ETV Bharat / state

ಸಮಸ್ಯೆ ಉಂಟುಮಾಡುತ್ತಿದ್ದ ಬಿಡಾಡಿ ದನಗಳು: ಗೋಶಾಲೆಗೆ ರವಾನಿಸಿದ ನಗರಸಭೆ

author img

By

Published : Dec 2, 2019, 9:51 PM IST

ಸದಾ ರಸ್ತೆಯಲ್ಲಿ ಮಲುಗುತ್ತಿದ್ದ, ಜನ ಸಂಚಾರಕ್ಕೆ ತೊಂದರೆ ಮಾಡಿ ಅಪಘಾತಕ್ಕೆ ಆಹ್ವಾನ ನೀಡುತ್ತಿದ್ದ ಬಿಡಾಡಿ ದನಗಳನ್ನು ನಗರಸಭೆಯಿಂದ ಬಾದಾಮಿ ತಾಲೂಕಿನ ಗೋಶಾಲೆಗೆ ಇಂದು ಕಳುಹಿಸಲಾಯಿತು.

Kn_Bgk_02_Oxes_Av_Script_7202182
ಸಮಸ್ಯೆ ಉಂಟುಮಾಡುತ್ತಿದ್ದ ಬಿಡಾಡಿ ದನಗಳು: ಗೋಶಾಲೆಗೆ ಕಳುಹಿಸಿದ ನಗರಸಭೆ

ಬಾಗಲಕೋಟೆ: ಸದಾ ರಸ್ತೆಯಲ್ಲಿ ಮಲುಗುತ್ತಿದ್ದ, ಜನಸಂಚಾರಕ್ಕೆ ತೊಂದರೆ ಮಾಡಿ ಅಪಘಾತಕ್ಕೆ ಆಹ್ವಾನ ನೀಡುತ್ತಿದ್ದ ಬಿಡಾಡಿ ದನಗಳನ್ನು ನಗರಸಭೆಯಿಂದ ಬಾದಾಮಿ ತಾಲೂಕಿನ ಗೋಶಾಲೆಗೆ ಇಂದು ಕಳುಹಿಸಲಾಯಿತು.

ಸಮಸ್ಯೆ ಉಂಟುಮಾಡುತ್ತಿದ್ದ ಬಿಡಾಡಿ ದನಗಳು: ಗೋಶಾಲೆಗೆ ರವಾನಿಸಿದ ನಗರಸಭೆ

ನಗರದ ಬಸವೇಶ್ವರ ವೃತ್ತದಲ್ಲಿ ಸುಮಾರು ಎಂಟತ್ತು ಬಿಡಾಡಿ ದನಗಳು ರಸ್ತೆಯ ಮಧ್ಯೆಯೇ ಮಲಗುತ್ತಿದ್ದವು. ಇಲ್ಲಿ ಜನದಟ್ಟಣೆ ಮತ್ತು ವಾಹನಗಳ ಸಂಚಾರ ಹೆಚ್ಚಾಗಿರುವುದರಿಂದ ಸಂಚಾರಕ್ಕೆ ಅಡೆತಡೆ ಮಾಡುತ್ತಿದ್ದವು. ಇನ್ನು ವೇಗವಾಗಿ ಹೋಗುವ ವಾಹನಗಳಿಗೆ ಬಿಡಾಡಿ ದನಗಳಿಂದ ಅಪಘಾತವಾದ ಘಟನೆಗಳು ಇಲ್ಲಿ ನಡೆದಿವೆ. ನಗರದಲ್ಲಿ ಸುಮಾರು 25ಕ್ಕೂ ಹೆಚ್ಚು ಬಿಡಾಡಿ ದನಗಳನ್ನು ನಗರಸಭೆಯು ಪೊಲೀಸ್ ಇಲಾಖೆಯ ಸಹಾಯದೊಂದಿಗೆ ಶಿವಯೋಗಮಂದಿರದ ಗೋಶಾಲೆಗೆ ರವಾನಿಸಿದೆ.

ದನಗಳಿಗೆ ಯಾವುದೇ ತೊಂದರೆಯಾಗದಂತೆ ಹಗ್ಗದಿಂದ ಕಟ್ಟಿ ನಂತರ ಲಾರಿ ಮೂಲಕ ಸುರಕ್ಷಿತವಾಗಿ ಗೋಶಾಲೆಗೆ ನಗರಸಭೆ ಸಿಬ್ಬಂದಿ ರವಾನಿಸಿದ್ದಾರೆ. ಈಗ ಬಿಡಾಡಿ ದನಗಳು ಗೋಶಾಲೆಗೆ ಹೋಗುತ್ತಿದ್ದಂತೆ ಬಸವೇಶ್ವರ ವೃತ್ತದಲ್ಲಿ ನಿಲ್ಲುವ ಪೊಲೀಸ್ ಸಿಬ್ಬಂದಿ ಹಾಗೂ ತರಕಾರಿ ವ್ಯಾಪಾರಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.

ಬಾಗಲಕೋಟೆ: ಸದಾ ರಸ್ತೆಯಲ್ಲಿ ಮಲುಗುತ್ತಿದ್ದ, ಜನಸಂಚಾರಕ್ಕೆ ತೊಂದರೆ ಮಾಡಿ ಅಪಘಾತಕ್ಕೆ ಆಹ್ವಾನ ನೀಡುತ್ತಿದ್ದ ಬಿಡಾಡಿ ದನಗಳನ್ನು ನಗರಸಭೆಯಿಂದ ಬಾದಾಮಿ ತಾಲೂಕಿನ ಗೋಶಾಲೆಗೆ ಇಂದು ಕಳುಹಿಸಲಾಯಿತು.

ಸಮಸ್ಯೆ ಉಂಟುಮಾಡುತ್ತಿದ್ದ ಬಿಡಾಡಿ ದನಗಳು: ಗೋಶಾಲೆಗೆ ರವಾನಿಸಿದ ನಗರಸಭೆ

ನಗರದ ಬಸವೇಶ್ವರ ವೃತ್ತದಲ್ಲಿ ಸುಮಾರು ಎಂಟತ್ತು ಬಿಡಾಡಿ ದನಗಳು ರಸ್ತೆಯ ಮಧ್ಯೆಯೇ ಮಲಗುತ್ತಿದ್ದವು. ಇಲ್ಲಿ ಜನದಟ್ಟಣೆ ಮತ್ತು ವಾಹನಗಳ ಸಂಚಾರ ಹೆಚ್ಚಾಗಿರುವುದರಿಂದ ಸಂಚಾರಕ್ಕೆ ಅಡೆತಡೆ ಮಾಡುತ್ತಿದ್ದವು. ಇನ್ನು ವೇಗವಾಗಿ ಹೋಗುವ ವಾಹನಗಳಿಗೆ ಬಿಡಾಡಿ ದನಗಳಿಂದ ಅಪಘಾತವಾದ ಘಟನೆಗಳು ಇಲ್ಲಿ ನಡೆದಿವೆ. ನಗರದಲ್ಲಿ ಸುಮಾರು 25ಕ್ಕೂ ಹೆಚ್ಚು ಬಿಡಾಡಿ ದನಗಳನ್ನು ನಗರಸಭೆಯು ಪೊಲೀಸ್ ಇಲಾಖೆಯ ಸಹಾಯದೊಂದಿಗೆ ಶಿವಯೋಗಮಂದಿರದ ಗೋಶಾಲೆಗೆ ರವಾನಿಸಿದೆ.

ದನಗಳಿಗೆ ಯಾವುದೇ ತೊಂದರೆಯಾಗದಂತೆ ಹಗ್ಗದಿಂದ ಕಟ್ಟಿ ನಂತರ ಲಾರಿ ಮೂಲಕ ಸುರಕ್ಷಿತವಾಗಿ ಗೋಶಾಲೆಗೆ ನಗರಸಭೆ ಸಿಬ್ಬಂದಿ ರವಾನಿಸಿದ್ದಾರೆ. ಈಗ ಬಿಡಾಡಿ ದನಗಳು ಗೋಶಾಲೆಗೆ ಹೋಗುತ್ತಿದ್ದಂತೆ ಬಸವೇಶ್ವರ ವೃತ್ತದಲ್ಲಿ ನಿಲ್ಲುವ ಪೊಲೀಸ್ ಸಿಬ್ಬಂದಿ ಹಾಗೂ ತರಕಾರಿ ವ್ಯಾಪಾರಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.

Intro:AnchorBody:ರಸ್ತೆಗೆ ದನಗಳನ್ನು ಬಿಡದಂತೆ ಮಾಲೀಕರಿಗೆ ಎಚ್ಚರಿಕೆ * ಮೂರು ದಿನಗಳಿಂದ ಕಾರ್ಯಾಚರಣೆ *ಕಡಿಮೆಯಾದ ಬಿಡಾಡಿ ದನಗಳ ಹಾವಳಿ *
ಬಿಡಾಡಿ ದನಗಳು ಶಿವಯೋಗಿಮಂದಿರ
ಗೋಶಾಲೆಗೆ ರವಾನೆ..

ಬಾಗಲಕೋಟೆ:--ಸದಾ ರಸ್ತೆಯಲ್ಲಿ ಮಲುಗುತ್ತಿದ್ದ, ಜನಸಂಚಾರಕ್ಕೆ ತೊಂದರೆ ಮಾಡುತ್ತಿದ್ದ, ಅಪಘಾತಕ್ಕೆ ಆಹ್ವಾನ ನೀಡುತ್ತಿದ್ದ ಬಿಡಾಡಿ ದನಗಳನ್ನು ನಗರಸಭೆಯಿಂದ ಬಾದಾಮಿ ತಾಲ್ಲೂಕಿನ ಗೋಶಾಲೆಗೆ ಕಳುಹಿಸಲಾಯಿತು.
ನಗರದ ಬಸವೇಶ್ವರ ವೃತ್ತದಲ್ಲಿ ಸುಮಾರು ಎಂಟತ್ತು ಬಿಡಾಡಿ ದನಗಳು ರಸ್ತೆಯ ಮಧ್ಯೆಯೇ ಮಲಗುತ್ತಿದ್ದವು, ಸಂಜೆಯಾಗುತ್ತಿದ್ದಂತೆ ಇಲ್ಲಿ ಜಮಾವಣೆಗೊಂಡ ಗುಂಪಾಗಿ ನಿಂತುಬಿಡುತ್ತಿದ್ದವು.ಇಲ್ಲಿ ಜನದಟ್ಟಣೆ ಮತ್ತು ವಾಹನಗಳ ಸಂಚಾರ ಹೆಚ್ಚಾಗಿರುವುದರಿಂದ ಸಂಚಾರಕ್ಕೆ ಅಡೆತಡೆ ಮಾಡುತ್ತಿದ್ದವು.ಇನ್ನೂ ವೇಗವಾಗಿ ಹೋಗುವ ವಾಹನಗಳಿಗೆ ಬಿಡಾಡಿ ದನಗಳಿಂದ ಅಪಘಾತವಾದ ಘಟನೆಗಳು ಇಲ್ಲಿ ನಡೆದಿವೆ.
ಸ್ಥಳೀಯ ತರಕಾರಿ ಮಾರುಕಟ್ಟೆಯಲ್ಲಿಯೂ ಸಹ ಬೆಳಿಗ್ಗೆ ಹತ್ತಾರು ದನಗಳು ಸಂಚಾರ ಮಾಡಿ ಅಲ್ಲಿ ವ್ಯಾಪಾರಸ್ಥರ ಮುಂದೆ ಇರುವ ತರಕಾರಿ ಪದಾರ್ಥಗಳನ್ನು ಯಾವುದೇ ಭಯವಿಲ್ಲದೇ ತಿಂದಾಕಿ ಹೋಗುತ್ತಿದ್ದವು.ಇದರಿಂದ ತರಕಾರಿ ವ್ಯಾಪಾರಸ್ಥರು ಸಹ ಬೇಸತ್ತು ಹೋಗಿದ್ದರು.ಬಿಡಾಡಿ ದನಗಳು ಗೋಶಾಲೆಗೆ ಹೋದ ಬಳಿಕ ತರಕಾರಿ ವ್ಯಾಪಾರಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.
ನಗರದ ವಲ್ಲಭಭಾಯಿ ವೃತ್ತ ಹಾಗೂ ಹಳೆ ಅಂಚೆ ಕಚೇರಿಯ ಬಳಿಯೂ ರಾತ್ರಿ 8 ಗಂಟೆ ನಂತರ ಬಿಡಾಡಿ ದನಗಳು ಬಂದು ಗುಂಪಾಗಿ ರಸ್ತೆಯಲ್ಲಿ ಮಲಗುತ್ತಿದ್ದವು, ಜನರು ರಸ್ತೆಯಿಂದ ಕದಲುವಂತೆ ಮಾಡಿದರೂ ರಸ್ತೆ ಬಿಟ್ಟು ಬಿಡಾಡಿ ದನಗಳು ಹೋಗುತ್ತಿರಲಿಲ್ಲ.ಇದರಿಂದ ಈ ಮಾರ್ಗದಲ್ಲಿ ಬರುವ ವಾಹನಗಳ ಸಂಚಾರಕ್ಕೂ ಕೂಡ ತೊಂದರೆ ಉಂಟಾಗಿತ್ತು.ಈಗ ಕಳೆದ ಎರಡ್ಮೂರು ದಿನಗಳಿಂದ ಈ ರಸ್ತೆಯಲ್ಲಿ ಬಿಡಾಡಿ ದನಗಳ ಹಾವಳಿಯೇ ಕಾಣುತ್ತಿಲ್ಲ.
ಪೊಲೀಸರಿಗೆ ತಲೆ ಬಿಸಿ : ಪ್ರತಿದಿನ ಬಸವೇಶ್ವರ ವೃತ್ತ ಮತ್ತು ಹಳೆ ಅಂಚೆ ಕಚೇರಿ ಸಮೀಪ ಇರುತ್ತಿದ್ದ ಬಿಡಾಡಿ ದನಗಳ ಗುಂಪನ್ನು ಚದುರಿಸಲು ಪೊಲೀಸರಿಗೆ ದೊಡ್ಡ ಕೆಲಸವಾಗಿತ್ತು.ವಾಹನಗಳ ಸಂಚಾರಕ್ಕೆ ಅಡೆತಡೆಯಾಗದಂತೆ ರಸ್ತೆಗಳಲ್ಲಿ ಮಲಗುತ್ತಿದ್ದ ದನಗಳನ್ನು ಓಡಿಸುವ ಕೆಲಸವನ್ನು ಪೊಲೀಸರು ಆಗಾಗ ಮಾಡುತ್ತಿದ್ದರು. ಈಗ ಬಿಡಾಡಿ ದನಗಳು ಗೋಶಾಲೆಗೆ ಹೋಗುತ್ತಿದ್ದಂತೆ ಬಸವೇಶ್ವರ ವೃತ್ತದಲ್ಲಿ ನಿಲ್ಲುವ ಪೊಲೀಸ್ ಸಿಬ್ಬಂದಿ ಕೂಡ ನಿರಾಳವಾಗಿದ್ದಾರೆ.
ನಗರದ ಬಸವೇಶ್ವರ ವೃತ್ತ,ತರಕಾರಿ ಮಾರುಕಟ್ಟೆ ಮತ್ತು ಹಳೆ ಅಂಚೆ ಕಚೇರಿ ಬಳಿ ಸದಾ ತಿರುಗಾಡುತ್ತಿದ್ದ ಬಿಡಾಡಿ ದನಗಳು ಸಧ್ಯಕ್ಕೆ ಕಾಣುತ್ತಿಲ್ಲ.ನಗರದಲ್ಲಿ ಸುಮಾರು 25ಕ್ಕೂ ಹೆಚ್ಚು ಬಿಡಾಡಿ ದನಗಳನ್ನು ನಗರಸಭೆಯು ಪೊಲೀಸ್ ಇಲಾಖೆಯ ಸಹಾಯದೊಂದಿಗೆ ಶಿವಯೋಗಮಂದಿರದ ಗೋಶಾಲೆಗೆ ಕಳುಹಿಸಲಾಗಿದೆ.
ದನಗಳಿಗೆ ಯಾವುದೇ ತೊಂದರೆಯಾಗದಂತೆ ಹಗ್ಗದಿಂದ ಕಟ್ಟಿ ನಂತರ ಲಾರಿ ಮೂಲಕ ಸುರಕ್ಷಿತವಾಗಿ ಗೋಶಾಲೆಗೆ ನಗರಸಭೆ ಸಿಬ್ಬಂದಿಗಳು ಕಳುಹಿಸಿದ್ದಾರೆ.ಕಳೆದ ಕೆಲವೊಂದು ದಿನಗಳಿಂದ ಬಿಡಾಡಿ ದನಗಳ ಹಾವಳಿಯನ್ನು ನಿಯಂತ್ರಿಸಲು ನಗರಸಭೆ ಪೌರಾಯುಕ್ತರು ಬಿಡಾಡಿ ದನಗಳ ಮಾಲೀಕರಿಗೆ ಎಚ್ಚರಿಕೆಯನ್ನು ಸಹ ನೀಡಿದ್ದರೂ ಅದಲ್ಲದೇ ದನಗಳನ್ನು ರಸ್ತೆಗೆ ಬಿಡಬಾರದು ಎಂದು ವಾಹನಗಳಲ್ಲಿ ಮೈಕ್ ಮೂಲಕ ಸಂದೇಶ ನೀಡಿದ್ದರೂ ಎಚ್ಚೆತ್ತುಕೊಳ್ಳದ ದನಗಳ ಮಾಲೀಕರು ರಸ್ತೆಗೆ ಬಿಡುವುದನ್ನು ನಿಲ್ಲಿಸಲಿಲ್ಲ.ಕೊನೆಗೆ ನಗರಸಭೆಯವರು ಬಿಡಾಡಿ ದನಗಳನ್ನು ಗೋಶಾಲೆಗೆ ಕಳಿಸಲಾಗಿದೆ ಎಂದು ನಗರ ಸಭೆ ಆಯುಕ್ತರಾದ ಗಣಪತಿ ಪಾಟೀಲ ತಿಳಿಸಿದ್ದಾರೆ.
ಎಚ್ಚೆತ್ತುಕೊಂಡ ದನಗಳ ಮಾಲೀಕರು : ನಗರದಲ್ಲಿ ಎಲ್ಲೆಂದರಲ್ಲಿ ಬಿಡುತ್ತಿದ್ದ ಜಾನುವಾರಗಳ ಮಾಲೀಕರು ನಗರಸಭೆಯವರು ಕಳೆದ ಮೂರು ದಿನಗಳಿಂದ ಬಿಡಾಡಿ ದನಗಳನ್ನು ಗೋಶಾಲೆಗೆ ದಬ್ಬುತ್ತಿರುವ ಸುದ್ದಿ ಹರಡುತ್ತಿದ್ದಂತೆ ಇನ್ನೂ ಕೆಲವು ಬಿಡಾಡಿ ದನಗಳ ಮಾಲೀಕರು ತಮ್ಮ ಜಾನುವಾರಗಳನ್ನು ರಸ್ತೆಗೆ ಬಿಡದೇ ತಮ್ಮ ಮನೆಯಲ್ಲಿ ಕಟ್ಟಿಕೊಳ್ಳುತ್ತಿದ್ದಾರೆ.
Conclusion:ಈ ಟಿವಿ,ಭಾರತ,ಬಾಗಲಕೋಟೆ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.