ETV Bharat / state

ಎರಡು ಖಾಸಗಿ ಶಾಲೆಗಳ ನಡುವೆ ವೈರತ್ವ: ಶಾಲಾ ಕಾರ್ಯದರ್ಶಿ ಹತ್ಯೆಗೆ ಸುಪಾರಿ ಕೊಟ್ಟ ವೈರಿ ಶಾಲೆ - undefined

ಎರಡು ಖಾಸಗಿ ಶಾಲೆಗಳ ನಡುವಿನ ವೈರತ್ವ ಹಿನ್ನಲೆ ವೈರಿ ಶಾಲೆಯ ಕಾರ್ಯದರ್ಶಿಯನ್ನು ಕೊಲ್ಲಲು ರಾಮಚಂದ್ರರೆಡ್ಡಿ ಸುಪಾರಿ ಕಿಲ್ಲರ್ಸ್​ಗೆ ಡೀಲ್​ ನೀಡಿದ್ದ ಎಂಬ ಆಘಾತಕಾರಿ ಮಾಹಿತಿ ಹೊರ ಬಿದ್ದಿದೆ. ಪೊಲೀಸರು ಆರೋಪಿಗಳನ್ನ ಬಂಧಿಸಿ ಕಂಬಿ ಹಿಂದೆ ಕಳುಹಿಸಿದ್ದಾರೆ.

ವೈರಿ ಶಾಲಾ ಕಾರ್ಯದರ್ಶಿ ಮೇಲೆ ಮಾರಣಾಂತಿಕ ಹಲ್ಲೆ
author img

By

Published : Jun 1, 2019, 12:29 PM IST

Updated : Jun 1, 2019, 1:14 PM IST

ದೊಡ್ಡಬಳ್ಳಾಪುರ : ಎರಡು ಖಾಸಗಿ ಶಾಲೆಗಳ ನಡುವಿನ ವೈರತ್ವ ಸುಪಾರಿ ಕೊಲೆಗೆ ಸಂಚಿಗೆ ಕಾರಣವಾಗಿದೆ. 15 ಲಕ್ಷ ರೂ. ಪಡೆದು ವೈರಿ ಶಾಲೆಯ ಕಾರ್ಯದರ್ಶಿಯನ್ನ ಕೊಲ್ಲಲು ಯತ್ನಿಸಿದ ಸುಪಾರಿ ಕಿಲ್ಲರ್​​ಗಳನ್ನು ದೊಡ್ಡಬಳ್ಳಾಪುರ ಪೊಲೀಸರು ಬಂಧಿಸಿದ್ದಾರೆ.

ವೈರಿ ಶಾಲಾ ಕಾರ್ಯದರ್ಶಿ ಮೇಲೆ ಮಾರಣಾಂತಿಕ ಹಲ್ಲೆ

ಏನಿದು ಘಟನೆ ಹಿನ್ನೆಲೆ ಏನು?

ಕಳೆದ ಮೇ 16ರಂದು ಬೆಳಗ್ಗೆ ಹೆಸರಘಟ್ಟದ ಹೆಚ್​ಎಸ್​​ಎಲ್​​ಎನ್ ಶಾಲೆಯ ಕಾರ್ಯದರ್ಶಿ ನಾಗೇಶ್ವರ ರಾವ್​ ಗೌರಿಬಿದನೂರಿನಿಂದ ಹೆಸರಘಟ್ಟದ ತಮ್ಮ ಶಾಲೆಗೆ ಕಾರಿನಲ್ಲಿ ಬರುತ್ತಿದ್ದರು. ಆಗ ಮಧುರೆ ರಾಜನುಕುಂಟೆ ರಸ್ತೆಯ ಕುಂಬಳಕುಂಟೆ ಜುನ್ನಸಂದ್ರದ ಬಳಿ ಅವರನ್ನು ಹಿಂಬಾಲಿಸಿಕೊಂಡು ಬಂದ ದುಷ್ಕರ್ಮಿಗಳು ಕಾರಿಗೆ ಡಿಕ್ಕಿ ಹೊಡೆದು ಅಡ್ಡಗಟ್ಟಿದ್ದಾರೆ. ಅಲ್ಲದೆ ನಾಗೇಶ್ವರ ಕಾರಿನಿಂದ ಇಳಿದ ತಕ್ಷಣ ಮತ್ತೊಂದು ಕಾರಿನಲ್ಲಿದ್ದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಮನಬಂದಂತೆ ಹಲ್ಲೆ ನಡೆಸಿದ್ದು, ನಾಗೇಶ್ವರ ರಾವ್​ ಸತ್ತರೆಂದು ತಿಳಿದು ಪರಾರಿಯಾಗಿದ್ದರು. ಇನ್ನು ತಲೆ, ಕೈ, ಹೊಟ್ಟೆ ಮತ್ತು ಕುತ್ತಿಗೆ ಭಾಗಗಳಲ್ಲಿ ಮಾರಣಾಂತಿಕ ಹಲ್ಲೆಗೊಳಗಾಗಿದ್ದ ನಾಗೇಶ್ವರ ಅವರನ್ನು ತಕ್ಷಣ ಹೆಬ್ಬಾಳದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಸದ್ಯ ಆಸ್ಪತ್ರೆಯಲ್ಲಿ ಅವರು ಚೇತರಿಸಿಕೊಳ್ಳುತ್ತಿದ್ದಾರೆ.

ನಾಗೇಶ್ವರ ರಾವ್ ಯಾರು?:

ನಾಗೇಶ್ವರ ರಾವ್​ ಅವರು ಸೌದಿ ಅರೆಬಿಯಾದ ಕತಾರ್ ಮತ್ತು ದೋಹಾದಲ್ಲಿ ಐದು ವರ್ಷ ಶಿಕ್ಷಕ ವೃತ್ತಿಯನ್ನು ಮಾಡಿದ್ದವರು, ಅವರು ಭಾರತಕ್ಕೆ ಬಂದಾಗ ಬೆಂಗಳೂರಿನ ಹೊರವಲಯದಲ್ಲಿರುವ ಹೆಸರಘಟ್ಟ ಬಳಿಯ ತಮ್ಮೇನಹಳ್ಳಿ ಆರ್​ಸಿ ಇಂಟರ್ ನ್ಯಾಷನಲ್ ಮಾಲೀಕ ರಾಮಚಂದ್ರರೆಡ್ಡಿಯವರು ತಮ್ಮ ಶಾಲೆಗೆ ಬರುವಂತೆ ಆಹ್ವಾನ ನೀಡಿದರು. ಬಳಿಕ ನಾಗೇಶ್ವರ ರಾವ್ ಆರ್​ಸಿ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಪ್ರಿನ್ಸಿಪಾಲರಾಗಿ ಕೆಲಸಕ್ಕೆ ಸೇರಿಕೊಳ್ಳುತ್ತಾರೆ. ತಮ್ಮ ವೃತ್ತಿ ನೈಪುಣ್ಯತೆ ಬಳಸಿ 40 ಮಕ್ಕಳಿದ್ದ ಶಾಲೆಯನ್ನು ಮೂರೇ ತಿಂಗಳಲ್ಲಿ 120 ಮಕ್ಕಳು ಶಾಲೆ ಸೇರುವಂತೆ ಮಾಡುತ್ತಾರೆ. ಈ ನಡುವೆ ಸ್ವಪ್ನಾ ಎಂಬುವರು ಶಾಲಾ ಕಾರ್ಯದರ್ಶಿಯಾಗಿ ಬರುತ್ತಾರೆ. ಶಾಲಾ ಕಾರ್ಯದರ್ಶಿ ಸ್ವಪ್ನಾ ಅವರು ನಾಗೇಶ್ವರ ಕೆಲಸದಲ್ಲಿ ಮೂಗುತೂರಿಸುವ ಕೆಲಸ ಮಾಡುತ್ತಾರೆ. ಇದರಿಂದ ಬೇಸರಗೊಂಡ ನಾಗೇಶ್ವರ ರಾವ್​ ರಾಮಚಂದ್ರರೆಡ್ಡಿ ಶಾಲೆ ಬಿಟ್ಟು ಹೆಸರಘಟ್ಟ ಮತ್ತು ಗೌರಿಬಿದನೂರಿನಲ್ಲಿ ಹೆಚ್​ಎಸ್​​ಎಲ್​​ಎಲ್ ಶಾಲೆ ತೆರೆಯುತ್ತಾರೆ.

ನಾಗೇಶ್ವರ ಹತ್ಯೆಗೆ 15 ಲಕ್ಷ ಸುಪಾರಿ:

ಹೀಗೆ ವಿದೇಶದಲ್ಲಿ ಸಾಕಷ್ಟು ನೈಪುಣ್ಯತೆ ಪಡೆದಿದ್ದ ನಾಗೇಶ್ವರ ರಾವ್​​ ಹೆಚ್​ಎಸ್​​ಎಲ್​​ಎಲ್ ಶಾಲೆ ಪ್ರಾರಂಭಿಸಿದ ಒಂದೇ ವರ್ಷದಲ್ಲಿ 300 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿರುತ್ತಾರೆ. ಇತ್ತ ರಾಮಚಂದ್ರರೆಡ್ಡಿ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಇಳಿಮುಖವಾಗುತ್ತೆ. ರಾಮಚಂದ್ರಶೆಟ್ಟಿ ಶಾಲೆಯಲ್ಲಿ ತಮ್ಮ ಮಕ್ಕಳನ್ನು ಓದಿಸುತ್ತಿದ್ದ ಪೋಷಕರು ನಾಗೇಶ್ವರ ರಾವ್​ ಅವರ ಶಾಲೆಗೆ ಸೇರಿಸಲು ಶುರುಮಾಡುತ್ತಾರೆ. ಇದು ರಾಮಚಂದ್ರಶೆಟ್ಟಿಯವರ ದ್ವೇಷಕ್ಕೆ ಕಾರಣವಾಗುತ್ತದೆ. ಬಳಿಕ ಸ್ನೇಹಿತ ವೆಂಕಟೇಶ್ ಮೂಲಕ ಸುಪಾರಿ ಹಂತಕರನ್ನು ಭೇಟಿಯಾಗುವ ರಾಮಚಂದ್ರರೆಡ್ಡಿ 15 ಲಕ್ಷ ರೂ.ಗೆ ಡೀಲ್ ಮಾಡಿಕೊಳ್ಳುತ್ತಾರೆ.

ಸುಪಾರಿ ಕಿಲ್ಲರ್ಸ್​ ಅರೆಸ್ಟ್:

ಇನ್ನು ಘಟನೆ ಬಗ್ಗೆ ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ಆರೋಪಿಗಳ ಪತ್ತೆಗಾಗಿ ತನಿಖೆಗೆ ಇಳಿದ ದೊಡ್ಡಬಳ್ಳಾಪುರ ಪೊಲೀಸರು ಯಾವುದೇ ಸುಳಿವು ನೀಡದೇ ಆರೋಪಿಗಳ ಪತ್ತೆ ಮಾಡಿ ಬಂಧಿಸಿದ್ದಾರೆ. ಆರೋಪಿಗಳ ಬೆನ್ನತ್ತಿದ್ದ ಪೊಲೀಸರು ಘಟನೆ ನಡೆದ ದಿನದ ಗೌರಿಬಿದನೂರಿನಿಂದ ಹೆಸರಘಟ್ಟಕ್ಕೆ ಬರುವ ಮಾರ್ಗದಲ್ಲಿನ ಸಿಸಿ ಕ್ಯಾಮರಾ ಪೂಟೇಜ್​ ಪರಿಶೀಲನೆ ನಡೆಸಿದ್ದಾಗ ಎರಡು ಕಾರುಗಳು ಹಿಂಬಾಲಿಸುತ್ತಿರುವುದು ಗಮನಕ್ಕೆ ಬರುತ್ತದೆ. ಇದೇ ಆಧಾರದ ಮೇಲೆ ಬೆಂಗಳೂರಿನ ಕುರುಬರಹಳ್ಳಿಯಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಗಳನ್ನ ಬಂಧಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಪಟ್ಟಂತೆ ಶ್ರೀನಿವಾಸಮೂರ್ತಿ ಅಲಿಯಾಸ್ ಸೀನ, ವೆಂಕಟೇಶ್, ಯೋಗೇಶ್, ನಾಗೇಶ್, ಆದರ್ಶ, ವೀರಭದ್ರ ಸೇರಿದಂತೆ ಆರು ಜನರನ್ನ ಬಂಧಿಸಲಾಗಿದೆ. ಸುಪಾರಿ ನೀಡಿದ ರಾಮಚಂದ್ರರೆಡ್ಡಿ ಮತ್ತು ಮೋಹನ್ ತಲೆಮರೆಸಿಕೊಂಡಿದ್ದಾರೆ.

ದೊಡ್ಡಬಳ್ಳಾಪುರ : ಎರಡು ಖಾಸಗಿ ಶಾಲೆಗಳ ನಡುವಿನ ವೈರತ್ವ ಸುಪಾರಿ ಕೊಲೆಗೆ ಸಂಚಿಗೆ ಕಾರಣವಾಗಿದೆ. 15 ಲಕ್ಷ ರೂ. ಪಡೆದು ವೈರಿ ಶಾಲೆಯ ಕಾರ್ಯದರ್ಶಿಯನ್ನ ಕೊಲ್ಲಲು ಯತ್ನಿಸಿದ ಸುಪಾರಿ ಕಿಲ್ಲರ್​​ಗಳನ್ನು ದೊಡ್ಡಬಳ್ಳಾಪುರ ಪೊಲೀಸರು ಬಂಧಿಸಿದ್ದಾರೆ.

ವೈರಿ ಶಾಲಾ ಕಾರ್ಯದರ್ಶಿ ಮೇಲೆ ಮಾರಣಾಂತಿಕ ಹಲ್ಲೆ

ಏನಿದು ಘಟನೆ ಹಿನ್ನೆಲೆ ಏನು?

ಕಳೆದ ಮೇ 16ರಂದು ಬೆಳಗ್ಗೆ ಹೆಸರಘಟ್ಟದ ಹೆಚ್​ಎಸ್​​ಎಲ್​​ಎನ್ ಶಾಲೆಯ ಕಾರ್ಯದರ್ಶಿ ನಾಗೇಶ್ವರ ರಾವ್​ ಗೌರಿಬಿದನೂರಿನಿಂದ ಹೆಸರಘಟ್ಟದ ತಮ್ಮ ಶಾಲೆಗೆ ಕಾರಿನಲ್ಲಿ ಬರುತ್ತಿದ್ದರು. ಆಗ ಮಧುರೆ ರಾಜನುಕುಂಟೆ ರಸ್ತೆಯ ಕುಂಬಳಕುಂಟೆ ಜುನ್ನಸಂದ್ರದ ಬಳಿ ಅವರನ್ನು ಹಿಂಬಾಲಿಸಿಕೊಂಡು ಬಂದ ದುಷ್ಕರ್ಮಿಗಳು ಕಾರಿಗೆ ಡಿಕ್ಕಿ ಹೊಡೆದು ಅಡ್ಡಗಟ್ಟಿದ್ದಾರೆ. ಅಲ್ಲದೆ ನಾಗೇಶ್ವರ ಕಾರಿನಿಂದ ಇಳಿದ ತಕ್ಷಣ ಮತ್ತೊಂದು ಕಾರಿನಲ್ಲಿದ್ದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಮನಬಂದಂತೆ ಹಲ್ಲೆ ನಡೆಸಿದ್ದು, ನಾಗೇಶ್ವರ ರಾವ್​ ಸತ್ತರೆಂದು ತಿಳಿದು ಪರಾರಿಯಾಗಿದ್ದರು. ಇನ್ನು ತಲೆ, ಕೈ, ಹೊಟ್ಟೆ ಮತ್ತು ಕುತ್ತಿಗೆ ಭಾಗಗಳಲ್ಲಿ ಮಾರಣಾಂತಿಕ ಹಲ್ಲೆಗೊಳಗಾಗಿದ್ದ ನಾಗೇಶ್ವರ ಅವರನ್ನು ತಕ್ಷಣ ಹೆಬ್ಬಾಳದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಸದ್ಯ ಆಸ್ಪತ್ರೆಯಲ್ಲಿ ಅವರು ಚೇತರಿಸಿಕೊಳ್ಳುತ್ತಿದ್ದಾರೆ.

ನಾಗೇಶ್ವರ ರಾವ್ ಯಾರು?:

ನಾಗೇಶ್ವರ ರಾವ್​ ಅವರು ಸೌದಿ ಅರೆಬಿಯಾದ ಕತಾರ್ ಮತ್ತು ದೋಹಾದಲ್ಲಿ ಐದು ವರ್ಷ ಶಿಕ್ಷಕ ವೃತ್ತಿಯನ್ನು ಮಾಡಿದ್ದವರು, ಅವರು ಭಾರತಕ್ಕೆ ಬಂದಾಗ ಬೆಂಗಳೂರಿನ ಹೊರವಲಯದಲ್ಲಿರುವ ಹೆಸರಘಟ್ಟ ಬಳಿಯ ತಮ್ಮೇನಹಳ್ಳಿ ಆರ್​ಸಿ ಇಂಟರ್ ನ್ಯಾಷನಲ್ ಮಾಲೀಕ ರಾಮಚಂದ್ರರೆಡ್ಡಿಯವರು ತಮ್ಮ ಶಾಲೆಗೆ ಬರುವಂತೆ ಆಹ್ವಾನ ನೀಡಿದರು. ಬಳಿಕ ನಾಗೇಶ್ವರ ರಾವ್ ಆರ್​ಸಿ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಪ್ರಿನ್ಸಿಪಾಲರಾಗಿ ಕೆಲಸಕ್ಕೆ ಸೇರಿಕೊಳ್ಳುತ್ತಾರೆ. ತಮ್ಮ ವೃತ್ತಿ ನೈಪುಣ್ಯತೆ ಬಳಸಿ 40 ಮಕ್ಕಳಿದ್ದ ಶಾಲೆಯನ್ನು ಮೂರೇ ತಿಂಗಳಲ್ಲಿ 120 ಮಕ್ಕಳು ಶಾಲೆ ಸೇರುವಂತೆ ಮಾಡುತ್ತಾರೆ. ಈ ನಡುವೆ ಸ್ವಪ್ನಾ ಎಂಬುವರು ಶಾಲಾ ಕಾರ್ಯದರ್ಶಿಯಾಗಿ ಬರುತ್ತಾರೆ. ಶಾಲಾ ಕಾರ್ಯದರ್ಶಿ ಸ್ವಪ್ನಾ ಅವರು ನಾಗೇಶ್ವರ ಕೆಲಸದಲ್ಲಿ ಮೂಗುತೂರಿಸುವ ಕೆಲಸ ಮಾಡುತ್ತಾರೆ. ಇದರಿಂದ ಬೇಸರಗೊಂಡ ನಾಗೇಶ್ವರ ರಾವ್​ ರಾಮಚಂದ್ರರೆಡ್ಡಿ ಶಾಲೆ ಬಿಟ್ಟು ಹೆಸರಘಟ್ಟ ಮತ್ತು ಗೌರಿಬಿದನೂರಿನಲ್ಲಿ ಹೆಚ್​ಎಸ್​​ಎಲ್​​ಎಲ್ ಶಾಲೆ ತೆರೆಯುತ್ತಾರೆ.

ನಾಗೇಶ್ವರ ಹತ್ಯೆಗೆ 15 ಲಕ್ಷ ಸುಪಾರಿ:

ಹೀಗೆ ವಿದೇಶದಲ್ಲಿ ಸಾಕಷ್ಟು ನೈಪುಣ್ಯತೆ ಪಡೆದಿದ್ದ ನಾಗೇಶ್ವರ ರಾವ್​​ ಹೆಚ್​ಎಸ್​​ಎಲ್​​ಎಲ್ ಶಾಲೆ ಪ್ರಾರಂಭಿಸಿದ ಒಂದೇ ವರ್ಷದಲ್ಲಿ 300 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿರುತ್ತಾರೆ. ಇತ್ತ ರಾಮಚಂದ್ರರೆಡ್ಡಿ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಇಳಿಮುಖವಾಗುತ್ತೆ. ರಾಮಚಂದ್ರಶೆಟ್ಟಿ ಶಾಲೆಯಲ್ಲಿ ತಮ್ಮ ಮಕ್ಕಳನ್ನು ಓದಿಸುತ್ತಿದ್ದ ಪೋಷಕರು ನಾಗೇಶ್ವರ ರಾವ್​ ಅವರ ಶಾಲೆಗೆ ಸೇರಿಸಲು ಶುರುಮಾಡುತ್ತಾರೆ. ಇದು ರಾಮಚಂದ್ರಶೆಟ್ಟಿಯವರ ದ್ವೇಷಕ್ಕೆ ಕಾರಣವಾಗುತ್ತದೆ. ಬಳಿಕ ಸ್ನೇಹಿತ ವೆಂಕಟೇಶ್ ಮೂಲಕ ಸುಪಾರಿ ಹಂತಕರನ್ನು ಭೇಟಿಯಾಗುವ ರಾಮಚಂದ್ರರೆಡ್ಡಿ 15 ಲಕ್ಷ ರೂ.ಗೆ ಡೀಲ್ ಮಾಡಿಕೊಳ್ಳುತ್ತಾರೆ.

ಸುಪಾರಿ ಕಿಲ್ಲರ್ಸ್​ ಅರೆಸ್ಟ್:

ಇನ್ನು ಘಟನೆ ಬಗ್ಗೆ ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ಆರೋಪಿಗಳ ಪತ್ತೆಗಾಗಿ ತನಿಖೆಗೆ ಇಳಿದ ದೊಡ್ಡಬಳ್ಳಾಪುರ ಪೊಲೀಸರು ಯಾವುದೇ ಸುಳಿವು ನೀಡದೇ ಆರೋಪಿಗಳ ಪತ್ತೆ ಮಾಡಿ ಬಂಧಿಸಿದ್ದಾರೆ. ಆರೋಪಿಗಳ ಬೆನ್ನತ್ತಿದ್ದ ಪೊಲೀಸರು ಘಟನೆ ನಡೆದ ದಿನದ ಗೌರಿಬಿದನೂರಿನಿಂದ ಹೆಸರಘಟ್ಟಕ್ಕೆ ಬರುವ ಮಾರ್ಗದಲ್ಲಿನ ಸಿಸಿ ಕ್ಯಾಮರಾ ಪೂಟೇಜ್​ ಪರಿಶೀಲನೆ ನಡೆಸಿದ್ದಾಗ ಎರಡು ಕಾರುಗಳು ಹಿಂಬಾಲಿಸುತ್ತಿರುವುದು ಗಮನಕ್ಕೆ ಬರುತ್ತದೆ. ಇದೇ ಆಧಾರದ ಮೇಲೆ ಬೆಂಗಳೂರಿನ ಕುರುಬರಹಳ್ಳಿಯಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಗಳನ್ನ ಬಂಧಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಪಟ್ಟಂತೆ ಶ್ರೀನಿವಾಸಮೂರ್ತಿ ಅಲಿಯಾಸ್ ಸೀನ, ವೆಂಕಟೇಶ್, ಯೋಗೇಶ್, ನಾಗೇಶ್, ಆದರ್ಶ, ವೀರಭದ್ರ ಸೇರಿದಂತೆ ಆರು ಜನರನ್ನ ಬಂಧಿಸಲಾಗಿದೆ. ಸುಪಾರಿ ನೀಡಿದ ರಾಮಚಂದ್ರರೆಡ್ಡಿ ಮತ್ತು ಮೋಹನ್ ತಲೆಮರೆಸಿಕೊಂಡಿದ್ದಾರೆ.

Intro:ಎರಡು ಖಾಸಗಿ ಶಾಲೆಗಳ ನಡುವೆ ವೈರತ್ವ
ಶಾಲಾ ಕಾರ್ಯದರ್ಶಿ ಹತ್ಯೆಗೆ ಸುಫಾರಿ ಕೊಟ್ಟ ವೈರಿ ಶಾಲೆ
ಮಾರಣಾಂತಿಕ ಹಲ್ಲೆಯಿಂದ ಬದುಕುಳಿದ ಶಾಲಾ ಕಾರ್ಯದರ್ಶಿ
ದೊಡ್ಡಬಳ್ಳಾಪುರ ಪೊಲೀಸರಿಂದ ಸುಫಾರಿ ಕಿಲ್ಲರ್ ಗಳ ಬಂಧನ

Body:ದೊಡ್ಡಬಳ್ಳಾಪುರ : ಎರಡು ಶಾಸಗಿ ಶಾಲೆಗಳ ನಡುವಿನ ವೈರತ್ವ ಸುಫಾರಿ ಕೊಲೆಗೆ ಸಂಚು ಹೂಡಿತ್ತು, ವೈರಿ ಶಾಲೆಯ ಕಾರ್ಯದರ್ಶಿಯನ್ನ ಕೊಲ್ಲೊಕ್ಕೆ 15 ಲಕ್ಷಗಳನ್ನ ಕೊಟ್ಟು ಹತ್ಯೆಗೆ ಯತ್ಸಿಸಿದ ವೈರಿ ಶಾಲೆ. ಮಾರಣಾಂತಿಕ ಹಲ್ಲೆಗೊಳಗಾದ ಕಾರ್ಯದರ್ಶಿ ಬದುಕಿದಿದ್ದಾನೆ. ಹತ್ಯೆಗೆ ಯತ್ಸಿಸಿದ ಸುಫಾರಿ ಕಿಲ್ಲರ್ ಗಳ ಬಂಧಿಸುವಲ್ಲಿ ದೊಡ್ಡಬಳ್ಳಾಪುರ ಪೊಲೀಸರು ಯಶಸ್ವಿಯಾಗಿದ್ದಾರೆ.


ದಿನಾಂಕ 16-05-19 ನೇ ತಾರಿಖ್ ಬೆಳಗ್ಗೆ 8-30 ಸಮಯ, ಹೆಸರಘಟ್ಟದ ಹೆಚ್ ಎಸ್ ಎಲ್ ಎನ್ ಶಾಲೆಯ ಕಾರ್ಯದರ್ಶಿ ನಾಗೇಶ್ವರ ರಾವ್ ಗೌರಿಬಿದನೂರಿನಿಂದ ಹೆಸರಘಟ್ಟದ ತಮ್ಮ ಶಾಲೆಗೆ ಬರುತ್ತಿದ್ದಾಗ. ಮಧುರೆ – ರಾಜನುಕುಂಟೆ ರಸ್ತೆಯ ಕುಂಬಳಕುಂಟೆ ಜುನ್ನಸಂದ್ರದ ಬಳಿಗೆ ಬರುವ ವೇಳೆ ಹಿಂಬಾಲಿಸಿಕೊಂಡು ಬಂದು ಕಾರು ಏಕಾಏಕಿ ಬಂದು ನಾಗೇಶ್ವರ್ ರಾಂ ಗೆ ಡಿಕ್ಕಿ ಹೊಡೆದು ಅಡ್ಡಗಟ್ಟಿದೆ, ಕಾರಿನಲ್ಲಿ ಇಳಿದ ತಕ್ಷಣವೇ ಮತ್ತೊಂದು ಕಾರಿನಲ್ಲಿ ಬಂದ ದುಶ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ದುಶ್ಕರ್ಮಿಗಳು ಆತ ಸತ್ತೆ ಹೊದನೆಂದು ತಿಳಿದು ಪರಾರಿಯಾಗಿದ್ರು, ನಾಗೇಶ್ವರರಾಂ ತಲೆ, ಕೈ, ಹೊಟ್ಟೆ ಮತ್ತು ಕುತ್ತಿಗೆ ಭಾಗಗಳಲ್ಲಿ ಮಾರಾಂತಿಕ ಹಲ್ಲೆಗೆ ತುತ್ತಾಗಿದ್ರು, ತಕ್ಷಣವೇ ಹೆಬ್ಬಾಳದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು . ಸದ್ಯ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ ನಾಗೇಶ್ವರರಾಂ.

ಯಾರು ಈ ನಾಗೇಶ್ವರರಾಂ..?

ನಾಗೇಶ್ವರರಾಂ ಹೊರದೇಶದಲ್ಲಿ ಶಿಕ್ಷಕರಾಗಿ ಕೆಲಸ ಮಾಡಿದವರು. ಸೌದಿ ಅರೆಬಿಯಾದ ಕತಾರ್ ಮತ್ತು ದೋಹದಲ್ಲಿ ಐದು ವರ್ಷ ಶಿಕ್ಷಕ ವೃತ್ತಿಯನ್ನು ಮಾಡಿದ್ದವರು, ಅವರು ಭಾರತಕ್ಕೆ ಬಂದಾಗ ಬೆಂಗಳೂರಿನ ಹೊರವಲಯದಲ್ಲಿರುವ ಹೆಸರಘಟ್ಟ ಬಳಿಯ ತಮ್ಮೇನಹಳ್ಳಿ ಆರ್ ಸಿ ಇಂಟರ್ ನ್ಯಾಷನಲ್ ಮಾಲೀಕರಾದ ರಾಮಚಂದ್ರರೆಡ್ಡಿ ತಮ್ಮ ಶಾಲೆಗೆ ಬರುವಂತೆ ಆಹ್ವಾನ ನೀಡಿದರು. ನಾಗೇಶ್ವರರಾಂ ಆರ್ ಸಿ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಪ್ರಿನ್ಸಿಪಾಲರಾಗಿ ಕೆಲಸಕ್ಕೆ ಸೇರಿಕೊಳ್ಳುತ್ತಾರೆ. ತಮ್ಮ ವೃತ್ತಿ ನೈಪುಣ್ಯತೆಯನ್ನ ಬಳಸಿ 40 ಮಕ್ಕಳಿದ್ದ ಶಾಲೆಯನ್ನು ಮೂರೇ ತಿಂಗಳಲ್ಲಿ 120 ಮಕ್ಕಳು ಶಾಲೆ ಸೇರುವಂತೆ ಮಾಡುತ್ತಾರೆ. ಈ ನಡುವೆ ಸ್ವಪ್ನ ಅನ್ನುವರು ಶಾಲಾ ಕಾರ್ಯದರ್ಶಿಯಾಗಿ ಬರುತ್ತಾರೆ. ಶಾಲಾ ಕಾರ್ಯದರ್ಶಿ ಸ್ವಪ್ನರವರು ನಾಗೇಶ್ವರವರ ಕೆಲಸದಲ್ಲಿ ಮೂಗುತೂರಿಸುವ ಕೆಲಸ ಮಾಡುತ್ತಾರೆ. ಇದರಿಂದ ಬೇಸರಗೊಂಡ ನಾಗೇಶ್ವರರಾಂ ರಾಮಚಂದ್ರರೆಡ್ಡಿ ಶಾಲೆ ಬಿಟ್ಟು ತಮ್ಮದೇ ಸಂಸ್ಥೆ ಹೆಚ್ ಎಸ್ ಎಲ್ ಎಲ್ ಶಾಲೆಯನ್ನ ಹೆಸರಘಟ್ಟ ಮತ್ತು ಗೌರಿಬಿದನೂರಿನಲ್ಲಿ ತೆರೆಯುತ್ತಾರೆ.

ನಾಗೇಶ್ವರರಾಂ ಹತ್ಯೆಗೆ 15 ಲಕ್ಷ ಸುಫಾರಿ..!

ವಿದೇಶದಲ್ಲಿ ಸಾಕಷ್ಟು ನೈಪುಣ್ಯತೆಯನ್ನ ಪಡೆದಿದ್ದ ನಾಗೇಶ್ವರರಾಂ ಶಾಲೆಯನ್ನು ಪ್ರಾರಂಭಿಸಿದ ಒಂದೇ ವರ್ಷದಲ್ಲಿ 300 ಮಕ್ಕಳು ವಿದ್ಯಾಭ್ಯಸ ಮಾಡುತ್ತಿರುತ್ತಾರೆ. ಇತ್ತಾ ರಾಮಾಚಂದ್ರರೆಡ್ಡಿ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಇಳಿಮುಖವಾಗುತ್ತೆ. ರಾಮಚಂದ್ರಶೆಟ್ಟಿ ಶಾಲೆಯಲ್ಲಿ ತಮ್ಮ ಮಕ್ಕಳನ್ನು ಓದಿಸುತ್ತಿದ್ದ ಪೋಷಕರು ನಾಗೇಶ್ವರರಾಂ ಶಾಲೆಗೆ ಸೇರಿಸಿ ಬೀಡ್ತಾರೆ ಇದು ರಾಮಚಂದ್ರಶೆಟ್ಟಿ ದ್ವೇಷಕ್ಕೆ ಕಾರಣವಾಗುತ್ತೆ. ಸ್ನೇಹಿತರ ವೆಂಕಟೇಶ್ ಮೂಲಕ ಸುಫಾರಿ ಹಂತಕನ್ನು ಭೇಟಿಯಾಗುವ ರಾಮಚಂದ್ರರೆಡ್ಡಿ 15 ಲಕ್ಷ ಹಣವನ್ನು ಸುಫಾರಿ ಕಿಲ್ಲರ್ ಗಳಿಗೆ ಕೊಡ್ತಾರೆ.

ಯಾವುದೇ ಸುಳಿವು ನೀಡದೆ ಸುಫಾರಿ ಕಿಲ್ಲರ್ ಗಳ ಬಂಧನ
ನಾಗೇಶ್ವರರಾಂ ಹತ್ಯೆಗೆ ಯತ್ನ ಪ್ರಕರಣ ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ಆರೋಪಿಗಳ ಪತ್ತೆಗಾಗಿ ತನಿಖೆಗೆ ಇಳಿದ ದೊಡ್ಡಬಳ್ಳಾಪುರ ಪೊಲೀಸರು ಯಾವುದೇ ಸುಳಿವು ನೀಡದೆ ಆರೋಪಿಗಳ ಪತ್ತೆ ಮಾಡಿ ಬಂಧಿಸಿದ್ದಾರೆ. ನಾಗೇಶ್ವರರಾಂ ಶಾಲೆಯವರು ನನ್ನ ಹತ್ಯೆಗೆ ಯತ್ಸಿಸಿದ್ದಾರೆಂದು ಐದು ಶಾಲೆಗಳ ಹೆಸರು ನೀಡಿದ್ರು. ಅದರಲ್ಲಿ ರಾಮಚಂದ್ರರೆಡ್ಡಿಯ ಆರ್ ಸಿ ಶಾಲೆಯ ಹೆಸರನ್ನು ಹೇಳಿದ್ದರು. ಆರೋಪಿಗಳ ಬೆನ್ನತ್ತಿದ್ದ ಪೊಲೀಸರು ದಿನಾಂದ 16ನೇ ತಾರಿಖ್ ನಾಗೇಶ್ವರರಾಂ ಗೌರಿಬಿದನೂರಿನಿಂದ ಹೆಸರಘಟ್ಟಕ್ಕೆ ಬರುವ ಮಾರ್ಗದಲ್ಲಿನ ಸಿಸಿಕ್ಯಾಮಾರದಲ್ಲಿನ ಪುಡೇಜ್ ಪರಿಶೀಲನೆ ನಡೆಸಿದ್ದಾಗ ಎರಡು ಕಾರುಗಳು ಹಿಂಬಾಲಿಸುತ್ತಿರುವ ಗಮನಕ್ಕೆ ಬರುತ್ತದೆ. ಇದೇ ಆಧಾರದ ಮೇಲೆ ಬೆಂಗಳೂರಿನ ಕುರುಬರಹಳ್ಳಿಯಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಗಳನ್ನ ಬಂಧಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಪಟ್ಟಂತೆ ಶ್ರೀನಿವಾಸಮೂರ್ತಿ ಅಲಿಯಾಸ್ ಸೀನ, ವೆಂಕಟೇಶ್, ಯೋಗೇಶ್ , ನಾಗೇಶ್, ಆದರ್ಶ , ವೀರಭದ್ರ ಸೇರಿದಂತೆ ಆರು ಜನರನ್ನ ಬಂಧಿಸಿದ್ದಾರೆ ಸುಫಾರಿ ನೀಡಿದ ರಾಮಚಂದ್ರರೆಡ್ಡಿ ಮತ್ತು ಮೋಹನ್ ತಲೆಮರೆಸಿಕೊಂಡಿದ್ದಾರೆ.


ಸೂಚನೆ...

KN_BNG_NEL_07_30_supary_guruprasadh_KA10019

ಫೋಟೋದಲ್ಲಿ ಲೇಫ್ಟ್ ಸೈಡ್ ಆರೋಪಿ ರಾಮಚಂದ್ರ ರೆಡ್ಡಿ. ರೈಟ್ ಸೈಡ್ ಹಲ್ಲೆಗೊಳಗಾದ ನಾಗೇಶ್ವರ ರಾವ್

ಮಧ್ಯ ಇರಿಸುವರು ಯಲಹಂಕ ಶಾಸಕ ವಿಶ್ವನಾಥ್ ಇದು ಬ್ಯಾಡ. Conclusion:
Last Updated : Jun 1, 2019, 1:14 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.