ETV Bharat / state

‘ಕಾಂಗ್ರೆಸ್​ನವರು ಏನು ತೊಳೆದ ಮುತ್ತಾ?‘: ಸುರ್ಜೆವಾಲಾ ಹೇಳಿಕೆಗೆ ಬೊಮ್ಮಾಯಿ ಗರಂ

ಬಿಜೆಪಿ ವಿರುದ್ಧ ಸುರ್ಜೆವಾಲಾ ನೀಡಿದ್ದ ಹೇಳಿಕೆ ವಿರುದ್ಧ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದ್ದಾರೆ.

author img

By

Published : Aug 15, 2023, 10:38 AM IST

Updated : Aug 15, 2023, 10:58 AM IST

ಮಾಜಿ ಮುಖ್ಯಮಂತ್ರಿ ಬಸವರಾಜ​ ಬೊಮ್ಮಾಯಿ
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
77ನೇ ಸ್ವಾತಂತ್ರ್ಯ ದಿನಾಚರಣೆ ಬಳಿಕ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದರು

ಬೆಂಗಳೂರು: "ಬಿಜೆಪಿಗೆ ಮತ ಹಾಕಿದವರು ರಾಕ್ಷಸರು" ಎನ್ನುವ ಕಾಂಗ್ರೆಸ್ ರಾಜ್ಯ ಉಸ್ತುವಾರಿ ಸುರ್ಜೆವಾಲ ಹೇಳಿಕೆ ಖಂಡನೀಯವಾಗಿದ್ದು, ಇದು ಮತದಾರರಿಗೆ ಮಾಡಿದ ಅವಮಾನವಾಗಿದೆ. 'ಬಿಜೆಪಿ ವಿರುದ್ಧ ಮಾತನಾಡುವ ಕಾಂಗ್ರೆಸ್​ನವರು ಏನು ತೊಳೆದ ಮುತ್ತಾ? ಎಷ್ಟು ಜನ ಕಾಂಗ್ರೆಸ್ ನಾಯಕರು ಜೈಲಿಗೆ ಹೋಗಿದ್ದರು ಎಂಬುದೂ ಗೊತ್ತು' ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಕಾಂಗ್ರೆಸ್​ಗೆ ತಿರುಗೇಟು ನೀಡಿದ್ದಾರೆ.

ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು, ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ರಾಷ್ಟ್ರಧ್ವಜಾರೋಹಣ ನೆರವೇರಿಸಿದರು. ಬಳಿಕ ಮಾತನಾಡಿದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, 'ಬಿಜೆಪಿಗೆ ಮತಹಾಕಿದವರು ರಾಕ್ಷಸರು ಎನ್ನುವ ಸುರ್ಜೆವಾಲಾ ಅವರ ಹೇಳಿಕೆ ಅತ್ಯಂತ ಖಂಡನೀಯ. ಅವರ ಮಾತು ಭಾರತದ ನಾಗರಿಕರಿಗೆ ಮಾಡಿದ ಅವಮಾನ. ಕಾಂಗ್ರೆಸ್​ನವರು ಏನು ತೊಳೆದ ಮುತ್ತಾ ? ಎಷ್ಟು ಜನ ಕಾಂಗ್ರೆಸ್ ನಾಯಕರು ಜೈಲಿಗೆ ಹೋಗಿದ್ದರು ಎಂಬುದೂ ಗೊತ್ತು. ಇದು ಅಕ್ಷಮ್ಯ, ಅಮಾನವೀಯ ಇದನ್ನು ಖಂಡಿಸುತ್ತೇವೆ ಎಂದರು.

ಎನ್​​​ಇಪಿ ರದ್ದು ವಿಚಾರ: ಸಿದ್ದರಾಮಯ್ಯ ಸರ್ಕಾರ ಎನ್​ ಇ ಪಿ ರದ್ದು ಮಾಡುತ್ತೇವೆ ಎನ್ನುವುದು ಆಶ್ಚರ್ಯ ತಂದಿದೆ. 2013 ರಲ್ಲಿಯೇ ಸಿದ್ದರಾಮಯ್ಯ ಅವರ ಸರ್ಕಾರ ಒಪ್ಪಿಗೆ ಕೊಟ್ಟಿದೆ. ಅದರ ಅಧ್ಯಕ್ಷರು ಕಸ್ತೂರಿ ರಂಗನ್ ಅವರೇ ಇಡೀ ದೇಶದ ಶಿಕ್ಷಣ ನೀತಿ ಜಾರಿಗೆ ಮಾಡಿದ್ದಾರೆ. ಕೇವಲ ರಾಜಕಾರಣ ಮಾಡುವ ಉದ್ದೇಶದಿಂದ ಎನ್ ಇ ಪಿ ವಿರೋಧ ಮಾಡುತ್ತಿದ್ದಾರೆ. ಇದರಿಂದ ಗ್ರಾಮೀಣ ಪ್ರದೇಶದ ಮಕ್ಕಳಿಗೆ ದೊಡ್ಡ ಹೊಡೆತ ನೀಡಲಿದೆ. ಸಿದ್ದರಾಮಯ್ಯ ಕಾಮಾಲೆ ಕಣ್ಣಿನಿಂದ ನೋಡದೆ ಮತ್ತೊಮ್ಮೆ ಪರಾಮರ್ಶೆ ಮಾಡಬೇಕು. ಇಲ್ಲದಿದ್ದರೆ ಮಕ್ಕಳು ಹಾಗೂ ಪಾಲಕರೊಂದಿಗೆ ದೊಡ್ಡ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಹಾಗೆ, ಕಮಿಷನ್​ ಆರೋಪದ ತನಿಖೆ ಕುರಿತು ಪ್ರತಿಕ್ರಿಯಿಸಿದ ಬೊಮ್ಮಾಯಿ, ರಾಜ್ಯದಲ್ಲಿ ರಾಜಕಿಯ ಪ್ರೇರಿತ ತನಿಖೆ ನಡೆಯುತ್ತಿವೆ. ಅವರಿಗೆ ಯಾವುದೇ ದಾಖಲೆ ಸಿಗದೇ ಇರುವುದರಿಂದ ಅನಗತ್ಯ ಆರೋಪ ಮಾಡಲು ಈ ತನಿಖೆ ನಡೆಸಲಾಗುತ್ತಿದೆ ಎಂದು ಕಾಂಗ್ರೆಸ್ ಸರ್ಕಾರದ ನಡೆಯನ್ನು ಬೊಮ್ಮಾಯಿ ಟೀಕಿಸಿದರು.

ಮುಂದುವರೆದು, ನೆಚ್ಚಿನ ಪ್ರಧಾನ ಮಂತ್ರಿ ಹೇಳಿದಂತೆ ಅಮೃತ ಕಾಲ ಆರಂಭವಾಗಿದೆ. ಮುಂದಿನ 25 ವರ್ಷ ದೇಶದ ಅಭಿವೃದ್ಧಿಯ ಸಂಕಲ್ಪದೊಂದಿಗೆ ನಾವು ಕಾರ್ಯ ಪ್ರವೃತ್ತರಾಗಬೆಕಿದೆ. ನಮ್ಮ ಹೊರಾಟಗಾರರ ತ್ಯಾಗ ಬಲಿದಾನ, ಸಂವಿಧಾನದ ಆದರ್ಶಗಳನ್ನು ಇಟ್ಟುಕೊಂಡು ದೇಶಕಟ್ಟಲು ಮುನ್ನುಡಿ ಇಡೋಣ ಎಂದರು.

ಇದನ್ನೂ ಓದಿ: ನವರಂಗಿ ನಾರಾಯಣ, ಕಳ್ಳರ ರಕ್ಷಣೆಯಲ್ಲಿ ಡಾಕ್ಟರೇಟ್: ಅಶ್ವತ್ಥನಾರಾಯಣ್​ಗೆ ಡಿಸಿಎಂ ತಿರುಗೇಟು

77ನೇ ಸ್ವಾತಂತ್ರ್ಯ ದಿನಾಚರಣೆ ಬಳಿಕ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದರು

ಬೆಂಗಳೂರು: "ಬಿಜೆಪಿಗೆ ಮತ ಹಾಕಿದವರು ರಾಕ್ಷಸರು" ಎನ್ನುವ ಕಾಂಗ್ರೆಸ್ ರಾಜ್ಯ ಉಸ್ತುವಾರಿ ಸುರ್ಜೆವಾಲ ಹೇಳಿಕೆ ಖಂಡನೀಯವಾಗಿದ್ದು, ಇದು ಮತದಾರರಿಗೆ ಮಾಡಿದ ಅವಮಾನವಾಗಿದೆ. 'ಬಿಜೆಪಿ ವಿರುದ್ಧ ಮಾತನಾಡುವ ಕಾಂಗ್ರೆಸ್​ನವರು ಏನು ತೊಳೆದ ಮುತ್ತಾ? ಎಷ್ಟು ಜನ ಕಾಂಗ್ರೆಸ್ ನಾಯಕರು ಜೈಲಿಗೆ ಹೋಗಿದ್ದರು ಎಂಬುದೂ ಗೊತ್ತು' ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಕಾಂಗ್ರೆಸ್​ಗೆ ತಿರುಗೇಟು ನೀಡಿದ್ದಾರೆ.

ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು, ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ರಾಷ್ಟ್ರಧ್ವಜಾರೋಹಣ ನೆರವೇರಿಸಿದರು. ಬಳಿಕ ಮಾತನಾಡಿದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, 'ಬಿಜೆಪಿಗೆ ಮತಹಾಕಿದವರು ರಾಕ್ಷಸರು ಎನ್ನುವ ಸುರ್ಜೆವಾಲಾ ಅವರ ಹೇಳಿಕೆ ಅತ್ಯಂತ ಖಂಡನೀಯ. ಅವರ ಮಾತು ಭಾರತದ ನಾಗರಿಕರಿಗೆ ಮಾಡಿದ ಅವಮಾನ. ಕಾಂಗ್ರೆಸ್​ನವರು ಏನು ತೊಳೆದ ಮುತ್ತಾ ? ಎಷ್ಟು ಜನ ಕಾಂಗ್ರೆಸ್ ನಾಯಕರು ಜೈಲಿಗೆ ಹೋಗಿದ್ದರು ಎಂಬುದೂ ಗೊತ್ತು. ಇದು ಅಕ್ಷಮ್ಯ, ಅಮಾನವೀಯ ಇದನ್ನು ಖಂಡಿಸುತ್ತೇವೆ ಎಂದರು.

ಎನ್​​​ಇಪಿ ರದ್ದು ವಿಚಾರ: ಸಿದ್ದರಾಮಯ್ಯ ಸರ್ಕಾರ ಎನ್​ ಇ ಪಿ ರದ್ದು ಮಾಡುತ್ತೇವೆ ಎನ್ನುವುದು ಆಶ್ಚರ್ಯ ತಂದಿದೆ. 2013 ರಲ್ಲಿಯೇ ಸಿದ್ದರಾಮಯ್ಯ ಅವರ ಸರ್ಕಾರ ಒಪ್ಪಿಗೆ ಕೊಟ್ಟಿದೆ. ಅದರ ಅಧ್ಯಕ್ಷರು ಕಸ್ತೂರಿ ರಂಗನ್ ಅವರೇ ಇಡೀ ದೇಶದ ಶಿಕ್ಷಣ ನೀತಿ ಜಾರಿಗೆ ಮಾಡಿದ್ದಾರೆ. ಕೇವಲ ರಾಜಕಾರಣ ಮಾಡುವ ಉದ್ದೇಶದಿಂದ ಎನ್ ಇ ಪಿ ವಿರೋಧ ಮಾಡುತ್ತಿದ್ದಾರೆ. ಇದರಿಂದ ಗ್ರಾಮೀಣ ಪ್ರದೇಶದ ಮಕ್ಕಳಿಗೆ ದೊಡ್ಡ ಹೊಡೆತ ನೀಡಲಿದೆ. ಸಿದ್ದರಾಮಯ್ಯ ಕಾಮಾಲೆ ಕಣ್ಣಿನಿಂದ ನೋಡದೆ ಮತ್ತೊಮ್ಮೆ ಪರಾಮರ್ಶೆ ಮಾಡಬೇಕು. ಇಲ್ಲದಿದ್ದರೆ ಮಕ್ಕಳು ಹಾಗೂ ಪಾಲಕರೊಂದಿಗೆ ದೊಡ್ಡ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಹಾಗೆ, ಕಮಿಷನ್​ ಆರೋಪದ ತನಿಖೆ ಕುರಿತು ಪ್ರತಿಕ್ರಿಯಿಸಿದ ಬೊಮ್ಮಾಯಿ, ರಾಜ್ಯದಲ್ಲಿ ರಾಜಕಿಯ ಪ್ರೇರಿತ ತನಿಖೆ ನಡೆಯುತ್ತಿವೆ. ಅವರಿಗೆ ಯಾವುದೇ ದಾಖಲೆ ಸಿಗದೇ ಇರುವುದರಿಂದ ಅನಗತ್ಯ ಆರೋಪ ಮಾಡಲು ಈ ತನಿಖೆ ನಡೆಸಲಾಗುತ್ತಿದೆ ಎಂದು ಕಾಂಗ್ರೆಸ್ ಸರ್ಕಾರದ ನಡೆಯನ್ನು ಬೊಮ್ಮಾಯಿ ಟೀಕಿಸಿದರು.

ಮುಂದುವರೆದು, ನೆಚ್ಚಿನ ಪ್ರಧಾನ ಮಂತ್ರಿ ಹೇಳಿದಂತೆ ಅಮೃತ ಕಾಲ ಆರಂಭವಾಗಿದೆ. ಮುಂದಿನ 25 ವರ್ಷ ದೇಶದ ಅಭಿವೃದ್ಧಿಯ ಸಂಕಲ್ಪದೊಂದಿಗೆ ನಾವು ಕಾರ್ಯ ಪ್ರವೃತ್ತರಾಗಬೆಕಿದೆ. ನಮ್ಮ ಹೊರಾಟಗಾರರ ತ್ಯಾಗ ಬಲಿದಾನ, ಸಂವಿಧಾನದ ಆದರ್ಶಗಳನ್ನು ಇಟ್ಟುಕೊಂಡು ದೇಶಕಟ್ಟಲು ಮುನ್ನುಡಿ ಇಡೋಣ ಎಂದರು.

ಇದನ್ನೂ ಓದಿ: ನವರಂಗಿ ನಾರಾಯಣ, ಕಳ್ಳರ ರಕ್ಷಣೆಯಲ್ಲಿ ಡಾಕ್ಟರೇಟ್: ಅಶ್ವತ್ಥನಾರಾಯಣ್​ಗೆ ಡಿಸಿಎಂ ತಿರುಗೇಟು

Last Updated : Aug 15, 2023, 10:58 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.