ETV Bharat / state

ನಂಬರ್​​ ಒನ್ ‘ಟ್ರಾನ್ಸ್​​ಫರ್​​ ಸರ್ಕಾರ ’: ವರ್ಗಾವಣೆ ತುತ್ತು ಬಿಜೆಪಿಗೆ ಆಪತ್ತು.. ನುಂಗುತ್ತಾ.. ಉಗುಳುತ್ತಾ !

author img

By

Published : Sep 27, 2019, 4:46 PM IST

Updated : Sep 27, 2019, 4:54 PM IST

ರಾಜ್ಯದಲ್ಲಿ ನೆರೆ ಬಂದು ಸುಮಾರು 35 ಸಾವಿರ ಕೋಟಿ ರೂ. ಗಳಷ್ಟು ನಷ್ಟವಾದರೂ ಪರಿಹಾರದ ರೂಪದಲ್ಲಿ ಕೇವಲ 431 ಕೋಟಿ ರೂಪಾಯಿ ಖರ್ಚು ಮಾಡಲಾಗಿದ್ದು, ಉಳಿದಂತೆ ಕೇಂದ್ರ ಸರ್ಕಾರ ಇನ್ನೂ ಅಂಗೈಯಲ್ಲೇ ಪರಿಹಾರದ ಬೆಣ್ಣೆ ತೋರಿಸುತ್ತಿದೆ. ರೈತರ ಸಾಲ ಮನ್ನಾ ಸೇರಿದಂತೆ ಹಿಂದಿನ ಸರ್ಕಾರಗಳ ಅವಧಿಯಲ್ಲಿ ಕೈಗೊಂಡ ನಿರ್ಣಯಗಳಿಗೆ ಹಣ ಒದಗಿಸಿರುವುದು ಸೇರಿದಂತೆ ವಿವಿಧ ಬಾಬ್ತುಗಳಿಗೆ ನಿಗದಿಯಾದ ಹಣವನ್ನು ಬೇರೆ ಉದ್ದೇಶಕ್ಕೆ ಬಳಸುವುದು ಕಷ್ಟವಾಗಿದ್ದು, ಇದು ಕೂಡಾ ಯಡಿಯೂರಪ್ಪ ಸರ್ಕಾರದ ಮುಂದಿನ ದಾರಿಯನ್ನು ಅಸ್ಪಷ್ಟಗೊಳಿಸಿದೆ.

ಹೆಚ್​. ಕೆ. ಕುಮಾರಸ್ವಾಮಿ

ಬೆಂಗಳೂರು: ಅಧಿಕಾರಕ್ಕೆ ಬಂದು ಎರಡು ತಿಂಗಳು ಪೂರೈಸುವುದಕ್ಕಿಂತ ಮುನ್ನ ಐಎಎಸ್, ಐಪಿಎಸ್, ಕೆಎಎಸ್ ಅಧಿಕಾರಿಗಳು ಸೇರಿದಂತೆ ಎರಡು ತಿಂಗಳಲ್ಲಿ ಸಾವಿರಾರು ಸರ್ಕಾರಿ ನೌಕರರನ್ನು ವರ್ಗಾವಣೆ ಮಾಡುವ ಮೂಲಕ ಸಿಎಂ ಬಿ. ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ನಂಬರ್ ಒನ್ ‘​ಟ್ರಾನ್ಸ್​​ಫರ್​​ ಸರ್ಕಾರ ’ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.

ಮೈತ್ರಿ ಸರ್ಕಾರ ಪತನಗೊಂಡು ಅಧಿಕಾರದ ಚುಕ್ಕಾಣಿ ಹಿಡಿದ ದಿನದಿಂದ ಪ್ರಾರಂಭವಾದ ವರ್ಗಾವಣೆ ಪ್ರಕ್ರಿಯೆ, ಕರ್ನಾಟಕದ ಇತಿಹಾಸದಲ್ಲಿ ಯಾವೊಂದು ಸರ್ಕಾರವೂ ಅಧಿಕಾರಕ್ಕೆ ಬರಬರುತ್ತಿದ್ದಂತೆಯೇ ಇಷ್ಟೊಂದು ಪ್ರಮಾಣದಲ್ಲಿ ವರ್ಗಾವಣೆ ನಡೆಸಿರಲಿಲ್ಲ ಎಂಬ ದಾಖಲೆ ಬರೆದಂತಿದೆ. ವಿಧಾನಸೌಧದ ಸಚಿವಾಲಯಗಳಲ್ಲೂ ಭಾರೀ ಪ್ರಮಾಣದ ನೌಕರರನ್ನು ವರ್ಗಾವಣೆ ಮಾಡಲಾಗಿದ್ದು, ನಿರ್ದಿಷ್ಟ ಜಾಗಕ್ಕೆ ಇಂತಿಂತವರೇ ಬರಬೇಕು ಎಂದು ಸರ್ಕಾರ ಬಯಸಿರುವುದು ಸ್ಪಷ್ಟವಾಗಿದೆ. ಇನ್ನು ಶಿಕ್ಷಣ ಇಲಾಖೆಯ ವರ್ಗಾವಣೆಗಳು ಅಧಿಕಾರಿಗಳ ಮಟ್ಟದಲ್ಲೇ ನಡೆಯುವುದರಿಂದ ಈ ದಾಖಲೆಯಲ್ಲಿ ಶಿಕ್ಷಕರು ಸೇರ್ಪಡೆಯಾಗಿಲ್ಲ.

ರಾಜ್ಯದಲ್ಲಿ ನೆರೆ ಬಂದು ಸುಮಾರು 35 ಸಾವಿರ ಕೋಟಿ ರೂ. ಗಳಷ್ಟು ನಷ್ಟವಾದರೂ ಪರಿಹಾರದ ರೂಪದಲ್ಲಿ ಕೇವಲ 431 ಕೋಟಿ ರೂಪಾಯಿ ಖರ್ಚು ಮಾಡಲಾಗಿದ್ದು, ಉಳಿದಂತೆ ಕೇಂದ್ರ ಸರ್ಕಾರ ಇನ್ನೂ ಅಂಗೈಯಲ್ಲೇ ಪರಿಹಾರದ ಬೆಣ್ಣೆ ತೋರಿಸುತ್ತಿದೆ. ರೈತರ ಸಾಲ ಮನ್ನಾ ಸೇರಿದಂತೆ ಹಿಂದಿನ ಸರ್ಕಾರಗಳ ಅವಧಿಯಲ್ಲಿ ಕೈಗೊಂಡ ನಿರ್ಣಯಗಳಿಗೆ ಹಣ ಒದಗಿಸಿರುವುದು ಸೇರಿದಂತೆ ವಿವಿಧ ಬಾಬ್ತುಗಳಿಗೆ ನಿಗದಿಯಾದ ಹಣವನ್ನು ಬೇರೆ ಉದ್ದೇಶಕ್ಕೆ ಬಳಸುವುದು ಕಷ್ಟವಾಗಿದ್ದು, ಇದು ಕೂಡಾ ಯಡಿಯೂರಪ್ಪ ಸರ್ಕಾರದ ಮುಂದಿನ ದಾರಿಯನ್ನು ಅಸ್ಪಷ್ಟಗೊಳಿಸಿದೆ.

ಬಿಜೆಪಿ ಸರ್ಕಾರ ನಂಬರ್ ಒನ್ ‘ಟ್ರಾನ್ಸ್ ಫರ್ ಸರ್ಕಾರ ’

ಕೇಂದ್ರದಿಂದ ನೆರವು ಬರದೆ ರಾಜ್ಯ ಸರ್ಕಾರ ನೆರೆ ಸಂತ್ರಸ್ತರ ವಿಚಾರದಲ್ಲಿ ಏನೂ ಮಾಡುವ ಸ್ಥಿತಿಯಲ್ಲಿಲ್ಲ. ಹೀಗಾಗಿ ಮುಖ್ಯಮಂತ್ರಿ ಸೇರಿದಂತೆ ಸಚಿವ ಮಹೋದಯರು ಹೋದಲ್ಲಿ ಬಂದಲ್ಲಿ ಭರವಸೆಗಳ ಮಹಾಪೂರವನ್ನೆ ಹರಿಸಿಬರಬೇಕಾಗಿದೆ. ಈ ನಡುವೆಯೇ ಸರ್ಕಾರಿ ಅಧಿಕಾರಿಗಳು, ನೌಕರರ ವರ್ಗಾವಣೆ ಪ್ರಕ್ರಿಯೆ ಅವ್ಯಾಹತವಾಗಿ ಸಾಗಿದ್ದು, ಸರ್ಕಾರ ಹಾಗೂ ಸರ್ಕಾರದ ಮೇಲೆ ಪ್ರಭಾವವಿರುವ ಸಂಘಟನೆಯ ನಡುವೆ ಕಚ್ಚಾಟ ದೊಡ್ಡ ಮಟ್ಟದಲ್ಲಿ ನಡೆದಿದೆ.

ವರ್ಗಾವಣೆ ಪ್ರಕ್ರಿಯೆ ಇಷ್ಟು ದೊಡ್ಡ ಮಟ್ಟದಲ್ಲಿ ಆಗಬೇಕಿರಲಿಲ್ಲ. ಆದರೆ ಸರ್ಕಾರದ ಆಯಕಟ್ಟಿನ ಜಾಗದಲ್ಲಿ ಇಂತಿಂತವರೇ ಬಂದು ಕೂರಬೇಕು ಎಂದು ಸಂಘಟನೆ ಸಿಗ್ನಲ್ ರವಾನಿಸುತ್ತದೆ. ಅದರ ಮಾತನ್ನು ಕೇಳಿದರೂ ಕಷ್ಟ. ಕೇಳದಿದ್ದರೂ ಕಷ್ಟ. ಹೀಗಾಗಿ ಅವರು ಹೇಳಿದ್ದನ್ನು ಗಮನದಲ್ಲಿಟ್ಟುಕೊಂಡು ತಮಗೆ ಅನುಕೂಲಕರವಾದ ಆಡಳಿತ ಯಂತ್ರವನ್ನು ರೂಪಿಸಲು ಮುಖ್ಯಮಂತ್ರಿ ಯಡಿಯೂರಪ್ಪ ಪರದಾಡಬೇಕಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

1989 ರಿಂದ 1994 ರವರೆಗಿದ್ದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಸರ್ಕಾರಿ ನೌಕರರ ವರ್ಗಾವಣೆ ಪ್ರಕ್ರಿಯೆ ಭಾರೀ ಸದ್ದು ಮಾಡಿತ್ತಾದರೂ ಸರ್ಕಾರ ಅಸ್ತಿತ್ವಕ್ಕೆ ಬಂದು ಎರಡು ತಿಂಗಳು ಪೂರ್ಣವಾಗುವಷ್ಟರಲ್ಲಿ ಆ ಸರ್ಕಾರ ಇಷ್ಟೊಂದು ವರ್ಗಾವಣೆಗಳನ್ನು ಮಾಡಿರಲಿಲ್ಲ. ಹೀಗಾಗಿ ಅತ್ಯಂತ ಹೆಚ್ಚು ವರ್ಗಾವಣೆ ಪ್ರಕ್ರಿಯೆ ನಡೆದ ಕೆಲ ಸರ್ಕಾರಗಳ ದಾಖಲೆಯನ್ನು ಇದೀಗ ಯಡಿಯೂರಪ್ಪ ನೇತೃತ್ವದ ಸರ್ಕಾರ ಮುರಿದು ಹಾಕಿದ್ದು, ಆ ಮೂಲಕ ‘ನಂಬರ್ ಒನ್ ಟ್ರಾನ್ಸ್‌ಫರ್ ಸರ್ಕಾರ ’ಎಂಬ ಖ್ಯಾತಿಗೆ ಪಾತ್ರವಾಗಿದೆ ಎಂದು ವಿಪಕ್ಷ ನಾಯಕರ ಹೇಳುತ್ತಿದ್ದಾರೆ.

ಬೆಂಗಳೂರು: ಅಧಿಕಾರಕ್ಕೆ ಬಂದು ಎರಡು ತಿಂಗಳು ಪೂರೈಸುವುದಕ್ಕಿಂತ ಮುನ್ನ ಐಎಎಸ್, ಐಪಿಎಸ್, ಕೆಎಎಸ್ ಅಧಿಕಾರಿಗಳು ಸೇರಿದಂತೆ ಎರಡು ತಿಂಗಳಲ್ಲಿ ಸಾವಿರಾರು ಸರ್ಕಾರಿ ನೌಕರರನ್ನು ವರ್ಗಾವಣೆ ಮಾಡುವ ಮೂಲಕ ಸಿಎಂ ಬಿ. ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ನಂಬರ್ ಒನ್ ‘​ಟ್ರಾನ್ಸ್​​ಫರ್​​ ಸರ್ಕಾರ ’ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.

ಮೈತ್ರಿ ಸರ್ಕಾರ ಪತನಗೊಂಡು ಅಧಿಕಾರದ ಚುಕ್ಕಾಣಿ ಹಿಡಿದ ದಿನದಿಂದ ಪ್ರಾರಂಭವಾದ ವರ್ಗಾವಣೆ ಪ್ರಕ್ರಿಯೆ, ಕರ್ನಾಟಕದ ಇತಿಹಾಸದಲ್ಲಿ ಯಾವೊಂದು ಸರ್ಕಾರವೂ ಅಧಿಕಾರಕ್ಕೆ ಬರಬರುತ್ತಿದ್ದಂತೆಯೇ ಇಷ್ಟೊಂದು ಪ್ರಮಾಣದಲ್ಲಿ ವರ್ಗಾವಣೆ ನಡೆಸಿರಲಿಲ್ಲ ಎಂಬ ದಾಖಲೆ ಬರೆದಂತಿದೆ. ವಿಧಾನಸೌಧದ ಸಚಿವಾಲಯಗಳಲ್ಲೂ ಭಾರೀ ಪ್ರಮಾಣದ ನೌಕರರನ್ನು ವರ್ಗಾವಣೆ ಮಾಡಲಾಗಿದ್ದು, ನಿರ್ದಿಷ್ಟ ಜಾಗಕ್ಕೆ ಇಂತಿಂತವರೇ ಬರಬೇಕು ಎಂದು ಸರ್ಕಾರ ಬಯಸಿರುವುದು ಸ್ಪಷ್ಟವಾಗಿದೆ. ಇನ್ನು ಶಿಕ್ಷಣ ಇಲಾಖೆಯ ವರ್ಗಾವಣೆಗಳು ಅಧಿಕಾರಿಗಳ ಮಟ್ಟದಲ್ಲೇ ನಡೆಯುವುದರಿಂದ ಈ ದಾಖಲೆಯಲ್ಲಿ ಶಿಕ್ಷಕರು ಸೇರ್ಪಡೆಯಾಗಿಲ್ಲ.

ರಾಜ್ಯದಲ್ಲಿ ನೆರೆ ಬಂದು ಸುಮಾರು 35 ಸಾವಿರ ಕೋಟಿ ರೂ. ಗಳಷ್ಟು ನಷ್ಟವಾದರೂ ಪರಿಹಾರದ ರೂಪದಲ್ಲಿ ಕೇವಲ 431 ಕೋಟಿ ರೂಪಾಯಿ ಖರ್ಚು ಮಾಡಲಾಗಿದ್ದು, ಉಳಿದಂತೆ ಕೇಂದ್ರ ಸರ್ಕಾರ ಇನ್ನೂ ಅಂಗೈಯಲ್ಲೇ ಪರಿಹಾರದ ಬೆಣ್ಣೆ ತೋರಿಸುತ್ತಿದೆ. ರೈತರ ಸಾಲ ಮನ್ನಾ ಸೇರಿದಂತೆ ಹಿಂದಿನ ಸರ್ಕಾರಗಳ ಅವಧಿಯಲ್ಲಿ ಕೈಗೊಂಡ ನಿರ್ಣಯಗಳಿಗೆ ಹಣ ಒದಗಿಸಿರುವುದು ಸೇರಿದಂತೆ ವಿವಿಧ ಬಾಬ್ತುಗಳಿಗೆ ನಿಗದಿಯಾದ ಹಣವನ್ನು ಬೇರೆ ಉದ್ದೇಶಕ್ಕೆ ಬಳಸುವುದು ಕಷ್ಟವಾಗಿದ್ದು, ಇದು ಕೂಡಾ ಯಡಿಯೂರಪ್ಪ ಸರ್ಕಾರದ ಮುಂದಿನ ದಾರಿಯನ್ನು ಅಸ್ಪಷ್ಟಗೊಳಿಸಿದೆ.

ಬಿಜೆಪಿ ಸರ್ಕಾರ ನಂಬರ್ ಒನ್ ‘ಟ್ರಾನ್ಸ್ ಫರ್ ಸರ್ಕಾರ ’

ಕೇಂದ್ರದಿಂದ ನೆರವು ಬರದೆ ರಾಜ್ಯ ಸರ್ಕಾರ ನೆರೆ ಸಂತ್ರಸ್ತರ ವಿಚಾರದಲ್ಲಿ ಏನೂ ಮಾಡುವ ಸ್ಥಿತಿಯಲ್ಲಿಲ್ಲ. ಹೀಗಾಗಿ ಮುಖ್ಯಮಂತ್ರಿ ಸೇರಿದಂತೆ ಸಚಿವ ಮಹೋದಯರು ಹೋದಲ್ಲಿ ಬಂದಲ್ಲಿ ಭರವಸೆಗಳ ಮಹಾಪೂರವನ್ನೆ ಹರಿಸಿಬರಬೇಕಾಗಿದೆ. ಈ ನಡುವೆಯೇ ಸರ್ಕಾರಿ ಅಧಿಕಾರಿಗಳು, ನೌಕರರ ವರ್ಗಾವಣೆ ಪ್ರಕ್ರಿಯೆ ಅವ್ಯಾಹತವಾಗಿ ಸಾಗಿದ್ದು, ಸರ್ಕಾರ ಹಾಗೂ ಸರ್ಕಾರದ ಮೇಲೆ ಪ್ರಭಾವವಿರುವ ಸಂಘಟನೆಯ ನಡುವೆ ಕಚ್ಚಾಟ ದೊಡ್ಡ ಮಟ್ಟದಲ್ಲಿ ನಡೆದಿದೆ.

ವರ್ಗಾವಣೆ ಪ್ರಕ್ರಿಯೆ ಇಷ್ಟು ದೊಡ್ಡ ಮಟ್ಟದಲ್ಲಿ ಆಗಬೇಕಿರಲಿಲ್ಲ. ಆದರೆ ಸರ್ಕಾರದ ಆಯಕಟ್ಟಿನ ಜಾಗದಲ್ಲಿ ಇಂತಿಂತವರೇ ಬಂದು ಕೂರಬೇಕು ಎಂದು ಸಂಘಟನೆ ಸಿಗ್ನಲ್ ರವಾನಿಸುತ್ತದೆ. ಅದರ ಮಾತನ್ನು ಕೇಳಿದರೂ ಕಷ್ಟ. ಕೇಳದಿದ್ದರೂ ಕಷ್ಟ. ಹೀಗಾಗಿ ಅವರು ಹೇಳಿದ್ದನ್ನು ಗಮನದಲ್ಲಿಟ್ಟುಕೊಂಡು ತಮಗೆ ಅನುಕೂಲಕರವಾದ ಆಡಳಿತ ಯಂತ್ರವನ್ನು ರೂಪಿಸಲು ಮುಖ್ಯಮಂತ್ರಿ ಯಡಿಯೂರಪ್ಪ ಪರದಾಡಬೇಕಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

1989 ರಿಂದ 1994 ರವರೆಗಿದ್ದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಸರ್ಕಾರಿ ನೌಕರರ ವರ್ಗಾವಣೆ ಪ್ರಕ್ರಿಯೆ ಭಾರೀ ಸದ್ದು ಮಾಡಿತ್ತಾದರೂ ಸರ್ಕಾರ ಅಸ್ತಿತ್ವಕ್ಕೆ ಬಂದು ಎರಡು ತಿಂಗಳು ಪೂರ್ಣವಾಗುವಷ್ಟರಲ್ಲಿ ಆ ಸರ್ಕಾರ ಇಷ್ಟೊಂದು ವರ್ಗಾವಣೆಗಳನ್ನು ಮಾಡಿರಲಿಲ್ಲ. ಹೀಗಾಗಿ ಅತ್ಯಂತ ಹೆಚ್ಚು ವರ್ಗಾವಣೆ ಪ್ರಕ್ರಿಯೆ ನಡೆದ ಕೆಲ ಸರ್ಕಾರಗಳ ದಾಖಲೆಯನ್ನು ಇದೀಗ ಯಡಿಯೂರಪ್ಪ ನೇತೃತ್ವದ ಸರ್ಕಾರ ಮುರಿದು ಹಾಕಿದ್ದು, ಆ ಮೂಲಕ ‘ನಂಬರ್ ಒನ್ ಟ್ರಾನ್ಸ್‌ಫರ್ ಸರ್ಕಾರ ’ಎಂಬ ಖ್ಯಾತಿಗೆ ಪಾತ್ರವಾಗಿದೆ ಎಂದು ವಿಪಕ್ಷ ನಾಯಕರ ಹೇಳುತ್ತಿದ್ದಾರೆ.

Intro:ಬೆಂಗಳೂರು : ಅಧಿಕಾರಕ್ಕೆ ಬಂದು ಎರಡು ತಿಂಗಳು ಪೂರೈಸುವುದಕ್ಕಿಂತ ಮುನ್ನ ಐಎಎಸ್, ಐಪಿಎಸ್, ಕೆಎಎಸ್ ಅಧಿಕಾರಿಗಳು ಸೇರಿದಂತೆ ಎರಡು ತಿಂಗಳಲ್ಲಿ ಸಾವಿರಾರು ಸರ್ಕಾರಿ ನೌಕರರನ್ನು ವರ್ಗಾವಣೆ ಮಾಡುವ ಮೂಲಕ ಸಿಎಂ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ನಂಬರ್ ಒನ್ ‘ಟ್ರಾನ್ಸ್ ಫರ್ ಸರ್ಕಾರ ’ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ. Body:ಐಎಎಸ್, ಐಪಿಎಸ್, ಕೆಎಎಸ್ ಹಾಗೂ ಸಹಕಾರ, ಪೋಲೀಸ್ ಇಲಾಖೆ ಸೇರಿದಂತೆ ಹಲವು ಇಲಾಖೆಗಳಲ್ಲಿ ಭಾರೀ ಪ್ರಮಾಣದ ವರ್ಗಾವಣೆ ಪ್ರಕ್ರಿಯೆ ನಡೆದಿದ್ದು, ಆ ಮೂಲಕ ಕರ್ನಾಟಕದ ಇತಿಹಾಸದಲ್ಲಿ ಯಾವೊಂದು ಸರ್ಕಾರವೂ ಅಧಿಕಾರಕ್ಕೆ ಬರಬರುತ್ತಿದ್ದಂತೆಯೇ ಇಷ್ಟೊಂದು ಪ್ರಮಾಣದಲ್ಲಿ ವರ್ಗಾವಣೆ ನಡೆಸಿರಲಿಲ್ಲ ಎಂಬ ದಾಖಲೆ ಸೃಷ್ಟಿಯಾಗಿದೆ.
ನೂರಕ್ಕೂ ಹೆಚ್ಚು ಐಎಎಸ್, ಐವತ್ತಕ್ಕೂ ಹೆಚ್ಚು ಐಪಿಎಸ್ ಮತ್ತು 250 ಕ್ಕೂ ಹೆಚ್ಚು ಹಿರಿಯ ಮತ್ತು ಕಿರಿಯ ಪೊಲೀಸ್ ಅಧಿಕಾರಿಗಳು ವರ್ಗಾವಣೆ ಮಾಡಲಾಗಿದೆ. ವಿಧಾನಸೌಧದ ಸಚಿವಾಲಯಗಳಲ್ಲೂ ಭಾರೀ ಪ್ರಮಾಣದ ನೌಕರರನ್ನು ವರ್ಗಾವಣೆ ಮಾಡಲಾಗಿದ್ದು, ನಿರ್ದಿಷ್ಟ ಜಾಗಕ್ಕೆ ಇಂತಿಂತವರೇ ಬರಬೇಕು ಎಂದು ಸರ್ಕಾರ ಬಯಸಿರುವುದು ಸ್ಪಷ್ಟವಾಗಿದೆ. ಬಿ.ಎಸ್. ಯಡಿಯೂರಪ್ಪ ಸರ್ಕಾರ ವರ್ಗಾವಣೆ ವಿಷಯದಲ್ಲಿ ಬರೆದಿರುವ ಈ ಅಪೂರ್ವ ದಾಖಲೆ ಇದೇ ರೀತಿ ಮುಂದುವರಿದರೆ ಇನ್ನು ಕೆಲವೇ ದಿನಗಳಲ್ಲಿ ವರ್ಗಾವಣೆಯಾದ ನೌಕರರ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂಬುದು ಕೆಲ ಅಧಿಕಾರಿಗಳ ಅಭಿಪ್ರಾಯ.
ಶಿಕ್ಷಣ ಇಲಾಖೆಯ ವರ್ಗಾವಣೆಗಳು ಅಧಿಕಾರಿಗಳ ಮಟ್ಟದಲ್ಲೇ ನಡೆಯುವುದರಿಂದ ಈ ದಾಖಲೆಯಲ್ಲಿ ಶಿಕ್ಷಕರು ಸೇರ್ಪಡೆಯಾಗಿಲ್ಲ. ರಾಜ್ಯದಲ್ಲಿ ನೆರೆ ಬಂದು ಸುಮಾರು 35 ಸಾವಿರ ಕೋಟಿ ರೂ.ಗಳಷ್ಟು ನಷ್ಟವಾದರೂ ಪರಿಹಾರದ ರೂಪದಲ್ಲಿ ಕೇವಲ 431 ಕೋಟಿ ರೂಪಾಯಿ ಖರ್ಚು ಮಾಡಲಾಗಿದ್ದು, ಉಳಿದಂತೆ ಕೇಂದ್ರ ಸರ್ಕಾರ ಇನ್ನೂ ಅಂಗೈಯಲ್ಲೇ ಪರಿಹಾರದ ಬೆಣ್ಣೆ ತೋರಿಸುತ್ತಿದೆ.
ರೈತರ ಸಾಲ ಮನ್ನಾ ಸೇರಿದಂತೆ ಹಿಂದಿನ ಸರ್ಕಾರಗಳ ಅವಧಿಯಲ್ಲಿ ಕೈಗೊಂಡ ನಿರ್ಣಯಗಳಿಗೆ ಹಣ ಒದಗಿಸಿರುವುದು ಸೇರಿದಂತೆ ವಿವಿಧ ಬಾಬ್ತುಗಳಿಗೆ ನಿಗದಿಯಾದ ಹಣವನ್ನು ಬೇರೆ ಉದ್ದೇಶಕ್ಕೆ ಬಳಸುವುದು ಕಷ್ಟವಾಗಿದ್ದು, ಇದು ಕೂಡಾ ಯಡಿಯೂರಪ್ಪ ಸರ್ಕಾರದ ಮುಂದಿನ ದಾರಿಯನ್ನು ಅಸ್ಪಷ್ಟಗೊಳಿಸಿದೆ.
ಅಭಿವೃದ್ಧಿ ಕಾರ್ಯಗಳಿಗೆ, ನೆರೆ ಹಾಗೂ ಬರಪರಿಹಾರ ಕಾಮಗಾರಿಗಳಿಗೆ ಕೇಂದ್ರದಿಂದ ನೆರವು ಬರದೆ ರಾಜ್ಯ ಸರ್ಕಾರ ಏನೂ ಮಾಡುವ ಸ್ಥಿತಿಯಲ್ಲಿಲ್ಲ. ಹೀಗಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಸರ್ಕಾರದ ಸಚಿವರನೇಕರು ಹೋದಲ್ಲಿ, ಬಂದಲ್ಲಿ ಭರವಸೆಗಳ ಮಹಾಪೂರವನ್ನು ಹರಿಸಿಬರಬೇಕಾಗಿದೆಯೇ ಹೊರತು ವಾಸ್ತವದಲ್ಲಿ ಖಜಾನೆಗೆ ಲವಣಯುಕ್ತ ನೀರಿನ ಕೊರತೆಯಿಂದ ಬಳಲುತ್ತಿರುವುದು ಸ್ಪಷ್ಟವಾಗಿದೆ. ಈ ನಡುವೆಯೇ ಸರ್ಕಾರಿ ಅಧಿಕಾರಿಗಳು, ನೌಕರರ ವರ್ಗಾವಣೆ ಪ್ರಕ್ರಿಯೆ ಅವ್ಯಾಹತವಾಗಿ ಸಾಗಿದ್ದು, ಸರ್ಕಾರ ಹಾಗೂ ಸರ್ಕಾರದ ಮೇಲೆ ಪ್ರಭಾವವಿರುವ ಸಂಘಟನೆಯ ನಡುವೆ ಕಚ್ಚಾಟ ದೊಡ್ಡ ಮಟ್ಟದಲ್ಲಿ ನಡೆದಿದೆ. ವರ್ಗಾವಣೆ ಪ್ರಕ್ರಿಯೆ ಇಷ್ಟು ದೊಡ್ಡ ಮಟ್ಟದಲ್ಲಿ ಆಗಬೇಕಿರಲಿಲ್ಲ. ಆದರೆ ಸರ್ಕಾರದ ಆಯಕಟ್ಟಿನ ಜಾಗದಲ್ಲಿ ಇಂತಿಂತವರೇ ಬಂದು ಕೂರಬೇಕು ಎಂದು ಸಂಘಟನೆ ಸಿಗ್ನಲ್ ರವಾನಿಸುತ್ತದೆ. ಅದರ ಮಾತನ್ನು ಕೇಳಿದರೂ ಕಷ್ಟ. ಕೇಳದಿದ್ದರೂ ಕಷ್ಟ. ಹೀಗಾಗಿ ಅವರು ಹೇಳಿದ್ದನ್ನು ಗಮನದಲ್ಲಿಟ್ಟುಕೊಂಡು ತಮಗೆ ಅನುಕೂಲಕರವಾದ ಆಡಳಿತ ಯಂತ್ರವನ್ನು ರೂಪಿಸಲು ಮುಖ್ಯಮಂತ್ರಿ ಯಡಿಯೂರಪ್ಪ ಪರದಾಡಬೇಕಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
1989 ರಿಂದ 1994 ರವರೆಗಿದ್ದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಸರ್ಕಾರಿ ನೌಕರರ ವರ್ಗಾವಣೆ ಪ್ರಕ್ರಿಯೆ ಭಾರೀ ಸದ್ದು ಮಾಡಿತ್ತಾದರೂ ಸರ್ಕಾರ ಅಸ್ತಿತ್ವಕ್ಕೆ ಬಂದು ಎರಡು ತಿಂಗಳು ಪೂರ್ಣವಾಗುವಷ್ಟರಲ್ಲಿ ಆ ಸರ್ಕಾರ ಇಷ್ಟೊಂದು ವರ್ಗಾವಣೆಗಳನ್ನು ಮಾಡಿರಲಿಲ್ಲ. ಹೀಗಾಗಿ ಅತ್ಯಂತ ಹೆಚ್ಚು ವರ್ಗಾವಣೆ ಪ್ರಕ್ರಿಯೆ ನಡೆದ ಕೆಲ ಸರ್ಕಾರಗಳ ದಾಖಲೆಯನ್ನು ಇದೀಗ ಯಡಿಯೂರಪ್ಪ ನೇತೃತ್ವದ ಸರ್ಕಾರ ಮುರಿದು ಹಾಕಿದ್ದು, ಆ ಮೂಲಕ ‘ನಂಬರ್ ಒನ್ ಟ್ರಾನ್ಸ್‌ಫರ್ ಸರ್ಕಾರ ’ಎಂಬ ಖ್ಯಾತಿಗೆ ಪಾತ್ರವಾಗಿದೆ ಎಂದು ವಿಪಕ್ಷ ನಾಯಕರ ಹೇಳುತ್ತಾರೆ.
ಸರ್ಕಾರಿ ನೌಕರರ ವರ್ಗಾವಣೆ ಪ್ರಕ್ರಿಯೆ ದೊಡ್ಡ ಮಟ್ಟದಲ್ಲಿ ನಡೆಯುತ್ತದಾದರೂ ಇಷ್ಟು ಕಡಿಮೆ ಅವಧಿಯಲ್ಲಿ ನಾಲ್ಕು ಸಾವಿರಕ್ಕೂ ಹೆಚ್ಚು ವರ್ಗಾವಣೆಯಾದ ಇತಿಹಾಸವಿರಲಿಲ್ಲ. ಹೀಗಾಗಿ ಈ ಬಾರಿಯ ಮಳೆಗೂ, ಸರ್ಕಾರಿ ನೌಕರರ ವರ್ಗಾವಣೆ ಪ್ರಕ್ರಿಯೆಗೂ ಒಂದು ರೀತಿಯಲ್ಲಿ ಸಾಮ್ಯತೆ ಇದೆ. ಯಾಕೆಂದರೆ ವರ್ಗಾವಣೆ ಪ್ರಕ್ರಿಯೆಗೆ ನಿಗದಿ ಮಾಡಿದ ದಿನಗಳಲ್ಲಿ ಹೆಚ್ಚು ವರ್ಗಾವಣೆ ಪ್ರಕ್ರಿಯೆಗಳು ನಡೆಯುತ್ತಿದ್ದವು. ಆದರೆ ಅಂತಹ ವರ್ಗಾವಣೆ ಪ್ರಕ್ರಿಯೆ ಈಗ ಕೆಲವೇ ವಾರಗಳಲ್ಲಿ ನಡೆದು ಹೋಗಿದೆ. ಹೀಗಾಗಿ ಅದರ ಭಾರವನ್ನು ತಡೆಯಲು ಆಡಳಿತ ಯಂತ್ರಕ್ಕೆ ಕಷ್ಟವಾಗುತ್ತಿದೆ ಎಂಬುದು ಮೂಲಗಳ ಹೇಳಿವೆ.Conclusion:
Last Updated : Sep 27, 2019, 4:54 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.