ETV Bharat / state

ದೊಡ್ಡಬಳ್ಳಾಪುರ : ಬ್ಯಾಂಕ್​​ ಖಾತೆಯಲ್ಲಿದ್ದ 33 ಸಾವಿರ ರೂ. ಕಡಿತ.. ಬ್ಯಾಲೆನ್ಸ್ ನೋಡಲು ಹೋದಾಗ ಶಾಕ್​

author img

By ETV Bharat Karnataka Team

Published : Sep 16, 2023, 6:14 PM IST

Updated : Sep 16, 2023, 7:33 PM IST

ವ್ಯಕ್ತಿಯೊಬ್ಬರು ತಮ್ಮ ಬ್ಯಾಂಕ್​ ಖಾತೆಯಿಂದ 33 ಸಾವಿರ ರೂ ಹಣವನ್ನು ಕಳೆದುಕೊಂಡಿರುವ ಘಟನೆ ದೊಡ್ಡಬಳ್ಳಾಪುರದಲ್ಲಿ ನಡೆದಿದೆ.

rs-33000-theft-from-bank-account-in-doddaballapur
ದೊಡ್ಡಬಳ್ಳಾಪುರ : ಬ್ಯಾಂಕ್​​ ಖಾತೆಯಲ್ಲಿದ್ದ 33 ಸಾವಿರ ರೂ ಕಡಿತ.. ಬ್ಯಾಲೆನ್ಸ್ ನೋಡಲು ಹೋದಾಗ ಬೆಳಕಿಗೆ
ದೊಡ್ಡಬಳ್ಳಾಪುರ : ಬ್ಯಾಂಕ್​​ ಖಾತೆಯಲ್ಲಿದ್ದ 33 ಸಾವಿರ ರೂ ಕಡಿತ.. ಬ್ಯಾಲೆನ್ಸ್ ನೋಡಲು ಹೋದಾಗ ಬೆಳಕಿಗೆ

ದೊಡ್ಡಬಳ್ಳಾಪುರ : ವ್ಯಕ್ತಿಯೊಬ್ಬರ ಬ್ಯಾಂಕ್ ಖಾತೆಯಲ್ಲಿದ್ದ 33 ಸಾವಿರ ರೂ. ಹಣ ಕಡಿತವಾಗಿರುವ ಘಟನೆ ದೊಡ್ಡಬಳ್ಳಾಪುರದಲ್ಲಿ ಬೆಳಕಿಗೆ ಬಂದಿದೆ. ಈ ಸಂಬಂಧ ಬ್ಯಾಂಕ್ ವ್ಯವಸ್ಥಾಪಕರು ಹಾಗೂ ನಗರ ಠಾಣೆ ಪೊಲೀಸರಿಗೆ ಮಲ್ಲಿಕಾರ್ಜುನ್ ಎಂಬವರು ದೂರು ನೀಡಿದ್ದಾರೆ.

ದೊಡ್ಡಬಳ್ಳಾಪುರ ಹೊರವಲಯ ಮುಕ್ತಾಂಬಿಕಾ ಬಡಾವಣೆ ನಿವಾಸಿಯಾಗಿರುವ ಮಲ್ಲಿಕಾರ್ಜುನ್ ಮತ್ತು ಪುಷ್ಪ ದಂಪತಿ ಸಾವಿರಾರು ರೂ. ಕಳೆದುಕೊಂಡಿದ್ದಾರೆ. ನಗರದ ಚಿಕ್ಕಪೇಟೆ ಎಸ್​ಬಿಐ ಬ್ಯಾಂಕ್ ಶಾಖೆಯಲ್ಲಿ ಮಲ್ಲಿಕಾರ್ಜುನ-ಪುಷ್ಪಾ ದಂಪತಿ ಖಾತೆಯನ್ನು ಹೊಂದಿದ್ದಾರೆ. ಸೆಪ್ಟೆಂಬರ್ 11ರಂದು ಗೃಹಲಕ್ಷ್ಮಿ ಯೋಜನೆಯ ಹಣ ಖಾತೆಗೆ ಜಮೆ ಆಗಿರುವ ಬಗ್ಗೆ ಮೊಬೈಲ್​ಗೆ ಸಂದೇಶ ಬಂದಿತ್ತು.

ಹಣ ಬಂದಿರುವ ಬಗ್ಗೆ ಖಾತ್ರಿ ಮಾಡಿಕೊಳ್ಳಲು ಬ್ಯಾಂಕಿಗೆ ಹೋಗಿದ್ದರು. ಈ ವೇಳೆ ಖಾತೆಯನ್ನು ಪರಿಶೀಲಿಸಿದಾಗ ಹಣ ಜಮೆಯಾಗಿರಲಿಲ್ಲ. ಈ ಬಗ್ಗೆ ಬ್ಯಾಂಕ್ ಸಿಬ್ಬಂದಿಯನ್ನು ವಿಚಾರಿಸಿದಾಗ ಕೆವೈಸಿ ಮಾಡಿಸುವಂತೆ ಹೇಳಿ‌ದ್ದರು. ಕೆವೈಸಿ ಮಾಡಿಸಿದ ಬಳಿಕ ಪುಷ್ಪಾ ಅವರ ಖಾತೆಯಿಂದ ಆಗಸ್ಟ್ 11ರಿಂದ 19ರ ವರೆಗೆ ಒಟ್ಟು 35,999 ರೂಪಾಯಿ ಕಡಿತವಾಗಿದೆಯಂತೆ. ಮತ್ತೆ ಖಾತೆಯಲ್ಲಿನ ಹಣ ಕಡಿತವಾಗಿರುವ ಬಗ್ಗೆ ವಿಚಾರಿಸಲು ದಂಪತಿ ಬ್ಯಾಂಕ್​ ಬಂದಿದ್ದಾರೆ.

ಎರಡು ಖಾತೆಗಳಿಂದ ಹಣ ಕಡಿತ ಆರೋಪ : ಈ ಬಗ್ಗೆ ಪ್ರತಿಕ್ರಿಯಿಸಿರುವ ಹಣ ಕಳೆದುಕೊಂಡ ಮಲ್ಲಿಕಾರ್ಜುನ್​, ಮೊದಲ ಬಾರಿಗೆ ಆಗಸ್ಟ್​ 11ರಂದು 10 ಸಾವಿರ ಕಡಿತವಾಗಿದೆ. ಬಳಿಕ 13ರಂದು 1 ಸಾವಿರ ಕಡಿತವಾಗಿದೆ. ಹಾಗೆಯೇ 16ರಂದು 9999 ರೂ. ಕಡಿತವಾಗಿದೆ. 18ರಂದು 10 ಸಾವಿರ ಕಡಿತಗೊಂಡಿದೆ. 19ರಂದು 5 ಸಾವಿರ ಕಡಿತವಾಗಿದೆ. ಗೃಹ ಲಕ್ಷ್ಮೀ ಹಣ ಬಂದಿರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳಲು ಬ್ಯಾಂಕ್​ಗೆ ತೆರಳಿದ್ದಾಗ ​ಖಾತೆಯಿಂದ ಹಣ ಕಡಿತಗೊಂಡಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಬ್ಯಾಂಕ್​ನವರು ದೂರು ಸಲ್ಲಿಸುವಂತೆ ಹೇಳಿದರು. ಶುಕ್ರವಾರ ಮತ್ತೆ ಬ್ಯಾಂಕ್​ ಖಾತೆಯಿಂದ ಹಣ ಕಡಿತಗೊಂಡಿದೆ. ಇಲ್ಲಿಯವರೆಗೆ ಒಟ್ಟು ನನ್ನ ಖಾತೆಯಿಂದ 33 ಸಾವಿರ ರೂ ಕಡಿತಗೊಂಡಿದೆ ಎಂದು ಹೇಳಿದರು. ಒಟ್ಟು 69 ಸಾವಿರ ಕಳೆದುಕೊಂಡಿರುವುದಾಗಿ ಮಲ್ಲಿಕಾರ್ಜುನ್​ ಹೇಳಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ವಕೀಲರಾದ ಪ್ರಕಾಶ್​, ತಮ್ಮ ಖಾತೆಯಲ್ಲಿದ್ದ ಹಣ ಕಳೆದುಕೊಂಡಿರುವ ಬಗ್ಗೆ ಮಲ್ಲಿಕಾರ್ಜುನ್ ಅವರು ನಮ್ಮಲ್ಲಿ ಬಂದು ಹೇಳಿದ್ದರು. ಕಳೆದ ಆಗಸ್ಟ್​ ತಿಂಗಳಲ್ಲಿ ಇವರ ಮೊಬೈಲಿಗೆ ಗೃಹಲಕ್ಷ್ಮೀ ಯೋಜನೆಯಲ್ಲಿ ಹಣ ಬಂದಿರುವುದಾಗಿ ಸಂದೇಶ ಬಂದಿರುತ್ತದೆ. ಈ ಬಗ್ಗೆ ವಿಚಾರಿಸಲು ದೂರುದಾರರು ಬ್ಯಾಂಕಿಗೆ ಹೋಗಿದ್ದರು. ಈ ವೇಳೆ ಬ್ಯಾಂಕ್​ನಲ್ಲಿ ಕೆವೈಸಿ ಮಾಡಿಸಿದ್ದಾರೆ. ಬಳಿಕ ಸತತವಾಗಿ ನಾಲ್ಕು ಖಾತೆಯಿಂದ ಹಣ ಕಳೆದುಕೊಂಡಿದ್ದರು. ಈ ಬಗ್ಗೆ ಬ್ಯಾಂಕ್​ನಲ್ಲಿ ವಿಚಾರಿಸಿದಾಗ ದೂರು ನೀಡಲು ಹೇಳಿದ್ದಾರೆ. ಈ ಬಗ್ಗೆ ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ. ಇದೀಗ ದಂಪತಿಗಳಿಗೆ ಒಟ್ಟು 69 ಸಾವಿರ ರೂ. ನಷ್ಟವಾಗಿದೆ. ಇವರಿಗೆ ನ್ಯಾಯ ಸಿಕ್ಕಿಲ್ಲ, ಬೇಗ ನಮ್ಮ ದೂರುದಾರರಿಗೆ ಪರಿಹಾರ ನೀಡುವಂತೆ ಒತ್ತಾಯಿಸಿದರು.

ಇದನ್ನೂ ಓದಿ : ಮುಂಬೈ: ಮಹದೇವ್ ಆನ್​ಲೈನ್​​ ಬೆಟ್ಟಿಂಗ್​ ಪ್ರಕರಣ; ₹417 ಕೋಟಿ ಮೌಲ್ಯದ ಸಂಪತ್ತು ಜಪ್ತಿ

ದೊಡ್ಡಬಳ್ಳಾಪುರ : ಬ್ಯಾಂಕ್​​ ಖಾತೆಯಲ್ಲಿದ್ದ 33 ಸಾವಿರ ರೂ ಕಡಿತ.. ಬ್ಯಾಲೆನ್ಸ್ ನೋಡಲು ಹೋದಾಗ ಬೆಳಕಿಗೆ

ದೊಡ್ಡಬಳ್ಳಾಪುರ : ವ್ಯಕ್ತಿಯೊಬ್ಬರ ಬ್ಯಾಂಕ್ ಖಾತೆಯಲ್ಲಿದ್ದ 33 ಸಾವಿರ ರೂ. ಹಣ ಕಡಿತವಾಗಿರುವ ಘಟನೆ ದೊಡ್ಡಬಳ್ಳಾಪುರದಲ್ಲಿ ಬೆಳಕಿಗೆ ಬಂದಿದೆ. ಈ ಸಂಬಂಧ ಬ್ಯಾಂಕ್ ವ್ಯವಸ್ಥಾಪಕರು ಹಾಗೂ ನಗರ ಠಾಣೆ ಪೊಲೀಸರಿಗೆ ಮಲ್ಲಿಕಾರ್ಜುನ್ ಎಂಬವರು ದೂರು ನೀಡಿದ್ದಾರೆ.

ದೊಡ್ಡಬಳ್ಳಾಪುರ ಹೊರವಲಯ ಮುಕ್ತಾಂಬಿಕಾ ಬಡಾವಣೆ ನಿವಾಸಿಯಾಗಿರುವ ಮಲ್ಲಿಕಾರ್ಜುನ್ ಮತ್ತು ಪುಷ್ಪ ದಂಪತಿ ಸಾವಿರಾರು ರೂ. ಕಳೆದುಕೊಂಡಿದ್ದಾರೆ. ನಗರದ ಚಿಕ್ಕಪೇಟೆ ಎಸ್​ಬಿಐ ಬ್ಯಾಂಕ್ ಶಾಖೆಯಲ್ಲಿ ಮಲ್ಲಿಕಾರ್ಜುನ-ಪುಷ್ಪಾ ದಂಪತಿ ಖಾತೆಯನ್ನು ಹೊಂದಿದ್ದಾರೆ. ಸೆಪ್ಟೆಂಬರ್ 11ರಂದು ಗೃಹಲಕ್ಷ್ಮಿ ಯೋಜನೆಯ ಹಣ ಖಾತೆಗೆ ಜಮೆ ಆಗಿರುವ ಬಗ್ಗೆ ಮೊಬೈಲ್​ಗೆ ಸಂದೇಶ ಬಂದಿತ್ತು.

ಹಣ ಬಂದಿರುವ ಬಗ್ಗೆ ಖಾತ್ರಿ ಮಾಡಿಕೊಳ್ಳಲು ಬ್ಯಾಂಕಿಗೆ ಹೋಗಿದ್ದರು. ಈ ವೇಳೆ ಖಾತೆಯನ್ನು ಪರಿಶೀಲಿಸಿದಾಗ ಹಣ ಜಮೆಯಾಗಿರಲಿಲ್ಲ. ಈ ಬಗ್ಗೆ ಬ್ಯಾಂಕ್ ಸಿಬ್ಬಂದಿಯನ್ನು ವಿಚಾರಿಸಿದಾಗ ಕೆವೈಸಿ ಮಾಡಿಸುವಂತೆ ಹೇಳಿ‌ದ್ದರು. ಕೆವೈಸಿ ಮಾಡಿಸಿದ ಬಳಿಕ ಪುಷ್ಪಾ ಅವರ ಖಾತೆಯಿಂದ ಆಗಸ್ಟ್ 11ರಿಂದ 19ರ ವರೆಗೆ ಒಟ್ಟು 35,999 ರೂಪಾಯಿ ಕಡಿತವಾಗಿದೆಯಂತೆ. ಮತ್ತೆ ಖಾತೆಯಲ್ಲಿನ ಹಣ ಕಡಿತವಾಗಿರುವ ಬಗ್ಗೆ ವಿಚಾರಿಸಲು ದಂಪತಿ ಬ್ಯಾಂಕ್​ ಬಂದಿದ್ದಾರೆ.

ಎರಡು ಖಾತೆಗಳಿಂದ ಹಣ ಕಡಿತ ಆರೋಪ : ಈ ಬಗ್ಗೆ ಪ್ರತಿಕ್ರಿಯಿಸಿರುವ ಹಣ ಕಳೆದುಕೊಂಡ ಮಲ್ಲಿಕಾರ್ಜುನ್​, ಮೊದಲ ಬಾರಿಗೆ ಆಗಸ್ಟ್​ 11ರಂದು 10 ಸಾವಿರ ಕಡಿತವಾಗಿದೆ. ಬಳಿಕ 13ರಂದು 1 ಸಾವಿರ ಕಡಿತವಾಗಿದೆ. ಹಾಗೆಯೇ 16ರಂದು 9999 ರೂ. ಕಡಿತವಾಗಿದೆ. 18ರಂದು 10 ಸಾವಿರ ಕಡಿತಗೊಂಡಿದೆ. 19ರಂದು 5 ಸಾವಿರ ಕಡಿತವಾಗಿದೆ. ಗೃಹ ಲಕ್ಷ್ಮೀ ಹಣ ಬಂದಿರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳಲು ಬ್ಯಾಂಕ್​ಗೆ ತೆರಳಿದ್ದಾಗ ​ಖಾತೆಯಿಂದ ಹಣ ಕಡಿತಗೊಂಡಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಬ್ಯಾಂಕ್​ನವರು ದೂರು ಸಲ್ಲಿಸುವಂತೆ ಹೇಳಿದರು. ಶುಕ್ರವಾರ ಮತ್ತೆ ಬ್ಯಾಂಕ್​ ಖಾತೆಯಿಂದ ಹಣ ಕಡಿತಗೊಂಡಿದೆ. ಇಲ್ಲಿಯವರೆಗೆ ಒಟ್ಟು ನನ್ನ ಖಾತೆಯಿಂದ 33 ಸಾವಿರ ರೂ ಕಡಿತಗೊಂಡಿದೆ ಎಂದು ಹೇಳಿದರು. ಒಟ್ಟು 69 ಸಾವಿರ ಕಳೆದುಕೊಂಡಿರುವುದಾಗಿ ಮಲ್ಲಿಕಾರ್ಜುನ್​ ಹೇಳಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ವಕೀಲರಾದ ಪ್ರಕಾಶ್​, ತಮ್ಮ ಖಾತೆಯಲ್ಲಿದ್ದ ಹಣ ಕಳೆದುಕೊಂಡಿರುವ ಬಗ್ಗೆ ಮಲ್ಲಿಕಾರ್ಜುನ್ ಅವರು ನಮ್ಮಲ್ಲಿ ಬಂದು ಹೇಳಿದ್ದರು. ಕಳೆದ ಆಗಸ್ಟ್​ ತಿಂಗಳಲ್ಲಿ ಇವರ ಮೊಬೈಲಿಗೆ ಗೃಹಲಕ್ಷ್ಮೀ ಯೋಜನೆಯಲ್ಲಿ ಹಣ ಬಂದಿರುವುದಾಗಿ ಸಂದೇಶ ಬಂದಿರುತ್ತದೆ. ಈ ಬಗ್ಗೆ ವಿಚಾರಿಸಲು ದೂರುದಾರರು ಬ್ಯಾಂಕಿಗೆ ಹೋಗಿದ್ದರು. ಈ ವೇಳೆ ಬ್ಯಾಂಕ್​ನಲ್ಲಿ ಕೆವೈಸಿ ಮಾಡಿಸಿದ್ದಾರೆ. ಬಳಿಕ ಸತತವಾಗಿ ನಾಲ್ಕು ಖಾತೆಯಿಂದ ಹಣ ಕಳೆದುಕೊಂಡಿದ್ದರು. ಈ ಬಗ್ಗೆ ಬ್ಯಾಂಕ್​ನಲ್ಲಿ ವಿಚಾರಿಸಿದಾಗ ದೂರು ನೀಡಲು ಹೇಳಿದ್ದಾರೆ. ಈ ಬಗ್ಗೆ ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ. ಇದೀಗ ದಂಪತಿಗಳಿಗೆ ಒಟ್ಟು 69 ಸಾವಿರ ರೂ. ನಷ್ಟವಾಗಿದೆ. ಇವರಿಗೆ ನ್ಯಾಯ ಸಿಕ್ಕಿಲ್ಲ, ಬೇಗ ನಮ್ಮ ದೂರುದಾರರಿಗೆ ಪರಿಹಾರ ನೀಡುವಂತೆ ಒತ್ತಾಯಿಸಿದರು.

ಇದನ್ನೂ ಓದಿ : ಮುಂಬೈ: ಮಹದೇವ್ ಆನ್​ಲೈನ್​​ ಬೆಟ್ಟಿಂಗ್​ ಪ್ರಕರಣ; ₹417 ಕೋಟಿ ಮೌಲ್ಯದ ಸಂಪತ್ತು ಜಪ್ತಿ

Last Updated : Sep 16, 2023, 7:33 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.