ETV Bharat / sports

ಮಯಾಂಕ್ ರನ್ ಔಟ್​ಗೆ ಬಲಿಯಾಗಿದ್ದೇ ತಂಡಕ್ಕೆ ಭಾರೀ ಪೆಟ್ಟು ನೀಡಿತು: ಕೆ.ಎಲ್.ರಾಹುಲ್

author img

By

Published : Oct 9, 2020, 8:19 AM IST

202 ರನ್​ಗಳ ಬೃಹತ್ ಟಾರ್ಗೆಟ್ ಚೇಸಿಂಗ್ ಮಾಡುವಾಗ ಇನ್ನಿಂಗ್ಸ್​​ನ 2ನೇ ಓವರ್​ನಲ್ಲೇ ಮಯಾಂಕ್ ರನ್​ ಔಟ್​ಗೆ ಬಲಿಯಾಗಿದ್ದು ತಂಡಕ್ಕೆ ಹಿನ್ನಡೆಯಾಗಲು ಕಾರಣ ಎಂದು ಕೆ.ಎಲ್.ರಾಹುಲ್ ಹೇಳಿದ್ದಾರೆ.

KL Rahul
ಕೆ.ಎಲ್.ರಾಹುಲ್

ದುಬೈ: ಆರಂಭಿಕ ಆಟಗಾರ ಮಾಯಾಂಕ್ ಅಗರ್ವಾಲ್ ಎರಡನೇ ಓವರ್‌ನಲ್ಲಿ ರನ್ ಔಟ್​ ಆಗಿದ್ದೇ ತಂಡಕ್ಕೆ ಭಾರೀ ಪೆಟ್ಟು ನೀಡಿತು ಎಂದು ಕಿಂಗ್ಸ್ ಇಲೆವೆನ್ ಪಂಜಾಬ್ ತಮಡದ ನಾಯಕ ಕೆ.ಎಲ್.ರಾಹುಲ್ ಹೇಳಿದ್ದಾರೆ.

202 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ ಪಂಜಾಬ್​ ತಂಡಕ್ಕೆ ಆರಂಭಿಕ ಆಘಾತ ಎದುರಾಯ್ತು. ಇನ್ನಿಂಗ್ಸ್‌ನ ಎರಡನೇ ಓವರ್‌ನಲ್ಲಿ ಮಯಾಂಕ್ ಅಗರ್ವಾಲ್ ರನ್ ಔಟ್​ಗೆ ಬಲಿಯಾಗಿ ನಿರಾಸೆ ಅನುಭವಿಸಿದ್ರು.

ನಾವು ಪವರ್ ‌ಪ್ಲೇನಲ್ಲಿ ವಿಕೆಟ್‌ಗಳನ್ನು ಕಳೆದುಕೊಂಡರೆ ತುಂಬಾ ಕಠಿಣವಾಗುತ್ತದೆ. ಅದರಲ್ಲೂ ವಿಶೇಷವಾಗಿ ನಾವು ಕೇವಲ ಆರು ಬ್ಯಾಟ್ಸ್​ಮನ್​ಗಳು ಮಾತ್ರ ಆಡುತ್ತಿದ್ದೇವೆ. ಮಾಯಾಂಕ್ ರನ್​ ಔಟ್​ಗೆ ಬಲಯಾದರು, ಇದು ಉತ್ತಮ ಆರಂಭವಲ್ಲ. ಇದರಿಂದ ತಂಡಕ್ಕೆ ಭಾರೀ ಪೆಟ್ಟು ಬಿತ್ತು ಎಂದು ಪಂದ್ಯದ ನಂತರದ ರಾಹುಲ್ ಹೇಳಿದ್ದಾರೆ.

ಕೆ.ಎಲ್.ರಾಹುಲ್, ಪಂಜಾಬ್ ತಂಡದ ನಾಯಕ

ನಾವು ಗಾಳಿಯಲ್ಲಿ ಹೊಡೆದ ಎಲ್ಲಾ ಚೆಂಡುಗಳು ಫೀಲ್ಡರ್​ಗಳ ಬಳಿ ಹೋದವು. ಕಳೆದ ಐದು ಪಂದ್ಯಗಳಲ್ಲಿ ನಮ್ಮ ಡೆತ್ ಬೌಲಿಂಗ್‌ ಸರಿಯಾಗಿರಲಿಲ್ಲ. ಆದರೆ ಈ ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರಿದ್ರು. ಆರಂಭದಲ್ಲಿ ಹೈದರಾಬಾದ್​ ತಂಡದ ಆಟಗಾರರು ಬ್ಯಾಟ್​ ಬೀಸಿದ್ದು ನೋಡಿ 230 ರನ್​ ಗಳಿಸುತ್ತಾರೆ ಎಂದು ಭಾವಿಸಿದ್ದೆ. ಯುವ ಸ್ಪಿನ್ನರ್​ ರವಿ ಬಿಷ್ನೋಯಿ ಅದ್ಭುತವಾಗಿ ಸ್ಪೆಲ್​ ಮಾಡಿದರು. ಪವರ್‌ ಪ್ಲೇ ಇರಲಿ, ಪಂದ್ಯದ ಕೊನೆಯಲ್ಲೇ ಆಗಿರಲಿ ಅವರು ಹೆದರುವುದಿಲ್ಲ. ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ್ದಾರೆ ಎಂದಿದ್ದಾರೆ.

ಕಳಪೆ ಬ್ಯಾಟಿಂಗ್ ಪ್ರದರ್ಶನದಿಂದಾಗಿ 16.5 ಓವರ್​ಗಳಲ್ಲಿ 132 ರನ್​​ಗಳಿಗೆ ಸರ್ವಪತನ ಕಂಡ ಪಂಜಾಬ್ ತಂಡ, 69 ರನ್​ಗಳಿಂದ ಹೈದರಾಬಾದ್​​ ತಂಡಕ್ಕೆ ಶರಣಾಯಿತು.

ದುಬೈ: ಆರಂಭಿಕ ಆಟಗಾರ ಮಾಯಾಂಕ್ ಅಗರ್ವಾಲ್ ಎರಡನೇ ಓವರ್‌ನಲ್ಲಿ ರನ್ ಔಟ್​ ಆಗಿದ್ದೇ ತಂಡಕ್ಕೆ ಭಾರೀ ಪೆಟ್ಟು ನೀಡಿತು ಎಂದು ಕಿಂಗ್ಸ್ ಇಲೆವೆನ್ ಪಂಜಾಬ್ ತಮಡದ ನಾಯಕ ಕೆ.ಎಲ್.ರಾಹುಲ್ ಹೇಳಿದ್ದಾರೆ.

202 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ ಪಂಜಾಬ್​ ತಂಡಕ್ಕೆ ಆರಂಭಿಕ ಆಘಾತ ಎದುರಾಯ್ತು. ಇನ್ನಿಂಗ್ಸ್‌ನ ಎರಡನೇ ಓವರ್‌ನಲ್ಲಿ ಮಯಾಂಕ್ ಅಗರ್ವಾಲ್ ರನ್ ಔಟ್​ಗೆ ಬಲಿಯಾಗಿ ನಿರಾಸೆ ಅನುಭವಿಸಿದ್ರು.

ನಾವು ಪವರ್ ‌ಪ್ಲೇನಲ್ಲಿ ವಿಕೆಟ್‌ಗಳನ್ನು ಕಳೆದುಕೊಂಡರೆ ತುಂಬಾ ಕಠಿಣವಾಗುತ್ತದೆ. ಅದರಲ್ಲೂ ವಿಶೇಷವಾಗಿ ನಾವು ಕೇವಲ ಆರು ಬ್ಯಾಟ್ಸ್​ಮನ್​ಗಳು ಮಾತ್ರ ಆಡುತ್ತಿದ್ದೇವೆ. ಮಾಯಾಂಕ್ ರನ್​ ಔಟ್​ಗೆ ಬಲಯಾದರು, ಇದು ಉತ್ತಮ ಆರಂಭವಲ್ಲ. ಇದರಿಂದ ತಂಡಕ್ಕೆ ಭಾರೀ ಪೆಟ್ಟು ಬಿತ್ತು ಎಂದು ಪಂದ್ಯದ ನಂತರದ ರಾಹುಲ್ ಹೇಳಿದ್ದಾರೆ.

ಕೆ.ಎಲ್.ರಾಹುಲ್, ಪಂಜಾಬ್ ತಂಡದ ನಾಯಕ

ನಾವು ಗಾಳಿಯಲ್ಲಿ ಹೊಡೆದ ಎಲ್ಲಾ ಚೆಂಡುಗಳು ಫೀಲ್ಡರ್​ಗಳ ಬಳಿ ಹೋದವು. ಕಳೆದ ಐದು ಪಂದ್ಯಗಳಲ್ಲಿ ನಮ್ಮ ಡೆತ್ ಬೌಲಿಂಗ್‌ ಸರಿಯಾಗಿರಲಿಲ್ಲ. ಆದರೆ ಈ ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರಿದ್ರು. ಆರಂಭದಲ್ಲಿ ಹೈದರಾಬಾದ್​ ತಂಡದ ಆಟಗಾರರು ಬ್ಯಾಟ್​ ಬೀಸಿದ್ದು ನೋಡಿ 230 ರನ್​ ಗಳಿಸುತ್ತಾರೆ ಎಂದು ಭಾವಿಸಿದ್ದೆ. ಯುವ ಸ್ಪಿನ್ನರ್​ ರವಿ ಬಿಷ್ನೋಯಿ ಅದ್ಭುತವಾಗಿ ಸ್ಪೆಲ್​ ಮಾಡಿದರು. ಪವರ್‌ ಪ್ಲೇ ಇರಲಿ, ಪಂದ್ಯದ ಕೊನೆಯಲ್ಲೇ ಆಗಿರಲಿ ಅವರು ಹೆದರುವುದಿಲ್ಲ. ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ್ದಾರೆ ಎಂದಿದ್ದಾರೆ.

ಕಳಪೆ ಬ್ಯಾಟಿಂಗ್ ಪ್ರದರ್ಶನದಿಂದಾಗಿ 16.5 ಓವರ್​ಗಳಲ್ಲಿ 132 ರನ್​​ಗಳಿಗೆ ಸರ್ವಪತನ ಕಂಡ ಪಂಜಾಬ್ ತಂಡ, 69 ರನ್​ಗಳಿಂದ ಹೈದರಾಬಾದ್​​ ತಂಡಕ್ಕೆ ಶರಣಾಯಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.