ETV Bharat / state

ದೇವಿಗೆ ಸಾಮೂಹಿಕ ಪ್ರಾಣಿ ಬಲಿ ಕೊಟ್ಟ ಜನ.. ಮೌಢ್ಯಕ್ಕಿಲ್ಲವೇ ತಡೆ.. ಜಿಲ್ಲಾಡಳಿತ ಇದೆಯಾ, ಇಲ್ವಾ? - undefined

ರಾಜ್ಯದಲ್ಲಿ ಪ್ರಾಣಿ ಬಲಿ ನಿಷೇಧ ಕಾಯ್ದೆ ಇದ್ದರೂ ಬಾಗಲಕೋಟೆ ಜಿಲ್ಲೆಯ ಮಂಗಳಗುಡ್ಡ ಗ್ರಾಮದಲ್ಲಿ ಮೂರು ವರ್ಷಕ್ಕೂಮ್ಮೆ ನಡೆಯುವ ದೇವಿ ಜಾತ್ರೆಯ ಹೆಸರಿನಲ್ಲಿ ಪ್ರಾಣಿಗಳ ಮಾರಣ ಹೋಮ ನಡೆಯುತ್ತದೆ. ಈ ಬಗ್ಗೆ ಜಿಲ್ಲಾಡಳಿತ ಕಣ್ಣುಚ್ಚಿ ಕುಳಿತಿರುವುದು ಪ್ರಜ್ಞಾವಂತರ ಆಕ್ರೋಶಕ್ಕೆ ಕಾರಣವಾಗಿದೆ.

ಸಾಮೂಹಿಕವಾಗಿ ಪ್ರಾಣಿ ಬಲಿ ಕೊಟ್ಟ ಗ್ರಾಮಸ್ಥರು
author img

By

Published : Apr 24, 2019, 12:16 PM IST

ಬಾಗಲಕೋಟೆ: ಲೋಕಸಭಾ ಚುನಾವಣೆಯ ಮತದಾನ ನಡೆದ ದಿನವೇ ಪ್ರಾಣಿ ಬಲಿ ನಡೆದಿದ್ದು, ಚುನಾವಣೆಯ ಗುಂಗಿನಲ್ಲಿದ್ದ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಕುರುಡಾಗಿರುವುದು ಸಾರ್ವಜನಿಕರ ಚರ್ಚೆಗೆ ಗ್ರಾಸವಾಗಿದೆ.

ರಾಜ್ಯದಲ್ಲಿ ಪ್ರಾಣಿ ಬಲಿ ನಿಷೇಧ ಕಾಯ್ದೆ ಇದ್ದರೂ, ಬಾಗಲಕೋಟೆ ಜಿಲ್ಲೆಯ ಮಂಗಳಗುಡ್ಡ ಗ್ರಾಮದಲ್ಲಿ ಮೂರು ವರ್ಷಕ್ಕೂಮ್ಮೆ ನಡೆಯುವ ದೇವಿ ಜಾತ್ರೆಯ ಹೆಸರಿನಲ್ಲಿ ಪ್ರಾಣಿಗಳ ಮಾರಣ ಹೋಮ ನಡೆಯುತ್ತದೆ. ಈ ಬಗ್ಗೆ ಜಿಲ್ಲಾಡಳಿತ ಕಣ್ಮುಚ್ಚಿ ಕುಳಿತಿರುವುದು ಪ್ರಜ್ಞಾವಂತರ ಆಕ್ರೋಶಕ್ಕೆ ಕಾರಣವಾಗಿದೆ.

ಬಾದಾಮಿ ತಾಲೂಕಿನ ಮಂಗಳಗುಡ್ಡ ಗ್ರಾಮದಲ್ಲಿಮಂಗಳಾ ದೇವಿಯ ಹೆಸರಿನಲ್ಲಿ ಕೋಣಗಳನ್ನು ಬಲಿ ಕೊಡುವ ಪದ್ದತಿ ಹಿಂದಿನಿಂದಲೂ ಬಂದಿದೆ. ದೇವಸ್ಥಾನದ ಮುಂದೆ ಇರುವ ಪಾದಗಟ್ಟೆಯಲ್ಲಿ ಸಾಮೂಹಿಕವಾಗಿ ಸುಮಾರು 80 ರಿಂದ 100 ಪ್ರಾಣಿಗಳನ್ನು ಬಲಿ ನೀಡಲಾಗುತ್ತದೆ. ಈಗಲೂ ಇಂತಹ ಮೂಢನಂಬಿಕೆ ಮುಂದುವರೆದಿದ್ದು ಬೇಸರದ ಸಂಗತಿ.

ಮಂಗಳಾ ದೇವಿಯ ಹೆಸರಿನಲ್ಲಿ ಕೋಣಗಳ ಬಲಿ

ಚುನಾವಣೆ ಹಿನ್ನೆಲೆ ಏಪ್ರಿಲ್ 23 ರಂದು ಜಿಲ್ಲೆಯಲ್ಲಿ ನಡೆಯುವ ಸಂತೆ, ಜಾತ್ರೆಗಳನ್ನು ಜಿಲ್ಲಾಡಳಿತ ನಿಷೇಧ ಮಾಡಿದ್ದರೂ, ಬಾದಾಮಿ ತಾಲೂಕಿನ ಮಂಗಳಗುಡ್ಡ ಗ್ರಾಮದಲ್ಲಿ ಜಾತ್ರೆ ನಡೆದಿದೆ. ಎಲ್ಲರೂ ಒಂದೆಡೆ ನಿಂತು ಕೋಣವನ್ನು ಸಾಮೂಹಿಕವಾಗಿ ಬಲಿ ಕೊಟ್ಟಿರೋ ದೃಶ್ಯ ಈಗ ವೈರಲಾಗಿದೆ.

ಇಲ್ಲಿ ಕೋಣವನ್ನು ದೇವಿಯ ಹೆಸರಿನಲ್ಲಿ ಬಲಿ ನೀಡಿ, ಎತ್ತಿನ ಚಕ್ಕಡಿ ಮೇಲೆ ಹಾಕಿಕೊಂಡು ಹೋಗುತ್ತಾರೆ. ಇಂತಹ ಪ್ರಾಣಿ ಬಲಿ ನಿಷೇಧ ಇದ್ದರೂ, ಇಲ್ಲಿ ಯಾವುದೇ ಕಾನೂನು, ಕಟ್ಟಲೆ ಇಲ್ಲ ಎಂಬಂತೆ ಭಾಸವಾಗುತ್ತಿದೆ. ಇದಕ್ಕೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಹೊಣೆಯಾಗಿದ್ದು, ಕಣ್ಣುಮುಚ್ಚಿ ಕುಳಿತಕೊಂಡಿರುವ ಅಧಿಕಾರಗಳ ವಿರುದ್ದ ಪ್ರಜ್ಞಾವಂತರು ಆಕ್ರೋಶಗೊಂಡಿದ್ದಾರೆ.

ಬಾಗಲಕೋಟೆ: ಲೋಕಸಭಾ ಚುನಾವಣೆಯ ಮತದಾನ ನಡೆದ ದಿನವೇ ಪ್ರಾಣಿ ಬಲಿ ನಡೆದಿದ್ದು, ಚುನಾವಣೆಯ ಗುಂಗಿನಲ್ಲಿದ್ದ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಕುರುಡಾಗಿರುವುದು ಸಾರ್ವಜನಿಕರ ಚರ್ಚೆಗೆ ಗ್ರಾಸವಾಗಿದೆ.

ರಾಜ್ಯದಲ್ಲಿ ಪ್ರಾಣಿ ಬಲಿ ನಿಷೇಧ ಕಾಯ್ದೆ ಇದ್ದರೂ, ಬಾಗಲಕೋಟೆ ಜಿಲ್ಲೆಯ ಮಂಗಳಗುಡ್ಡ ಗ್ರಾಮದಲ್ಲಿ ಮೂರು ವರ್ಷಕ್ಕೂಮ್ಮೆ ನಡೆಯುವ ದೇವಿ ಜಾತ್ರೆಯ ಹೆಸರಿನಲ್ಲಿ ಪ್ರಾಣಿಗಳ ಮಾರಣ ಹೋಮ ನಡೆಯುತ್ತದೆ. ಈ ಬಗ್ಗೆ ಜಿಲ್ಲಾಡಳಿತ ಕಣ್ಮುಚ್ಚಿ ಕುಳಿತಿರುವುದು ಪ್ರಜ್ಞಾವಂತರ ಆಕ್ರೋಶಕ್ಕೆ ಕಾರಣವಾಗಿದೆ.

ಬಾದಾಮಿ ತಾಲೂಕಿನ ಮಂಗಳಗುಡ್ಡ ಗ್ರಾಮದಲ್ಲಿಮಂಗಳಾ ದೇವಿಯ ಹೆಸರಿನಲ್ಲಿ ಕೋಣಗಳನ್ನು ಬಲಿ ಕೊಡುವ ಪದ್ದತಿ ಹಿಂದಿನಿಂದಲೂ ಬಂದಿದೆ. ದೇವಸ್ಥಾನದ ಮುಂದೆ ಇರುವ ಪಾದಗಟ್ಟೆಯಲ್ಲಿ ಸಾಮೂಹಿಕವಾಗಿ ಸುಮಾರು 80 ರಿಂದ 100 ಪ್ರಾಣಿಗಳನ್ನು ಬಲಿ ನೀಡಲಾಗುತ್ತದೆ. ಈಗಲೂ ಇಂತಹ ಮೂಢನಂಬಿಕೆ ಮುಂದುವರೆದಿದ್ದು ಬೇಸರದ ಸಂಗತಿ.

ಮಂಗಳಾ ದೇವಿಯ ಹೆಸರಿನಲ್ಲಿ ಕೋಣಗಳ ಬಲಿ

ಚುನಾವಣೆ ಹಿನ್ನೆಲೆ ಏಪ್ರಿಲ್ 23 ರಂದು ಜಿಲ್ಲೆಯಲ್ಲಿ ನಡೆಯುವ ಸಂತೆ, ಜಾತ್ರೆಗಳನ್ನು ಜಿಲ್ಲಾಡಳಿತ ನಿಷೇಧ ಮಾಡಿದ್ದರೂ, ಬಾದಾಮಿ ತಾಲೂಕಿನ ಮಂಗಳಗುಡ್ಡ ಗ್ರಾಮದಲ್ಲಿ ಜಾತ್ರೆ ನಡೆದಿದೆ. ಎಲ್ಲರೂ ಒಂದೆಡೆ ನಿಂತು ಕೋಣವನ್ನು ಸಾಮೂಹಿಕವಾಗಿ ಬಲಿ ಕೊಟ್ಟಿರೋ ದೃಶ್ಯ ಈಗ ವೈರಲಾಗಿದೆ.

ಇಲ್ಲಿ ಕೋಣವನ್ನು ದೇವಿಯ ಹೆಸರಿನಲ್ಲಿ ಬಲಿ ನೀಡಿ, ಎತ್ತಿನ ಚಕ್ಕಡಿ ಮೇಲೆ ಹಾಕಿಕೊಂಡು ಹೋಗುತ್ತಾರೆ. ಇಂತಹ ಪ್ರಾಣಿ ಬಲಿ ನಿಷೇಧ ಇದ್ದರೂ, ಇಲ್ಲಿ ಯಾವುದೇ ಕಾನೂನು, ಕಟ್ಟಲೆ ಇಲ್ಲ ಎಂಬಂತೆ ಭಾಸವಾಗುತ್ತಿದೆ. ಇದಕ್ಕೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಹೊಣೆಯಾಗಿದ್ದು, ಕಣ್ಣುಮುಚ್ಚಿ ಕುಳಿತಕೊಂಡಿರುವ ಅಧಿಕಾರಗಳ ವಿರುದ್ದ ಪ್ರಜ್ಞಾವಂತರು ಆಕ್ರೋಶಗೊಂಡಿದ್ದಾರೆ.

Intro:Body:

ಸ್ಲಗ್-ಪ್ರಾಣಿ-ಬಲಿ                       ಫಾರ್ಮೆಟ್-ಎವಿ



ದಿನಾಂಕ-24-0419                     ಸ್ಥಳ-ಬಾಗಲಕೋಟೆ





            ಆಂಕರ್-ಲೋಕಸಭಾ ಚುನಾವಣೆಯ ಮತದಾನ ನಡೆದ ದಿನವೇ  ಪ್ರಾಣಿ ಬಲಿ ನಡೆದಿದೆ.ಚುನಾವಣೆಯ ಗುಂಗು ನಲ್ಲಿದ್ದ ಜಿಲ್ಲಾಡಳಿತ ಹಾಗೂ ಪೋಲಿಸ್ ಇಲಾಖೆ ಕುರುಡಾಗಿರುವದು ಚರ್ಚೆಗೆ ಗ್ರಾಸವಾಗಿದೆ.

ರಾಜ್ಯದಲ್ಲಿ ಪ್ರಾಣಿ ಬಲಿ ನಿಷೇಧ ಇದ್ದರೂ,ಬಾಗಲಕೋಟೆ ಜಿಲ್ಲೆಯ ಮಂಗಳಗುಡ್ಡ ಗ್ರಾಮದಲ್ಲಿ ಮೂರು ವರ್ಷಕ್ಕೂಮ್ಮೆ ನಡೆಯುವ ದೇವಿ ಜಾತ್ರೆಯ ಹೆಸರಿನಲ್ಲಿ ಪ್ರಾಣಿಗಳ ಮಾರಮ ಹೋಮ್ ನಡೆಯುತ್ತಿದೆ.ಈ ಬಗ್ಗೆ ಜಿಲ್ಲಾಡಳಿತವಾಗಲಿ,ಪೊಲೀಸ್ ಇಲಾಖೆವಾಗಲಿ ಕಣ್ಣುಚ್ಚಿ ಕುಳಿತಿರುವುದಕ್ಕೆ ಪ್ರಜ್ಞಾವಂತರು ಆಕ್ರೋಶಕ್ಕೆ ಕಾರಣವಾಗುತ್ತಿದೆ.ಇಂದಿನ ಆಧುನಿಕ ಕಂಪ್ಯೊಟರ್ ಯುಗದಲ್ಲಿಯೂ,ಇಂತಹ ಮೂಡನಂಬಿಕೆ ಮುಂದುವರೆದಿದ್ದು,ಮಂಗಳಾ ದೇವಿಯ ಹೆಸರಿನಲ್ಲಿ ಕೋಣಗಳನ್ನು ಬಲಿ ಕೊಡುವ ಪದ್ದತಿ ಹಿಂದಿನಿಂದಲೂ ಬಂದಿದೆ.ಅದೇ ಸಹ ಇಂದು ಸಹ ಮುಂದುವರೆದುಕೊಂಡು ಬಂದಿದ್ದು,ದೇವಸ್ಥಾನದ ಮುಂದಗಡೆ ಇರುವ ಪಾದಗಟ್ಟೆಯಲ್ಲಿ ಸಾಮೂಹಿಕವಾಗಿ ಸುಮಾರು 80 ರಿಂದ 100 ಪ್ರಾಣಿಗಳನ್ನು ಬಲಿ ನೀಡಲಾಗಿತ್ತು.

     ಚುನಾವಣೆ ಹಿನ್ನಲೆ,ಮತದಾನ ನಡೆಯುವ ಏಪ್ರಿಲ್ 23 ರಂದು ಜಿಲ್ಲೆಯಲ್ಲಿ ನಡೆಯುವ ಸಂತೆ,ಜಾತ್ರೆಗಳನ್ನು ಜಿಲ್ಲಾಡಳಿತ ನಿಷೇಧ ಮಾಡಿದ್ದರು,ಬಾದಾಮಿ ತಾಲೂಕಿನ ಮಂಗಳಗುಡ್ಡ ಗ್ರಾಮದಲ್ಲಿ ಜಾತ್ರೆ ನಡೆದಿದೆ.ಎಲ್ಲರೂ ಒಂದೆಡೆ ನಿಂತು ಕೋಣವನ್ನು ಸಾಮೂಹಿಕವಾಗಿ ಬಲಿ ಕೊಡುವ ದೃಶ್ಯ ನೋಡುತ್ತಿದ್ದರೆ,ಮನ ಕರುಗುವಂತಾಗಿದೆ.ಆದರೆ ಇಲ್ಲಿ ಅಟ್ಟಹಾಸ ಮೆರೆದು ಕೋಣವನ್ನು ದೇವಿಯ ಹೆಸರಿನಲ್ಲಿ ಬಲಿ ನೀಡಿ,ಎತ್ತಿನ ಚಕ್ಕಡಿ ಮೇಲೆ ಹಾಕಿಕೊಂಡು ಹೋಗುತ್ತಾರೆ.ಇಂತಹ ಪ್ರಾಣಿ ಬಲಿ ನಿಷೇಧ ಇದ್ದರೂ,ಇಲ್ಲಿ ಯಾವುದೇ 

ಕಾನೂನು,ಕಟ್ಟಲೆ ಇಲ್ಲ ಎಂಬಂತೆ ಭಾಸವಾಗುತ್ತಿದೆ.ಇದಕ್ಕೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಹೊಣೆ ಯಾಗಿದ್ದು,ಕಣ್ಣುಮುಚ್ಚಿ ಕುಳಿತಕೊಂಡಿರುವ ಅಧಿಕಾರಗಳ ವಿರುದ್ದ ಪ್ರಜ್ಞಾವಂತರು ಆಕ್ರೋಶಗೊಂಡಿದ್ದಾರೆ.





               ---------------------

ಈ ಟಿವಿ,ಭಾರತ್,ಬಾಗಲಕೋಟೆ.


Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.