ETV Bharat / state

ಅಭಿಮಾನಿಗಳಿಂದ ಬಿಜೆಪಿ ಮುಖಂಡನ ಅದ್ಧೂರಿ ಹುಟ್ಟುಹಬ್ಬ.. 6 ಬಡ ಮಕ್ಕಳ ದತ್ತು ಸ್ವೀಕಾರ

author img

By

Published : Nov 27, 2022, 5:18 PM IST

ಬ್ಯಾಟರಾಯನಪುರದ ಬಿಜೆಪಿ ಮುಖಂಡ ಎ ರವಿ ಅವರ ಅಭಿಮಾನಿಗಳು ಯಲಹಂಕ ಏರ್​ಪೋರ್ಟ್​ ರಸ್ತೆ ಹುಣಸಮಾರನಹಳ್ಳಿ ಬಳಿ ಹುಟ್ಟುಹಬ್ಬದ ಕಾರ್ಯಕ್ರಮವನ್ನು ಅದ್ಧೂರಿಯಾಗಿ‌ ಆಚರಿಸಿದರು.

BJP leader A Ravi birthday celebration
ಬಿಜೆಪಿ ಮುಖಂಡ ಎ ರವಿ ಹುಟ್ಟುಹಬ್ಬ

ಯಲಹಂಕ: ಬ್ಯಾಟರಾಯನಪುರದ ಬಿಜೆಪಿ ಮುಖಂಡ ಎ ರವಿ ಅವರ ಹುಟ್ಟು‌ ಹಬ್ಬವನ್ನು ಅವರ ಅಭಿಮಾನಿಗಳು ಅದ್ಧೂರಿಯಾಗಿ‌ ಆಚರಿಸಿದರು. ಯಲಹಂಕ ಏರ್​ಪೋರ್ಟ್​ ರಸ್ತೆ ಹುಣಸಮಾರನಹಳ್ಳಿ ಬಳಿ ಎ ರವಿ‌ ಹುಟ್ಟುಹಬ್ಬದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸುಮಾರು 25 ಸಾವಿರ ಜನರಿಗೆ ಬಾಡೂಟವನ್ನು ಜನರಿಗೆ ಆಯೋಜನೆ‌ ಮಾಡಲಾಗಿತ್ತು.

ಚುನಾವಣೆ ಹತ್ತಿರ ಇರುವ ಹಿನ್ನೆಲೆ ಬ್ಯಾಟರಾಯನಪುರ ಕ್ಷೇತ್ರದಲ್ಲಿ ಈಗಾಗಲೇ ಮೂವರು ಆಂಕಾಕ್ಷಿಗಳ ನಡುವೆ ಟಿಕೆಟ್​ಗಾಗಿ ಪೈಪೋಟಿ ನಡೆಯುತ್ತಿದೆ. ಬಿಬಿಎಂಪಿ‌ ಸದಸ್ಯ ಮುನಿಂದ್ರ, ತಮ್ಮೇಶ್ ಗೌಡ, ಎ ರವಿ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಈ ಹಿನ್ನೆಲೆ ಹಿಂದೆ ಕಡಿಮೆ ಅಂತರದಲ್ಲಿ ಸೋತಿದ್ದ ರವಿ ಈ ಬಾರಿಯೂ ಟಿಕೆಟ್ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಹುಟ್ಟುಹಬ್ಬದ ಕಾರ್ಯಕ್ರಮಕ್ಕೆ ಸಚಿವ ಆರ್ ಅಶೋಕ್ ಹಾಗೂ ಡಾ ಕೆ ಸುಧಾಕರ್​ ಸೇರಿದಂತೆ ಹಲವು ಮಠಗಳ‌ ಸ್ವಾಮಿಗಳು ಭಾಗಿಯಾಗಿದ್ದರು.

ಅಭಿಮಾನಿಗಳಿಂದ ಅದ್ದೂರಿಯಾಗಿ‌ ಬಿಜೆಪಿ ಮುಖಂಡ ಎ ರವಿ ಹುಟ್ಟುಹಬ್ಬ ಆಚರಣೆ

ಎ ರವಿ ತಮ್ಮ ಹುಟ್ಟುಹಬ್ಬದ ಅಂಗವಾಗಿ 6 ಜನ ಬಡ ಮಕ್ಕಳನ್ನು ದತ್ತು‌ ಸ್ವೀಕರಿಸಿದರು. 6 ಮಕ್ಕಳ‌ ಶೈಕ್ಷಣಿಕ ವೆಚ್ಚವನ್ನು ಭರಿಸುವುದಾಗಿ ಅವರು ತಿಳಿಸಿದರು. ಈ ವೇಳೆ ಕ್ಷೇತ್ರದ 5 ಸಾವಿರ ಮಹಿಳೆಯರಿಗೆ ಸೀರೆ ಬಾಗಿನ‌ವನ್ನು ನೀಡಿದರು.

ಇದನ್ನೂ ಓದಿ:ಭಾರತಿ ವಿಷ್ಣುವರ್ಧನ್ 'ವಲ್ಮೀಕ' ಗೃಹ ಪ್ರವೇಶ ಸಮಾರಂಭ: ಸಿಎಂ ಬೊಮ್ಮಾಯಿ ಭಾಗಿ

ಯಲಹಂಕ: ಬ್ಯಾಟರಾಯನಪುರದ ಬಿಜೆಪಿ ಮುಖಂಡ ಎ ರವಿ ಅವರ ಹುಟ್ಟು‌ ಹಬ್ಬವನ್ನು ಅವರ ಅಭಿಮಾನಿಗಳು ಅದ್ಧೂರಿಯಾಗಿ‌ ಆಚರಿಸಿದರು. ಯಲಹಂಕ ಏರ್​ಪೋರ್ಟ್​ ರಸ್ತೆ ಹುಣಸಮಾರನಹಳ್ಳಿ ಬಳಿ ಎ ರವಿ‌ ಹುಟ್ಟುಹಬ್ಬದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸುಮಾರು 25 ಸಾವಿರ ಜನರಿಗೆ ಬಾಡೂಟವನ್ನು ಜನರಿಗೆ ಆಯೋಜನೆ‌ ಮಾಡಲಾಗಿತ್ತು.

ಚುನಾವಣೆ ಹತ್ತಿರ ಇರುವ ಹಿನ್ನೆಲೆ ಬ್ಯಾಟರಾಯನಪುರ ಕ್ಷೇತ್ರದಲ್ಲಿ ಈಗಾಗಲೇ ಮೂವರು ಆಂಕಾಕ್ಷಿಗಳ ನಡುವೆ ಟಿಕೆಟ್​ಗಾಗಿ ಪೈಪೋಟಿ ನಡೆಯುತ್ತಿದೆ. ಬಿಬಿಎಂಪಿ‌ ಸದಸ್ಯ ಮುನಿಂದ್ರ, ತಮ್ಮೇಶ್ ಗೌಡ, ಎ ರವಿ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಈ ಹಿನ್ನೆಲೆ ಹಿಂದೆ ಕಡಿಮೆ ಅಂತರದಲ್ಲಿ ಸೋತಿದ್ದ ರವಿ ಈ ಬಾರಿಯೂ ಟಿಕೆಟ್ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಹುಟ್ಟುಹಬ್ಬದ ಕಾರ್ಯಕ್ರಮಕ್ಕೆ ಸಚಿವ ಆರ್ ಅಶೋಕ್ ಹಾಗೂ ಡಾ ಕೆ ಸುಧಾಕರ್​ ಸೇರಿದಂತೆ ಹಲವು ಮಠಗಳ‌ ಸ್ವಾಮಿಗಳು ಭಾಗಿಯಾಗಿದ್ದರು.

ಅಭಿಮಾನಿಗಳಿಂದ ಅದ್ದೂರಿಯಾಗಿ‌ ಬಿಜೆಪಿ ಮುಖಂಡ ಎ ರವಿ ಹುಟ್ಟುಹಬ್ಬ ಆಚರಣೆ

ಎ ರವಿ ತಮ್ಮ ಹುಟ್ಟುಹಬ್ಬದ ಅಂಗವಾಗಿ 6 ಜನ ಬಡ ಮಕ್ಕಳನ್ನು ದತ್ತು‌ ಸ್ವೀಕರಿಸಿದರು. 6 ಮಕ್ಕಳ‌ ಶೈಕ್ಷಣಿಕ ವೆಚ್ಚವನ್ನು ಭರಿಸುವುದಾಗಿ ಅವರು ತಿಳಿಸಿದರು. ಈ ವೇಳೆ ಕ್ಷೇತ್ರದ 5 ಸಾವಿರ ಮಹಿಳೆಯರಿಗೆ ಸೀರೆ ಬಾಗಿನ‌ವನ್ನು ನೀಡಿದರು.

ಇದನ್ನೂ ಓದಿ:ಭಾರತಿ ವಿಷ್ಣುವರ್ಧನ್ 'ವಲ್ಮೀಕ' ಗೃಹ ಪ್ರವೇಶ ಸಮಾರಂಭ: ಸಿಎಂ ಬೊಮ್ಮಾಯಿ ಭಾಗಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.