ಆನೇಕಲ್: ಬಿಎಂಟಿಸಿ ಬಸ್ ಚಾಲಕನೋರ್ವ ತನ್ನ ಅಜಾಗರೂಕತೆಯಿಂದ ಬಸ್ ಅನ್ನು ರಸ್ತೆ ಬದಿಯ ಚರಂಡಿಗೆ ಇಳಿಸಿರುವ ಘಟನೆ ನಗರದಲ್ಲಿ ನಡೆದಿದೆ.
ಬನ್ನೇರುಘಟ್ಟ- ಜಿಗಣಿ ರಸ್ತೆಯ ನಿಸರ್ಗ ಬಡಾವಣೆ ಬಳಿ ಈ ಘಟನೆ ನಡೆದಿದೆ. ಪ್ರಯಾಣಿಕರು ಸುರಕ್ಷಿತವಾಗಿದ್ದು, ನಿಟ್ಟುಸಿರು ಬಿಟ್ಟಿದ್ದಾರೆ. ಜಿಗಣಿಯ ಬಿಎಂಟಿಸಿ ಡಿಪೋಗೆ ಸೇರಿದ ಬಸ್ ಇದಾಗಿದ್ದು, ಚಾಲಕನ ಅಜಾಗರೂಕತೆಯೇ ಬಸ್ ಚರಂಡಿಗೆ ಬೀಳಲು ಕಾರಣ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.