ETV Bharat / state

ಲಾಕ್​ಡೌನ್​ ಜಾರಿ ಹಿನ್ನೆಲೆ: ಪೊಲೀಸರಿಗೆ ಸಪ್ತ ಸೂತ್ರ ಹೇಳಿದ ಪೊಲೀಸ್​ ಆಯುಕ್ತ

author img

By

Published : Jul 15, 2020, 7:43 AM IST

ಸಿಲಿಕಾನ್​ ಸಿಟಿಯಲ್ಲಿ ಇಂದಿನಿಂದ ಲಾಕ್​ಡೌನ್ ಜಾರಿಯಾಗಿದೆ. ಪೊಲೀಸರು ಯಾವ ರೀತಿ ಕ್ರಮ ಕೈಗೊಳ್ಳಬೇಕು ಎಂಬುದರ ಕುರಿತು ನಗರ ಪೊಲೀಸ್ ಆಯುಕ್ತ ಭಾಸ್ಕರ್​ ರಾವ್​ ಸೂಚಿಸಿದ್ದಾರೆ.

ಪೊಲೀಸರಿಗೆ ಸಪ್ತ ಸೂತ್ರ ಹೇಳಿದ ಪೊಲೀಸ್​ ಆಯುಕ್ತ
ಪೊಲೀಸರಿಗೆ ಸಪ್ತ ಸೂತ್ರ ಹೇಳಿದ ಪೊಲೀಸ್​ ಆಯುಕ್ತ

ಬೆಂಗಳೂರು: ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಗಳಲ್ಲಿ ಒಂದು ವಾರಗಳ ಕಾಲ ಲಾಕ್​ಡೌನ್ ಜಾರಿಯಾಗಿದೆ. ಈ ಹಿನ್ನೆಲೆಯಲ್ಲಿ ನಗರ ಪೊಲೀಸ್ ಆಯುಕ್ತರು ತಮ್ಮ ಸಿಬ್ಬಂದಿಗೆ ಕೆಲ ನಿಯಮಗಳನ್ನ ವಾಕಿಟಾಕಿ ಮೂಲಕ‌ ತಿಳಿಸಿದ್ದಾರೆ. ಇನ್ನು ಲಾಕ್​​ಡೌನ್​ ಮುಂದಿನ 22ನೇ ತಾರೀಕು ಮುಂಜಾನೆ 5ಗಂಟೆಯವರೆಗೆ ಇರಲಿದೆ. ಎಲ್ಲ‌ ಸಿಬ್ಬಂದಿಗೆ ಲಾಕ್​ಡೌನ್ ಕೆಲಸದ ಬಗ್ಗೆ ಅರಿವು ಇದೆ. ಆದರೂ ಮತ್ತೆ ಈ ಕುರಿತು ಗಮನ ಕೊಟ್ಟು ಕಾರ್ಯ ನಿರ್ವಹಿಸಬೇಕು ಎಂದು ತಿಳಿಸಿದ್ದಾರೆ.

ಆಯುಕ್ತರು ಸೂಚಿಸಿರುವ ಏಳು ನಿಯಮಗಳು:

  • ಲಾಕ್​ಡೌನ್ ಸಮಯದಲ್ಲಿ ಸಿಬ್ಬಂದಿ ಕೊರತೆ ಇದೆ.‌ ಆದರೆ ಸದ್ಯ ಕೆಲವೊಂದು ಬ್ಯುಸಿನೆಸ್ ಓಪನ್ ಇರುತ್ತದೆ. ಹೀಗಾಗಿ ಸಿಬ್ಬಂದಿ ಸೂಕ್ಷ್ಮವಾಗಿ ನೋಡಿ ಜನರನ್ನ ಬಿಡಬೇಕು.
  • ಏಳು ದಿನ ಮಾತ್ರ ಲಾಕ್​ಡೌನ್ ಇರುವ ಕಾರಣ ಐಡಿ ಆಧಾರದ ಮೇಲೆ ಜನರನ್ನ ಬಿಡಬೇಕು. ಸಿಬ್ಬಂದಿ ಅಲರ್ಟ್ ಆಗಿರಬೇಕೆಂದು ಸೂಚಿಸಿದ್ದಾರೆ.
  • ಸರ್ಕಾರ 5ಗಂಟೆಯಿಂದ 12ಗಂಟೆಯವರೆಗೆ ಅಗತ್ಯ ಸೇವೆಗಳಿಗೆ ವಿನಾಯಿತಿ ನೀಡಿದೆ. 12ಗಂಟೆಯ ನಂತರರ‌ ಮೆಡಿಕಲ್ ಶಾಪ್​ ಓಪನ್ ಇರುತ್ತವೆ. 12 ಗಂಟೆ ಮೇಲೆ‌ ಇದರ ಬಗ್ಗೆ ನಿಗಾ ಇಟ್ಟು ಸಿಬ್ಬಂದಿ ಅವಾಚ್ಯ ಶಬ್ದ ಬಳಕೆ ಮಾಡದೇ‌ ಅಂಗಡಿ‌ ಮುಂಗಟ್ಟು ಬಂದ್​ ಮಾಡಿಸಬೇಕು.
  • ಮುಂಜಾನೆ ನ್ಯೂಸ್ ಪೇಪರ್, ಮೀಡಿಯಾದವರ ಓಡಾಟ ಇರುತ್ತದೆ. ಈ ವೇಳೆ, ಐಡಿ ತೋರಿಸಿದರೆ ಸಾಕು. ಹಾಗೆ ಕಾರ್ಡ್ ಇಲ್ಲದೇ‌ ಇರುವ ಮಾಂಸ ಮಾರಾಟ, ತರಕಾರಿ ಮಾರಾಟ ಮಾಡುವವರನ್ನ ಗಮನಿಸಿ ಬಿಡಬೇಕು
  • ವಿನಾಕಾರಣ ತಿರುಗುವವರ ಮೇಲೆ ನಿಗಾ‌ ಇಟ್ಟು ಕ್ರಮ ಕೈಗೊಳ್ಳಿ.
  • ರಸ್ತೆಯ ಬಳಿ ಬ್ಯಾರಿಕೇಡ್ ಹಾಕಿದ್ದು, ಅಲ್ಲಿ ಇರುವ ಹೆಡ್​ ಕಾನ್ಸ್​ಟೇೆಬಲ್ ಅವರೇ ಕಮಿಷನರ್. ಎಲ್ಲವನ್ನ ಸೂಕ್ಷವಾಗಿ ಪರಿಗಣಿಸಬೇಕು. ಕೆಳ‌ಹಂತದ ಸಿಬ್ಬಂದಿ ಮೇಲೆ ಬಹಳ ನಂಬಿಕೆ‌ ಇದೆ ಎಂದಿದ್ದಾರೆ.
  • ಕೊರೊನಾ ಸೋಂಕು ಸಿಬ್ಬಂದಿಗೆ ಬಂದಿರುವ ಕಾರಣ ಸಿಬ್ಬಂದಿ ಕೊರತೆ ಇದೆ. ಹೀಗಾಗಿ‌ ಮೊದಲನೇ ಬಾರಿಗೆ ಹಲವು ಸ್ವಯಂ ಸೇವಕರನ್ನು ಆನ್​ಲೈನ್ ಮೂಲಕ ನೇಮಕ‌ ಮಾಡಿದ್ದು,‌ ಇವರು ಕೆಲಸ ‌ಮಾಡುತ್ತಾರೆ ಎಂದು ತಿಳಿಸಿದ್ದಾರೆೆ.
    ಪೊಲೀಸರಿಗೆ ಸಪ್ತ ಸೂತ್ರ ಹೇಳಿದ ಪೊಲೀಸ್​ ಆಯುಕ್ತ

ನೈಟ್ ರೌಂಡ್ಸ್, ಠಾಣೆಗೆ ಬರುವ ಜನರ ಕಷ್ಟ ವಿಚಾರಣೆ, ಬ್ಯಾರಿಕೇಡ್ ಬಳಿ ಬಂದೋಬಸ್ತ್​, ಪೊಲೀಸ್ ಠಾಣೆ ಬರವಣಿಗೆ ಸ್ಟೇಟ್ಮೆಂಟ್ ,ಬಂದೋಬಸ್ತ್​ಗೆ ತೆರಳುವಾಗ ಕಡ್ಡಾಯ ಮಾಸ್ಕ್ ಧಾರಣೆ​ ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎಂದು ಪೊಲೀಸ್​ ಸಿಬ್ಬಂದಿಗಳಿಗೆ ಹಾಗೂ ಸ್ವಯಂ ಸೇವಕರಿಗೆ ಆಯುಕ್ತರು ಸೂಚಿಸಿದ್ದಾರೆ.

ಬೆಂಗಳೂರು: ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಗಳಲ್ಲಿ ಒಂದು ವಾರಗಳ ಕಾಲ ಲಾಕ್​ಡೌನ್ ಜಾರಿಯಾಗಿದೆ. ಈ ಹಿನ್ನೆಲೆಯಲ್ಲಿ ನಗರ ಪೊಲೀಸ್ ಆಯುಕ್ತರು ತಮ್ಮ ಸಿಬ್ಬಂದಿಗೆ ಕೆಲ ನಿಯಮಗಳನ್ನ ವಾಕಿಟಾಕಿ ಮೂಲಕ‌ ತಿಳಿಸಿದ್ದಾರೆ. ಇನ್ನು ಲಾಕ್​​ಡೌನ್​ ಮುಂದಿನ 22ನೇ ತಾರೀಕು ಮುಂಜಾನೆ 5ಗಂಟೆಯವರೆಗೆ ಇರಲಿದೆ. ಎಲ್ಲ‌ ಸಿಬ್ಬಂದಿಗೆ ಲಾಕ್​ಡೌನ್ ಕೆಲಸದ ಬಗ್ಗೆ ಅರಿವು ಇದೆ. ಆದರೂ ಮತ್ತೆ ಈ ಕುರಿತು ಗಮನ ಕೊಟ್ಟು ಕಾರ್ಯ ನಿರ್ವಹಿಸಬೇಕು ಎಂದು ತಿಳಿಸಿದ್ದಾರೆ.

ಆಯುಕ್ತರು ಸೂಚಿಸಿರುವ ಏಳು ನಿಯಮಗಳು:

  • ಲಾಕ್​ಡೌನ್ ಸಮಯದಲ್ಲಿ ಸಿಬ್ಬಂದಿ ಕೊರತೆ ಇದೆ.‌ ಆದರೆ ಸದ್ಯ ಕೆಲವೊಂದು ಬ್ಯುಸಿನೆಸ್ ಓಪನ್ ಇರುತ್ತದೆ. ಹೀಗಾಗಿ ಸಿಬ್ಬಂದಿ ಸೂಕ್ಷ್ಮವಾಗಿ ನೋಡಿ ಜನರನ್ನ ಬಿಡಬೇಕು.
  • ಏಳು ದಿನ ಮಾತ್ರ ಲಾಕ್​ಡೌನ್ ಇರುವ ಕಾರಣ ಐಡಿ ಆಧಾರದ ಮೇಲೆ ಜನರನ್ನ ಬಿಡಬೇಕು. ಸಿಬ್ಬಂದಿ ಅಲರ್ಟ್ ಆಗಿರಬೇಕೆಂದು ಸೂಚಿಸಿದ್ದಾರೆ.
  • ಸರ್ಕಾರ 5ಗಂಟೆಯಿಂದ 12ಗಂಟೆಯವರೆಗೆ ಅಗತ್ಯ ಸೇವೆಗಳಿಗೆ ವಿನಾಯಿತಿ ನೀಡಿದೆ. 12ಗಂಟೆಯ ನಂತರರ‌ ಮೆಡಿಕಲ್ ಶಾಪ್​ ಓಪನ್ ಇರುತ್ತವೆ. 12 ಗಂಟೆ ಮೇಲೆ‌ ಇದರ ಬಗ್ಗೆ ನಿಗಾ ಇಟ್ಟು ಸಿಬ್ಬಂದಿ ಅವಾಚ್ಯ ಶಬ್ದ ಬಳಕೆ ಮಾಡದೇ‌ ಅಂಗಡಿ‌ ಮುಂಗಟ್ಟು ಬಂದ್​ ಮಾಡಿಸಬೇಕು.
  • ಮುಂಜಾನೆ ನ್ಯೂಸ್ ಪೇಪರ್, ಮೀಡಿಯಾದವರ ಓಡಾಟ ಇರುತ್ತದೆ. ಈ ವೇಳೆ, ಐಡಿ ತೋರಿಸಿದರೆ ಸಾಕು. ಹಾಗೆ ಕಾರ್ಡ್ ಇಲ್ಲದೇ‌ ಇರುವ ಮಾಂಸ ಮಾರಾಟ, ತರಕಾರಿ ಮಾರಾಟ ಮಾಡುವವರನ್ನ ಗಮನಿಸಿ ಬಿಡಬೇಕು
  • ವಿನಾಕಾರಣ ತಿರುಗುವವರ ಮೇಲೆ ನಿಗಾ‌ ಇಟ್ಟು ಕ್ರಮ ಕೈಗೊಳ್ಳಿ.
  • ರಸ್ತೆಯ ಬಳಿ ಬ್ಯಾರಿಕೇಡ್ ಹಾಕಿದ್ದು, ಅಲ್ಲಿ ಇರುವ ಹೆಡ್​ ಕಾನ್ಸ್​ಟೇೆಬಲ್ ಅವರೇ ಕಮಿಷನರ್. ಎಲ್ಲವನ್ನ ಸೂಕ್ಷವಾಗಿ ಪರಿಗಣಿಸಬೇಕು. ಕೆಳ‌ಹಂತದ ಸಿಬ್ಬಂದಿ ಮೇಲೆ ಬಹಳ ನಂಬಿಕೆ‌ ಇದೆ ಎಂದಿದ್ದಾರೆ.
  • ಕೊರೊನಾ ಸೋಂಕು ಸಿಬ್ಬಂದಿಗೆ ಬಂದಿರುವ ಕಾರಣ ಸಿಬ್ಬಂದಿ ಕೊರತೆ ಇದೆ. ಹೀಗಾಗಿ‌ ಮೊದಲನೇ ಬಾರಿಗೆ ಹಲವು ಸ್ವಯಂ ಸೇವಕರನ್ನು ಆನ್​ಲೈನ್ ಮೂಲಕ ನೇಮಕ‌ ಮಾಡಿದ್ದು,‌ ಇವರು ಕೆಲಸ ‌ಮಾಡುತ್ತಾರೆ ಎಂದು ತಿಳಿಸಿದ್ದಾರೆೆ.
    ಪೊಲೀಸರಿಗೆ ಸಪ್ತ ಸೂತ್ರ ಹೇಳಿದ ಪೊಲೀಸ್​ ಆಯುಕ್ತ

ನೈಟ್ ರೌಂಡ್ಸ್, ಠಾಣೆಗೆ ಬರುವ ಜನರ ಕಷ್ಟ ವಿಚಾರಣೆ, ಬ್ಯಾರಿಕೇಡ್ ಬಳಿ ಬಂದೋಬಸ್ತ್​, ಪೊಲೀಸ್ ಠಾಣೆ ಬರವಣಿಗೆ ಸ್ಟೇಟ್ಮೆಂಟ್ ,ಬಂದೋಬಸ್ತ್​ಗೆ ತೆರಳುವಾಗ ಕಡ್ಡಾಯ ಮಾಸ್ಕ್ ಧಾರಣೆ​ ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎಂದು ಪೊಲೀಸ್​ ಸಿಬ್ಬಂದಿಗಳಿಗೆ ಹಾಗೂ ಸ್ವಯಂ ಸೇವಕರಿಗೆ ಆಯುಕ್ತರು ಸೂಚಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.