತು ಮಹತ್ವದ ಚರ್ಚೆ ನಡೆಸಲಾಯಿತು. ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಲು ಸಂಸದರಿಗೆ ಸೂಚನೆ ನೀಡಲಾಯಿತು. ಅಧಿವೇಶನದ ನಂತರ ಅಧಿಕೃತವಾಗಿ ಪೂರ್ಣ ಪ್ರಮಾಣದ ಚುನಾವಣಾ ಪ್ರಚಾರ ಕಾರ್ಯ ಆರಂಭಗೊಳ್ಳಲಿದ್ದು, ಸಂಸದರು ತಮ್ಮ ಪೂರ್ಣ ಸಮಯವನ್ನು ಪ್ರಚಾರಕ್ಕೆ ನೀಡಬೇಕು, ಅಭ್ಯರ್ಥಿಗಳ ಪರ ಪ್ರಚಾರ ನಡೆಸಬೇಕು ಎಂದು ಸೂಚಿಸಲಾಯಿತು.

ಪಕ್ಷ ಸೇರಿದವರಿಗೆ ಸ್ವಾಗತ ಕೋರಿದ ಕಟೀಲ್: ಸಂಸದರ ಸಭೆಗೂ ಮುನ್ನ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಮುಖಂಡರನ್ನು ನಳಿನ್ ಕುಮಾರ್ ಕಟೀಲ್ ಸ್ವಾಗತಿಸಿದರು. ಕಾಂಗ್ರೆಸ್ ವಿಚಾರಧಾರೆಯಲ್ಲಿ ಕೆಲಸ ಮಾಡಿ ಅಲ್ಲಿನ ಕಾರ್ಯವೈಖರಿ ಬಗ್ಗೆ ಬೇಸರಗೊಂಡು ಬಿಜೆಪಿ ಸೇರ್ಪಡೆಗೊಂಡ ಎಲ್ಲರಿಗೂ ಸ್ವಾಗತ, ಒಂದು ಪಾರ್ಟಿಯಲ್ಲಿ ಹತ್ತಾರು ವರ್ಷ ಇದ್ದು ಬೇರೆ ಪಕ್ಷ ಸೇರಿದಾಗ ಆತಂಕ ಇರುತ್ತದೆ. ಆದರೆ ನೀವು ಇಲ್ಲಿ ಸುಧಾಕರ್, ಮುನಿರತ್ನ ಎಲ್ಲರನ್ನು ನೋಡಿದಾಗ ಗೊತ್ತಾಗುತ್ತದೆ, ಅವರು ಇಲ್ಲಿ ಎಷ್ಟು ಖುಷಿಯಾಗಿದ್ದಾರೆ ನೋಡಿ, ಇನ್ನೊಂದು ವರ್ಷದ ನಂತರ ನಿಮಗೂ ಆ ಅನುಭವ ಆಗಲಿದೆ ಎಂದರು.

ಕಾಂಗ್ರೆಸ್ ಕುಟುಂಬ ಆಧಾರಿತ, ನಾಯಕ ಆಧಾರಿತ ಪಕ್ಷ. ಆದರೆ ನಮಲ್ಲಿ ಅಂತಹ ರಾಜಕೀಯ ಇಲ್ಲ, ಕಾರ್ಯಕರ್ತರಿಂದ ಬಿಜೆಪಿ ಇರುವುದು, ನಮ್ಮಲ್ಲಿ ಎಲ್ಲರೂ ಒಂದೇ, ಹೊರಗಿನವರು ಒಳಗಿನವರು ಅಂತ ಇಲ್ಲ. ಕಾಂಗ್ರೆಸ್ ನಲ್ಲಿ ಮೂಲ ಮತ್ತು ವಲಸಿಗ ಫೈಟ್ ನಡೆಯುತ್ತಿದೆ. ಆದರೆ ನಮ್ಮಲ್ಲಿ ಅಂತಹ ವಾತಾವರಣ ಇಲ್ಲ, ಮುಂದೆ ನಾವೇ ಅಧಿಕಾರಕ್ಕೆ ಬರುತ್ತೇವೆ, ನಿಮ್ಮನ್ನು ಪಕ್ಷ ಯಾವತ್ತೂ ಕೈ ಬಿಡಲ್ಲ ಎಂದು ಕಟೀಲ್​ ಭರವಸೆ ನೀಡಿದರು.

ಬಿಜೆಪಿಗೆ ಸೇರ್ಪಡೆಯಾದ ಕಾಂಗ್ರೆಸ್​ ಮುಖಂಡರು: ಚುನಾವಣೆ ಹತ್ತಿರ ಬರುತ್ತಿದ್ದಂತೆ ಪಕ್ಷಗಳ ಸ್ಥಾನಪಲ್ಲಟ ರಾಜ್ಯದಲ್ಲಿ ಹೊಸತೇನಲ್ಲ ಬಿಡಿ. ಆದರೂ ಈ ಬಾರಿ ಕಾಂಗ್ರೆಸ್​ ಮತ್ತು ಬಿಜೆಪಿ ಎರಡೂ ಪಕ್ಷದಲ್ಲೂ ಪಕ್ಷ ಸೇರ್ಪಡೆ ವಿಚಾರದಲ್ಲಿ ಸ್ಪರ್ಧೆ ಏರ್ಪಟ್ಟಂತೆ ಕಾಣುತ್ತಿದೆ. ಮೊನ್ನೆ ತಾನೆ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ರಾಜ್ಯ ಕಾಂಗ್ರೆಸ್​ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸಮ್ಮುಖದಲ್ಲಿ ಅಧಿಕೃತವಾಗಿ ಚಿಕ್ಕನಾಯಕನಹಳ್ಳಿ ಕ್ಷೇತ್ರದ ಬಿಜೆಪಿಯ ಮಾಜಿ ಶಾಸಕ ಕೆ.ಎಸ್ ಕಿರಣ್ ಕುಮಾರ್ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ ಸಂದೇಶ್ ನಾಗರಾಜ್, ತುಮಕೂರು ಗ್ರಾಮೀಣ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಹೆಚ್. ನಿಂಗಪ್ಪ ಕಾಂಗ್ರೆಸ್ ಸೇರ್ಪಡೆ ಆಗಿದ್ದರು.

ಇದೀಗ ನಿನ್ನೆಯ ದಿನ ಕಾಂಗ್ರೆಸ್​ ಪಕ್ಷದಿಂದ ನೆಲಮಂಗಲದ ಕಾಂಗ್ರೆಸ್​ ಮುಖಂಡರಾದ ರೇಣುಕಾ ಪ್ರಸಾದ್, ತುಳಸಿರಾಮ್​, ಸಪ್ತಗಿರಿ ಶಂಕರ್​ ನಾಯಕ್​, ಹಾಗೆ ಜಿಲ್ಲಾ ಕಾಂಗ್ರೆಸ್​ ಉಪಾದ್ಯಕ್ಷ ಉಮೇಶ್​ ಭಾರತೀಯ ಜನತಾ ಪಾರ್ಟಿಗೆ ಸೇರ್ಪಡೆಯಾದರು. ​ಅಲ್ಲದೆ ಬಿಜೆಪಿ ಪಕ್ಷಕ್ಕೆ ನಿನ್ನೆ ಮಾಜಿ ಸಚಿವ, ನಟನಾಗಿರುವ ಅನಂತ್​​ ನಾಗ್​ ಸೇರುತ್ತಾರೆ ಎಂಬ ವದಂತಿ ಸುದ್ದಿಯೂ ಹರಡಿದ್ದು, ಅವರ ಸ್ಪಷ್ಟ ನಿರ್ಧಾರ ಇನ್ನೂ ತಿಳಿದಿಲ್ಲ.

ಇದನ್ನೂ ಓದಿ: ನೆಲಮಂಗಲ: ಬಿಜೆಪಿ ಸೇರ್ಪಡೆಯಾದ ಕಾಂಗ್ರೆಸ್​ ಮುಖಂಡರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.