ETV Bharat / state

ಮಾಜಿ ಸಚಿವ ಹೆಚ್.ವೈ.ಮೇಟಿ ಆರೋಗ್ಯದಲ್ಲಿ ಏರುಪೇರು : ಏರ್ ಆ್ಯಂಬುಲೆನ್ಸ್ ಮೂಲಕ ಬೆಂಗಳೂರಿಗೆ - latest bagalakote h y meti news

ಕಿಡ್ನಿ ಸ್ಟೋನ್ ಹಾಗೂ ಪಿತ್ತಕೋಶದ ನೋವಿನಿಂದ ಬಳಲುತ್ತಿದ್ದ ಮಾಜಿ ಸಚಿವ ಹೆಚ್.ವೈ. ಮೇಟಿ ಅವರನ್ನು ಏರ್ ಆ್ಯಂಬುಲೆನ್ಸ್ ಮೂಲಕ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

latest h y meti health problem news
ಮಾಜಿ ಸಚಿವ ಎಚ್.ವೈ.ಮೇಟಿ ಆರೋಗ್ಯದಲ್ಲಿ ಏರುಪೇರು : ಏರ್ ಆ್ಯಂಬುಲೆನ್ಸ್ ಮೂಲಕ ಬೆಂಗಳೂರಿಗೆ
author img

By

Published : Nov 29, 2019, 4:31 PM IST

ಬಾಗಲಕೋಟೆ : ಕಿಡ್ನಿ ಸ್ಟೋನ್ ಹಾಗೂ ಪಿತ್ತಕೋಶದ ನೋವಿನಿಂದ ಬಳಲುತ್ತಿದ್ದ ಮಾಜಿ ಸಚಿವ ಎಚ್.ವೈ. ಮೇಟಿ ಅವರನ್ನು ಏರ್ ಆ್ಯಂಬುಲೆನ್ಸ್ ಮೂಲಕ ವೈದ್ಯರು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ಮಾಜಿ ಸಚಿವ ಎಚ್.ವೈ.ಮೇಟಿ ಆರೋಗ್ಯದಲ್ಲಿ ಏರುಪೇರು : ಏರ್ ಆ್ಯಂಬುಲೆನ್ಸ್ ಮೂಲಕ ಬೆಂಗಳೂರಿಗೆ

ಕಿಡ್ನಿ ಸ್ಟೋನ್​ನಿಂದ ಬಳಲುತ್ತಿದ್ದು, ಕಳೆದ 25ರಂದು ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು.‌ ಆದ್ರೆ ಸ್ಟೋನ್ ಗಾತ್ರ 60 ಎಂಎಂ ಇದ್ದ ಕಾರಣ ನೋವು ತಾಳಲಾರದೆ ತೀವ್ರ ಅಸ್ವಸ್ಥರಾಗಿದ್ದರು. ಅಲ್ಲದೇ ವಿಪರೀತ ಕಫ ಆದ ಪರಿಣಾಮ ವಾಂತಿಯೂ ಶುರುವಾಗಿತ್ತು, ಹೀಗಾಗಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯುವಂತೆ ಬಾಗಲಕೋಟೆ ವೈದ್ಯರು ಸಲಹೆ ನೀಡಿದ ಹಿನ್ನೆಲೆ ಕುಟುಂಬಸ್ಥರು ಏರ್ ಆ್ಯಂಬ್ಯುಲೆನ್ಸ್ ಮೂಲಕ ಮೇಟಿಯವರನ್ನು ಬೆಂಗಳೂರಿಗೆ ಕರೆದೊಯ್ದಿದ್ದಾರೆ. ಯಾರೂ ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಇನ್ನು ಮೇಟಿ ಅವರನ್ನು ಕರೆದೊಯ್ಯುವ ವೇಳೆ ಹೆಲಿಕಾಪ್ಟರ್ ಸರಿಯಾಗಿ ಮೇಲೆ ಏರಲಿಲ್ಲ. ಹೀಗಾಗಿ ಮೊದಲಿಗೆ ನಾಲ್ಕು ಸುತ್ತು ತಿರುಗಿ ಕೆಳಗೆ ಇಳಿಸಲಾಯಿತು. ಲೋಡ್ ಆಗಿರುವುದರಿಂದ ಮೇಟಿ ಅವರ ಪುತ್ರ ಮಲ್ಲಿಕಾರ್ಜುನ ಎಂಬುವವರನ್ನು ಕೆಳಗೆ ಇಳಿಸಲಾಯಿತು. ನಂತರವೂ ಸಹ ಸರಿಯಾಗಿ ಮೇಲೆ ಏರದೆ ಕೆಲ ಸಮಯ ಆತಂಕಕ್ಕೆ ಕಾರಣವಾಯಿತು. ನಂತರ ನಿಧಾನವಾಗಿ ಪೈಲೆಟ್ ಹೆಲಿಕಾಪ್ಟರ್ ಅನ್ನು ಮೇಲೇರಿಸುವುದರಲ್ಲಿ ಯಶಸ್ಸು ಹೊಂದಿ ಬೆಂಗಳೂರಿನತ್ತ ಹೆಲಿಕಾಪ್ಟರ್​ ಸಾಗಿತು.

ಬಾಗಲಕೋಟೆ : ಕಿಡ್ನಿ ಸ್ಟೋನ್ ಹಾಗೂ ಪಿತ್ತಕೋಶದ ನೋವಿನಿಂದ ಬಳಲುತ್ತಿದ್ದ ಮಾಜಿ ಸಚಿವ ಎಚ್.ವೈ. ಮೇಟಿ ಅವರನ್ನು ಏರ್ ಆ್ಯಂಬುಲೆನ್ಸ್ ಮೂಲಕ ವೈದ್ಯರು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ಮಾಜಿ ಸಚಿವ ಎಚ್.ವೈ.ಮೇಟಿ ಆರೋಗ್ಯದಲ್ಲಿ ಏರುಪೇರು : ಏರ್ ಆ್ಯಂಬುಲೆನ್ಸ್ ಮೂಲಕ ಬೆಂಗಳೂರಿಗೆ

ಕಿಡ್ನಿ ಸ್ಟೋನ್​ನಿಂದ ಬಳಲುತ್ತಿದ್ದು, ಕಳೆದ 25ರಂದು ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು.‌ ಆದ್ರೆ ಸ್ಟೋನ್ ಗಾತ್ರ 60 ಎಂಎಂ ಇದ್ದ ಕಾರಣ ನೋವು ತಾಳಲಾರದೆ ತೀವ್ರ ಅಸ್ವಸ್ಥರಾಗಿದ್ದರು. ಅಲ್ಲದೇ ವಿಪರೀತ ಕಫ ಆದ ಪರಿಣಾಮ ವಾಂತಿಯೂ ಶುರುವಾಗಿತ್ತು, ಹೀಗಾಗಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯುವಂತೆ ಬಾಗಲಕೋಟೆ ವೈದ್ಯರು ಸಲಹೆ ನೀಡಿದ ಹಿನ್ನೆಲೆ ಕುಟುಂಬಸ್ಥರು ಏರ್ ಆ್ಯಂಬ್ಯುಲೆನ್ಸ್ ಮೂಲಕ ಮೇಟಿಯವರನ್ನು ಬೆಂಗಳೂರಿಗೆ ಕರೆದೊಯ್ದಿದ್ದಾರೆ. ಯಾರೂ ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಇನ್ನು ಮೇಟಿ ಅವರನ್ನು ಕರೆದೊಯ್ಯುವ ವೇಳೆ ಹೆಲಿಕಾಪ್ಟರ್ ಸರಿಯಾಗಿ ಮೇಲೆ ಏರಲಿಲ್ಲ. ಹೀಗಾಗಿ ಮೊದಲಿಗೆ ನಾಲ್ಕು ಸುತ್ತು ತಿರುಗಿ ಕೆಳಗೆ ಇಳಿಸಲಾಯಿತು. ಲೋಡ್ ಆಗಿರುವುದರಿಂದ ಮೇಟಿ ಅವರ ಪುತ್ರ ಮಲ್ಲಿಕಾರ್ಜುನ ಎಂಬುವವರನ್ನು ಕೆಳಗೆ ಇಳಿಸಲಾಯಿತು. ನಂತರವೂ ಸಹ ಸರಿಯಾಗಿ ಮೇಲೆ ಏರದೆ ಕೆಲ ಸಮಯ ಆತಂಕಕ್ಕೆ ಕಾರಣವಾಯಿತು. ನಂತರ ನಿಧಾನವಾಗಿ ಪೈಲೆಟ್ ಹೆಲಿಕಾಪ್ಟರ್ ಅನ್ನು ಮೇಲೇರಿಸುವುದರಲ್ಲಿ ಯಶಸ್ಸು ಹೊಂದಿ ಬೆಂಗಳೂರಿನತ್ತ ಹೆಲಿಕಾಪ್ಟರ್​ ಸಾಗಿತು.

Intro:AnchorBody: ಕಿಡ್ನಿ ಸ್ಟೋನ್ ಹಾಗೂ ಪಿತ್ತಕೋಶದ ನೋವಿನಿಂದ ಬಳಲುತ್ತಿದ್ದ ಮಾಜಿ ಸಚಿವ ಎಚ್.ವೈ. ಮೇಟಿ ಅವರಿಗೆ ಏರ್ ಆ್ಯಂಬ್ಯುಲೆನ್ಸ್ ಮೂಲಕ ವೈದ್ಯರು ಬೆಂಗಳೂರಿಗೆ ಕರೆದೊಯ್ದಿದ್ದಾರೆ. ಬಾಗಲಕೋಟೆ ನವನಗರದ ಹೆಲಿಪ್ಯಾಡ್ ಮೂಲಕ ಮಾಜಿ ಸಚಿವ ಮೇಟಿವರಿಗೆ ಚಿಕಿತ್ಸೆಗಾಗಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಕಳೆದ ೨೫ರಂದು ಕಿಡ್ನಿ ಸ್ಟೋನ್ ನಿಂದ ಬಳಲುತ್ತಿದ್ದರು, ಹೀಗಾಗಿ ಕೆಲವು ದಿನಗಳಿಂದ ಮೇಟಿಯವರನ್ನು ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು.‌ ಆದ್ರೆ ಸ್ಟೋನ್ ಗಾತ್ರ ೬೦ ಎಂಎಂ ಇದ್ದಿದ್ರಿಂದ ನೋವು ತಾಳಲಾರದೇ ತೀವ್ರ ಅಸ್ವಸ್ಥರಾಗಿದ್ರು. ಅಲ್ಲದೇ ವಿಪರೀತ ಕಫ ಆಗಿದ್ರಿಂದ ವಾಂತಿ,ಬೇದಿಯೂ ಶುರುವಾಗಿತ್ತು, ಹೀಗಾಗಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯುವಂತೆ ಬಾಗಲಕೋಟೆ ವೈದ್ಯರು ಸಲಹೆ ನೀಡಿದ್ರು. ವೈದ್ಯರ ಸಲಹೆ ಬೆನ್ನಲ್ಲೇ ಕುಟುಂಬಸ್ಥರು ಏರ್ ಆ್ಯಂಬ್ಯುಲೆನ್ಸ್ ಮೂಲಕ ಮೇಟಿ ಯವರನ್ನು ಬೆಂಗಳೂರಿಗೆ ಕರೆದೊಯ್ದಿದ್ದಾರೆ. ಇನ್ನು ಕಿಡ್ನಿ ಸ್ಟೋನ್ ನಿಂದ ಮಾಜಿ ಸಚಿವ ಅಸ್ವಸ್ಥರಾಗಿದ್ದಷ್ಟೇ, ಯಾರೂ ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಹೆಲಿಕಾಪ್ಟರ್ ಟೇಕ್ ಆಪ್ ಆಗುವ ಮುಂಚೆ ಸರಿಯಾಗಿ ಮೇಲೆ ಏರಲಿಲ್ಲ.ಕೆಳಗಡೆ ನಾಲ್ಕು ಸುತ್ತು ತಿರುಗಿ ಕೆಳಗೆ ಇಳಿಸಲಾಯಿತು.ಲೋಡ್ ಆಗಿರುವುದರಿಂದ ಮೇಟಿ ಅವರ ಪುತ್ರ ಮಲ್ಲಿಕಾರ್ಜುನ ಎಂಬುವವರನ್ನು ಕೆಳಗೆ ಇಳಿಸಲಾಯಿತು.ನಂತರವೂ ಸಹ ಟೇಕ್ ಆಪ್ ಆದ ಮೇಲೆ ಸರಿಯಾಗಿ ಮೇಲೆ ಏರಲಿಲ್ಲ.ಇದರಿಂದ ಕೆಲ ಸಮಯ ಆತಂಕಕ್ಕೆ ಕಾರಣವಾಯಿತು.ನಂತರ ನಿಧಾನವಾಗಿ ಫೈಲೇಟ್ ಮೇಲೆರಿಸುವುದಕ್ಕೆ ಯಶಸ್ಸು ಹೊಂದಿ ಬೆಂಗಳೂರಿನತ್ತ ಸಾಗಿತು.Conclusion:ಈ ಟಿವಿ,ಭಾರತ,ಬಾಗಲಕೋಟೆ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.