ETV Bharat / state

ಶೃತಿ ಮಾಜಿ ಕಾರು ಚಾಲಕ ಅನುಮಾನಾಸ್ಪದ ಸಾವು

author img

By

Published : Dec 18, 2019, 7:32 PM IST

Updated : Dec 18, 2019, 11:28 PM IST

ಸ್ಯಾಂಡಲ್​ವುಡ್​ ನಟಿ ಶೃತಿ ಅವರ ಮಾಜಿ ಕಾರು ಚಾಲಕ ಅನುಮಾನಾಸ್ಪದ ರೀತಿಯಲ್ಲಿ ಸಾವಿಗೀಡಾಗಿದ್ದು, ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ.

ನಟಿ ಶೃತಿ ಕಾರು ಚಾಲಕನ ಅನುಮಾನಸ್ಪದ ಸಾವು, Actress Shruti's car driver commits suicide
ನಟಿ ಶೃತಿ ಕಾರು ಚಾಲಕನ ಅನುಮಾನಸ್ಪದ ಸಾವು

ನೆಲಮಂಗಲ: ಸ್ಯಾಂಡಲ್​ವುಡ್​ ನಟಿ ಶೃತಿ ಅವರ ಮಾಜಿ ಕಾರು ಚಾಲಕ ಅನುಮಾನಾಸ್ಪದ ರೀತಿಯಲ್ಲಿ ಸಾವಿಗೀಡಾಗಿದ್ದು, ಹಲವು ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ.

25 ವರ್ಷದ ಮಂಜುನಾಥ್ ಸಿಂಗ್ ನೇಣಿಗೆ ಶರಣಾದಾತ. ಬೆಂಗಳೂರು ಹೊರವಲಯ ಮಾಗಡಿ ರಸ್ತೆಯ ಮಾಚೋಹಳ್ಳಿ ಅರಣ್ಯ ಪ್ರದೇಶದಲ್ಲಿ ಈತ ನೇಣಿಗೆ ಶರಣಾಗಿದ್ದಾನೆ. ಈತ ಆರು ತಿಂಗಳ ಹಿಂದೆಯಷ್ಟೇ ಶೃತಿ ಅವರ ಕಾರು ಚಾಲನೆ ಕೆಲಸ ಬಿಟ್ಟಿದ್ದನಂತೆ. ಮಂಗಳವಾರ ಮನೆಯಿಂದ ಹೊರಹೋದಾತ ಬುಧವಾರ ಹೆಣವಾಗಿ ಪತ್ತೆಯಾಗಿದ್ದು, ಇದು ಆತ್ಮಹತ್ಯೆಯಲ್ಲ ಕೊಲೆ ಎಂದು ಸಂಬಂಧಿಕರು ಆರೋಪ ಮಾಡುತ್ತಿದ್ದಾರೆ.

ನಟಿ ಶೃತಿ ಕಾರು ಚಾಲಕನ ಅನುಮಾನಸ್ಪದ ಸಾವು

ಮಂಗಳವಾರ ರಾತ್ರಿ ಮಂಜುನಾಥ್​ ಸ್ನೇಹಿತರೊಂದಿಗೆ ಕಡಬಗೆರೆಗೆ ಪಾರ್ಟಿಗೆ ಹೋಗಿದ್ದ ಎನ್ನಲಾಗ್ತಿದೆ. ಪಾರ್ಟಿಯಲ್ಲಿ ಸ್ನೇಹಿತರ ನಡುವೆ ನಡೆದಿರುವ ವಿಷಯ ನಿಗೂಢವಾಗಿದೆ. ಅಲ್ಲದೆ ಟವಲ್ ನಲ್ಲಿ ಮರಕ್ಕೆ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಮಂಜುನಾಥ್ ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಾವಿನ ಅಸಲಿ ಸತ್ಯವನ್ನ ಪೊಲೀಸರು ಬಯಲು ಮಾಡಬೇಕಿದೆ.

ನೆಲಮಂಗಲ: ಸ್ಯಾಂಡಲ್​ವುಡ್​ ನಟಿ ಶೃತಿ ಅವರ ಮಾಜಿ ಕಾರು ಚಾಲಕ ಅನುಮಾನಾಸ್ಪದ ರೀತಿಯಲ್ಲಿ ಸಾವಿಗೀಡಾಗಿದ್ದು, ಹಲವು ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ.

25 ವರ್ಷದ ಮಂಜುನಾಥ್ ಸಿಂಗ್ ನೇಣಿಗೆ ಶರಣಾದಾತ. ಬೆಂಗಳೂರು ಹೊರವಲಯ ಮಾಗಡಿ ರಸ್ತೆಯ ಮಾಚೋಹಳ್ಳಿ ಅರಣ್ಯ ಪ್ರದೇಶದಲ್ಲಿ ಈತ ನೇಣಿಗೆ ಶರಣಾಗಿದ್ದಾನೆ. ಈತ ಆರು ತಿಂಗಳ ಹಿಂದೆಯಷ್ಟೇ ಶೃತಿ ಅವರ ಕಾರು ಚಾಲನೆ ಕೆಲಸ ಬಿಟ್ಟಿದ್ದನಂತೆ. ಮಂಗಳವಾರ ಮನೆಯಿಂದ ಹೊರಹೋದಾತ ಬುಧವಾರ ಹೆಣವಾಗಿ ಪತ್ತೆಯಾಗಿದ್ದು, ಇದು ಆತ್ಮಹತ್ಯೆಯಲ್ಲ ಕೊಲೆ ಎಂದು ಸಂಬಂಧಿಕರು ಆರೋಪ ಮಾಡುತ್ತಿದ್ದಾರೆ.

ನಟಿ ಶೃತಿ ಕಾರು ಚಾಲಕನ ಅನುಮಾನಸ್ಪದ ಸಾವು

ಮಂಗಳವಾರ ರಾತ್ರಿ ಮಂಜುನಾಥ್​ ಸ್ನೇಹಿತರೊಂದಿಗೆ ಕಡಬಗೆರೆಗೆ ಪಾರ್ಟಿಗೆ ಹೋಗಿದ್ದ ಎನ್ನಲಾಗ್ತಿದೆ. ಪಾರ್ಟಿಯಲ್ಲಿ ಸ್ನೇಹಿತರ ನಡುವೆ ನಡೆದಿರುವ ವಿಷಯ ನಿಗೂಢವಾಗಿದೆ. ಅಲ್ಲದೆ ಟವಲ್ ನಲ್ಲಿ ಮರಕ್ಕೆ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಮಂಜುನಾಥ್ ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಾವಿನ ಅಸಲಿ ಸತ್ಯವನ್ನ ಪೊಲೀಸರು ಬಯಲು ಮಾಡಬೇಕಿದೆ.

Intro:ನಟಿ ಶೃತಿ ಕಾರು ಚಾಲಕನ ಅನುಮಾನಸ್ಪದ ಸಾವು.

ಸಂಶಯಕ್ಕೆ ಕಾರಣವಾಯ್ತು ಟವಲ್ ನಲ್ಲಿ ನೇಣಿಗೆ ಶರಣಾಗಿದ್ದು
Body:ನೆಲಮಂಗಲ : ಕನ್ನಡ ಸಿನಿರಂಗದ ಪ್ರಸಿದ್ದ ನಟಿ ಶೃತಿ, ಎರಡೂವರೆ ವರ್ಷದಿಂದ ಶೃತಿ ಕಾರು ಚಾಲಕನಾಗಿದ್ದ ವ್ಯಕ್ತಿ ಅನುಮಾನಸ್ಪದ ರೀತಿಯಲ್ಲಿ ನೇಣಿಗೆ ಶರಣಾಗಿದ್ದು ಹಲವು ಅನುಮಾನಕ್ಕೆ ಎಡೆ ಮಾಡಿದೆ.

ಫ್ಲೋ...



ಬೆಂಗಳೂರು ಹೊರವಲಯ ಮಾಗಡಿ ರಸ್ತೆಯ ಮಾಚೋಹಳ್ಳಿ ಫಾರೆಸ್ಟ್.. ಅರಣ್ಯ ಪ್ರದೇಶವಾಗಿದ್ದರಿಂದ ಜನ ಸಂಚಾರ ವಿರಳವಾಗಿತ್ತು..ಫಾರೆಸ್ಟ್ ಗೇಟ್ ಬಳಿಯೇ ಖ್ಯಾತಿ ನಟಿಗೆ ಕಾರು ಚಾಲಕನಾಗಿದ್ದ ವ್ಯಕ್ತಿ ನೇಣಿಗೆ ಶರಣಾಗಿದ್ದ..25 ವರ್ಷದ ಮಂಜುನಾಥ್ ಸಿಂಗ್ ನೇಣಿಗೆ ಶರಣಾದವ, ಮೃತ ಮಂಜುನಾಥ್ ನಟಿ ಶೃತಿ ಮನೆಯಲ್ಲಿ ಎರಡೂವರೆ ವರ್ಷದಿಂದ ಡ್ರೈವರ್ ಆಗಿ ಕೆಲಸ ಮಾಡಿದ್ದ. ಆರು ತಿಂಗಳ ಹಿಂದೆಯಾಷ್ಟೇ ಕೆಲಸ ಬಿಟ್ಟಿದ್ದ, ನಿನ್ನೆ ಮನೆಯಿಂದ ಹೊರಹೋದವ ವಾಪಸ್ಸು ಬಂದಿಲ್ಲ ಬೆಳಗ್ಗೆ ಆತ್ಮಹತ್ಯೆ ಮಾಡಿಕೊಂಡಿರುವ ವಿಷಯ ತಿಳಿಯಿತು. ಆತ ಆತ್ಮಹತ್ಯೆ ಮಾಡಿಕೊಳ್ಳುವ ವ್ಯಕ್ತಿಯಲ್ಲ ಅವನ ಸಾವಿಗೆ ಬೇರೆಯದ್ದೇ ಕಾರಣವಿದೆಯೆಂದು ಸಂಶಯ ವ್ಯಕ್ತಪಡಿಸಿದರು ಮೃತ ಮಂಜುನಾಥ್ ಸಂಬಂಧಿಕರು

ಬೈಟ್ : ದೀಪಕ್ ಸಿಂಗ್ , ಮೃತ ಮಂಜುನಾಥ್ ಸಂಬಂಧಿ.


ನಿನ್ನೆ ರಾತ್ರಿ ಸ್ನೇಹಿತರೊಂದಿಗೆ ಕಡಬಗೆರೆಯಲ್ಲಿ ಪಾರ್ಟಿಗೆ ಹೋಗಿದ್ದ ಎನ್ನಲಾಗಿದೆ. ಪಾರ್ಟಿಯಲ್ಲಿ ಸ್ನೇಹಿತರ ನಡುವೆ ನಡೆದಿರುವ ವಿಷಯ ನಿಗೂಢವಾಗಿದೆ. ಅಲ್ಲದೆ ಟವಲ್ ನಲ್ಲಿ ಮರಕ್ಕೆ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಮಂಜುನಾಥ್ ಪತ್ತೆಯಾಗಿರುವುದು ಹಲವು ಅನುಮಾಶಕ್ಕೆ ಎಡೆ ಮಾಡಿದೆ.
ಪೊಲೀಸರಿಂದ ಸೂಕ್ತ ತನಿಖೆಯಾಗಬೇಕೆನ್ನುವುದು ಮೃತ ಮಂಜುನಾಥ್ ಸಂಬಂಧಿ ಒತ್ತಾಯ

ಬೈಟ್ : ದೀಪಕ್ ಸಿಂಗ್ , ಮೃತ ಮಂಜುನಾಥ್ ಸಂಬಂಧಿ.

ಮಂಜುನಾಥ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಂಜುನಾಥ್ ಸಾವಿನ ಅಸಲಿ ಸತ್ಯವನ್ನ ಬಯಲು ಮಾಡಲಿದ್ದಾರೆ.
Conclusion:
Last Updated : Dec 18, 2019, 11:28 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.