ETV Bharat / sports

Duleep Trophy: 5.5 ಓವರ್​ ಮಾಡಲು 53 ನಿಮಿಷ..! ದುಲೀಪ್​ ಟ್ರೋಫಿಯ ನಾಯಕನ ನಡೆಯಿಂದ ಚರ್ಚೆಗೆ ಬಂದ ಕ್ರೀಡಾ ಸ್ಫೂರ್ತಿ

author img

By

Published : Jul 9, 2023, 3:57 PM IST

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ದುಲೀಪ್ ಟ್ರೋಫಿ ಸೆಮಿಫೈನಲ್ ಪಂದ್ಯದಲ್ಲಿ ಉತ್ತರ ವಲಯ 5.5 ಓವರ್​ ಮಾಡಲು 53 ನಿಮಿಷಗಳನ್ನು ತೆಗೆದುಕೊಂಡಿತು. ಇದು ಈಗ ಚರ್ಚೆಗೆ ಎಡೆಮಾಡಿಕೊಟ್ಟಿದೆ.

Duleep Trophy
Duleep Trophy

ಕ್ರೀಡೆ ಎಂದು ಬಂದಾಗ ಸೋಲು-ಗೆಲುವು ಇದ್ದೇ ಇರುತ್ತದೆ. ಈ ಎರಡನ್ನೂ ಸಮಾನವಾಗಿ ಸ್ವೀಕರಿಸುವ ಅಗತ್ಯ ಇದೆ. ಇದನ್ನು ಹೇಳಲು ಕೇಳಲು ಚಂದ. ಆದರೆ ಆಟ ಎಂದು ಬಂದಾಗ ಗೆಲುವಿಗಾಗಿ ರೋಮದ ಅಂಚು ಕೂಡ ಹೋರಾಟಕ್ಕೆ ನಿಂತಿರುತ್ತದೆ. ಗೆಲುವಿಗಾಗಿ ಏನೆಲ್ಲಾ ಸಾಧ್ಯವೋ ಅದನ್ನೆಲ್ಲಾ ಮಾಡಲು ಪ್ರಯತ್ನಗಳನ್ನು ನಡೆಸಲಾಗುತ್ತದೆ. ಆದರೆ ಇದು ಕ್ರೀಡಾ ಸ್ಫೂರ್ತಿ ಎಂಬ ನೆಲೆಯನ್ನು ಇಟ್ಟು ನೋಡಿದಾಗ ಉತ್ತಮವಾಗಿ ಕಂಡು ಬರುವುದಿಲ್ಲ. ಇದೇ ರೀತಿಯ ಘಟನೆ ನಿನ್ನೆ ನಡೆದ ದುಲೀಪ್​ ಟ್ರೋಫಿಯಲ್ಲಿ ಆಗಿದೆ.

ದಕ್ಷಿಣ ವಲಯ ಮತ್ತು ಉತ್ತರ ವಲಯದ ನಡುವಿನ ದುಲೀಪ್ ಟ್ರೋಫಿ ಸೆಮಿಫೈನಲ್ 5.5 ಓವರ್​ ಮಾಡಲು ಬರೋಬ್ಬರಿ 1 ಗಂಟೆ ಕಾಲ ತೆಗೆದುಕೊಳ್ಳಲಾಗಿದೆ. ಪಂದ್ಯದ ಗೆಲುವಿಗಾಗಿ ಉತ್ತರ ವಲಯದ ನಾಯಕ ಜಯಂತ್​ ಯಾದವ್​ ಈ ರೀತಿಯ ಟ್ರಕ್​ನ್ನು ಬಳಸಿದರು. ಆದರೆ ಇದು ಅವರಿಗೆ ಯಶಸ್ವಿ ಮಾರ್ಗವಾಗಲಿಲ್ಲ. ಅಲ್ಲದೇ ಇದು ಈಗ ಕ್ರಿಕೆಟ್​ ಪ್ರೇಮಿಗಳಲ್ಲಿ ಚರ್ಚೆಗೆ ಕಾರಣವಾಗುತ್ತದೆ. ಈ ರೀತಿ ಆಟವನ್ನು ಆಡಿದರೆ ಕ್ರೀಡಾ ಸ್ಫೂರ್ತಿ ಎಂಬುದು ಎಲ್ಲಿ ಇರುತ್ತದೆ ಎಂಬ ಪ್ರಶ್ನೆಗಳು ಮೂಡುತ್ತಿವೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಚರ್ಚೆಗಳು ನಡೆಯುತ್ತಿವೆ.

ಉತ್ತರ ವಲಯದ ಈ ಪ್ಲಾನ್​​ ನಡುವೆಯೂ ದಕ್ಷಿಣ ವಲಯ 2 ವಿಕೆಟ್​ಗಳಿಂದ ಸೆಮಿಫೈನಲ್​ ಗೆದ್ದು ಫೈನಲ್​ ಪ್ರವೇಶಿಸಿದೆ. ಉತ್ತರ ವಲಯ ಪಂದ್ಯವನ್ನು ಗೆಲ್ಲದೆ ಡ್ರಾ ಮಾಡಿಕೊಂಡಲ್ಲಿ ಫೈನಲ್​ ಪ್ರವೇಶ ಪಡೆದುಕೊಳ್ಳುತ್ತಿತ್ತು. ಹೀಗಾಗಿ ಪಂದ್ಯವನ್ನು ಡ್ರಾ ಮಾಡಲು 'ಸ್ಪಿರಿಟ್ ಆಫ್ ಕ್ರಿಕೆಟ್' ಅನ್ನು ಬಿಟ್ಟು ಕಾಲ ಹರಣಕ್ಕೆ ಜಯಂತ್​ ಯಾದವ್​ ಮುಂದಾದರು. ಈಗ ಚರ್ಚೆಗೆ ಗ್ರಾಸವಾಗುತ್ತಿರುವುದು ಕೇವಲ ಅವರು ತಡ ಮಾಡಿದ್ದು ಮಾತ್ರ ಅಲ್ಲ. ಪಂದ್ಯ ಮುಗಿದ ನಂತರ ದಕ್ಷಿಣದ ನಾಯಕ ಹನುಮ ವಿಹಾರಿ ಆ ಸ್ಥಾನದಲ್ಲಿ ನಾವು ಇದ್ದಿದ್ದರೂ ಗೆಲುವಿಗಾಗಿ ಇಂತಹ ಪ್ರಯತ್ನ ಮಾಡುತ್ತಿದ್ದೆವು ಎಂದಿರುವುದು. ಈ ಮಾತಿನ ನಂತರ ಹಾಗಾದರೆ 'ಸ್ಪಿರಿಟ್ ಆಫ್ ಕ್ರಿಕೆಟ್' ಎಲ್ಲಿ ಎಂದು ಹಲವರು ಪ್ರಶ್ನಿಸಿದ್ದಾರೆ.

ಬೆಂಗಳೂರಿನಲ್ಲಿ ಮಳೆಯಾಗಿದ್ದರಿಂದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ಪಂದ್ಯ ಸುಮಾರು 100 ನಿಮಿಷಗಳ ಆಟ ಕಳೆದುಕೊಂಡಿತ್ತು. ಆಟ ಪ್ರಾರಂಭವಾದಾಗ, ದಕ್ಷಿಣ ವಲಯವು ಬೇಗನೆ ರನ್ ಗಳಿಸಬೇಕಾಗಿತ್ತು. ಉತ್ತರ ವಲಯವು ತಮ್ಮ ಹೆಚ್ಚಿನ ಫೀಲ್ಡರ್‌ಗಳನ್ನು ಬೌಂಡರಿ ಗೆರೆಯ ಸನಿಹದಲ್ಲೇ ನಿಲ್ಲಿಸಿ, ದೊಡ್ಡ ಹೊಡೆತಗಳಿಂದ ರನ್​ ಗಳಿಸುವ ತಂತ್ರವನ್ನು ಕಟ್ಟಿಹಾಕಲು ಪ್ರಯತ್ನಿಸಿತು. ಕೊನೆಯ ಸೆಶನ್‌ನ ಪ್ರತೀ ಬಾಲ್​ಗೂ ಮೈದಾನದ ಆಟಗಾರರನ್ನು ಬದಲಾಯಿಸುತ್ತ ಸಮಯ ವ್ಯರ್ಥವನ್ನು ಉತ್ತರ ವಲಯ ಮುಂದಾಯಿತು. ದಕ್ಷಿಣ ವಲಯಕ್ಕೆ ಗೆಲುವಿಗೆ ಅಗತ್ಯವಿದ್ದ 32 ರನ್ ಗಳಿಸಲು ಕೇವಲ 5.5 ಓವರ್‌ಗಳ ಅಗತ್ಯಬಿತ್ತು. ಆದರೆ ಉತ್ತರ ವಲಯ 5.5 ಓವರ್ ಬೌಲ್​​ ಮಾಡಲು ಬರೋಬ್ಬರಿ 53 ನಿಮಿಷಗಳನ್ನು ತೆಗೆದುಕೊಂಡಿತು.

ಪಂದ್ಯದ ನಂತರ ಮಾತನಾಡಿದ ದಕ್ಷಿಣ ವಲಯದ ನಾಯಕ ಹನುಮ ವಿಹಾರಿ ಅವರು ಜಯಂತ್ ಯಾದವ್ ಸ್ಥಾನದಲ್ಲಿ ನಾನು ಇದ್ದರೆ ಅದೇ ರೀತಿ ಮಾಡುತ್ತಿದ್ದೆ ಎಂದಿದ್ದರು. ಮಾಧ್ಯಮ ಹೇಳಿಕೆಯಲ್ಲಿ ಅವರು,"ನಾನು ಬಹಳಷ್ಟು ಪಂದ್ಯಗಳನ್ನು ನೋಡಿದ್ದೇನೆ, ಅಲ್ಲಿ ತಂಡವು ಅಂತಿಮ ಕೆಲವು ಓವರ್‌ಗಳಲ್ಲಿ ವಿಳಂಬ ಮಾಡಲು ಪ್ರಯತ್ನಿಸುತ್ತಿದೆ ಏಕೆಂದರೆ, ಅದು ಪ್ರಯೋಜನವನ್ನು ನೀಡುತ್ತದೆ. ಅದು ಅವರ ಕಡೆಯಿಂದ ತಪ್ಪಾಗಿಲ್ಲ. ಕೆಲವರು ಇದು ಆಟದ ಉತ್ಸಾಹದಲ್ಲಿಲ್ಲ ಎಂದು ಹೇಳುತ್ತಾರೆ. ಆದರೆ ನಾನು ನಾಯಕನಾಗಿ ಅದೇ ಕೆಲಸವನ್ನು ಮಾಡುತ್ತಿದ್ದೆ" ಎಂದಿದ್ದಾರೆ.

ಇದನ್ನೂ ಓದಿ: Ashes 3rd Test: ಲೀಡ್ಸ್ ಟೆಸ್ಟ್​ಗೆ ಮಳೆ ಆತಂಕ; ​ಪಂದ್ಯ ಗೆಲ್ಲಲು ಆಂಗ್ಲರಿಗೆ ಬೇಕು 224 ರನ್

ಕ್ರೀಡೆ ಎಂದು ಬಂದಾಗ ಸೋಲು-ಗೆಲುವು ಇದ್ದೇ ಇರುತ್ತದೆ. ಈ ಎರಡನ್ನೂ ಸಮಾನವಾಗಿ ಸ್ವೀಕರಿಸುವ ಅಗತ್ಯ ಇದೆ. ಇದನ್ನು ಹೇಳಲು ಕೇಳಲು ಚಂದ. ಆದರೆ ಆಟ ಎಂದು ಬಂದಾಗ ಗೆಲುವಿಗಾಗಿ ರೋಮದ ಅಂಚು ಕೂಡ ಹೋರಾಟಕ್ಕೆ ನಿಂತಿರುತ್ತದೆ. ಗೆಲುವಿಗಾಗಿ ಏನೆಲ್ಲಾ ಸಾಧ್ಯವೋ ಅದನ್ನೆಲ್ಲಾ ಮಾಡಲು ಪ್ರಯತ್ನಗಳನ್ನು ನಡೆಸಲಾಗುತ್ತದೆ. ಆದರೆ ಇದು ಕ್ರೀಡಾ ಸ್ಫೂರ್ತಿ ಎಂಬ ನೆಲೆಯನ್ನು ಇಟ್ಟು ನೋಡಿದಾಗ ಉತ್ತಮವಾಗಿ ಕಂಡು ಬರುವುದಿಲ್ಲ. ಇದೇ ರೀತಿಯ ಘಟನೆ ನಿನ್ನೆ ನಡೆದ ದುಲೀಪ್​ ಟ್ರೋಫಿಯಲ್ಲಿ ಆಗಿದೆ.

ದಕ್ಷಿಣ ವಲಯ ಮತ್ತು ಉತ್ತರ ವಲಯದ ನಡುವಿನ ದುಲೀಪ್ ಟ್ರೋಫಿ ಸೆಮಿಫೈನಲ್ 5.5 ಓವರ್​ ಮಾಡಲು ಬರೋಬ್ಬರಿ 1 ಗಂಟೆ ಕಾಲ ತೆಗೆದುಕೊಳ್ಳಲಾಗಿದೆ. ಪಂದ್ಯದ ಗೆಲುವಿಗಾಗಿ ಉತ್ತರ ವಲಯದ ನಾಯಕ ಜಯಂತ್​ ಯಾದವ್​ ಈ ರೀತಿಯ ಟ್ರಕ್​ನ್ನು ಬಳಸಿದರು. ಆದರೆ ಇದು ಅವರಿಗೆ ಯಶಸ್ವಿ ಮಾರ್ಗವಾಗಲಿಲ್ಲ. ಅಲ್ಲದೇ ಇದು ಈಗ ಕ್ರಿಕೆಟ್​ ಪ್ರೇಮಿಗಳಲ್ಲಿ ಚರ್ಚೆಗೆ ಕಾರಣವಾಗುತ್ತದೆ. ಈ ರೀತಿ ಆಟವನ್ನು ಆಡಿದರೆ ಕ್ರೀಡಾ ಸ್ಫೂರ್ತಿ ಎಂಬುದು ಎಲ್ಲಿ ಇರುತ್ತದೆ ಎಂಬ ಪ್ರಶ್ನೆಗಳು ಮೂಡುತ್ತಿವೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಚರ್ಚೆಗಳು ನಡೆಯುತ್ತಿವೆ.

ಉತ್ತರ ವಲಯದ ಈ ಪ್ಲಾನ್​​ ನಡುವೆಯೂ ದಕ್ಷಿಣ ವಲಯ 2 ವಿಕೆಟ್​ಗಳಿಂದ ಸೆಮಿಫೈನಲ್​ ಗೆದ್ದು ಫೈನಲ್​ ಪ್ರವೇಶಿಸಿದೆ. ಉತ್ತರ ವಲಯ ಪಂದ್ಯವನ್ನು ಗೆಲ್ಲದೆ ಡ್ರಾ ಮಾಡಿಕೊಂಡಲ್ಲಿ ಫೈನಲ್​ ಪ್ರವೇಶ ಪಡೆದುಕೊಳ್ಳುತ್ತಿತ್ತು. ಹೀಗಾಗಿ ಪಂದ್ಯವನ್ನು ಡ್ರಾ ಮಾಡಲು 'ಸ್ಪಿರಿಟ್ ಆಫ್ ಕ್ರಿಕೆಟ್' ಅನ್ನು ಬಿಟ್ಟು ಕಾಲ ಹರಣಕ್ಕೆ ಜಯಂತ್​ ಯಾದವ್​ ಮುಂದಾದರು. ಈಗ ಚರ್ಚೆಗೆ ಗ್ರಾಸವಾಗುತ್ತಿರುವುದು ಕೇವಲ ಅವರು ತಡ ಮಾಡಿದ್ದು ಮಾತ್ರ ಅಲ್ಲ. ಪಂದ್ಯ ಮುಗಿದ ನಂತರ ದಕ್ಷಿಣದ ನಾಯಕ ಹನುಮ ವಿಹಾರಿ ಆ ಸ್ಥಾನದಲ್ಲಿ ನಾವು ಇದ್ದಿದ್ದರೂ ಗೆಲುವಿಗಾಗಿ ಇಂತಹ ಪ್ರಯತ್ನ ಮಾಡುತ್ತಿದ್ದೆವು ಎಂದಿರುವುದು. ಈ ಮಾತಿನ ನಂತರ ಹಾಗಾದರೆ 'ಸ್ಪಿರಿಟ್ ಆಫ್ ಕ್ರಿಕೆಟ್' ಎಲ್ಲಿ ಎಂದು ಹಲವರು ಪ್ರಶ್ನಿಸಿದ್ದಾರೆ.

ಬೆಂಗಳೂರಿನಲ್ಲಿ ಮಳೆಯಾಗಿದ್ದರಿಂದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ಪಂದ್ಯ ಸುಮಾರು 100 ನಿಮಿಷಗಳ ಆಟ ಕಳೆದುಕೊಂಡಿತ್ತು. ಆಟ ಪ್ರಾರಂಭವಾದಾಗ, ದಕ್ಷಿಣ ವಲಯವು ಬೇಗನೆ ರನ್ ಗಳಿಸಬೇಕಾಗಿತ್ತು. ಉತ್ತರ ವಲಯವು ತಮ್ಮ ಹೆಚ್ಚಿನ ಫೀಲ್ಡರ್‌ಗಳನ್ನು ಬೌಂಡರಿ ಗೆರೆಯ ಸನಿಹದಲ್ಲೇ ನಿಲ್ಲಿಸಿ, ದೊಡ್ಡ ಹೊಡೆತಗಳಿಂದ ರನ್​ ಗಳಿಸುವ ತಂತ್ರವನ್ನು ಕಟ್ಟಿಹಾಕಲು ಪ್ರಯತ್ನಿಸಿತು. ಕೊನೆಯ ಸೆಶನ್‌ನ ಪ್ರತೀ ಬಾಲ್​ಗೂ ಮೈದಾನದ ಆಟಗಾರರನ್ನು ಬದಲಾಯಿಸುತ್ತ ಸಮಯ ವ್ಯರ್ಥವನ್ನು ಉತ್ತರ ವಲಯ ಮುಂದಾಯಿತು. ದಕ್ಷಿಣ ವಲಯಕ್ಕೆ ಗೆಲುವಿಗೆ ಅಗತ್ಯವಿದ್ದ 32 ರನ್ ಗಳಿಸಲು ಕೇವಲ 5.5 ಓವರ್‌ಗಳ ಅಗತ್ಯಬಿತ್ತು. ಆದರೆ ಉತ್ತರ ವಲಯ 5.5 ಓವರ್ ಬೌಲ್​​ ಮಾಡಲು ಬರೋಬ್ಬರಿ 53 ನಿಮಿಷಗಳನ್ನು ತೆಗೆದುಕೊಂಡಿತು.

ಪಂದ್ಯದ ನಂತರ ಮಾತನಾಡಿದ ದಕ್ಷಿಣ ವಲಯದ ನಾಯಕ ಹನುಮ ವಿಹಾರಿ ಅವರು ಜಯಂತ್ ಯಾದವ್ ಸ್ಥಾನದಲ್ಲಿ ನಾನು ಇದ್ದರೆ ಅದೇ ರೀತಿ ಮಾಡುತ್ತಿದ್ದೆ ಎಂದಿದ್ದರು. ಮಾಧ್ಯಮ ಹೇಳಿಕೆಯಲ್ಲಿ ಅವರು,"ನಾನು ಬಹಳಷ್ಟು ಪಂದ್ಯಗಳನ್ನು ನೋಡಿದ್ದೇನೆ, ಅಲ್ಲಿ ತಂಡವು ಅಂತಿಮ ಕೆಲವು ಓವರ್‌ಗಳಲ್ಲಿ ವಿಳಂಬ ಮಾಡಲು ಪ್ರಯತ್ನಿಸುತ್ತಿದೆ ಏಕೆಂದರೆ, ಅದು ಪ್ರಯೋಜನವನ್ನು ನೀಡುತ್ತದೆ. ಅದು ಅವರ ಕಡೆಯಿಂದ ತಪ್ಪಾಗಿಲ್ಲ. ಕೆಲವರು ಇದು ಆಟದ ಉತ್ಸಾಹದಲ್ಲಿಲ್ಲ ಎಂದು ಹೇಳುತ್ತಾರೆ. ಆದರೆ ನಾನು ನಾಯಕನಾಗಿ ಅದೇ ಕೆಲಸವನ್ನು ಮಾಡುತ್ತಿದ್ದೆ" ಎಂದಿದ್ದಾರೆ.

ಇದನ್ನೂ ಓದಿ: Ashes 3rd Test: ಲೀಡ್ಸ್ ಟೆಸ್ಟ್​ಗೆ ಮಳೆ ಆತಂಕ; ​ಪಂದ್ಯ ಗೆಲ್ಲಲು ಆಂಗ್ಲರಿಗೆ ಬೇಕು 224 ರನ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.