ETV Bharat / state

ರಾಜ್ಯದ ಹಾಲಿ ಸಂಸದರು, ಅಭ್ಯರ್ಥಿಗಳ ವಿರುದ್ಧದ ಕ್ರೈಂ ಹಿನ್ನೆಲೆ ಹೀಗಿದೆ ನೋಡಿ

ಮತದಾರರ ಮನವೊಲಿಕೆಗೆ ನಾನಾ ಕಸರತ್ತು ಮಾಡುವ ಕೆಲ ಪ್ರಮುಖ ಅಭ್ಯರ್ಥಿಗಳ ವಿರುದ್ಧ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಈ ಪ್ರಕರಣಗಳ ‌ಸಂಬಂಧ ಇನ್ನೂ ಕೋರ್ಟಿನಲ್ಲಿ ವಿಚಾರಣೆಗಳು ನಡೆಯುತ್ತಿವೆ. ಈ ಕುರಿತು ಚುನಾವಣಾ ಆಯೋಗದ ಘೋಷಣಾ ಪತ್ರದಲ್ಲಿ ತಿಳಿಸಲಾಗಿದೆ.

author img

By

Published : Apr 15, 2019, 7:48 PM IST

ಪ್ರಮುಖ ಅಭ್ಯರ್ಥಿಗಳ ಮೇಲೆ ಕ್ರಿಮಿನಲ್ ಪ್ರಕರಣಗಳು

ಬೆಂಗಳೂರು: ರಾಜ್ಯದಲ್ಲಿ ಲೋಕ ಸಮರಕ್ಕೆ ಕ್ಷಣಗಣನೆ ಪ್ರಾರಂಭವಾಗಿದೆ. ಅಭ್ಯರ್ಥಿಗಳಿಂದ ಸಮರೋಪಾದಿಯಲ್ಲಿ ಮತಬೇಟೆ ಕೂಡ ನಡೆಯುತ್ತಿದೆ. ರಣಕಣದಲ್ಲಿ ಅದೃಷ್ಟ ಪರೀಕ್ಷೆ ಎದುರಿಸಲು ಮುಂದಾಗಿರುವ ಅಭ್ಯರ್ಥಿಗಳ ವಿರುದ್ಧ ಯಾವೆಲ್ಲ ಪ್ರಕರಣಗಳಿವೆ ಅನ್ನೋದರ ಕಂಪ್ಲೀಟ್​ ಮಾಹಿತಿ ತಿಳಿಯಲು ಮುಂದೆ ಓದಿ...

ರಾಜ್ಯದಲ್ಲಿ ಮೊದಲ ಹಂತದ ಲೋಕಸಮರ‌ ಎ.18 ಕ್ಕೆ ‌ನಡೆಯಲಿದೆ. ಇತ್ತ ಕಣದಲ್ಲಿರುವ ಅಭ್ಯರ್ಥಿಗಳು ಬೆವರಿಳಿಸಿ ಹಗಲು, ರಾತ್ರಿ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ. ಮತದಾರರ ಮನವೊಲಿಸಲು ನಾನಾ ಕಸರತ್ತುಗಳನ್ನು ಮಾಡುತ್ತಿದ್ದಾರೆ. ಮತಬೇಟೆಗಿಳಿದಿರುವ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗ ಪ್ರಜ್ಞಾವಂತ ಮತದಾರರು ಎಲ್ಲ ಮಾನದಂಡವನ್ನು ಅವಲೋಕಿಸುತ್ತಾರೆ.

ರಾಜ್ಯದಲ್ಲಿ ಲೋಕ ಸಮರದ ಜಿದ್ದಾಜಿದ್ದಿ ತಾರಕಕ್ಕೇರಿದೆ. ಒಬ್ಬರನ್ನೊಬ್ಬರು ಪರಸ್ಪರ ತೆಗಳಿ ಮತದಾರರ ಮನ ಗೆಲ್ಲುವ ಕೆಲಸವನ್ನು ಅಭ್ಯರ್ಥಿಗಳು ಮಾಡುತ್ತಿದ್ದಾರೆ. ಹೀಗೆ ಮತದಾರರ ಮನವೊಲಿಕೆಗೆ ನಾನಾ ಕಸರತ್ತು ನಡೆಸುತ್ತಿರುವ ಕೆಲ ಪ್ರಮುಖ ಅಭ್ಯರ್ಥಿಗಳ ವಿರುದ್ಧ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಈ ಪ್ರಕರಣಗಳ ‌ಸಂಬಂಧ ಇನ್ನೂ ಕೋರ್ಟಿನಲ್ಲಿ ವಿಚಾರಣೆ ನಡೆಯುತ್ತಿದೆ. ಈ ಕುರಿತು ಚುನಾವಣಾ ಆಯೋಗದ ಘೋಷಣಾ ಪತ್ರದಲ್ಲಿ ಈ ವಿಷಯದ ಬಹಿರಂಗಪಡಿಸಲಾಗಿದೆ.

Crime diary against candidates
ಪ್ರಮುಖ ಅಭ್ಯರ್ಥಿಗಳ ಮೇಲೆ ಕ್ರಿಮಿನಲ್ ಪ್ರಕರಣಗಳು

ರಾಜ್ಯದಲ್ಲಿನ‌ ಹಾಲಿ‌ ಸಂಸದರ ಪೈಕಿ 9 ಸಂಸದರ ವಿರುದ್ಧ ಅಪರಾಧ ಪ್ರಕರಣಗಳಿದ್ದು, 5 ಪ್ರಕರಣಗಳು ಗಂಭೀರ ಸ್ವರೂಪದ್ದಾಗಿದೆ. ಚುನಾವಣೆ ಸಂಬಂಧ ಹಾಲಿ ಸಂಸದರ ಅಫಿಡವಿಟ್​ನಲ್ಲಿ ಘೋಷಿಸಿರುವ ಅಪರಾಧ ಪ್ರಕರಣಗಳ ಪೈಕಿ ಸುಮಾರು 32 ಸಂಸದರ ವಿರುದ್ಧ ಕ್ರಿಮಿನಲ್ ಪ್ರಕರಣಗಳಿವೆ.

ಅಭ್ಯರ್ಥಿಗಳ ಕ್ರೈಂ ಡೈರಿ ಮಾಹಿತಿ:

  • ಡಿ.ಕೆ. ಸುರೇಶ್:

ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಹಾಲಿ ಸಂಸದ ಡಿ.ಕೆ. ಸುರೇಶ್ ವಿರುದ್ಧ ಗರಿಷ್ಠ ಪ್ರಮಾಣದ ಪ್ರಕರಣಗಳು ದಾಖಲಾಗಿವೆ. ಡಿ.ಕೆ. ಸುರೇಶ್ ವಿರುದ್ಧ ಸುಮಾರು 8 ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ 2 ಪ್ರಕರಣಗಳು ಗಂಭೀರ ಸ್ವರೂಪದ್ದಾಗಿವೆ. ಸಾತನೂರು ಅರಣ್ಯ ವಲಯಗಳಲ್ಲಿ ಅಕ್ರಮ ಗಣಿಗಾರಿಕೆ ಹಾಗೂ ಭೂ ಒತ್ತುವರಿ ಪ್ರಕರಣಗಳು ಡಿ.ಕೆ. ಸುರೇಶ್ ವಿರುದ್ಧದ ಪ್ರಮುಖ ಪ್ರಕರಣಗಳಾಗಿವೆ.

  • ಅನಂತ ಕುಮಾರ್ ಹೆಗಡೆ:

ಇನ್ನು ಬಿಜೆಪಿಯ ಉತ್ತರ ಕನ್ನಡ ಕ್ಷೇತ್ರದ ಸಂಸದ ಅನಂತ ಕುಮಾರ್ ಹೆಗಡೆ ವಿರುದ್ಧವೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಅವರ ವಿರುದ್ಧದ ಘೋಷಿತ ಕ್ರಿಮಿನಲ್ ಕೇಸ್​ಗಳು 4. ಈ ಪೈಕಿ ಬಹುತೇಕ ಪ್ರಕರಣಗಳು ಗಂಭೀರ ಸ್ವರೂಪದ್ದಾಗಿವೆ. ವೈದ್ಯರ ಮೇಲೆ ಹಲ್ಲೆ ನಡೆಸಿರುವುದು ಹೆಗಡೆ ವಿರುದ್ಧದ ಗಂಭೀರ ಪ್ರಕರಣ. ಐಪಿಸಿ ಕಾಯ್ದೆ 4, 506, 341, 34, 323,153ಎ, 504, 125 ರ ಅಡಿ ಪ್ರಕರಣಗಳು ದಾಖಲಾಗಿವೆ. ಉಳಿದಂತೆ ಎಲ್ಲ ಪ್ರಕರಣಗಳು ಕೋಮು ಸೌಹಾರ್ದತೆ ಕದಡುವ ಪ್ರಕರಣಗಳಾಗಿವೆ.

  • ನಳಿನ್ ಕುಮಾರ್ ಕಟೀಲು:

ದಕ್ಷಿಣ ಕನ್ನಡ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲು ಕೂಡ ಕ್ರಿಮಿನಲ್ ಕೇಸ್​ಗಳ ಪೈಕಿ ಹಿಂದೆ ಬಿದ್ದಿಲ್ಲ. ಅವರ ವಿರುದ್ಧ ಒಟ್ಟು 4 ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಇವುಗಳಲ್ಲಿ ಸರ್ಕಾರಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ, ವೈಯಕ್ತಿಕ ನಿಂದನೆ ಪ್ರಮುಖವಾಗಿವೆ. ಅವರ ವಿರುದ್ಧ ಐಪಿಸಿ 123, 186, 188, 268, 106, 108, 353, 506 ಅಡಿ ಪ್ರಕರಣಗಳು ದಾಖಲಾಗಿವೆ.

  • ಪ್ರತಾಪ್ ಸಿಂಹ:

ಮೈಸೂರು ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ವಿರುದ್ಧವೂ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಅವರ ವಿರುದ್ಧ 3 ಪ್ರಕರಣಗಳು ದಾಖಲಾಗಿವೆ. ಹನುಮ ಜಯಂತಿ ಪ್ರಯುಕ್ತ ನಿಷೇಧಾಜ್ಞೆ ಉಲ್ಲಂಘನೆ, ಸರ್ಕಾರಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ, ನೀತಿ ಸಂಹಿತೆ ಉಲ್ಲಂಘನೆ, ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಾಶ್ ರಾಜ್ ವಿರುದ್ಧ ನಿಂದನಾತ್ಮಕ ಪೋಸ್ಟ್ ಹಾಕಿರುವುದು ಪ್ರಮುಖ ಪ್ರಕರಣಗಳಾಗಿವೆ. ಪ್ರತಾಪ್ ಸಿಂಹ ವಿರುದ್ಧ ಐಪಿಸಿ ಸೆಕ್ಷನ್ 279, 353, 188, 332 ಅಡಿ ಪ್ರಕರಣಗಳು ದಾಖಲಾಗಿವೆ. ಜತೆಗೆ ಸೆಕ್ಷನ್ 127ಎ, 499, 500 ಅಡಿ ಕೇಸ್​ಗಳು ದಾಖಲಾಗಿವೆ.

  • ಶೋಭಾ ಕರಂದ್ಲಾಜೆ:

ಉಡುಪಿ-ಚಿಕ್ಕಮಗಳೂರು ಅಭ್ಯರ್ಥಿ ಶೋಭಾ ಕರಂದ್ಲಾಜೆ ವಿರುದ್ಧ ಒಟ್ಟು 3 ಪ್ರಕರಣಗಳು ದಾಖಲಾಗಿವೆ. ಹೊನ್ನಾವರ ಪೊಲೀಸ್ ಸ್ಟೇಷನ್​ನಲ್ಲಿ ಪ್ರಚೋದನಾಕಾರಿ ಹೇಳಿಕೆ ಸಂಬಂಧ ಪ್ರಕರಣ ದಾಖಲಾಗಿದೆ. ಸೆಕ್ಷನ್ 153ಎ, 153, 505(2) ಕೇಸ್​ ದಾಖಲಾಗಿವೆ. ಇನ್ನು ಶಾಸಕ ರೋಷನ್ ಬೇಗ್ ಅವರು ಕರಂದ್ಲಾಜೆ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಇದರ ಜತೆಗೆ ನಕಲಿ ಸಂಸ್ಥೆಯಲ್ಲಿ ಹೂಡಿಕೆ ಮಾಡಿದ ಆರೋಪದಡಿ ಜಾರಿ ನಿರ್ದೇಶನಾಲಯದಲ್ಲೂ ಪ್ರಕರಣ ದಾಖಲಾಗಿವೆ.

  • ಪ್ರಹ್ಲಾದ್ ಜೋಶಿ:

ಧಾರವಾಡ ಸಂಸದ ಪ್ರಹ್ಲಾದ್ ಜೋಶಿ ವಿರುದ್ಧ 1 ಕ್ರಿಮನಲ್ ಕೇಸ್ ದಾಖಲಾಗಿದೆ. ಹುಬ್ಬಳ್ಳಿಯ ಕಸಬಾಪೇಟೆ ಪೊಲೀಸ್ ಠಾಣೆಯಲ್ಲಿ ಕೋಮುಗಲಭೆಗೆ ಪ್ರಚೋದನೆ ನೀಡಿದ ಸಂಬಂಧ ಪ್ರಕರಣ ದಾಖಲಾಗಿದೆ. ಐಪಿಸಿ ಕಾಯ್ದೆ 153ಎ, 298 ಅಡಿ ಪ್ರಕರಣ ದಾಖಲಾಗಿವೆ.

  • ಕೆ.ಹೆಚ್. ಮುನಿಯಪ್ಪ:

ಕೋಲಾರ ಹಾಲಿ ಸಂಸದ ಕೆ.ಹೆಚ್. ಮುನಿಯಪ್ಪ ವಿರುದ್ಧ ಒಂದು ಪ್ರಕರಣ ದಾಖಲಾಗಿದೆ. ಕೋಲಾರದ ರಾಬರ್ಟಸನ್ ಪೇಟೆ ಠಾಣೆಯಲ್ಲಿ ಜಾತಿ ನಿಂದನೆ ಸಂಬಂಧ ಪ್ರಕರಣ ದಾಖಲಾಗಿದೆ. ಐಪಿಸಿ 1860, u/s 323, 341, 504, 34, 57 ಅಡಿ ಕೇಸ್​ಗಳಿವೆ.

  • ಬಿ.ವೈ.ರಾಘವೇಂದ್ರ:

ಶಿವಮೊಗ್ಗ ಬಿಜೆಪಿ ಅಭ್ಯರ್ಥಿ ರಾಘವೇಂದ್ರ ವಿರುದ್ಧ 2 ಪ್ರಕರಣಗಳಿವೆ. ಭ್ರಷ್ಟಾಚಾರ ನಿರ್ಮೂಲನೆ ಕಾಯ್ದೆಯಡಿ ರಾಘವೇಂದ್ರ ವಿರುದ್ಧ ಖಾಸಗಿ ದೂರು ದಾಖಲಾಗಿದೆ. ಇನ್ನು ಬೆಂಗಳೂರಿನ ಇಡಿಯಲ್ಲಿ ಅಕ್ರಮ ಹಣ ಸಂಗ್ರಹಣೆ ಆರೋಪದಿ ಕೇಸ್ ದಾಖಲಾಗಿದೆ.

  • ಎಸ್.ಮುನಿಸ್ವಾಮಿ:

ಕೋಲಾರ ಬಿಜೆಪಿ ಅಭ್ಯರ್ಥಿ ಎಸ್.ಮುನಿಸ್ವಾಮಿ ವಿರುದ್ಧ 2 ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ವೈಟ್ ಫೀಲ್ಡ್, ಹೆಚ್ಎಎಲ್ ಠಾಣೆಗಳಲ್ಲಿ ಮುನಿಸ್ವಾಮಿ ವಿರುದ್ಧ ಪ್ರಕರಣಗಳಿವೆ. ಅಕ್ರಮ ಪ್ರತಿರೋಧ ಹಿನ್ನೆಲೆ ಅವರ ವಿರುದ್ಧ ಐಪಿಸಿ 341, 34 ಅಡಿ ಕೇಸ್ ದಾಖಲಾಗಿವೆ. ಇನ್ನು ಹೆಚ್ಎಎಲ್ ಠಾಣೆಯಲ್ಲಿ ದೊಂಬಿ ಸಂಬಂಧ ಸೆಕ್ಷನ್ 341, 143, 147, 149, 283 ಅಡಿ ಪ್ರಕರಣಗಳು ದಾಖಲಾಗಿವೆ.

  • ಪ್ರಕಾಶ್ ರಾಜ್:

ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಪ್ರಕಾಶ್ ರಾಜ್ ವಿರುದ್ಧವೂ 1 ಪ್ರಕರಣ ಇದೆ. ಚಿಕ್ಕಮಗಳೂರು ನಗರ ಠಾಣೆಯಲ್ಲಿ ದೊಂಬಿ ಆರೋಪದಡಿ ಪ್ರಕರಣ ದಾಖಲಾಗಿದೆ. ಈ ಸಂಬಂಧ ಕಳೆದ ವರ್ಷ ಡಿಸೆಂಬರ್​ನಲ್ಲಿ ಪೊಲೀಸರು ಚಾರ್ಜ್ ಶೀಟ್ ಕೂಡ ಸಲ್ಲಿಸಿದ್ದಾರೆ.

  • ಪ್ರಮೋದ್ ಮದ್ವರಾಜ್:

ಉಡುಪಿ-ಚಿಕ್ಕಮಗಳೂರು ಮೈತ್ರಿ ಅಭ್ಯರ್ಥಿ ಪ್ರಮೋದ್ ಮದ್ವರಾಜ್ ವಿರುದ್ಧ ಹೆಬ್ರಿ ಠಾಣೆಯಲ್ಲಿ ನೀತಿ ಸಂಹಿತೆ ಉಲ್ಲಂಘನೆ ಸಂಬಂಧ ಪ್ರಕರಣವೊಂದು ದಾಖಲಾಗಿದೆ.

  • ಆನಂದ್ ಅಸ್ನೋಟಿಕರ್:

ಇತ್ತ ಉತ್ತರ ಕನ್ನಡ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಆನಂದ್ ಅಸ್ನೋಟಿಕರ್ ವಿರುದ್ಧ ಕುಮಾರಪಟ್ಟಣಂ ಠಾಣೆಯಲ್ಲಿ ಶಸ್ತ್ರಾಸ್ತ್ರ ಕಾಯ್ದೆಯಡಿ ಕ್ರಿಮಿನಲ್ ಪ್ರಕರಣ ದಾಖಲಾಗಿದೆ.

ಬೆಂಗಳೂರು: ರಾಜ್ಯದಲ್ಲಿ ಲೋಕ ಸಮರಕ್ಕೆ ಕ್ಷಣಗಣನೆ ಪ್ರಾರಂಭವಾಗಿದೆ. ಅಭ್ಯರ್ಥಿಗಳಿಂದ ಸಮರೋಪಾದಿಯಲ್ಲಿ ಮತಬೇಟೆ ಕೂಡ ನಡೆಯುತ್ತಿದೆ. ರಣಕಣದಲ್ಲಿ ಅದೃಷ್ಟ ಪರೀಕ್ಷೆ ಎದುರಿಸಲು ಮುಂದಾಗಿರುವ ಅಭ್ಯರ್ಥಿಗಳ ವಿರುದ್ಧ ಯಾವೆಲ್ಲ ಪ್ರಕರಣಗಳಿವೆ ಅನ್ನೋದರ ಕಂಪ್ಲೀಟ್​ ಮಾಹಿತಿ ತಿಳಿಯಲು ಮುಂದೆ ಓದಿ...

ರಾಜ್ಯದಲ್ಲಿ ಮೊದಲ ಹಂತದ ಲೋಕಸಮರ‌ ಎ.18 ಕ್ಕೆ ‌ನಡೆಯಲಿದೆ. ಇತ್ತ ಕಣದಲ್ಲಿರುವ ಅಭ್ಯರ್ಥಿಗಳು ಬೆವರಿಳಿಸಿ ಹಗಲು, ರಾತ್ರಿ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ. ಮತದಾರರ ಮನವೊಲಿಸಲು ನಾನಾ ಕಸರತ್ತುಗಳನ್ನು ಮಾಡುತ್ತಿದ್ದಾರೆ. ಮತಬೇಟೆಗಿಳಿದಿರುವ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗ ಪ್ರಜ್ಞಾವಂತ ಮತದಾರರು ಎಲ್ಲ ಮಾನದಂಡವನ್ನು ಅವಲೋಕಿಸುತ್ತಾರೆ.

ರಾಜ್ಯದಲ್ಲಿ ಲೋಕ ಸಮರದ ಜಿದ್ದಾಜಿದ್ದಿ ತಾರಕಕ್ಕೇರಿದೆ. ಒಬ್ಬರನ್ನೊಬ್ಬರು ಪರಸ್ಪರ ತೆಗಳಿ ಮತದಾರರ ಮನ ಗೆಲ್ಲುವ ಕೆಲಸವನ್ನು ಅಭ್ಯರ್ಥಿಗಳು ಮಾಡುತ್ತಿದ್ದಾರೆ. ಹೀಗೆ ಮತದಾರರ ಮನವೊಲಿಕೆಗೆ ನಾನಾ ಕಸರತ್ತು ನಡೆಸುತ್ತಿರುವ ಕೆಲ ಪ್ರಮುಖ ಅಭ್ಯರ್ಥಿಗಳ ವಿರುದ್ಧ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಈ ಪ್ರಕರಣಗಳ ‌ಸಂಬಂಧ ಇನ್ನೂ ಕೋರ್ಟಿನಲ್ಲಿ ವಿಚಾರಣೆ ನಡೆಯುತ್ತಿದೆ. ಈ ಕುರಿತು ಚುನಾವಣಾ ಆಯೋಗದ ಘೋಷಣಾ ಪತ್ರದಲ್ಲಿ ಈ ವಿಷಯದ ಬಹಿರಂಗಪಡಿಸಲಾಗಿದೆ.

Crime diary against candidates
ಪ್ರಮುಖ ಅಭ್ಯರ್ಥಿಗಳ ಮೇಲೆ ಕ್ರಿಮಿನಲ್ ಪ್ರಕರಣಗಳು

ರಾಜ್ಯದಲ್ಲಿನ‌ ಹಾಲಿ‌ ಸಂಸದರ ಪೈಕಿ 9 ಸಂಸದರ ವಿರುದ್ಧ ಅಪರಾಧ ಪ್ರಕರಣಗಳಿದ್ದು, 5 ಪ್ರಕರಣಗಳು ಗಂಭೀರ ಸ್ವರೂಪದ್ದಾಗಿದೆ. ಚುನಾವಣೆ ಸಂಬಂಧ ಹಾಲಿ ಸಂಸದರ ಅಫಿಡವಿಟ್​ನಲ್ಲಿ ಘೋಷಿಸಿರುವ ಅಪರಾಧ ಪ್ರಕರಣಗಳ ಪೈಕಿ ಸುಮಾರು 32 ಸಂಸದರ ವಿರುದ್ಧ ಕ್ರಿಮಿನಲ್ ಪ್ರಕರಣಗಳಿವೆ.

ಅಭ್ಯರ್ಥಿಗಳ ಕ್ರೈಂ ಡೈರಿ ಮಾಹಿತಿ:

  • ಡಿ.ಕೆ. ಸುರೇಶ್:

ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಹಾಲಿ ಸಂಸದ ಡಿ.ಕೆ. ಸುರೇಶ್ ವಿರುದ್ಧ ಗರಿಷ್ಠ ಪ್ರಮಾಣದ ಪ್ರಕರಣಗಳು ದಾಖಲಾಗಿವೆ. ಡಿ.ಕೆ. ಸುರೇಶ್ ವಿರುದ್ಧ ಸುಮಾರು 8 ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ 2 ಪ್ರಕರಣಗಳು ಗಂಭೀರ ಸ್ವರೂಪದ್ದಾಗಿವೆ. ಸಾತನೂರು ಅರಣ್ಯ ವಲಯಗಳಲ್ಲಿ ಅಕ್ರಮ ಗಣಿಗಾರಿಕೆ ಹಾಗೂ ಭೂ ಒತ್ತುವರಿ ಪ್ರಕರಣಗಳು ಡಿ.ಕೆ. ಸುರೇಶ್ ವಿರುದ್ಧದ ಪ್ರಮುಖ ಪ್ರಕರಣಗಳಾಗಿವೆ.

  • ಅನಂತ ಕುಮಾರ್ ಹೆಗಡೆ:

ಇನ್ನು ಬಿಜೆಪಿಯ ಉತ್ತರ ಕನ್ನಡ ಕ್ಷೇತ್ರದ ಸಂಸದ ಅನಂತ ಕುಮಾರ್ ಹೆಗಡೆ ವಿರುದ್ಧವೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಅವರ ವಿರುದ್ಧದ ಘೋಷಿತ ಕ್ರಿಮಿನಲ್ ಕೇಸ್​ಗಳು 4. ಈ ಪೈಕಿ ಬಹುತೇಕ ಪ್ರಕರಣಗಳು ಗಂಭೀರ ಸ್ವರೂಪದ್ದಾಗಿವೆ. ವೈದ್ಯರ ಮೇಲೆ ಹಲ್ಲೆ ನಡೆಸಿರುವುದು ಹೆಗಡೆ ವಿರುದ್ಧದ ಗಂಭೀರ ಪ್ರಕರಣ. ಐಪಿಸಿ ಕಾಯ್ದೆ 4, 506, 341, 34, 323,153ಎ, 504, 125 ರ ಅಡಿ ಪ್ರಕರಣಗಳು ದಾಖಲಾಗಿವೆ. ಉಳಿದಂತೆ ಎಲ್ಲ ಪ್ರಕರಣಗಳು ಕೋಮು ಸೌಹಾರ್ದತೆ ಕದಡುವ ಪ್ರಕರಣಗಳಾಗಿವೆ.

  • ನಳಿನ್ ಕುಮಾರ್ ಕಟೀಲು:

ದಕ್ಷಿಣ ಕನ್ನಡ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲು ಕೂಡ ಕ್ರಿಮಿನಲ್ ಕೇಸ್​ಗಳ ಪೈಕಿ ಹಿಂದೆ ಬಿದ್ದಿಲ್ಲ. ಅವರ ವಿರುದ್ಧ ಒಟ್ಟು 4 ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಇವುಗಳಲ್ಲಿ ಸರ್ಕಾರಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ, ವೈಯಕ್ತಿಕ ನಿಂದನೆ ಪ್ರಮುಖವಾಗಿವೆ. ಅವರ ವಿರುದ್ಧ ಐಪಿಸಿ 123, 186, 188, 268, 106, 108, 353, 506 ಅಡಿ ಪ್ರಕರಣಗಳು ದಾಖಲಾಗಿವೆ.

  • ಪ್ರತಾಪ್ ಸಿಂಹ:

ಮೈಸೂರು ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ವಿರುದ್ಧವೂ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಅವರ ವಿರುದ್ಧ 3 ಪ್ರಕರಣಗಳು ದಾಖಲಾಗಿವೆ. ಹನುಮ ಜಯಂತಿ ಪ್ರಯುಕ್ತ ನಿಷೇಧಾಜ್ಞೆ ಉಲ್ಲಂಘನೆ, ಸರ್ಕಾರಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ, ನೀತಿ ಸಂಹಿತೆ ಉಲ್ಲಂಘನೆ, ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಾಶ್ ರಾಜ್ ವಿರುದ್ಧ ನಿಂದನಾತ್ಮಕ ಪೋಸ್ಟ್ ಹಾಕಿರುವುದು ಪ್ರಮುಖ ಪ್ರಕರಣಗಳಾಗಿವೆ. ಪ್ರತಾಪ್ ಸಿಂಹ ವಿರುದ್ಧ ಐಪಿಸಿ ಸೆಕ್ಷನ್ 279, 353, 188, 332 ಅಡಿ ಪ್ರಕರಣಗಳು ದಾಖಲಾಗಿವೆ. ಜತೆಗೆ ಸೆಕ್ಷನ್ 127ಎ, 499, 500 ಅಡಿ ಕೇಸ್​ಗಳು ದಾಖಲಾಗಿವೆ.

  • ಶೋಭಾ ಕರಂದ್ಲಾಜೆ:

ಉಡುಪಿ-ಚಿಕ್ಕಮಗಳೂರು ಅಭ್ಯರ್ಥಿ ಶೋಭಾ ಕರಂದ್ಲಾಜೆ ವಿರುದ್ಧ ಒಟ್ಟು 3 ಪ್ರಕರಣಗಳು ದಾಖಲಾಗಿವೆ. ಹೊನ್ನಾವರ ಪೊಲೀಸ್ ಸ್ಟೇಷನ್​ನಲ್ಲಿ ಪ್ರಚೋದನಾಕಾರಿ ಹೇಳಿಕೆ ಸಂಬಂಧ ಪ್ರಕರಣ ದಾಖಲಾಗಿದೆ. ಸೆಕ್ಷನ್ 153ಎ, 153, 505(2) ಕೇಸ್​ ದಾಖಲಾಗಿವೆ. ಇನ್ನು ಶಾಸಕ ರೋಷನ್ ಬೇಗ್ ಅವರು ಕರಂದ್ಲಾಜೆ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಇದರ ಜತೆಗೆ ನಕಲಿ ಸಂಸ್ಥೆಯಲ್ಲಿ ಹೂಡಿಕೆ ಮಾಡಿದ ಆರೋಪದಡಿ ಜಾರಿ ನಿರ್ದೇಶನಾಲಯದಲ್ಲೂ ಪ್ರಕರಣ ದಾಖಲಾಗಿವೆ.

  • ಪ್ರಹ್ಲಾದ್ ಜೋಶಿ:

ಧಾರವಾಡ ಸಂಸದ ಪ್ರಹ್ಲಾದ್ ಜೋಶಿ ವಿರುದ್ಧ 1 ಕ್ರಿಮನಲ್ ಕೇಸ್ ದಾಖಲಾಗಿದೆ. ಹುಬ್ಬಳ್ಳಿಯ ಕಸಬಾಪೇಟೆ ಪೊಲೀಸ್ ಠಾಣೆಯಲ್ಲಿ ಕೋಮುಗಲಭೆಗೆ ಪ್ರಚೋದನೆ ನೀಡಿದ ಸಂಬಂಧ ಪ್ರಕರಣ ದಾಖಲಾಗಿದೆ. ಐಪಿಸಿ ಕಾಯ್ದೆ 153ಎ, 298 ಅಡಿ ಪ್ರಕರಣ ದಾಖಲಾಗಿವೆ.

  • ಕೆ.ಹೆಚ್. ಮುನಿಯಪ್ಪ:

ಕೋಲಾರ ಹಾಲಿ ಸಂಸದ ಕೆ.ಹೆಚ್. ಮುನಿಯಪ್ಪ ವಿರುದ್ಧ ಒಂದು ಪ್ರಕರಣ ದಾಖಲಾಗಿದೆ. ಕೋಲಾರದ ರಾಬರ್ಟಸನ್ ಪೇಟೆ ಠಾಣೆಯಲ್ಲಿ ಜಾತಿ ನಿಂದನೆ ಸಂಬಂಧ ಪ್ರಕರಣ ದಾಖಲಾಗಿದೆ. ಐಪಿಸಿ 1860, u/s 323, 341, 504, 34, 57 ಅಡಿ ಕೇಸ್​ಗಳಿವೆ.

  • ಬಿ.ವೈ.ರಾಘವೇಂದ್ರ:

ಶಿವಮೊಗ್ಗ ಬಿಜೆಪಿ ಅಭ್ಯರ್ಥಿ ರಾಘವೇಂದ್ರ ವಿರುದ್ಧ 2 ಪ್ರಕರಣಗಳಿವೆ. ಭ್ರಷ್ಟಾಚಾರ ನಿರ್ಮೂಲನೆ ಕಾಯ್ದೆಯಡಿ ರಾಘವೇಂದ್ರ ವಿರುದ್ಧ ಖಾಸಗಿ ದೂರು ದಾಖಲಾಗಿದೆ. ಇನ್ನು ಬೆಂಗಳೂರಿನ ಇಡಿಯಲ್ಲಿ ಅಕ್ರಮ ಹಣ ಸಂಗ್ರಹಣೆ ಆರೋಪದಿ ಕೇಸ್ ದಾಖಲಾಗಿದೆ.

  • ಎಸ್.ಮುನಿಸ್ವಾಮಿ:

ಕೋಲಾರ ಬಿಜೆಪಿ ಅಭ್ಯರ್ಥಿ ಎಸ್.ಮುನಿಸ್ವಾಮಿ ವಿರುದ್ಧ 2 ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ವೈಟ್ ಫೀಲ್ಡ್, ಹೆಚ್ಎಎಲ್ ಠಾಣೆಗಳಲ್ಲಿ ಮುನಿಸ್ವಾಮಿ ವಿರುದ್ಧ ಪ್ರಕರಣಗಳಿವೆ. ಅಕ್ರಮ ಪ್ರತಿರೋಧ ಹಿನ್ನೆಲೆ ಅವರ ವಿರುದ್ಧ ಐಪಿಸಿ 341, 34 ಅಡಿ ಕೇಸ್ ದಾಖಲಾಗಿವೆ. ಇನ್ನು ಹೆಚ್ಎಎಲ್ ಠಾಣೆಯಲ್ಲಿ ದೊಂಬಿ ಸಂಬಂಧ ಸೆಕ್ಷನ್ 341, 143, 147, 149, 283 ಅಡಿ ಪ್ರಕರಣಗಳು ದಾಖಲಾಗಿವೆ.

  • ಪ್ರಕಾಶ್ ರಾಜ್:

ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಪ್ರಕಾಶ್ ರಾಜ್ ವಿರುದ್ಧವೂ 1 ಪ್ರಕರಣ ಇದೆ. ಚಿಕ್ಕಮಗಳೂರು ನಗರ ಠಾಣೆಯಲ್ಲಿ ದೊಂಬಿ ಆರೋಪದಡಿ ಪ್ರಕರಣ ದಾಖಲಾಗಿದೆ. ಈ ಸಂಬಂಧ ಕಳೆದ ವರ್ಷ ಡಿಸೆಂಬರ್​ನಲ್ಲಿ ಪೊಲೀಸರು ಚಾರ್ಜ್ ಶೀಟ್ ಕೂಡ ಸಲ್ಲಿಸಿದ್ದಾರೆ.

  • ಪ್ರಮೋದ್ ಮದ್ವರಾಜ್:

ಉಡುಪಿ-ಚಿಕ್ಕಮಗಳೂರು ಮೈತ್ರಿ ಅಭ್ಯರ್ಥಿ ಪ್ರಮೋದ್ ಮದ್ವರಾಜ್ ವಿರುದ್ಧ ಹೆಬ್ರಿ ಠಾಣೆಯಲ್ಲಿ ನೀತಿ ಸಂಹಿತೆ ಉಲ್ಲಂಘನೆ ಸಂಬಂಧ ಪ್ರಕರಣವೊಂದು ದಾಖಲಾಗಿದೆ.

  • ಆನಂದ್ ಅಸ್ನೋಟಿಕರ್:

ಇತ್ತ ಉತ್ತರ ಕನ್ನಡ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಆನಂದ್ ಅಸ್ನೋಟಿಕರ್ ವಿರುದ್ಧ ಕುಮಾರಪಟ್ಟಣಂ ಠಾಣೆಯಲ್ಲಿ ಶಸ್ತ್ರಾಸ್ತ್ರ ಕಾಯ್ದೆಯಡಿ ಕ್ರಿಮಿನಲ್ ಪ್ರಕರಣ ದಾಖಲಾಗಿದೆ.

Intro:Criminal casesBody:ರಾಜ್ಯದ ಹಾಲಿ ಸಂಸದರು ಹಾಗೂ ಅಭ್ಯರ್ಥಿಗಳ ವಿರುದ್ಧದ ಕ್ರೈಂ ಡೈರಿ ಹೇಗಿದೆ ಗೊತ್ತಾ!?

ಬೆಂಗಳೂರು: ರಾಜ್ಯದಲ್ಲಿ ಲೋಕಸಮರಕ್ಕೆ ಕ್ಷಣಗಣನೆ ಪ್ರಾರಂಭವಾಗಿದೆ. ಅಭ್ಯರ್ಥಿಗಳಿಂದ ಸಮರೋಪಾದಿಯಲ್ಲಿ ಮತಬೇಟೆ ನಡೆಯುತ್ತಿದೆ. ರಣಕಣದಲ್ಲಿ ಅದೃಷ್ಟ ಪರೀಕ್ಷೆ ಎದುರಿಸಲು ಮುಂದಾಗಿರುವ ಅಭ್ಯರ್ಥಿಗಳ ಮೇಲೆ‌ ಯಾವ ಯಾವ ಪ್ರಕರಣಗಳಿವೆ ಎಂದು ಗೊತ್ತಾ?. ಈ ಸ್ಟೋರಿ ನೋಡಿ...

ರಾಜ್ಯದಲ್ಲಿ ಮೊದಲ ಹಂತದ ಲೋಕಸಮರ‌ ಏ.18ಕ್ಕೆ‌ನಡೆಯಲಿದೆ. ಇತ್ತ ಕಣದಲ್ಲಿರುವ ಅಭ್ಯರ್ಥಿಗಳು ಬೆವರಿಳಿಸಿ ಹಗಲು, ರಾತ್ರಿ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ. ಮತದಾರರ ಮನವೊಲಿಸಲು ನಾನಾ ಕಸರತ್ತುಗಳನ್ನು ಮಾಡುತ್ತಿದ್ದಾರೆ. ಮತಬೇಟೆಗಿಳಿದಿರುವ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗ ಪ್ರಜ್ಞಾವಂತ ಮತದಾರರು ಎಲ್ಲ ಮಾನದಂಡವನ್ನು ಅವಲೋಕಿಸುತ್ತಾರೆ. ನಿಮ್ಮ ಕ್ಷೇತ್ರದಲ್ಲಿ ನಿಂತಿರುವ ಅಭ್ಯರ್ಥಿಗಳ ಮೇಲೆ‌ ಯಾವ ಯಾವ ಆರೋಪಗಳಿವೆ?. ಎಷ್ಟು ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ ಎಂಬುದರ ಬಗ್ಗೆನೂ ಒಂದು ಕಣ್ಣಾಡಿಸುವುದು ಒಳಿತು. ಈ ನಿಟ್ಟಿನಲ್ಲಿ ರಣಕಣದಲ್ಲಿನ ಪ್ರಮುಖ ಅಭ್ಯರ್ಥಿಗಳ ಕ್ರೈಂ ಡೈರಿ ಹೇಗಿದೆ ಎಂದು ನೋಡೋಣ.

ಯಾರ ಮೇಲೆ ಎಷ್ಟು ಪ್ರಕರಣಗಳಿವೆ?:

ರಾಜ್ಯದಲ್ಲಿ ಲೋಕಸಮರದ ಜಿದ್ದಾಜಿದ್ದು ತಾರಕ್ಕೇರಿದೆ. ಒಬ್ಬರನ್ನೊಬ್ಬರು ಪರಸ್ಪರ ತೆಗಳಿ ಮತದಾರರ ಮನಗೆಲ್ಲುವ ಕೆಲಸವನ್ನು ಅಭ್ಯರ್ಥಿಗಳು ಮಾಡುತ್ತಿದ್ದಾರೆ. ಹೀಗೆ ಮತದಾರರ ಮನವೊಲಿಕೆಗೆ ನಾನಾ ಕಸರತ್ತು ಮಾಡುವ ಕೆಲ ಪ್ರಮುಖ ಅಭ್ಯರ್ಥಿಗಳ ಮೇಲೆ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಈ ಪ್ರಕರಣಗಳ ‌ಸಂಬಂಧ ಇನ್ನೂ ಕೋರ್ಟಿನಲ್ಲಿ ವಿಚಾರಣೆ ನಡೆಯುತ್ತಿದೆ.

ರಾಜ್ಯದಲ್ಲಿನ‌ ಹಾಲಿ‌ ಸಂಸದರ ಪೈಕಿ ಒಂಬತ್ತು ಸಂಸದರ ವಿರುದ್ಧ ಅಪರಾಧ ಪ್ರಕರಣಗಳಿದ್ದು, ಐದು ಪ್ರಕರಣಗಳು ಗಂಭೀರ ಸ್ವರೂಪದ್ದಾಗಿದೆ. ಚುನಾವಣೆ ಸಂಬಂಧ ಹಾಲಿ ಸಂಸದರ ಅಫಿಡವಿಟ್ ನಲ್ಲಿ ಘೋಷಿಸಿರುವ ಅಪರಾಧ ಪ್ರಕರಣಗಳ ಪೈಕಿ ಸುಮಾರು 32ಶೇ. ಸಂಸದರ ಮೇಲೆ ಕ್ರಿಮಿನಲ್ ಪ್ರಕರಣಗಳಿವೆ.

ಅಭ್ಯರ್ಥಿಗಳ ಕ್ರೈಂ ಡೈರಿ ಹೇಗಿದೆ?:

ಡಿ.ಕೆ.ಸುರೇಶ್:

ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಹಾಲಿ ಸಂಸದ ಡಿ.ಕೆ.ಸುರೇಶ್ ವಿರುದ್ಧ ಗರಿಷ್ಠ ಪ್ರಮಾಣದ ಪ್ರಕರಣಗಳು ದಾಖಲಾಗಿವೆ. ಡಿ.ಕೆ.ಸುರೇಶ್ ವಿರುದ್ಧ ಸುಮಾರು ಎಂಟು ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ ಎರಡು ಪ್ರಕರಣಗಳು ಗಂಭೀರ ಸ್ವರೂಪದ್ದಾಗಿದೆ.

ಸಾತನೂರು ಅರಣ್ಯ ಅರಣ್ಯ ವಲಯಗಳಲ್ಲಿ ಅಕ್ರಮ ಗಣಿಗಾರಿಕೆ ಹಾಗೂ ಭೂ ಒತ್ತುವರಿ ಪ್ರಕರಣಗಳು ಡಿ.ಕೆ.ಸುರೇಶ್ ವಿರುದ್ಧದ ಪ್ರಮುಖ ಕ್ರೈಂ ಡೈರಿ.

ಅನಂತ ಕುಮಾರ್ ಹೆಗ್ಡೆ:

ಇನ್ನು ಬಿಜೆಪಿ ಉತ್ತರ ಕನ್ನಡ ಸಂಸದ ಅನಂತ ಕುಮಾರ್ ಹೆಗ್ಡೆ ಹೆಸರಿನಲ್ಲಿರುವ ಕ್ರೈಂ‌ ಡೈರಿಯೂ ಸಣ್ಣದಿಲ್ಲ. ಅವರ ವಿರುದ್ಧದ ಘೋಷಿತ ಕ್ರಿಮಿನಲ್ ಕೇಸ್ ಗಳು 4.

ಈ ಪೈಕಿ ಬಹುತೇಕ ಪ್ರಕರಣಗಳು ಗಂಭೀರ ಸ್ವರೂಪವಾದ ಕ್ರಿಮಿನಲ್ ಕೇಸ್ ಗಳಾಗಿವೆ. ವೈದ್ಯರ ಮೇಲೆ ಹಲ್ಲೆ ನಡೆಸಿರುವುದು ಹೆಗ್ಡೆ ವಿರುದ್ಧದ ಗಂಭೀರ ಪ್ರಕರಣ. ಐಪಿಸಿ ಕಾಯ್ದೆ 4, 506, 341, 34, 323,153a, 504, 125 ರಡಿ ಪ್ರಕರಣಗಳು ದಾಖಲಾಗಿವೆ. ಉಳಿದಂತೆ ಎಲ್ಲ ಪ್ರಕರಣಗಳು ಕೋಮು ಸೌಹಾರ್ದತೆ ಕದಡುವ ಪ್ರಕರಣಗಳಾಗಿವೆ.

ನಳಿನ್ ಕುಮಾರ್ ಕಟೀಲ್:

ದಕ್ಷಿಣ ಕನ್ನಡ ಬಿಜೆಪಿ ಎಂಪಿ ನಳಿನ್ ಕುಮಾರ್ ಕಟೀಲ್‌ ಕೂಡ ಕ್ರಿಮಿನಲ್ ಕೇಸ್ ಗಳ ಪೈಕಿ ಹಿಂದೆ ಬಿದ್ದಿಲ್ಲ.

ಅವರ ವಿರುದ್ಧ ಒಟ್ಟು 4 ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಇವುಗಳಲ್ಲಿ ಸರ್ಕಾರಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ, ವೈಯ್ಯಕ್ತಿಕ ನಿಂದನೆ ಪ್ರಮುಖವಾಗಿವೆ. ಅವರ ವಿರುದ್ಧ ಐಪಿಸಿ 123, 186, 188, 268, 106, 108, 353, 506 ಅಡಿ ಪ್ರಕರಣಗಳು ದಾಖಲಾಗಿವೆ.

ಪ್ರತಾಪ್ ಸಿಂಹ:

ಮೈಸೂರು ಸಂಸದ ಪ್ರತಾಪ್ ಸಿಂಹ ವಿರುದ್ಧವೂ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಅವರ ವಿರುದ್ಧ ಮೂರು ಪ್ರಕರಣಗಳು ದಾಖಲಾಗಿವೆ.

ಹನುಮ ಜಯಂತಿ ಪ್ರಯುಕ್ತ ನಿಷೇಧಾಜ್ಞೆ ಉಲ್ಲಂಘನೆ, ಸರ್ಕಾರಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ, ನೀತಿ ಸಂಹಿತೆ ಉಲ್ಲಂಘನೆ, ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಾಶ್ ರಾಜ್ ವಿರುದ್ಧ ನಿಂದನಾತ್ಮಕ ಪೋಸ್ಟ್ ಪ್ರಮುಖ ಪ್ರಕರಣಗಳಾಗಿವೆ.

ಪ್ರತಾಪ್ ಸಿಂಹ ವಿರುದ್ಧ ಐಪಿಸಿ ಸೆಕ್ಷನ್ 279, 353, 188, 332 ಪ್ರಕರಣಗಳು ದಾಖಲಾಗಿವೆ. ಜತೆಗೆ ಸೆಕ್ಷನ್ 127a, 499, 500 ಅಡಿ ಕೇಸುಗಳು ದಾಖಲಾಗಿವೆ.

ಶೋಭಾ ಕರಂದ್ಲಾಜೆ:

ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಒಟ್ಟು ಮೂರು ಪ್ರಕರಣಗಳು ದಾಖಲಾಗಿವೆ.

ಹೊನ್ನಾವರ ಪೊಲೀಸ್ ಸ್ಟೇಷನ್ ನಲ್ಲಿ ಪ್ರಚೋದನಾಕಾರಿ ಹೇಳಿಕೆ ಸಂಬಂಧ ಪ್ರಕರಣ ದಾಖಲಾಗಿದೆ. ಸೆಕ್ಷನ್ 153a, 153, 505(2) ಕೇಸು ದಾಖಲಾಗಿವೆ. ಇನ್ನು ಶಾಸಕ ರೋಷನ್ ಬೇಗ್ ಅವರು ಕರಂದ್ಲಾಜೆ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಇದರ ಜತೆಗೆ ನಕಲಿ ಸಂಸ್ಥೆಯಲ್ಲಿ ಹೂಡಿಕೆ ಮಾಡಿದ ಆರೋಪದಡಿ ಜಾರಿ ನಿರ್ದೇಶನಾಲಯದಲ್ಲೂ ಪ್ರಕರಣ ದಾಖಲಾಗಿವೆ.

ಪ್ರಹ್ಲಾದ್ ಜೋಷಿ:

ಧಾರವಾಡ ಸಂಸದ ಪ್ರಹ್ಲಾದ್ ಜೋಷಿ ವಿರುದ್ಧ ಒಂದು ಕ್ರಿಮನಲ್ ಕೇಸ್ ದಾಖಲಾಗಿದೆ.

ಹುಬ್ಬಳ್ಳಿಯ ಕಸಬಪೇಟ್ ಪೊಲೀಸ್ ಸ್ಟೇಷನ್‌ ನಲ್ಲಿ ಕೋಮು ಗಲಭೆಗೆ ಪ್ರಚೋದನೆ ನೀಡಿದ ಸಂಬಂಧ ಪ್ರಕರಣ ದಾಖಲಾಗಿದೆ. ಐಪಿಸಿ ಕಾಯ್ದೆ 153a, 298ರಡಿ ಪ್ರಕರಣ ದಾಖಲಾಗಿವೆ.

ಕೆ.ಎಚ್.ಮುನಿಯಪ್ಪ:

ಕೋಲಾರ ಹಾಲಿ ಸಂಸದ ಕೆ.ಎಚ್.ಮುನಿಯಪ್ಪ ವಿರುದ್ಧ ಒಂದ ಪ್ರಕರಣ ದಾಖಲಾಗಿದೆ.

ಕೋಲಾರದ ರೋಬರ್ಟಸನ್ ಪೇಟೆ ಠಾಣೆಯಲ್ಲಿ ಜಾತಿ ನಿಂದನೆ ಸಂಬಂಧ ಪ್ರಕರಣ ದಾಖಲಾಗಿದೆ. ಐಪಿಸಿ 1860, u/s 323, 341, 504, 34, 57 ಅಡಿ ಕೇಸ್ ದಾಖಲಾಗಿವೆ.

ಬಿ.ಎಸ್.ರಾಘವೇಂದ್ರ:

ಶಿವಮೊಗ್ಗ ಸಂಸದ ಬಿ.ಎಸ್. ರಾಘವೇಂದ್ರ ವಿರುದ್ಧ ಎರಡು ಪ್ರಕರಣಗಳು ದಾಖಲಾಗಿವೆ.

ಭ್ರಷ್ಟಾಚಾರ ನಿರ್ಮೂಲನೆ ಕಾಯ್ದೆಯಡಿ ರಾಘವೇಂದ್ರ ವಿರುದ್ಧ ಖಾಸಗಿ ದೂರು ದಾಖಲಾಗಿದೆ. ಇನ್ನು ಬೆಂಗಳೂರಿನ ಇಡಿಯಲ್ಲಿ ಮನಿ ಲಾಂಡರಿಂಗ್ ಸಂಬಂಧ ಕೇಸ್ ದಾಖಲಾಗಿದೆ.

ಎಸ್.ಮುನಿಸ್ವಾಮಿ:

ಕೋಲಾರ ಬಿಜೆಪಿ ಅಭ್ಯರ್ಥಿ ಎಸ್.ಮುನಿಸ್ವಾಮಿ ವಿರುದ್ಧ ಎರಡು ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ.

ವೈಟ್ ಫೀಲ್ಡ್, ಎಚ್ಎಎಲ್ ಠಾಣೆಗಳಲ್ಲಿ ಮುನಿಸ್ವಾಮಿ ವಿರುದ್ಧ ಪ್ರಕರಣಗಳು ದಾಖಲಾಗಿವೆ. ಅಕ್ರಮ ಪ್ರತಿರೋಧ ಹಿನ್ನೆಲೆ ಅವರ ವಿರುದ್ಧ ಐಪಿಸಿ 341, 34 ಅಡಿ ಕೇಸ್ ದಾಖಲಾಗಿದೆ. ಇನ್ನು ಎಚ್ಎಎಲ್ ಠಾಣೆಯಲ್ಲಿ ದೊಂಬಿ ಸಂಬಂಧ ಸೆಕ್ಷನ್ 341, 143, 147, 149, 283 ಅಡಿ ಪ್ರಕರಣಗಳು ದಾಖಲಾಗಿವೆ.

ಪ್ರಕಾಶ್ ರಾಜ್:

ಬೆಂ.ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಪ್ರಕಾಶ್ ರಾಜ್ ವಿರುದ್ಧವೂ ಒಂದು ಪ್ರಕರಣ ದಾಖಲಾಗಿದೆ. ‌

ಚಿಕ್ಕಮಗಳೂರು ನಗರ ಠಾಣೆಯಲ್ಲಿ ದೊಂಬಿ ಆರೋಪದಡಿ ಪ್ರಕರಣ ದಾಖಲಾಗಿದೆ. ಕಳೆದ ವರ್ಷ ಡಿಸೆಂಬರ್ ನಲ್ಲಿ ಪೊಲೀಸರು ಚಾರ್ಜ್ ಶೀಟ್ ಕೂಡ ಸಲ್ಲಿಕೆ ಮಾಡಲಾಗಿದೆ.

ಪ್ರಮೋದ್ ಮದ್ವರಾಜ್:

ಉಡುಪಿ-ಚಿಕ್ಕಮಗಳೂರು ಮೈತ್ರಿ ಅಭ್ಯರ್ಥಿ ಪ್ರಮೋದ್ ಮದ್ವರಾಜ್ ವಿರುದ್ಧ ಹೆಬ್ರಿ ಠಾಣೆಯಲ್ಲಿ ನೀತಿ ಸಂಹಿತೆ ಉಲ್ಲಂಘನೆ ಸಂಬಂಧ ಪ್ರಕರಣವೊಂದು ದಾಖಲಾಗಿದೆ.

ಆನಂದ್ ಅಸ್ನೋಟಿಕರ್:

ಇತ್ತ ಉತ್ತರ ಕನ್ನಡ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಆನಂದ್ ಅಸ್ನೋಟಿಕರ್ ವಿರುದ್ಧ ಕುಮಾರಪಟ್ಟಣಂ ಠಾಣೆಯಲ್ಲಿ ಶಸ್ತ್ರಾಸ್ತ್ರ ಕಾಯ್ದೆಯಡಿ ಕ್ರಿಮಿನಲ್ ಪ್ರಕರಣ ದಾಖಲಾಗಿದೆ.Conclusion:Venkat
ETV Bharat Logo

Copyright © 2024 Ushodaya Enterprises Pvt. Ltd., All Rights Reserved.