ETV Bharat / state

ಕೆಪಿಎಲ್ ಬೆಟ್ಟಿಂಗ್‌ ಪ್ರಕರಣ: ಸಿಸಿಬಿ ವಿಚಾರಣೆಗೆ ಹಾಜರಾದ ಬಳ್ಳಾರಿ‌ ಟಸ್ಕರ್ಸ್ ‌ಮಾಲೀಕ

author img

By

Published : Dec 18, 2019, 7:50 PM IST

ಕರ್ನಾಟಕ ಪ್ರೀಮಿಯರ್ ಲೀಗ್​ ಬೆಟ್ಟಿಂಗ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಬಳ್ಳಾರಿ ಟಸ್ಕರ್ಸ್ ತಂಡದ ಮಾಲೀಕ ಅರವಿಂದ್ ರೆಡ್ಡಿಯನ್ನು ಸಿಸಿಬಿ ಪೊಲೀಸರು ವಿಚಾರಣೆ ನಡೆಸಿದರು.

Aravind reddy attend CCB investigation, ಸಿಸಿಬಿ ವಿಚಾರಣೆಗೆ ಹಾಜರಾದ ಅರವಿಂದ್ ರೆಡ್ಡಿ
ಅರವಿಂದ್ ರೆಡ್ಡಿ

ಬೆಂಗಳೂರು: ಕರ್ನಾಟಕ ಪ್ರೀಮಿಯರ್ ಲೀಗ್​ ಬೆಟ್ಟಿಂಗ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಬಳ್ಳಾರಿ ಟಸ್ಕರ್ಸ್ ತಂಡದ ಮಾಲೀಕ ಅರವಿಂದ್ ರೆಡ್ಡಿಯನ್ನು ಸಿಸಿಬಿ ಪೊಲೀಸರು ವಿಚಾರಣೆ ನಡೆಸಿದರು.

ಕೆಪಿಎಲ್ ಹಗರಣ: ಬೆಳಗಾವಿ ಪ್ಯಾಂಥರ್ಸ್ ತಂಡದ ಕೋಚ್ ಬಂಧನ

ಕೆಪಿಎಲ್ ಬೆಟ್ಟಿಂಗ್​ನ ಪ್ರಮುಖ‌ ಆರೋಪಿ ಬೆಳಗಾವಿ ಪ್ಯಾಂರ್ಥಸ್ ತಂಡದ ಮಾಲೀಕ‌ ಅಶ್ಪಕ್ ಅಲಿ‌ ನೀಡಿದ ಮಾಹಿತಿ‌ ಆಧಾರದ‌ ಮೇಲೆ ಅರವಿಂದ್ ರೆಡ್ಡಿಗಾಗಿ ಸಿಸಿಬಿ‌ ಪೊಲೀಸರು ಬಲೆ ಬೀಸಿದ್ದರು. ಇದಕ್ಕೂ ಮುನ್ನ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದರು. ಕೆಪಿಎಲ್ ಬೆಟ್ಟಿಂಗ್‌ ಪ್ರಕರಣದಲ್ಲಿ ತಮ್ಮ ಹೆಸರು ಕೇಳಿಬರುತ್ತಿದ್ದಂತೆ ಅರವಿಂದ್​ ರೆಡ್ಡಿ ದುಬೈಗೆ ಹಾರಿದ್ದರು.‌ ಈ ಸಂಬಂಧ ಸಿಸಿಬಿ ಪೊಲೀಸರು ಲುಕ್‌ಔಟ್ ನೋಟಿಸ್‌​ ಜಾರಿ ಮಾಡಿದ್ದರು. ಇದರನ್ವಯ ಇಂದು ಬಳ್ಳಾರಿ ಟಸ್ಕರ್ಸ್ ತಂಡದ ಮಾಲೀಕ ಅರವಿಂದ್ ರೆಡ್ಡಿ ಸಿಸಿಬಿ ಪೊಲೀಸರ ವಿಚಾರಣೆಗೆ ಹಾಜರಾದರು.

ಬೆಂಗಳೂರು: ಕರ್ನಾಟಕ ಪ್ರೀಮಿಯರ್ ಲೀಗ್​ ಬೆಟ್ಟಿಂಗ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಬಳ್ಳಾರಿ ಟಸ್ಕರ್ಸ್ ತಂಡದ ಮಾಲೀಕ ಅರವಿಂದ್ ರೆಡ್ಡಿಯನ್ನು ಸಿಸಿಬಿ ಪೊಲೀಸರು ವಿಚಾರಣೆ ನಡೆಸಿದರು.

ಕೆಪಿಎಲ್ ಹಗರಣ: ಬೆಳಗಾವಿ ಪ್ಯಾಂಥರ್ಸ್ ತಂಡದ ಕೋಚ್ ಬಂಧನ

ಕೆಪಿಎಲ್ ಬೆಟ್ಟಿಂಗ್​ನ ಪ್ರಮುಖ‌ ಆರೋಪಿ ಬೆಳಗಾವಿ ಪ್ಯಾಂರ್ಥಸ್ ತಂಡದ ಮಾಲೀಕ‌ ಅಶ್ಪಕ್ ಅಲಿ‌ ನೀಡಿದ ಮಾಹಿತಿ‌ ಆಧಾರದ‌ ಮೇಲೆ ಅರವಿಂದ್ ರೆಡ್ಡಿಗಾಗಿ ಸಿಸಿಬಿ‌ ಪೊಲೀಸರು ಬಲೆ ಬೀಸಿದ್ದರು. ಇದಕ್ಕೂ ಮುನ್ನ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದರು. ಕೆಪಿಎಲ್ ಬೆಟ್ಟಿಂಗ್‌ ಪ್ರಕರಣದಲ್ಲಿ ತಮ್ಮ ಹೆಸರು ಕೇಳಿಬರುತ್ತಿದ್ದಂತೆ ಅರವಿಂದ್​ ರೆಡ್ಡಿ ದುಬೈಗೆ ಹಾರಿದ್ದರು.‌ ಈ ಸಂಬಂಧ ಸಿಸಿಬಿ ಪೊಲೀಸರು ಲುಕ್‌ಔಟ್ ನೋಟಿಸ್‌​ ಜಾರಿ ಮಾಡಿದ್ದರು. ಇದರನ್ವಯ ಇಂದು ಬಳ್ಳಾರಿ ಟಸ್ಕರ್ಸ್ ತಂಡದ ಮಾಲೀಕ ಅರವಿಂದ್ ರೆಡ್ಡಿ ಸಿಸಿಬಿ ಪೊಲೀಸರ ವಿಚಾರಣೆಗೆ ಹಾಜರಾದರು.

Intro:Body:

ಕೆಪಿಎಲ್ ಬೆಟ್ಟಿಂಗ್‌ ಕೇಸ್: ಸಿಸಿಬಿ ವಿಚಾರಣೆಗೆ ಹಾಜರಾದ ಬಳ್ಳಾರಿ‌ ಟಸ್ಕರ್ಸ್ ‌ತಂಡದ ಮಾಲೀಕ ಅರವಿಂದ್ ರೆಡ್ಡಿ

ಬೆಂಗಳೂರು: ಕರ್ನಾಟಕ ಪ್ರೀಮಿಯರ್ ಲೀಗ್ ನಲ್ಲಿ (ಕೆಪಿಎಲ್) ನಡೆದಿದೆ ಎನ್ನಲಾದ ಬೆಟ್ಟಿಂಗ್‌ ಪ್ರಕರಣ ಸಂಬಂಧ ಬಳ್ಳಾರಿ ಟಸ್ಕರ್ಸ್ ತಂಡದ ಮಾಲೀಕ ಅರವಿಂದ್ ರೆಡ್ಡಿಯನ್ನು ಸಿಸಿಬಿ ಪೊಲೀಸರ ವಿಚಾರಣೆ ಎದುರಿಸಿದ್ದಾರೆ..
ಕ್ರಿಕೆಟ್ ಬೆಟ್ಟಿಂಗ್ ಆರೋಪ ಅರವಿಂದ್ ಮೇಲೆ ಬರುತ್ತಿದ್ದಂತೆ ದುಬೈಗೆ ಹಾರಿದ್ದ..‌ ಈ ಸಂಬಂಧ ಸಿಸಿಬಿ ಪೊಲೀಸರು ಲುಕ್ ಔಟ್ ನೊಟೀಸ್ ಜಾರಿ ಮಾಡಿದ್ದರು..
ಕೆಪಿಎಲ್ ಲೀಗ್ ನ ಬೆಟ್ಟಿಂಗ್ ನ ಪ್ರಮುಖ‌ ಆರೋಪಿ ಬೆಳಗಾವಿ ಪ್ಯಾಂರ್ಥಸ್ ತಂಡದ ಮಾಲೀಕ‌ನಾಗಿರುವ ಆರೋಪಿ ಅಸ್ಫಕ್ ಅಲಿ‌ ನೀಡಿದ ಮಾಹಿತಿ‌ ನೀಡಿದ ಆಧಾರದ‌ ಮೇಲೆ ಅರವಿಂದ್ ರೆಡ್ಡಿಗಾಗಿ ಸಿಸಿಬಿ‌ ಬಲೆ ಬೀಸಿತ್ತು.. ವಿಚಾರಣೆಗೆ ಹಾಜರಾಗುವಂತೆ ನೊಟೀಸ್ ನೀಡುತ್ತಿದ್ದಂತೆ ಅರವಿಂದ್ ನಾಪತ್ತೆಯಾಗಿದ್ದರು.. ಇದೇ ತಿಂಗಳು 12 ರಂದು ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದರು.. ಪ್ರಕರಣ ಸಂಬಂಧ ಇಂದು ವಿಚಾರಣೆಗೆ ಹಾಜರಾಗುವಂತೆ ನೊಟೀಸ್ ನೀಡಿದ್ದರು.‌ ಇದರಂತೆ ‌ಇಂದು ವಿಚಾರಣೆ ಎದುರಿಸಿದ್ದಾರೆ..





Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.