ETV Bharat / state

ಮುರನಾಳ ಗ್ರಾಮದಲ್ಲಿ ಅದ್ಧೂರಿ ರಥೋತ್ಸವ: ಸ್ವಾಮೀಜಿಗಳಿಂದ ಆಶೀರ್ವಚನ

ಬಾಗಲಕೋಟೆ ಜಿಲ್ಲೆಯ ಹೊಸ ಮುರನಾಳ ಗ್ರಾಮದಲ್ಲಿ ನಡೆದ ಜಗದ್ಗುರು ಶ್ರೀ ಮಳೆರಾಜೇಂದ್ರಸ್ವಾಮಿ ಜಾತ್ರಾ ಮಹೋತ್ಸವದಂದು ಶ್ರೀ ಶ್ರೀ ಶಿವಸುಜ್ಞಾನತೀರ್ಥ ಮಹಾಸ್ವಾಮಿಗಳು ಪೂಜಾ ಕೈಂಕರ್ಯ ನೆರವೇರಿಸಿ ಭಕ್ತರಿಗೆ ಆಶೀರ್ವಚನ ನೀಡಿದ್ರು.

author img

By

Published : Mar 20, 2021, 7:23 AM IST

rathostava held in muranala village
ಮುರನಾಳ ರಾಜೇಂದ್ರ ಮಠದಲ್ಲಿ ಜಾತ್ರೆ

ಬಾಗಲಕೋಟೆ: ಸರ್ವಧರ್ಮ ಭಾವೈಕ್ಯತೆಯ ಸಂಕೇತದಿಂದ ಮುರನಾಳ ರಾಜೇಂದ್ರ ಮಠಕ್ಕೆ "ಜಗದ್ಗುರು" ಎಂಬ ಪದ ಬಂದಿದೆ ಎಂದು ವಿಶ್ವಕರ್ಮ ಜಗದ್ಗುರು ಪೀಠದ ಅರೆಮಾದನಹಳ್ಳಿಯ ವಿಶ್ವ ಬ್ರಾಹ್ಮಣ ಮಹಾಸಂಸ್ಥಾನ ಮಠದ ಅನಂತವಿಭೂಷಿತ ಶಿವಸುಜ್ಞಾನತೀರ್ಥ ಮಹಾಸ್ವಾಮೀಜಿ ಹೇಳಿದರು.

ಮುರನಾಳ ರಾಜೇಂದ್ರ ಮಠದಲ್ಲಿ ಜಾತ್ರೆ


ಹೊಸ ಮುರನಾಳ ಗ್ರಾಮದಲ್ಲಿ ನಡೆದ ಜಗದ್ಗುರು ಶ್ರೀ ಮಳೆರಾಜೇಂದ್ರಸ್ವಾಮಿ ಜಾತ್ರಾ ಮಹೋತ್ಸವದ ನಾಲ್ಕನೆಯ ದಿನದ ಉತ್ಸವದಲ್ಲಿ ಪಾಲ್ಗೊಂಡು ಸಾಧಕರಿಗೆ ಸನ್ಮಾನಿಸಿ ಆಶೀರ್ವಚನ ನೀಡಿದರು. ಈ ಭಾಗದ ಕೃಷಿಕರಿಗಾಗಿ ವಿಶ್ವವಿದ್ಯಾಲಯವಾಗಿ ಪರಿಗಣಿ‌ತವಾಗಿರುವ ಶ್ರೀಮಠ, ಬೆಳೆ ಬೆಳೆಯಲು ಬಿತ್ತನೆ ಬೀಜ ನೀಡುವುದರ ಜೊತೆಗೆ ಮುಂದಿನ ವರ್ಷದ ಮಳೆ ಸೂಚನೆ ನೀಡುತ್ತಾ ಬಂದಿರುವುದು ಇತಿಹಾಸವಾಗಿದೆ. ಶ್ರಮಿಕರಿಗೆ ಉತ್ತೆಜಿಸುವ ಕಾರ್ಯ ಶ್ರೀ ಮಠದ ಪರಂಪರೆಗೆ ಸಾಧನೆಯಾಗಿದೆ ಎಂದರು.


ಶ್ರೀ ಮಠದ ಜಗನ್ನಾಥ ಮಹಾಸ್ವಾಮಿಗಳ ನೇತೃತ್ವದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಜಗನ್ನಾಥಸ್ವಾಮಿ ಅಖಂಡಸ್ವಾಮಿ ಮಹಾಪುರುಷ ಸಾನಿಧ್ಯ ವಹಿಸಿದ್ದರು. ಹೊಳೆ ಆಲೂರಿನ ಯಚ್ಚರ ಸ್ವಾಮಿಮಠದ ಶ್ರಿ ಯಚ್ಚರಸ್ವಾಮಿಗಳು, ಶಾಡಲಗೇರಿಯ ನಾಗಲಿಂಗಸ್ವಾಮಿಗಳು, ಮೇಘರಾಜಸ್ವಾಮಿಗಳು ಉಪಸ್ಥಿತರಿದ್ದರು.

ಇದನ್ನೂ ಓದಿ:ಬಲು ಅಪರೂಪ ನಮ್​ ಜೋಡಿ: ಮೂರಡಿ ಯುವಕನಿಗೆ ಕೊನೆಗೂ ಸಿಕ್ಕಳು ಮದುವೆ ಹೆಣ್ಣು!

ಬಾಗಲಕೋಟೆ: ಸರ್ವಧರ್ಮ ಭಾವೈಕ್ಯತೆಯ ಸಂಕೇತದಿಂದ ಮುರನಾಳ ರಾಜೇಂದ್ರ ಮಠಕ್ಕೆ "ಜಗದ್ಗುರು" ಎಂಬ ಪದ ಬಂದಿದೆ ಎಂದು ವಿಶ್ವಕರ್ಮ ಜಗದ್ಗುರು ಪೀಠದ ಅರೆಮಾದನಹಳ್ಳಿಯ ವಿಶ್ವ ಬ್ರಾಹ್ಮಣ ಮಹಾಸಂಸ್ಥಾನ ಮಠದ ಅನಂತವಿಭೂಷಿತ ಶಿವಸುಜ್ಞಾನತೀರ್ಥ ಮಹಾಸ್ವಾಮೀಜಿ ಹೇಳಿದರು.

ಮುರನಾಳ ರಾಜೇಂದ್ರ ಮಠದಲ್ಲಿ ಜಾತ್ರೆ


ಹೊಸ ಮುರನಾಳ ಗ್ರಾಮದಲ್ಲಿ ನಡೆದ ಜಗದ್ಗುರು ಶ್ರೀ ಮಳೆರಾಜೇಂದ್ರಸ್ವಾಮಿ ಜಾತ್ರಾ ಮಹೋತ್ಸವದ ನಾಲ್ಕನೆಯ ದಿನದ ಉತ್ಸವದಲ್ಲಿ ಪಾಲ್ಗೊಂಡು ಸಾಧಕರಿಗೆ ಸನ್ಮಾನಿಸಿ ಆಶೀರ್ವಚನ ನೀಡಿದರು. ಈ ಭಾಗದ ಕೃಷಿಕರಿಗಾಗಿ ವಿಶ್ವವಿದ್ಯಾಲಯವಾಗಿ ಪರಿಗಣಿ‌ತವಾಗಿರುವ ಶ್ರೀಮಠ, ಬೆಳೆ ಬೆಳೆಯಲು ಬಿತ್ತನೆ ಬೀಜ ನೀಡುವುದರ ಜೊತೆಗೆ ಮುಂದಿನ ವರ್ಷದ ಮಳೆ ಸೂಚನೆ ನೀಡುತ್ತಾ ಬಂದಿರುವುದು ಇತಿಹಾಸವಾಗಿದೆ. ಶ್ರಮಿಕರಿಗೆ ಉತ್ತೆಜಿಸುವ ಕಾರ್ಯ ಶ್ರೀ ಮಠದ ಪರಂಪರೆಗೆ ಸಾಧನೆಯಾಗಿದೆ ಎಂದರು.


ಶ್ರೀ ಮಠದ ಜಗನ್ನಾಥ ಮಹಾಸ್ವಾಮಿಗಳ ನೇತೃತ್ವದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಜಗನ್ನಾಥಸ್ವಾಮಿ ಅಖಂಡಸ್ವಾಮಿ ಮಹಾಪುರುಷ ಸಾನಿಧ್ಯ ವಹಿಸಿದ್ದರು. ಹೊಳೆ ಆಲೂರಿನ ಯಚ್ಚರ ಸ್ವಾಮಿಮಠದ ಶ್ರಿ ಯಚ್ಚರಸ್ವಾಮಿಗಳು, ಶಾಡಲಗೇರಿಯ ನಾಗಲಿಂಗಸ್ವಾಮಿಗಳು, ಮೇಘರಾಜಸ್ವಾಮಿಗಳು ಉಪಸ್ಥಿತರಿದ್ದರು.

ಇದನ್ನೂ ಓದಿ:ಬಲು ಅಪರೂಪ ನಮ್​ ಜೋಡಿ: ಮೂರಡಿ ಯುವಕನಿಗೆ ಕೊನೆಗೂ ಸಿಕ್ಕಳು ಮದುವೆ ಹೆಣ್ಣು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.