ETV Bharat / sports

ಧೋನಿ ಭಾಯ್ ಮಾರ್ಗದರ್ಶನ ಮಿಸ್​ ಮಾಡ್ಕೊಳ್ತಿದೀನಿ: ಕುಲ್ದೀಪ್ ಯಾದವ್​

ಕುಲ್ದೀಪ್ ಯಾದವ್​ 2019ರ ನಂತರ ಸೀಮಿತ ಓವರ್​ಗಳ ಪಂದ್ಯಗಳಲ್ಲಿ ಬೆರಳೆಣಿಕೆಯಷ್ಟು ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ತಂಡದಲ್ಲಿ ನಿರಂತವಾಗಿ ಅವಕಾಶ ಪಡೆಯುವಲ್ಲಿ ವಿಫಲರಾಗುತ್ತಿದ್ದಾರೆ. ಧೋನಿ ಅನುಪಸ್ಥಿತಿಯಲ್ಲಿ ಅವರು ವಿಕೆಟ್​ ಪಡೆಯುವಲ್ಲಿ ಕೂಡ ವಿಫಲರಾಗುತ್ತಿದ್ದಾರೆ.

author img

By

Published : May 12, 2021, 4:35 PM IST

ಧೋನಿ ಕುಲ್ದೀಪ್ ಯಾದವ್​
ಧೋನಿ ಕುಲ್ದೀಪ್ ಯಾದವ್​

ನವದೆಹಲಿ: ಭಾರತ ತಂಡದ ಸ್ಪಿನ್ನರ್ ಕುಲ್ದೀಪ್ ಯಾದವ್​ ಮಾಜಿ ನಾಯಕ ಎಂಎಸ್ ಧೋನಿಯವರ ಮಾರ್ಗದರ್ಶನವನ್ನು ತುಂಬಾ ಮಿಸ್​ ಮಾಡಿಕೊಳ್ಳುತ್ತಿರುವುದಾಗಿ ಒಪ್ಪಿಕೊಂಡಿದ್ದಾರೆ.

ಕುಲ್ದೀಪ್ ಯಾದವ್​ 2019ರ ನಂತರ ಸೀಮಿತ ಓವರ್​ಗಳ ಪಂದ್ಯಗಳಲ್ಲಿ ಬೆರಳೆಣಿಕೆಯಷ್ಟು ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ತಂಡದಲ್ಲಿ ನಿರಂತವಾಗಿ ಅವಕಾಶ ಪಡೆಯುವಲ್ಲಿ ವಿಫಲರಾಗುತ್ತಿದ್ದಾರೆ. ಧೋನಿ ಅನುಪಸ್ಥಿತಿಯಲ್ಲಿ ಅವರು ವಿಕೆಟ್​ ಪಡೆಯುವಲ್ಲಿ ಕೂಡ ವಿಫಲರಾಗುತ್ತಿದ್ದಾರೆ.

" ಕೆಲವೊಂದು ಬಾರಿ ನಾನು ಸಾಕಷ್ಟು ಅನುಭವಿಯಾಗಿದ್ದ ಧೋನಿ ಅವರ ಸಲಹೆಗಳನ್ನು ಕಳೆದುಕೊಳ್ಳುತ್ತಿದ್ದೇನೆ. ಅವರ ವಿಕೆಟ್‌ನ ಹಿಂದೆ ನಿಂತು ನನಗೆ ಸಲಹೆಗಳನ್ನು ನೀಡುತ್ತಿದ್ದರು. ನಾವು ಅದನ್ನು ಇಂದು ಮಿಸ್​ ಮಾಡಿಕೊಳ್ಳುತ್ತಿದ್ದೇವೆ. ಈಗ ರಿಷಭ್ ಪಂತ್ ಇದ್ದಾರೆ, ಅವರು ಹೆಚ್ಚು ಪಂದ್ಯಗಳನ್ನು ಆಡಿದರೆ, ಅವರೂ ಕೂಡ ಭವಿಷ್ಯದಲ್ಲಿ ಬೌಲರ್​ಗಳಿಗೆ ಸಲಹೆಗಳನ್ನು ನೀಡಲಿದ್ದಾರೆ" ಎಂದು ಕುಲ್ದೀಪ್ ಯಾದವ್ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

"ಮಹಿ ಭಾಯ್ ಇದ್ದಾಗ ನಾನು ಮತ್ತು ಚಹಾಲ್ ಆಡುತ್ತಿದ್ದೆವು. ಮಹಿ ಭಾಯ್ ಹೊರ ಹೋದ ನಂತರ ನಾನು ಹಾಗೂ ಚಹಾಲ್ ಒಟ್ಟಾಗಿ ಆಡಿಲ್ಲ. ಧೋನಿ ಭಾಯ್​ ನಿವೃತ್ತಿಯ ನಂತರ ನಾನು ಒಂದು ಪರಿಪೂರ್ಣ ಪಂದ್ಯವನ್ನಷ್ಟೇ ಆಡಿದ್ದೇನೆ. ನಾನು ಹತ್ತಕ್ಕೂ ಹೆಚ್ಚು ಪಂದ್ಯಗಳಲ್ಲಿ ಆಡಬೇಕಿತ್ತು. ಹ್ಯಾಟ್ರಿಕ್ ವಿಕೆಟ್ ಕೂಡ ಪಡೆದಿದ್ದೇನೆ. ನನ್ನ ಸಂಪೂರ್ಣ ಆಟವನ್ನು ನೀವು ನೋಡಿದರೆ ಅದು ತುಂಬಾ ಸಭ್ಯವಾಗಿ ಕಾಣುತ್ತದೆ" ಎಂದು ಯಾದವ್ ಹೇಳಿಕೊಂಡಿದ್ದಾರೆ.

ಯಾದವ್​ 2019 ರಲ್ಲಿ 23 ಪಂದ್ಯಗಳನ್ನಾಡಿದ್ದರು, ಆದರೆ, 2020 ಮತ್ತು 2021ರಲ್ಲಿ ಕೇವಲ 7 ಏಕದಿನ ಪಂದ್ಯಗಳನ್ನಾಡಿದ್ದಾರೆ. ಧೋನಿ 2019ರ ವಿಶ್ವಕಪ್​ ಸೆಮಿಫೈನಲ್​ ನಂತರ ಯಾವುದೇ ಪಂದ್ಯವನ್ನಾಡಿದರೆ 2020 ಆಗಸ್ಟ್ 15ರಂದು ನಿವೃತ್ತಿ ಘೋಷಿಸಿದ್ದರು.

ಇದನ್ನು ಓದಿ: ಮಾಜಿ ವೇಗದ ಬೌಲರ್​ ರುದ್ರ ಪ್ರತಾಪ್ ಸಿಂಗ್ ತಂದೆ ಕೋವಿಡ್​ಗೆ ಬಲಿ

ನವದೆಹಲಿ: ಭಾರತ ತಂಡದ ಸ್ಪಿನ್ನರ್ ಕುಲ್ದೀಪ್ ಯಾದವ್​ ಮಾಜಿ ನಾಯಕ ಎಂಎಸ್ ಧೋನಿಯವರ ಮಾರ್ಗದರ್ಶನವನ್ನು ತುಂಬಾ ಮಿಸ್​ ಮಾಡಿಕೊಳ್ಳುತ್ತಿರುವುದಾಗಿ ಒಪ್ಪಿಕೊಂಡಿದ್ದಾರೆ.

ಕುಲ್ದೀಪ್ ಯಾದವ್​ 2019ರ ನಂತರ ಸೀಮಿತ ಓವರ್​ಗಳ ಪಂದ್ಯಗಳಲ್ಲಿ ಬೆರಳೆಣಿಕೆಯಷ್ಟು ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ತಂಡದಲ್ಲಿ ನಿರಂತವಾಗಿ ಅವಕಾಶ ಪಡೆಯುವಲ್ಲಿ ವಿಫಲರಾಗುತ್ತಿದ್ದಾರೆ. ಧೋನಿ ಅನುಪಸ್ಥಿತಿಯಲ್ಲಿ ಅವರು ವಿಕೆಟ್​ ಪಡೆಯುವಲ್ಲಿ ಕೂಡ ವಿಫಲರಾಗುತ್ತಿದ್ದಾರೆ.

" ಕೆಲವೊಂದು ಬಾರಿ ನಾನು ಸಾಕಷ್ಟು ಅನುಭವಿಯಾಗಿದ್ದ ಧೋನಿ ಅವರ ಸಲಹೆಗಳನ್ನು ಕಳೆದುಕೊಳ್ಳುತ್ತಿದ್ದೇನೆ. ಅವರ ವಿಕೆಟ್‌ನ ಹಿಂದೆ ನಿಂತು ನನಗೆ ಸಲಹೆಗಳನ್ನು ನೀಡುತ್ತಿದ್ದರು. ನಾವು ಅದನ್ನು ಇಂದು ಮಿಸ್​ ಮಾಡಿಕೊಳ್ಳುತ್ತಿದ್ದೇವೆ. ಈಗ ರಿಷಭ್ ಪಂತ್ ಇದ್ದಾರೆ, ಅವರು ಹೆಚ್ಚು ಪಂದ್ಯಗಳನ್ನು ಆಡಿದರೆ, ಅವರೂ ಕೂಡ ಭವಿಷ್ಯದಲ್ಲಿ ಬೌಲರ್​ಗಳಿಗೆ ಸಲಹೆಗಳನ್ನು ನೀಡಲಿದ್ದಾರೆ" ಎಂದು ಕುಲ್ದೀಪ್ ಯಾದವ್ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

"ಮಹಿ ಭಾಯ್ ಇದ್ದಾಗ ನಾನು ಮತ್ತು ಚಹಾಲ್ ಆಡುತ್ತಿದ್ದೆವು. ಮಹಿ ಭಾಯ್ ಹೊರ ಹೋದ ನಂತರ ನಾನು ಹಾಗೂ ಚಹಾಲ್ ಒಟ್ಟಾಗಿ ಆಡಿಲ್ಲ. ಧೋನಿ ಭಾಯ್​ ನಿವೃತ್ತಿಯ ನಂತರ ನಾನು ಒಂದು ಪರಿಪೂರ್ಣ ಪಂದ್ಯವನ್ನಷ್ಟೇ ಆಡಿದ್ದೇನೆ. ನಾನು ಹತ್ತಕ್ಕೂ ಹೆಚ್ಚು ಪಂದ್ಯಗಳಲ್ಲಿ ಆಡಬೇಕಿತ್ತು. ಹ್ಯಾಟ್ರಿಕ್ ವಿಕೆಟ್ ಕೂಡ ಪಡೆದಿದ್ದೇನೆ. ನನ್ನ ಸಂಪೂರ್ಣ ಆಟವನ್ನು ನೀವು ನೋಡಿದರೆ ಅದು ತುಂಬಾ ಸಭ್ಯವಾಗಿ ಕಾಣುತ್ತದೆ" ಎಂದು ಯಾದವ್ ಹೇಳಿಕೊಂಡಿದ್ದಾರೆ.

ಯಾದವ್​ 2019 ರಲ್ಲಿ 23 ಪಂದ್ಯಗಳನ್ನಾಡಿದ್ದರು, ಆದರೆ, 2020 ಮತ್ತು 2021ರಲ್ಲಿ ಕೇವಲ 7 ಏಕದಿನ ಪಂದ್ಯಗಳನ್ನಾಡಿದ್ದಾರೆ. ಧೋನಿ 2019ರ ವಿಶ್ವಕಪ್​ ಸೆಮಿಫೈನಲ್​ ನಂತರ ಯಾವುದೇ ಪಂದ್ಯವನ್ನಾಡಿದರೆ 2020 ಆಗಸ್ಟ್ 15ರಂದು ನಿವೃತ್ತಿ ಘೋಷಿಸಿದ್ದರು.

ಇದನ್ನು ಓದಿ: ಮಾಜಿ ವೇಗದ ಬೌಲರ್​ ರುದ್ರ ಪ್ರತಾಪ್ ಸಿಂಗ್ ತಂದೆ ಕೋವಿಡ್​ಗೆ ಬಲಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.