ಆನೇಕಲ್(ಬೆಂಗಳೂರು): ಆನೇಕಲ್ ಗಡಿಭಾಗದಲ್ಲಿರುವ ಗುಮ್ಮಳಾಪುರದಲ್ಲಿ ನೆತ್ತರು ಹರಿದಿದೆ. ಯುವಕನೋರ್ವನನ್ನು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿರುವ ಘಟನೆ ಮಂಗಳವಾರ ನಡೆದಿದೆ.
ಗುಮ್ಮಳಾಪುರದ ನಿವಾಸಿ 29 ವರ್ಷದ ಉದಯ್ ಕೊಲೆಯಾದ ಯುವಕ. ಬೈಕ್ನಲ್ಲಿ ಬಂದ ಅಪರಿಚಿತರು ಉದಯ್ನನ್ನು ಕೊಲೆ ಮಾಡಿದ್ದಾರೆ ಎನ್ನಲಾಗ್ತಿದೆ. ಈತ ವಾರದ ಹಿಂದೆ ಕುಡಿದ ಮತ್ತಿನಲ್ಲಿ ಸ್ಥಳೀಯ ಯುವಕರೊಂದಿಗೆ ಗಲಾಟೆ ಮಾಡಿಕೊಂಡಿದ್ದ. ಅದೇ ದ್ವೇಷದಿಂದ ಕೊಲೆಗೀಡಾಗಿರುವ ಶಂಕೆ ವ್ಯಕ್ತವಾಗಿದೆ.
ಓದಿ : ತಮಿಳುನಾಡಿನಿಂದ ಐಷಾರಾಮಿ ಕಾರಲ್ಲಿ ಬಂದು ಮನೆಗಳ್ಳತನ: ಹೈದರಾಬಾದ್ನಲ್ಲಿ ಸೆರೆಹಿಡಿದ ಸಿಸಿಬಿ
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊಲೆಯಾದ ಉದಯ್, ಈ ಹಿಂದೆ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದ ಕಿತ್ತಗಾನಹಳ್ಳಿ ವಾಸು ಕೊಲೆ ಪ್ರಕರಣದಲ್ಲಿ ಭಾಗಿಯಾಗಿ ಜೈಲು ಸೇರಿದ್ದ. ಇತ್ತೀಚೆಗೆ ಜೈಲಿನಿಂದ ಹೊರ ಬಂದು ಪೈಂಟಿಂಗ್ ವೃತ್ತಿ ಮಾಡುತ್ತಿದ್ದ ಎಂದು ತಿಳಿದುಬಂದಿದೆ.