ETV Bharat / state

ಆನೇಕಲ್ ಬಳಿ​ ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಬರ್ಬರ ಕೊಲೆ

ಕರ್ನಾಟಕ- ತಮಿಳುನಾಡು ಗಡಿಭಾಗದ ಗುಮ್ಮಳಾಪುರದಲ್ಲಿ ಯುವಕನ ಬರ್ಬರ ಹತ್ಯೆ ನಡೆದಿದೆ. ಹಳೇ ದ್ವೇಷದ ಹಿನ್ನೆಲೆ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

author img

By

Published : Jun 30, 2021, 11:49 AM IST

Updated : Jun 30, 2021, 11:55 AM IST

Young man murder
ಕೊಲೆಯಾದ ಯುವಕ ಉದಯ್

ಆನೇಕಲ್(ಬೆಂಗಳೂರು): ಆನೇಕಲ್ ಗಡಿಭಾಗದಲ್ಲಿರುವ ಗುಮ್ಮಳಾಪುರದಲ್ಲಿ ನೆತ್ತರು ಹರಿದಿದೆ. ಯುವಕನೋರ್ವನನ್ನು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿರುವ ಘಟನೆ ಮಂಗಳವಾರ ನಡೆದಿದೆ.

ಗುಮ್ಮಳಾಪುರದ ನಿವಾಸಿ 29 ವರ್ಷದ ಉದಯ್ ಕೊಲೆಯಾದ ಯುವಕ. ಬೈಕ್​ನಲ್ಲಿ ಬಂದ ಅಪರಿಚಿತರು ಉದಯ್​ನನ್ನು ಕೊಲೆ ಮಾಡಿದ್ದಾರೆ ಎನ್ನಲಾಗ್ತಿದೆ. ಈತ ವಾರದ ಹಿಂದೆ ಕುಡಿದ ಮತ್ತಿನಲ್ಲಿ ಸ್ಥಳೀಯ ಯುವಕರೊಂದಿಗೆ ಗಲಾಟೆ ಮಾಡಿಕೊಂಡಿದ್ದ. ಅದೇ ದ್ವೇಷದಿಂದ ಕೊಲೆಗೀಡಾಗಿರುವ ಶಂಕೆ ವ್ಯಕ್ತವಾಗಿದೆ.

Young man murder
ಕೊಲೆಯಾದ ಯುವಕ ಉದಯ್

ಓದಿ : ತಮಿಳುನಾಡಿನಿಂದ ಐಷಾರಾಮಿ ಕಾರಲ್ಲಿ ಬಂದು ಮನೆಗಳ್ಳತನ: ಹೈದರಾಬಾದ್​ನಲ್ಲಿ ಸೆರೆಹಿಡಿದ ಸಿಸಿಬಿ

ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊಲೆಯಾದ ಉದಯ್​, ಈ ಹಿಂದೆ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದ ಕಿತ್ತಗಾನಹಳ್ಳಿ ವಾಸು ಕೊಲೆ ಪ್ರಕರಣದಲ್ಲಿ ಭಾಗಿಯಾಗಿ ಜೈಲು ಸೇರಿದ್ದ. ಇತ್ತೀಚೆಗೆ ಜೈಲಿನಿಂದ ಹೊರ ಬಂದು ಪೈಂಟಿಂಗ್ ವೃತ್ತಿ ಮಾಡುತ್ತಿದ್ದ ಎಂದು ತಿಳಿದುಬಂದಿದೆ.

ಆನೇಕಲ್(ಬೆಂಗಳೂರು): ಆನೇಕಲ್ ಗಡಿಭಾಗದಲ್ಲಿರುವ ಗುಮ್ಮಳಾಪುರದಲ್ಲಿ ನೆತ್ತರು ಹರಿದಿದೆ. ಯುವಕನೋರ್ವನನ್ನು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿರುವ ಘಟನೆ ಮಂಗಳವಾರ ನಡೆದಿದೆ.

ಗುಮ್ಮಳಾಪುರದ ನಿವಾಸಿ 29 ವರ್ಷದ ಉದಯ್ ಕೊಲೆಯಾದ ಯುವಕ. ಬೈಕ್​ನಲ್ಲಿ ಬಂದ ಅಪರಿಚಿತರು ಉದಯ್​ನನ್ನು ಕೊಲೆ ಮಾಡಿದ್ದಾರೆ ಎನ್ನಲಾಗ್ತಿದೆ. ಈತ ವಾರದ ಹಿಂದೆ ಕುಡಿದ ಮತ್ತಿನಲ್ಲಿ ಸ್ಥಳೀಯ ಯುವಕರೊಂದಿಗೆ ಗಲಾಟೆ ಮಾಡಿಕೊಂಡಿದ್ದ. ಅದೇ ದ್ವೇಷದಿಂದ ಕೊಲೆಗೀಡಾಗಿರುವ ಶಂಕೆ ವ್ಯಕ್ತವಾಗಿದೆ.

Young man murder
ಕೊಲೆಯಾದ ಯುವಕ ಉದಯ್

ಓದಿ : ತಮಿಳುನಾಡಿನಿಂದ ಐಷಾರಾಮಿ ಕಾರಲ್ಲಿ ಬಂದು ಮನೆಗಳ್ಳತನ: ಹೈದರಾಬಾದ್​ನಲ್ಲಿ ಸೆರೆಹಿಡಿದ ಸಿಸಿಬಿ

ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊಲೆಯಾದ ಉದಯ್​, ಈ ಹಿಂದೆ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದ ಕಿತ್ತಗಾನಹಳ್ಳಿ ವಾಸು ಕೊಲೆ ಪ್ರಕರಣದಲ್ಲಿ ಭಾಗಿಯಾಗಿ ಜೈಲು ಸೇರಿದ್ದ. ಇತ್ತೀಚೆಗೆ ಜೈಲಿನಿಂದ ಹೊರ ಬಂದು ಪೈಂಟಿಂಗ್ ವೃತ್ತಿ ಮಾಡುತ್ತಿದ್ದ ಎಂದು ತಿಳಿದುಬಂದಿದೆ.

Last Updated : Jun 30, 2021, 11:55 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.