ಬೆಂಗಳೂರು : ಗ್ರಾಮ ಸೇವಾ ಸಂಘ ಕೈಗೊಂಡಿರುವ 'ಪವಿತ್ರ ಆರ್ಥಿಕತೆ'ಯ ಸತ್ಯಾಗ್ರಹ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಇದರ ಭಾಗವಾಗಿ ಶನಿವಾರ ಎಂಜಿ ರಸ್ತೆಯಲ್ಲಿ ದೇಣಿಗೆ ಸಂಗ್ರಹ ಅಭಿಯಾನ ನಡೆಸಲಾಯಿತು.
ಗಾಂಧಿ ಚಿಂತಕ, ರಂಗಕರ್ಮಿ ಪ್ರಸನ್ನ ಅವರ ನೇತೃತ್ವದಲ್ಲಿ 'ಪವಿತ್ರ ಆರ್ಥಿಕತೆ'ಗಾಗಿ ಸತ್ಯಾಗ್ರಹ ನಡೆಯುತ್ತಿದ್ದು, ಕಳೆದ ಎರಡು ದಿನ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಅಕ್ಟೋಬರ್ 2ರ ಗಾಂಧಿ ಜಯಂತಿಯಂದು ಪ್ರಸನ್ನ ಅವರು ಉಪವಾಸ ಸತ್ಯಾಗ್ರಹ ನಡೆಸಲಿದ್ದಾರೆ. ದೇಶದಲ್ಲಿ ಅತಿ ಹೆಚ್ಚು ಜನರಿಗೆ ಉದ್ಯೋಗ ಸಿಗಬೇಕು. ಪರಿಸರಕ್ಕೆ ಹಾನಿ ಮಾಡದಂತೆ, ಪವಿತ್ರ ಆರ್ಥಿಕತೆಯನ್ನು ಅಭಿವೃದ್ಧಿ ಪಡಿಸಬೇಕೆಂದು ಆಗ್ರಹಿಸಲಿದ್ದಾರೆ. ಸತ್ಯಾಗ್ರಹಕ್ಕೆ ಬೆಂಬಲ ನೀಡಿದ ಸ್ಯಾಂಡಲ್ವುಡ್ ನಟ ಕಿಶೋರ್ ಕುಮಾರ್ ದೇಣಿಗೆ ಸಂಗ್ರಹಿಸಿದರು.