ETV Bharat / state

ಮೋದಿ, ಶಾ ಮೇಲೆ ಭರವಸೆ ಇಲ್ಲ,  ಬಿಎಸ್​ವೈ ಮೇಲೆ ಗೌರವ ಇದೆ: ಸಿ.ಎಂ.ಇಬ್ರಾಹಿಂ - ಸಿಎಎ ಕುರಿತು ಸಿಎಂ ಜೊತೆ ಚರ್ಚೆ

ಪ್ರಧಾನಿ ಮೋದಿ, ಅಮಿತ್ ಶಾ ಮೇಲೆ ಭರವಸೆ ಇಲ್ಲ. ಆದರೆ, ಯಡಿಯೂರಪ್ಪರ ಮೇಲೆ ಗೌರವ, ವಿಶ್ವಾಸವಿದೆ. ಸಿಎಎ, ಎನ್​ಆರ್​ಸಿ ವಿರುದ್ಧದ ಶಾಂತಿಯುವ ಪ್ರತಿಭಟನೆಗೆ ಅನುಮತಿ ನೀಡುವಂತೆ ಸಿಎಂ ಜತೆ ಚರ್ಚಿಸಿದ್ದೇನೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಎಂ‌.ಇಬ್ರಾಹಿಂ ಹೇಳಿದರು.

farmer mal cm ibrahim
ಸಿ.ಎಂ.ಇಬ್ರಾಹಿಂ
author img

By

Published : Jan 10, 2020, 6:17 PM IST

ಬೆಂಗಳೂರು: ಪ್ರಧಾನಿ ಮೋದಿ, ಅಮಿತ್ ಶಾ ಮೇಲೆ ಭರವಸೆ ಇಲ್ಲ. ಆದರೆ, ಯಡಿಯೂರಪ್ಪರ ಮೇಲೆ ಗೌರವ, ವಿಶ್ವಾಸವಿದೆ. ಸಿಎಎ, ಎನ್​ಆರ್​ಸಿ ವಿರುದ್ಧದ ಶಾಂತಿಯುವ ಪ್ರತಿಭಟನೆಗೆ ಅನುಮತಿ ನೀಡುವಂತೆ ಸಿಎಂ ಜತೆ ಚರ್ಚಿಸಿದ್ದೇನೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಎಂ‌.ಇಬ್ರಾಹಿಂ ಹೇಳಿದರು.

ಸಿ.ಎಂ.ಇಬ್ರಾಹಿಂ

ವಿಧಾನಸೌಧದಲ್ಲಿ ಮಂಗಳೂರು ಗಲಭೆ ಕುರಿತು ಎಚ್.ಡಿ.ಕೆ ಸಿಡಿ ಬಿಡುಗಡೆ ವಿಚಾರವಾಗಿ ಮಾತನಾಡಿದ ಅವರು, ಸಿಎಎ ವಿರುದ್ಧ ಮಂಗಳೂರು ಮಾತ್ರವಲ್ಲದೇ ಬೇರೆ, ಬೇರೆ ಕಡೆ ಪ್ರತಿಭಟನೆ ನಡೆದಿದೆ. ಆದರೆ, ಮಂಗಳೂರಿನಲ್ಲೇ ಯಾಕೆ ಗೋಲಿಬಾರ್ ನಡೆಯಿತು? ಈ ಬಗ್ಗೆ ನ್ಯಾಯಾಂಗ ತನಿಖೆ ಆಗಬೇಕು. ಮಂಗಳೂರಿನಲ್ಲಿ ಪರ್ಯಾಯ ಆಡಳಿತವಿದೆ. ಯಡಿಯೂರಪ್ಪನವರಿಗೆ ಕೆಟ್ಟ ಹೆಸರು ತರುವ ದುರುದ್ದೇಶದಿಂದ ಹೀಗೆ ಮಾಡಲಾಗಿದೆ ಎಂದು ಹೇಳಿದರು.

ಯಡಿಯೂರಪ್ಪನವರೂ ಹೇಗೆ ಅನ್ನೋದು ಎಲ್ಲರಿಗೂ ಗೊತ್ತಿದೆ‌. ರಾಜ್ಯದಲ್ಲಿ ಶಾಂತಿಯುತ ಪ್ರತಿಭಟನೆಗೆ ಅವಕಾಶ ಮಾಡಿಕೊಡಬೇಕು ಅಂತಾ ಮನವಿ ಮಾಡಿದ್ದೇನೆ ಎಂದು ತಿಳಿಸಿದರು.

ಬೆಂಗಳೂರು: ಪ್ರಧಾನಿ ಮೋದಿ, ಅಮಿತ್ ಶಾ ಮೇಲೆ ಭರವಸೆ ಇಲ್ಲ. ಆದರೆ, ಯಡಿಯೂರಪ್ಪರ ಮೇಲೆ ಗೌರವ, ವಿಶ್ವಾಸವಿದೆ. ಸಿಎಎ, ಎನ್​ಆರ್​ಸಿ ವಿರುದ್ಧದ ಶಾಂತಿಯುವ ಪ್ರತಿಭಟನೆಗೆ ಅನುಮತಿ ನೀಡುವಂತೆ ಸಿಎಂ ಜತೆ ಚರ್ಚಿಸಿದ್ದೇನೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಎಂ‌.ಇಬ್ರಾಹಿಂ ಹೇಳಿದರು.

ಸಿ.ಎಂ.ಇಬ್ರಾಹಿಂ

ವಿಧಾನಸೌಧದಲ್ಲಿ ಮಂಗಳೂರು ಗಲಭೆ ಕುರಿತು ಎಚ್.ಡಿ.ಕೆ ಸಿಡಿ ಬಿಡುಗಡೆ ವಿಚಾರವಾಗಿ ಮಾತನಾಡಿದ ಅವರು, ಸಿಎಎ ವಿರುದ್ಧ ಮಂಗಳೂರು ಮಾತ್ರವಲ್ಲದೇ ಬೇರೆ, ಬೇರೆ ಕಡೆ ಪ್ರತಿಭಟನೆ ನಡೆದಿದೆ. ಆದರೆ, ಮಂಗಳೂರಿನಲ್ಲೇ ಯಾಕೆ ಗೋಲಿಬಾರ್ ನಡೆಯಿತು? ಈ ಬಗ್ಗೆ ನ್ಯಾಯಾಂಗ ತನಿಖೆ ಆಗಬೇಕು. ಮಂಗಳೂರಿನಲ್ಲಿ ಪರ್ಯಾಯ ಆಡಳಿತವಿದೆ. ಯಡಿಯೂರಪ್ಪನವರಿಗೆ ಕೆಟ್ಟ ಹೆಸರು ತರುವ ದುರುದ್ದೇಶದಿಂದ ಹೀಗೆ ಮಾಡಲಾಗಿದೆ ಎಂದು ಹೇಳಿದರು.

ಯಡಿಯೂರಪ್ಪನವರೂ ಹೇಗೆ ಅನ್ನೋದು ಎಲ್ಲರಿಗೂ ಗೊತ್ತಿದೆ‌. ರಾಜ್ಯದಲ್ಲಿ ಶಾಂತಿಯುತ ಪ್ರತಿಭಟನೆಗೆ ಅವಕಾಶ ಮಾಡಿಕೊಡಬೇಕು ಅಂತಾ ಮನವಿ ಮಾಡಿದ್ದೇನೆ ಎಂದು ತಿಳಿಸಿದರು.

Intro:Body:KN_BNG_05_CMIBRAHIM_BYTE_SCRIPT_7201951

ಮೋದಿ, ಶಾ ಮೇಲೆ‌ ಮುನಿಸಿರಬಹುದು ಆದರೆ ಬಿಎಸ್ ವೈ ಮೇಲೆ ಗೌರವ ಇದೆ: ಸಿ.ಎಂ.ಇಬ್ರಾಹಿಂ

ಬೆಂಗಳೂರು: ಪ್ರಧಾನಿ ಮೋದಿ, ಅಮಿತ್ ಶಾ ಮೇಲೆ ನಮಗೆ ಮುನಿಸಿರಬಹುದು, ಆದರೆ ಯಡಿಯೂರಪ್ಪರ ಮೇಲೆ ಗೌರವ, ವಿಶ್ವಾಸ ಇದೆ ಎಂದು ಪರಿಷತ್ ಸದಸ್ಯ ಸಿ.ಎಂ‌.ಇಬ್ರಾಹಿಂ ತಿಳಿಸಿದರು.

ವಿಧಾನಸೌಧದಲ್ಲಿ ಮಂಗಳೂರು ಗಲಭೆ ಕುರಿತು ಎಚ್ ಡಿಕೆಯಿಂದ ಸಿಡಿ ಬಿಡುಗಡೆ ವಿಚಾರವಾಗಿ ಮಾತನಾಡಿದ ಅವರು, ಸಿಎಎ ವಿರುದ್ಧ ಮಂಗಳೂರು ಮಾತ್ರವಲ್ಲದೇ ಬೇರೆ ಬೇರೆ ಕಡೆ ಪ್ರತಿಭಟನೆ ನಡೆದಿದೆ. ಆದರೆ, ಮಂಗಳೂರಿನಲ್ಲೇ ಯಾಕೆ ಗೋಲಿಬಾರ್ ನಡೀತು?. ಈ ಬಗ್ಗೆ ನ್ಯಾಯಾಂಗ ತನಿಖೆ ಆಗಬೇಕು. ಮಂಗಳೂರಿನಲ್ಲಿ ಪರ್ಯಾಯ ಆಡಳಿತ ಇದೆ. ಯಡಿಯೂರಪ್ಪನವರಿಗೆ ಕೆಟ್ಟ ಹೆಸರು ತರುವ ಕೆಲಸ ಆಗುತ್ತಿದೆ ಎಂದರು.

ಈ ಘಟನೆಗೆ ಕಾರಣ ಏನು, ಯಾರು ಅನ್ನೋದು ತನಿಖೆ ಮೂಲಕ ಗೊತ್ತಾಗಬೇಕು. ಪಾಕಿಸ್ತಾನದಿಂದ ಬರುವವರು ಹಿಂದೂಗಳೇ ಅನ್ನೋದು ಹೇಗೆ ಕಂಡು ಹಿಡಿಯುತ್ತೀರಿ?. ಪಾಕಿಸ್ತಾನದಿಂದ ಬಂದವರು ಮುಸ್ಲಿಮರಾ?, ಹಿಂದೂಗಳಾ?, ಅನ್ನೋದನ್ನು ಹೇಗೆ ಪತ್ತೆ ಹಚ್ಚುತ್ತೀರಿ?. ಹಿಂದೂಗಳ ಹೆಸರಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯವರು ಬರುವ ಸಾಧ್ಯತೆ ಇದೆ ಅಲ್ವಾ?. ಈ ಕಾಯ್ದೆಯಿಂದ ಇಂತಹವರು ದೇಶದ ಒಳಗೆ ನುಗ್ಗಲು ದಾರಿ ಮಾಡಿಕೊಡುತ್ತಿದ್ದೀರಾ? ಎಂದು ಪ್ರಶ್ನಿಸಿದರು.

ಹೀಗಾಗಿ ಕೂಡಲೇ ಈ ಕಾಯ್ದೆಯನ್ನು ವಾಪಸ್ ತೆಗೆದುಕೊಳ್ಳುವ ಕೆಲಸವನ್ನು ಮೋದಿ ಮಾಡಬೇಕು. ಬಜೆಟ್‌ನಲ್ಲಿ ಕಾಯ್ದೆ ವಾಪಸ್ ತೆಗೆದುಕೊಳ್ಳುತ್ತೇನೆ ಎಂದು ಮೋದಿ ಘೋಷಣೆ ಮಾಡಲಿ. ಯಡಿಯೂರಪ್ಪನವರೂ ಹೇಗೆ ಅನ್ನೋದು ಎಲ್ಲರಿಗೂ ಗೊತ್ತಿದೆ‌. ರಾಜ್ಯದಲ್ಲಿ ಶಾಂತಿಯುತ ಪ್ರತಿಭಟನೆಗೆ ಅವಕಾಶ ಮಾಡಿಕೊಡಬೇಕು ಅಂತಾ ಮನವಿ ಮಾಡಿದ್ದೇನೆ ಎಂದು ತಿಳಿಸಿದರು.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.