ETV Bharat / state

ಮುಷ್ಕರ ಹೂಡಿದ್ರೆ ಈವರೆಗಿನ ಯಾವ ಸರ್ಕಾರವೂ ಇಷ್ಟು ಕಟುವಾಗಿರಲಿಲ್ಲ.. ಆದರೆ, ಬಿಜೆಪಿ ಸರ್ಕಾರ..

author img

By

Published : Apr 14, 2021, 7:41 PM IST

Updated : Apr 14, 2021, 9:17 PM IST

ಪರಿಣಾಮವಾಗಿ ವೇತನ ಪಾವತಿಗೆ ತಡೆ, ಅಂತರದ ನಿಗಮ ವರ್ಗಾವಣೆ ರದ್ದು, ತರಬೇತಿ ಸಿಬ್ಬಂದಿ ಅಮಾನತಿನಂತಹ ಅಸ್ತ್ರ ಪ್ರಯೋಗಿಸಿದ್ದಾರೆ. ಈವರೆಗೂ ಸಾಕಷ್ಟು ಬಾರಿ ಸಾರಿಗೆ ಸಿಬ್ಬಂದಿ ಮುಷ್ಕರ ನಡೆಸಿದ್ದಾಗ ಸರ್ಕಾರ ಸಂಧಾನಕ್ಕೆ ಮುಂದಾಗುತ್ತಿತ್ತು..

CM Yediyurappa
ಸಿಎಂ ಯಡಿಯೂರಪ್ಪ

ಬೆಂಗಳೂರು : ಸಾರಿಗೆ ನೌಕರರು ಮುಷ್ಕರ ಆರಂಭಿಸಿ ಈಗ 8 ದಿನವಾಯ್ತು. ರಾಜ್ಯದಲ್ಲಿ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ. ಇಷ್ಟಾದರೂ ಸರ್ಕಾರ ಮಾತ್ರ ಮಾತುಕತೆಗೆ ಮುಂದಾಗಿಲ್ಲ. ಬದಲಾಗಿ ಸಂಧಾನದ ಬಾಗಿಲನ್ನು ಮುಚ್ಚಿದೆ.

ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸಾರಿಗೆ ನೌಕರರ ಮುಷ್ಕರಕ್ಕೆ ಸೊಪ್ಪು ಹಾಕದೇ ಉಪ ಚುನಾವಣಾ ಪ್ರಚಾರದಲ್ಲಿ ನಿರತರಾಗಿದ್ದಾರೆ. 6ನೇ ವೇತನ ಜಾರಿಗೆ ಒತ್ತಾಯಿಸಿ ರಾಜ್ಯಾದ್ಯಂತ ಸೇವೆ ಸ್ಥಗಿತಗೊಳಿಸಿ ಸಾರಿಗೆ ನೌಕರರು ಮುಷ್ಕರ ನಡೆಸುತ್ತಿದ್ದಾರೆ. ಕೆಎಸ್ಆರ್‌ಟಿಸಿ, ಬಿಎಂಟಿಸಿ, ಈಶಾನ್ಯ ಸಾರಿಗೆ, ವಾಯವ್ಯ ಸಾರಿಗೆ ನಿಗಮದ ಬಸ್ ಸಂಚಾರ ಸ್ಥಗಿತಗೊಂಡಿದೆ.

ಸಂಚಾರ ವ್ಯವಸ್ಥೆ ಏರುಪೇರಾಗಿದೆ. ಆದರೂ ಸರ್ಕಾರ ಮಾತ್ರ ಸಾರಿಗೆ ನೌಕರರ ಜೊತೆ ಮಾತುಕತೆಗೆ ಮುಂದಾಗಿಲ್ಲ. ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಈವರೆಗೂ ಮುಷ್ಕರಗಳು ಆರಂಭಗೊಳ್ಳುತ್ತಿದ್ದಂತೆ ಸಂಧಾನಕ್ಕೆ, ಮಾತುಕತೆಗೆ ಮುಂದಾಗಲು ಸೂಚಿಸುತ್ತಿದ್ದರು.

ಆದರೆ, ಈ ಬಾರಿ ಮಾತ್ರ ಅಂತಹ ಯಾವ ಪ್ರಯತ್ನವೂ ನಡೆದಿಲ್ಲ. ಸ್ವತಃ ಯಡಿಯೂರಪ್ಪ ಯಾರೊಂದಿಗೆ ಮಾತುಕತೆ ನಡೆಸಬೇಕು ಎಂದು ಪ್ರಶ್ನಿಸುವ ಮೂಲಕ ಸಂಧಾನಕ್ಕೆ ತೆರೆ ಎಳೆದಿದ್ದಾರೆ. ಸಾರಿಗೆ ನೌಕರರು ಮುಷ್ಕರ ನಡೆಸುತ್ತಿದ್ದರೂ ತಲೆಕೆಡಿಸಿಕೊಳ್ಳದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಏಪ್ರಿಲ್ 8ರಿಂದ ನಾಲ್ಕು ದಿನಗಳ ಕಾಲ ಉಪ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ.

ಬಸವಕಲ್ಯಾಣದಲ್ಲಿ ಎರಡು ದಿನ ಹಾಗೂ ಮಸ್ಕಿಯಲ್ಲಿ ಎರಡು ದಿನ ಚುನಾವಣಾ ಪ್ರಚಾರ ನಡೆಸಿ ಮಂಗಳವಾರ ಮಧ್ಯಾಹ್ನ ಬೆಂಗಳೂರಿಗೆ ವಾಪಸ್‌ ಆಗಿ ಇಂದು ಮತ್ತೆ ಬೆಳಗಾವಿಗೆ ತೆರಳಿದ್ದಾರೆ. ಎರಡು ದಿನ ಬೆಳಗಾವಿಯಲ್ಲೇ ಇದ್ದು ಪ್ರಚಾರ ನಡೆಸಲಿದ್ದಾರೆ.

ಆರಂಭದಲ್ಲಿ ಪ್ರಚಾರಕ್ಕೆ ತೆರಳುವ ಮೊದಲು ಸಭೆ ನಡೆಸಿದ್ದ ಸಿಎಂ ಪ್ರಚಾರದಿಂದ ವಾಪಸ್ ಆದ ಬಳಿಕ ಮತ್ತೊಂದು ಸಭೆ ನಡೆಸಿ ಸಾರಿಗೆ ವ್ಯವಸ್ಥೆ ಕುರಿತು ಪರಿಶೀಲಿಸಿದ್ದಾರೆ. ಅದನ್ನು ಬಿಟ್ಟರೆ ಸಂಧಾನದಂತಹ ಯಾವುದೇ ಚಟುವಟಿಕೆಯನ್ನೂ ಸಿಎಂ ನಡೆಸಿಲ್ಲ. 6ನೇ ವೇತನ ನೀಡಲು ಸಾಧ್ಯವಿಲ್ಲ ಅನ್ನೋ ಸ್ಪಷ್ಟ ಸಂದೇಶವನ್ನು ರವಾನಿಸಿರುವ ಸಿಎಂ, ಮುಷ್ಕರ ನಿರತ ಸಿಬ್ಬಂದಿ ವಿರುದ್ಧ ಹಂತ ಹಂತವಾಗಿ ಕ್ರಮಕ್ಕೆ ಸೂಚಿಸಿದ್ದಾರೆ.

ಪರಿಣಾಮವಾಗಿ ವೇತನ ಪಾವತಿಗೆ ತಡೆ, ಅಂತರದ ನಿಗಮ ವರ್ಗಾವಣೆ ರದ್ದು, ತರಬೇತಿ ಸಿಬ್ಬಂದಿ ಅಮಾನತಿನಂತಹ ಅಸ್ತ್ರ ಪ್ರಯೋಗಿಸಿದ್ದಾರೆ. ಈವರೆಗೂ ಸಾಕಷ್ಟು ಬಾರಿ ಸಾರಿಗೆ ಸಿಬ್ಬಂದಿ ಮುಷ್ಕರ ನಡೆಸಿದ್ದಾಗ ಸರ್ಕಾರ ಸಂಧಾನಕ್ಕೆ ಮುಂದಾಗುತ್ತಿತ್ತು.

ಆದರೆ, ಈ ಬಾರಿ ಮಾತ್ರ ಸಂಧಾನದ ಬಾಗಿಲು ಮುಚ್ಚಿ ಹೋರಾಟವನ್ನೇ ಕಡೆಗಣಿಸಿ ಉಪ ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿದೆ ಸರ್ಕಾರ. ಉಪ ಚುನಾವಣೆ ನಂತರ ಸರ್ಕಾರ ಯಾವ ರೀತಿ ಕ್ರಮಕೈಗೊಳ್ಳಲಿದೆ, ಸಿಬ್ಬಂದಿ ಮುಷ್ಕರ ವಾಪಾಸ್ ಪಡೆಯುತ್ತಾರಾ, ಎಸ್ಮಾ ಜಾರಿಯಾಗುತ್ತಾ ಕಾದು ನೋಡಬೇಕಿದೆ.

ಬೆಂಗಳೂರು : ಸಾರಿಗೆ ನೌಕರರು ಮುಷ್ಕರ ಆರಂಭಿಸಿ ಈಗ 8 ದಿನವಾಯ್ತು. ರಾಜ್ಯದಲ್ಲಿ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ. ಇಷ್ಟಾದರೂ ಸರ್ಕಾರ ಮಾತ್ರ ಮಾತುಕತೆಗೆ ಮುಂದಾಗಿಲ್ಲ. ಬದಲಾಗಿ ಸಂಧಾನದ ಬಾಗಿಲನ್ನು ಮುಚ್ಚಿದೆ.

ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸಾರಿಗೆ ನೌಕರರ ಮುಷ್ಕರಕ್ಕೆ ಸೊಪ್ಪು ಹಾಕದೇ ಉಪ ಚುನಾವಣಾ ಪ್ರಚಾರದಲ್ಲಿ ನಿರತರಾಗಿದ್ದಾರೆ. 6ನೇ ವೇತನ ಜಾರಿಗೆ ಒತ್ತಾಯಿಸಿ ರಾಜ್ಯಾದ್ಯಂತ ಸೇವೆ ಸ್ಥಗಿತಗೊಳಿಸಿ ಸಾರಿಗೆ ನೌಕರರು ಮುಷ್ಕರ ನಡೆಸುತ್ತಿದ್ದಾರೆ. ಕೆಎಸ್ಆರ್‌ಟಿಸಿ, ಬಿಎಂಟಿಸಿ, ಈಶಾನ್ಯ ಸಾರಿಗೆ, ವಾಯವ್ಯ ಸಾರಿಗೆ ನಿಗಮದ ಬಸ್ ಸಂಚಾರ ಸ್ಥಗಿತಗೊಂಡಿದೆ.

ಸಂಚಾರ ವ್ಯವಸ್ಥೆ ಏರುಪೇರಾಗಿದೆ. ಆದರೂ ಸರ್ಕಾರ ಮಾತ್ರ ಸಾರಿಗೆ ನೌಕರರ ಜೊತೆ ಮಾತುಕತೆಗೆ ಮುಂದಾಗಿಲ್ಲ. ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಈವರೆಗೂ ಮುಷ್ಕರಗಳು ಆರಂಭಗೊಳ್ಳುತ್ತಿದ್ದಂತೆ ಸಂಧಾನಕ್ಕೆ, ಮಾತುಕತೆಗೆ ಮುಂದಾಗಲು ಸೂಚಿಸುತ್ತಿದ್ದರು.

ಆದರೆ, ಈ ಬಾರಿ ಮಾತ್ರ ಅಂತಹ ಯಾವ ಪ್ರಯತ್ನವೂ ನಡೆದಿಲ್ಲ. ಸ್ವತಃ ಯಡಿಯೂರಪ್ಪ ಯಾರೊಂದಿಗೆ ಮಾತುಕತೆ ನಡೆಸಬೇಕು ಎಂದು ಪ್ರಶ್ನಿಸುವ ಮೂಲಕ ಸಂಧಾನಕ್ಕೆ ತೆರೆ ಎಳೆದಿದ್ದಾರೆ. ಸಾರಿಗೆ ನೌಕರರು ಮುಷ್ಕರ ನಡೆಸುತ್ತಿದ್ದರೂ ತಲೆಕೆಡಿಸಿಕೊಳ್ಳದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಏಪ್ರಿಲ್ 8ರಿಂದ ನಾಲ್ಕು ದಿನಗಳ ಕಾಲ ಉಪ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ.

ಬಸವಕಲ್ಯಾಣದಲ್ಲಿ ಎರಡು ದಿನ ಹಾಗೂ ಮಸ್ಕಿಯಲ್ಲಿ ಎರಡು ದಿನ ಚುನಾವಣಾ ಪ್ರಚಾರ ನಡೆಸಿ ಮಂಗಳವಾರ ಮಧ್ಯಾಹ್ನ ಬೆಂಗಳೂರಿಗೆ ವಾಪಸ್‌ ಆಗಿ ಇಂದು ಮತ್ತೆ ಬೆಳಗಾವಿಗೆ ತೆರಳಿದ್ದಾರೆ. ಎರಡು ದಿನ ಬೆಳಗಾವಿಯಲ್ಲೇ ಇದ್ದು ಪ್ರಚಾರ ನಡೆಸಲಿದ್ದಾರೆ.

ಆರಂಭದಲ್ಲಿ ಪ್ರಚಾರಕ್ಕೆ ತೆರಳುವ ಮೊದಲು ಸಭೆ ನಡೆಸಿದ್ದ ಸಿಎಂ ಪ್ರಚಾರದಿಂದ ವಾಪಸ್ ಆದ ಬಳಿಕ ಮತ್ತೊಂದು ಸಭೆ ನಡೆಸಿ ಸಾರಿಗೆ ವ್ಯವಸ್ಥೆ ಕುರಿತು ಪರಿಶೀಲಿಸಿದ್ದಾರೆ. ಅದನ್ನು ಬಿಟ್ಟರೆ ಸಂಧಾನದಂತಹ ಯಾವುದೇ ಚಟುವಟಿಕೆಯನ್ನೂ ಸಿಎಂ ನಡೆಸಿಲ್ಲ. 6ನೇ ವೇತನ ನೀಡಲು ಸಾಧ್ಯವಿಲ್ಲ ಅನ್ನೋ ಸ್ಪಷ್ಟ ಸಂದೇಶವನ್ನು ರವಾನಿಸಿರುವ ಸಿಎಂ, ಮುಷ್ಕರ ನಿರತ ಸಿಬ್ಬಂದಿ ವಿರುದ್ಧ ಹಂತ ಹಂತವಾಗಿ ಕ್ರಮಕ್ಕೆ ಸೂಚಿಸಿದ್ದಾರೆ.

ಪರಿಣಾಮವಾಗಿ ವೇತನ ಪಾವತಿಗೆ ತಡೆ, ಅಂತರದ ನಿಗಮ ವರ್ಗಾವಣೆ ರದ್ದು, ತರಬೇತಿ ಸಿಬ್ಬಂದಿ ಅಮಾನತಿನಂತಹ ಅಸ್ತ್ರ ಪ್ರಯೋಗಿಸಿದ್ದಾರೆ. ಈವರೆಗೂ ಸಾಕಷ್ಟು ಬಾರಿ ಸಾರಿಗೆ ಸಿಬ್ಬಂದಿ ಮುಷ್ಕರ ನಡೆಸಿದ್ದಾಗ ಸರ್ಕಾರ ಸಂಧಾನಕ್ಕೆ ಮುಂದಾಗುತ್ತಿತ್ತು.

ಆದರೆ, ಈ ಬಾರಿ ಮಾತ್ರ ಸಂಧಾನದ ಬಾಗಿಲು ಮುಚ್ಚಿ ಹೋರಾಟವನ್ನೇ ಕಡೆಗಣಿಸಿ ಉಪ ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿದೆ ಸರ್ಕಾರ. ಉಪ ಚುನಾವಣೆ ನಂತರ ಸರ್ಕಾರ ಯಾವ ರೀತಿ ಕ್ರಮಕೈಗೊಳ್ಳಲಿದೆ, ಸಿಬ್ಬಂದಿ ಮುಷ್ಕರ ವಾಪಾಸ್ ಪಡೆಯುತ್ತಾರಾ, ಎಸ್ಮಾ ಜಾರಿಯಾಗುತ್ತಾ ಕಾದು ನೋಡಬೇಕಿದೆ.

Last Updated : Apr 14, 2021, 9:17 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.