ಬಾಗಲಕೋಟೆ : ನಾಗರ ಪಂಚಮಿ ಹಬ್ಬದ ಅಂಗವಾಗಿ ಕಲ್ಲು ನಾಗರಹಾವಿಗೆ ಭಕ್ತರು ಹಾಲು ಎರೆದು ಪೂಜೆ ಸಲ್ಲಿಸುವುದು ಸಾಮಾನ್ಯ. ಆದರೆ, ಬಾಗಲಕೋಟೆ ನಗರದ ಯುವಕನೋರ್ವ ಕಳೆದ ಹಲವು ವರ್ಷಗಳಿಂದ ಹಾವು ಹಿಡಿದು ಅರಣ್ಯಕ್ಕೆ ಬಿಡುವ ಕಾಯಕದಲ್ಲಿ ನಿರತನಾಗಿದ್ದಾನೆ. ಡ್ಯಾನಿಯಲ್ ಎಂಬ ಈ ಯುವಕ ನಾಗರ ಪಂಚಮಿ ದಿನದಂದೇ ವಿವಿಧ ಪ್ರದೇಶದಲ್ಲಿ ಮೂರು ನಾಗರಹಾವು ಹಿಡಿದು ಅರಣ್ಯಕ್ಕೆ ಬಿಟ್ಟು ಬಂದಿದ್ದಾರೆ.
ಕಳೆದ ತಿಂಗಳಷ್ಟೆ ಹೀಗೆ ವಿಷಕಾರಿ ನಾಗರ ಹಾವು ಹಿಡಿಯುವ ಸಮಯದಲ್ಲಿ ಕಚ್ಚಿದ ಪರಿಣಾಮ ಆಸ್ಪತ್ರೆಗೆ ದಾಖಲಾಗಿ ಚೇತರಿಸಿಕೊಂಡಿದ್ದ. ನಂತರ ಮೂರು ದಿನಗಳ ಬಳಿಕ ಮತ್ತೆ ಉರಗ ಹಿಡಿಯಲು ಮುಂದಾಗಿದ್ದಾನೆ. ಈವರೆಗೂ ವಿಷಕಾರಿ ಸೇರಿದಂತೆ ವಿವಿಧ ಜಾತಿಯ 3125 ಹಾವುಗಳನ್ನು ರಕ್ಷಣೆ ಮಾಡಿ ಅರಣ್ಯಕ್ಕೆ ಬಿಟ್ಟು ಬಂದಿದ್ದಾರೆ.
ಎಲ್ಲಿ ಹೋದರೂ ಸೈಕಲ್ ಮೇಲೆ ಪ್ರಯಾಣ ಮಾಡುವುದು ಡ್ಯಾನಿಯಲ್ ವಿಶೇಷತೆ. ಆದರೆ, ತಮ್ಮ ಸೇವೆಗೆ ಯಾವುದೇ ಹಣ ತೆಗದುಕೊಳ್ಳುವುದಿಲ್ಲ. ಯಾರಾದರೂ ಹಣ ನೀಡಿದರೂ ಸ್ವೀಕರಿಸುವುದಿಲ್ಲ. ಈ ಮೂಲಕ ಪ್ರಾಮಾಣಿಕತೆ, ನಿಸ್ವಾರ್ಥದಿಂದ ಸಾಮಾಜ ಸೇವೆ ಮಾಡುವ ಮೂಲಕ ಪ್ರಶಂಸೆಗೆ ಪಾತ್ರರಾಗಿದ್ದಾರೆ.