ಬಾಗಲಕೋಟೆ: ಉರಗ ಪ್ರೇಮಿ ಸ್ನೇಕ್ ಡ್ಯಾನಿಯಲ್ ಎಂಬ ಯುವಕನಿಗೆ ವಿಷ ಪೂರಿತ ಹಾವು ಕಚ್ಚಿ ತೀವ್ರ ಅಸ್ವಸ್ಥಗೊಂಡಿರುವ ಘಟನೆ ಜರುಗಿದೆ.
ಇಲ್ಲಿಯವರೆಗೂ ಇವರು 3020 ಕ್ಕೂ ಹೆಚ್ಚು ಹಾವುಗಳನ್ನು ಹಿಡಿದು ಮತ್ತು ಸಾವಿರಕ್ಕೂ ಹೆಚ್ಚು ಕೋಬ್ರಾ ಜಾತಿಯ ಹಾವು ಹಿಡಿದು ಯಾವುದೇ ತೊಂದರೆ ಆಗದಂತೆ ಅರಣ್ಯ ಪ್ರದೇಶದಲ್ಲಿ ಬಿಟ್ಟು ಬಂದಿದ್ದಾರೆ. ಇದಲ್ಲದೇ ಸುಮಾರು 70ಕ್ಕೂ ಹೆಚ್ಚು ಹಾವುಗಳು ಕಚ್ಚಿದರೂ ಯಾವುದೇ ತೊಂದರೆ ಆಗಿರಲಿಲ್ಲ. ಇಂದು ನಗರದಲ್ಲಿ ಕೋಬ್ರಾ ಜಾತಿಯ ವಿಷಪೂರಿತ ಹಾವು ಹಿಡಿಯಲು ಹೋದಾಗ ಕಚ್ಚಿದೆ. ಇದರಿಂದ ವಿಷ ಏರಿದ ಪರಿಣಾಮ ತೀವ್ರ ಅಸ್ವಸ್ಥಗೊಂಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇನ್ನು ಸ್ನೇಕ್ ಡ್ಯಾನಿಯಲ್ ಸಾವು, ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದು, ಬೇಗನೆ ಗುಣಮುಖರಾಗಲಿ ಎಂದು ದೇವರಿಗೆ ನಗರದ ಜನರು ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.