ಬೆಂಗಳೂರು: ದಿನೇ ದಿನೆ ಸಾವಿನ ಸಂಖ್ಯೆ ಹೆಚ್ಚುತ್ತಿರುವ ಪರಿಣಾಮ ಎಂದಿನಂತೆ ಚಿತಾಗಾರಗಳ ಮುಂದೆ ಸಾಲುಗಟ್ಟಿ ನಿಂತಿರುವ ಆ್ಯಂಬುಲೆನ್ಸ್ಗಳ ಚಿತ್ರಣ ಮುಂದುವರೆದಿದ್ದು, ಪೀಣ್ಯ ಬಳಿ ಇರುವ ಎಸ್ ಆರ್ ಎಸ್ ಚಿತಾಗಾರದ ಮುಂದೆ ಸಾಲುಗಟ್ಟಿ ನಿಂತಿರುವ ಆ್ಯಂಬುಲೆನ್ಸ್ಗಳು ಕಂಡುಬರುತ್ತಿವೆ.
ಚಿತಾಗಾರದ ಮುಂದೆ ಸಾಲಗಿ ನಿಂತಿರುವ 19 ಆ್ಯಂಬುಲೆನ್ಸ್ಗಳು ಕಂಡುಬರುತ್ತಿದ್ದು, ಅವುಗಳ ಹತ್ತಿರ ಮೃತದೇಹಗಳ ವಾರಸುದಾರರು ಜಮೆಯಾಗಿರುವುದು ಕಂಡು ಬರುತ್ತಿದ್ದಾರೆ. ಗಂಟೆ ಗಂಟೆಲೇ ಕಾದು ಅಲ್ಲಲ್ಲೇ ಕೂತಿರುವ ಸಂಬಂಧಿಕರು ಕೂಡ ಕಾಣ ಸಿಗುತ್ತಿದ್ದಾರೆ.
ನಿತ್ಯ ನಲವತ್ತಕ್ಕೂ ಹೆಚ್ಚು ಮೃತದೇಹ ಬರುತ್ತಿರುವುದಾಗಿ ಮಾಹಿತಿ ದೊರೆತಿದ್ದು, ಕೊರೊನಾ ಸಾವಿನಿಂದಾಗಿ ಸಹಜ ಸಾವಾಗಿರುವರಿಗೂ ಹೆಚ್ಚು ತೊಂದರೆಯಾಗುತ್ತಿದೆ.