ದೇವನಹಳ್ಳಿ (ಬೆಂಗಳೂರು ಗ್ರಾಮಾಂತರ): ಟೋಲ್ ಸುಂಕ ಕೇಳಿದ್ದಕ್ಕೆ ಮಚ್ಚು ತೋರಿಸಿ ಬೆದರಿಕೆ ಹಾಕಿದ್ದಾನೆಂದು ಟೋಲ್ ಸಿಬ್ಬಂದಿ ರೈತನ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಆದರೆ ರೈತ ಹೊಲದಲ್ಲಿ ಬೇಲಿ ಕತ್ತರಿಸಲು ಕಾರಿನಲ್ಲಿ ಮಚ್ಚು ತೆಗೆದುಕೊಂಡು ಹೋಗುತ್ತಿದ್ದಾಗ, ಟೋಲ್ ಸುಂಕ ಕಟ್ಟುವ ವಿಚಾರಕ್ಕೆ ಸಿಬ್ಬಂದಿ ಮತ್ತು ರೈತನ ನಡುವೆ ವಾಗ್ವಾದ ನಡೆದಿದೆ. ಈ ವೇಳೆ ರೈತ ಮಚ್ಚು ತೋರಿಸಿದ್ದಾನೆಂಬ ಆರೋಪ ಕೇಳಿ ಬಂದಿದೆ.
ಇದನ್ನೂ ಓದಿ:ರೇಖಾ ಕದಿರೇಶ್ Murder Case: ಆರೋಪಿಗಳ ಪತ್ತೆಗಾಗಿ ವಿಶೇಷ ತಂಡ ರಚಿಸಿ ತನಿಖೆ ಚುರುಕು
ಚಿಕ್ಕಜಾಲ ಪೊಲೀಸರು ರೈತನನ್ನ ಠಾಣೆಗೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸಿದಾಗ ಸತ್ಯಾಂಶ ಬೆಳಕಿಗೆ ಬಂದಿದೆ. ನಂತರ ಆತನನ್ನು ಬಿಟ್ಟು ಕಳಿಸಲಾಗಿದೆ. ಸ್ಥಳೀಯ ರೈತರಿಗೆ ಟೋಲ್ ಸುಂಕ ಕಟ್ಟಲು ವಿನಾಯಿತಿ ಇದೆ. ಹೀಗಿರುವಾಗ ಸಿಬ್ಬಂದಿ ರೈತರನ್ನು ಟೋಲ್ ಕೇಳುವಂತಿಲ್ಲ, ಹಾಗೆಯೇ ರೈತ ಮಚ್ಚು ತೋರಿಸುವ ಪರಿಸ್ಥಿತಿ ಎದುರಾಗುವುದಿಲ್ಲ ಎಂಬ ಮಾತುಗಳು ಸಾರ್ವಜನಿಕರಿಂದ ಕೇಳಿಬರುತ್ತಿವೆ.