ETV Bharat / state

ಶಾಸಕರ ಭವನದಲ್ಲಿ ಯತ್ನಾಳ್ ವಿರುದ್ಧ ಅವಹೇಳನಕಾರಿ ಪೋಸ್ಟರ್

author img

By

Published : Aug 24, 2021, 5:50 PM IST

ಶಾಸಕರ ಭವನ 5ನೇ ಬ್ಲಾಕ್​​ನಲ್ಲಿನ ಯತ್ನಾಳ್ ಕೊಠಡಿಯಲ್ಲಿ ಅವಹೇಳನಕಾರಿ ಪೋಸ್ಟರ್ ಅಂಟಿಸಿ ಕಿಡಿಗೇಡಿಗಳು ವಿಕೃತಿ ಮೆರೆದಿದ್ದಾರೆ.

derogatory-poster-about-yatnal-found-in-mlas-house
ಶಾಸಕ ಬಸವನಗೌಡ ಯತ್ನಾಳ್

ಬೆಂಗಳೂರು: ವಿಜಯಪುರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ (ಯತ್ನಾಳ್)​ ಕುರಿತು ಶಾಸಕರ ಭವನದಲ್ಲಿನ ಕೊಠಡಿ ಬಾಗಿಲಿಗೆ ಅವಹೇಳನಕಾರಿ ಪೋಸ್ಟರ್ ಅಂಟಿಸಿರುವ ಘಟನೆ ಇಂದು ನಡೆದಿದೆ.

ಯತ್ನಾಳ್​ ಅವರನ್ನು ಬಿಲ್ ಲಾಡೆನ್​ಗೆ ಹೋಲಿಸಿ ಭಿತ್ತಿಪತ್ರ ಅಂಟಿಸಲಾಗಿದೆ. ಕೊಠಡಿಯಲ್ಲಿ ಯಾರೂ ಇಲ್ಲದ ವೇಳೆ ಬಂದ ಕಿಡಿಗೇಡಿಗಳು ಬಾಗಿಲು, ಗೋಡೆ ಮೇಲೆ ಪೋಸ್ಟರ್​ ಅಂಟಿಸಿದ್ದಾರೆ. ಶಾಸಕರ ಭವನ 5ನೇ ಬ್ಲಾಕ್ ನಲ್ಲಿನ ಯತ್ನಾಳ್ ಕೊಠಡಿ ಸಂಖ್ಯೆ 2001ರಲ್ಲಿ ಈ ರೀತಿ ವಿಕೃತಿ ಮೆರೆಯಲಾಗಿದೆ.

ಎರಡು ದಿನಗಳ ಹಿಂದೆ ಯತ್ನಾಳ್ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ವಿರುದ್ಧ ಅವಾಚ್ಯ ಶಬ್ದ ಬಳಸಿದ್ದರು. ರಾಹುಲ್‌ ಗಾಂಧಿ ಯಾರಿಗೆ ಜನಿಸಿದ್ದಾರೆ ಗೊತ್ತಿಲ್ಲ. ಅವನು ಹಿಂದೂನು ಅಲ್ಲ. ಕ್ರಿಶ್ಚಿಯನ್ನೂ ಅಲ್ಲ. ಯಾರಿಗೆ ಜನಿಸಿದ್ದಾರೊ ಗೊತ್ತಿಲ್ಲ. ಪ್ರಧಾನಿಗಳು ದೇಶದ ವಿರುದ್ಧ ಮಾತನಾಡೋ ಓವೈಸಿಗಳಂತವರಿಗೆ ಸರಿಯಾಗಿ ಪಾಠ ಕಲಿಸಬೇಕು ಎಂದು ಅಸಂವಿಧಾನಿಕವಾಗಿ ಮಾತನಾಡಿದ್ದರು.

ಓದಿ: ರಾಘವೇಂದ್ರ ಶ್ರೀಗಳ ಮಧ್ಯಾರಾಧನೆ: ರಾಯರ ದರ್ಶನ ಮಾಡಿದ ಸಿಎಂ ಬೊಮ್ಮಾಯಿ..!

ಬೆಂಗಳೂರು: ವಿಜಯಪುರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ (ಯತ್ನಾಳ್)​ ಕುರಿತು ಶಾಸಕರ ಭವನದಲ್ಲಿನ ಕೊಠಡಿ ಬಾಗಿಲಿಗೆ ಅವಹೇಳನಕಾರಿ ಪೋಸ್ಟರ್ ಅಂಟಿಸಿರುವ ಘಟನೆ ಇಂದು ನಡೆದಿದೆ.

ಯತ್ನಾಳ್​ ಅವರನ್ನು ಬಿಲ್ ಲಾಡೆನ್​ಗೆ ಹೋಲಿಸಿ ಭಿತ್ತಿಪತ್ರ ಅಂಟಿಸಲಾಗಿದೆ. ಕೊಠಡಿಯಲ್ಲಿ ಯಾರೂ ಇಲ್ಲದ ವೇಳೆ ಬಂದ ಕಿಡಿಗೇಡಿಗಳು ಬಾಗಿಲು, ಗೋಡೆ ಮೇಲೆ ಪೋಸ್ಟರ್​ ಅಂಟಿಸಿದ್ದಾರೆ. ಶಾಸಕರ ಭವನ 5ನೇ ಬ್ಲಾಕ್ ನಲ್ಲಿನ ಯತ್ನಾಳ್ ಕೊಠಡಿ ಸಂಖ್ಯೆ 2001ರಲ್ಲಿ ಈ ರೀತಿ ವಿಕೃತಿ ಮೆರೆಯಲಾಗಿದೆ.

ಎರಡು ದಿನಗಳ ಹಿಂದೆ ಯತ್ನಾಳ್ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ವಿರುದ್ಧ ಅವಾಚ್ಯ ಶಬ್ದ ಬಳಸಿದ್ದರು. ರಾಹುಲ್‌ ಗಾಂಧಿ ಯಾರಿಗೆ ಜನಿಸಿದ್ದಾರೆ ಗೊತ್ತಿಲ್ಲ. ಅವನು ಹಿಂದೂನು ಅಲ್ಲ. ಕ್ರಿಶ್ಚಿಯನ್ನೂ ಅಲ್ಲ. ಯಾರಿಗೆ ಜನಿಸಿದ್ದಾರೊ ಗೊತ್ತಿಲ್ಲ. ಪ್ರಧಾನಿಗಳು ದೇಶದ ವಿರುದ್ಧ ಮಾತನಾಡೋ ಓವೈಸಿಗಳಂತವರಿಗೆ ಸರಿಯಾಗಿ ಪಾಠ ಕಲಿಸಬೇಕು ಎಂದು ಅಸಂವಿಧಾನಿಕವಾಗಿ ಮಾತನಾಡಿದ್ದರು.

ಓದಿ: ರಾಘವೇಂದ್ರ ಶ್ರೀಗಳ ಮಧ್ಯಾರಾಧನೆ: ರಾಯರ ದರ್ಶನ ಮಾಡಿದ ಸಿಎಂ ಬೊಮ್ಮಾಯಿ..!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.