ETV Bharat / state

ಇಂದು-ನಾಳೆ ಬ್ಯಾಂಕ್​ಗಳ ವ್ಯವಹಾರ ಬಂದ್​​​: ಈ ಸೇವೆಗಳಿಗೆ ಸಮಸ್ಯೆ ಇಲ್ಲ

ಬ್ಯಾಂಕ್ ನೌಕರರ ಮುಷ್ಕರ ಹಿನ್ನೆಲೆ ರಾಷ್ಟ್ರಾದ್ಯಂತ ಇಂದು ಮತ್ತು ನಾಳೆ ಬ್ಯಾಂಕ್​ ಬಂದ್​ ಇದ್ದು, ಎಟಿಎಂ, ನೆಟ್ ಬ್ಯಾಕಿಂಗ್, ಮೊಬೈಲ್ ಬ್ಯಾಂಕಿಂಗ್ ಸೇವೆಗಳಿಗೆ ಯಾವುದೇ ಸಮಸ್ಯೆ ಆಗುವುದಿಲ್ಲ. ಬಂದ್​ನಿಂದ ಕಾರ್ಪೋರೇಟ್ ಸಂಸ್ಥೆಗಳಿಗೆ, ಫಾರಿನ್ ಎಕ್ಸ್​​ಚೇಂಚ್​ಗೆ ಸಮಸ್ಯೆ ಆಗಲಿದೆ.

author img

By

Published : Jan 31, 2020, 12:31 PM IST

ಬ್ಯಾಂಕ್ ಬಂದ್​
All india bank strike

ಬೆಂಗಳೂರು: ರಾಷ್ಟ್ರಾದ್ಯಂತ ಬ್ಯಾಂಕ್ ನೌಕರರ ಮುಷ್ಕರ ಹಿನ್ನೆಲೆ ಇಂದು ಹಾಗೂ ನಾಳೆ ಬ್ಯಾಂಕ್ ‌ವ್ಯವಹಾರ ಬಂದ್ ಆಗಲಿದೆ.‌ ಇಂದು ಬೆಂಗಳೂರಿನ ಕೆ.ಜಿ ರಸ್ತೆಯ ಸ್ಟೇಟ್ ಬ್ಯಾಂಕ್ ಆವರಣದಲ್ಲಿ ಪ್ರತಿಭಟನೆ ಜೋರಾಗಿದೆ. ವಿವಿಧ ಬ್ಯಾಂಕ್ ಸಂಘಟನೆಗಳ ನೌಕರರಿಂದ ಪ್ರತಿಭಟನೆ ನಡೆಯುತ್ತಿದ್ದು, ಈಗಾಗಲೇ ಎಸ್​ಬಿಐ ವೃತ್ತದಲ್ಲಿ ನೌಕರರು ಜಮಾಯಿಸಿದ್ದಾರೆ.

ಅಂದಹಾಗೇ, ಬ್ಯಾಂಕ್ ನೌಕರರ ಪ್ರತಿಭಟನೆ ಹಿನ್ನೆಲೆ ಎಟಿಎಂಗಳಿಗೆ ಯಾವುದೇ ಸಮಸ್ಯೆ ಇಲ್ಲ. ಇಂಟರ್​​ನೆಟ್ ಬ್ಯಾಕಿಂಗ್, ಮೊಬೈಲ್ ಬ್ಯಾಂಕಿಂಗ್ ಸೇವೆಗಳಿಗೂ ಯಾವುದೇ ಸಮಸ್ಯೆ ಆಗುವುದಿಲ್ಲ. ಇನ್ನು ಕಾರ್ಪೋರೇಟ್ ಸಂಸ್ಥೆಗಳಿಗೆ, ಫಾರಿನ್ ಎಕ್ಸ್​​ಚೇಂಚ್​ಗೆ ಸಮಸ್ಯೆ ಆಗಲಿದೆ.

ಬ್ಯಾಂಕ್ ನೌಕರರ ಪ್ರಮುಖ ಬೇಡಿಕೆಗಳೇನು?

  • ವೇತನ ಪಟ್ಟಿಯ ಮೇಲೆ ಶೇ. 20 ರಷ್ಟು ವೃದ್ಧಿ
  • ವಾರಕ್ಕೆ ಐದು ದಿನಕ್ಕೆ ಮಾತ್ರ ಬ್ಯಾಂಕ್ ಸೇವೆ
  • ಮೂಲ ವೇತನ ಜೊತೆಯಲ್ಲಿ ವಿಶೇಷ ಭತ್ಯೆ ನೀಡಬೇಕು
  • ಹೊಸ ಪಿಂಚಣಿ ಯೋಜನೆ ರದ್ದು ಮಾಡಬೇಕು
  • ಕುಟುಂಬ ಪಿಂಚಣಿ ಹೆಚ್ಚಳ ಮಾಡಬೇಕು
  • ವ್ಯವಹಾರದಲ್ಲಿ ಬರುವ ಲಾಭದಲ್ಲಿ ನೌಕರರ ಕಲ್ಯಾಣ ನಿಧಿಗೆ ಹಣ ಮೀಸಲಿಡಬೇಕು
  • ನಿವೃತ್ತಿ ನಂತರ ಮಿತಿ ರಹಿತ ತೆರಿಗೆ ವಿನಾಯಿತಿ ನೀಡಬೇಕು
  • ಕೆಲಸ ಮತ್ತು ಭೋಜನಕ್ಕೆ ನಿರ್ದಿಷ್ಟ ಸಮಯ ಮೀಸಲಿಡಬೇಕು
  • ನಿವೃತ್ತಿ ನಂತರ ಬಾಕಿ ಉಳಿದಿರೋ ರಜೆಗೆ ವೇತನ ನೀಡುವುದು
  • ಗುತ್ತಿಗೆ ಕಾರ್ಮಿಕರು ಮತ್ತು ವ್ಯವಹಾರ ಪ್ರತಿನಿಧಿಗಳಿಗೆ ಸಮಾನ ಕೆಲಸಕ್ಕೆ ಸಮಾನ ವೇತನ

ಬೆಂಗಳೂರು: ರಾಷ್ಟ್ರಾದ್ಯಂತ ಬ್ಯಾಂಕ್ ನೌಕರರ ಮುಷ್ಕರ ಹಿನ್ನೆಲೆ ಇಂದು ಹಾಗೂ ನಾಳೆ ಬ್ಯಾಂಕ್ ‌ವ್ಯವಹಾರ ಬಂದ್ ಆಗಲಿದೆ.‌ ಇಂದು ಬೆಂಗಳೂರಿನ ಕೆ.ಜಿ ರಸ್ತೆಯ ಸ್ಟೇಟ್ ಬ್ಯಾಂಕ್ ಆವರಣದಲ್ಲಿ ಪ್ರತಿಭಟನೆ ಜೋರಾಗಿದೆ. ವಿವಿಧ ಬ್ಯಾಂಕ್ ಸಂಘಟನೆಗಳ ನೌಕರರಿಂದ ಪ್ರತಿಭಟನೆ ನಡೆಯುತ್ತಿದ್ದು, ಈಗಾಗಲೇ ಎಸ್​ಬಿಐ ವೃತ್ತದಲ್ಲಿ ನೌಕರರು ಜಮಾಯಿಸಿದ್ದಾರೆ.

ಅಂದಹಾಗೇ, ಬ್ಯಾಂಕ್ ನೌಕರರ ಪ್ರತಿಭಟನೆ ಹಿನ್ನೆಲೆ ಎಟಿಎಂಗಳಿಗೆ ಯಾವುದೇ ಸಮಸ್ಯೆ ಇಲ್ಲ. ಇಂಟರ್​​ನೆಟ್ ಬ್ಯಾಕಿಂಗ್, ಮೊಬೈಲ್ ಬ್ಯಾಂಕಿಂಗ್ ಸೇವೆಗಳಿಗೂ ಯಾವುದೇ ಸಮಸ್ಯೆ ಆಗುವುದಿಲ್ಲ. ಇನ್ನು ಕಾರ್ಪೋರೇಟ್ ಸಂಸ್ಥೆಗಳಿಗೆ, ಫಾರಿನ್ ಎಕ್ಸ್​​ಚೇಂಚ್​ಗೆ ಸಮಸ್ಯೆ ಆಗಲಿದೆ.

ಬ್ಯಾಂಕ್ ನೌಕರರ ಪ್ರಮುಖ ಬೇಡಿಕೆಗಳೇನು?

  • ವೇತನ ಪಟ್ಟಿಯ ಮೇಲೆ ಶೇ. 20 ರಷ್ಟು ವೃದ್ಧಿ
  • ವಾರಕ್ಕೆ ಐದು ದಿನಕ್ಕೆ ಮಾತ್ರ ಬ್ಯಾಂಕ್ ಸೇವೆ
  • ಮೂಲ ವೇತನ ಜೊತೆಯಲ್ಲಿ ವಿಶೇಷ ಭತ್ಯೆ ನೀಡಬೇಕು
  • ಹೊಸ ಪಿಂಚಣಿ ಯೋಜನೆ ರದ್ದು ಮಾಡಬೇಕು
  • ಕುಟುಂಬ ಪಿಂಚಣಿ ಹೆಚ್ಚಳ ಮಾಡಬೇಕು
  • ವ್ಯವಹಾರದಲ್ಲಿ ಬರುವ ಲಾಭದಲ್ಲಿ ನೌಕರರ ಕಲ್ಯಾಣ ನಿಧಿಗೆ ಹಣ ಮೀಸಲಿಡಬೇಕು
  • ನಿವೃತ್ತಿ ನಂತರ ಮಿತಿ ರಹಿತ ತೆರಿಗೆ ವಿನಾಯಿತಿ ನೀಡಬೇಕು
  • ಕೆಲಸ ಮತ್ತು ಭೋಜನಕ್ಕೆ ನಿರ್ದಿಷ್ಟ ಸಮಯ ಮೀಸಲಿಡಬೇಕು
  • ನಿವೃತ್ತಿ ನಂತರ ಬಾಕಿ ಉಳಿದಿರೋ ರಜೆಗೆ ವೇತನ ನೀಡುವುದು
  • ಗುತ್ತಿಗೆ ಕಾರ್ಮಿಕರು ಮತ್ತು ವ್ಯವಹಾರ ಪ್ರತಿನಿಧಿಗಳಿಗೆ ಸಮಾನ ಕೆಲಸಕ್ಕೆ ಸಮಾನ ವೇತನ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.