ಬಾಗಲಕೋಟೆ: ಲಾಕ್ಡೌನ್ ಉಲ್ಲಂಘಿಸಿ ಗ್ರಾಮದಲ್ಲಿ ಬೇಕಾಬಿಟ್ಟಿ ಸಂಚರಿಸಿ, ಬುದ್ಧಿ ಹೇಳಿದ ಪೊಲೀಸರ ಜೊತೆ ವಾಗ್ವಾದ ಮಾಡಿ, ಕರ್ತವ್ಯ ನಿರತ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ಘಟನೆ ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಮುತ್ತಲಗೇರಿ ಗ್ರಾಮದಲ್ಲಿ ನಡೆದಿದೆ.
ಪೊಲೀಸರ ಸಮವಸ್ತ್ರ ಹಿಡಿದು ಎಳೆದಾಡಿ, ಲಾಠಿ ಕಸಿದು ಪೊಲೀಸರ ಮೇಳೆ ಹಲ್ಲೆಗೆ ಮುಂದಾಗಿದ್ದಾರೆ. ಮುತ್ತಲಗೇರಿ ಗ್ರಾಮದ ಒಂದು ಕುಟುಂಬಸ್ಥರಿಂದ ಪೊಲೀಸರ ಜೊತೆ ಅನುಚಿತ ವರ್ತನೆ ನಡೆದಿದೆ.
ಆರೋಪಿಗಳಾದ ರಾಮಣ್ಣ ಹೊಟ್ಟಿ, ಸೀತವ್ವ ಹೊಟ್ಟಿ, ದೇವೆಂದ್ರಪ್ಪ ಹೊಟ್ಟಿ, ರವಿ ಹೊಟ್ಟಿ, ಶೋಭಾ ಹೊಟ್ಟಿ ಎಂಬುವರಿಂದ ಪೊಲೀಸರ ಮೇಲೆ ದರ್ಪ ನಡೆಸಿದರು.
ಸದ್ಯ ಐವರ ವಿರುದ್ದ ಬಾದಾಮಿ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿ, ಈಗಾಗಲೇ ನಾಲ್ವರನ್ನು ಬಂಧಿಸಲಾಗಿದೆ.