ರಾಮನಗರ : ಈಗಲ್ಟನ್ ರೆಸಾರ್ಟ್ನಲ್ಲಿ ಶಾಸಕ ಆನಂದ್ ಸಿಂಗ್ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಕಂಪ್ಲಿ ಶಾಸಕ ಗಣೇಶ್, ಇದು ಆಕಸ್ಮಿಕವಾಗಿ ನಡೆದ ಘಟನೆ ಎಂದು ಕೃತ್ಯವನ್ನು ಸಮರ್ಥಿಸಿಕೊಂಡಿದ್ದಾರೆ.
ಆನಂಗ್ ಸಿಂಗ್ ಮೇಲೆ ನಾನು ಬೇಕಂತ ದೈಹಿಕ ಹಲ್ಲೆ ಮಾಡಿಲ್ಲ, ಅದು ಆಕಸ್ಮಿಕವಾಗಿ ನಡೆದ ಘಟನೆ. ಈ ಸಂದರ್ಭದಲ್ಲಿ ತನ್ವೀರ್ ಶೇಠ್, ಭೀಮಾನಾಯ್ಕ್, ಹರಿಹರ ಕ್ಷೇತ್ರದ ಶಾಸಕ ರಾಮಪ್ಪ ಸ್ಥಳದಲ್ಲಿದ್ದರು.
ವೈಯಕ್ತಿಕವಾಗಿ ನನಗೂ ಆನಂದ್ಸಿಂಗ್ಗೂ ಯಾವುದೇ ದ್ವೇಷವಿಲ್ಲ. ನಾನು ಯಾವುದೇ ರೀತಿಯ ಗಂಭೀರ ಹಾಗೂ ಮಾರಣಾಂತಿಕ ಹಲ್ಲೆ ನಡೆಸಿಲ್ಲ ಎಂದು ಪೊಲೀಸ್ ವಿಚಾರಣೆ ವೇಳೆ ಶಾಸಕ ಗಣೇಶ್ ಹೇಳಿಕೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.