ETV Bharat / sports

Duleep Trophy: ದಕ್ಷಿಣ ವಲಯ ತಂಡ ದುಲೀಪ್​ ಟ್ರೋಫಿ ಚಾಂಪಿಯನ್!

author img

By

Published : Jul 16, 2023, 12:37 PM IST

Updated : Jul 16, 2023, 2:16 PM IST

ದುಲೀಪ್​ ಟ್ರೋಫಿ ಫೈನಲ್ ಪಂದ್ಯದಲ್ಲಿ ದಕ್ಷಿಣ ವಲಯ ತಂಡವು ಪಶ್ಚಿಮ ವಲಯದ ವಿರುದ್ಧ 75 ರನ್​ಗಳ ಜಯ ಸಾಧಿಸಿತು.

duleep-trophy-south-zone-beat-west-zone-by-75-runs-to-clinch-title
ದುಲೀಪ್​ ಟ್ರೋಫಿ ಫೈನಲ್ : ದಕ್ಷಿಣ ವಲಯಕ್ಕೆ 75 ರನ್​ ಜಯ

ಬೆಂಗಳೂರು : ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ದುಲೀಪ್​ ಟ್ರೋಫಿಯ ಫೈನಲ್​ ಪಂದ್ಯಾಟದಲ್ಲಿ ದಕ್ಷಿಣ ವಲಯವು ಪಶ್ಚಿಮ ವಲಯವನ್ನು 75 ರನ್​ಗಳಿಂದ ಸೋಲಿಸಿತು. 298 ರನ್​ಗಳ ಗುರಿ ಬೆನ್ನತ್ತಿದ್ದ ಪಶ್ಚಿಮ ವಲಯ ತಂಡ ಶನಿವಾರ ದಿನದಂತ್ಯಕ್ಕೆ 182 ರನ್‌ಗಳಿಗೆ 5 ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಅಂತಿಮ ದಿನ ಮತ್ತೆ ಬ್ಯಾಟ್​ ಬೀಸಿದ ಪಶ್ಚಿಮ ವಲಯವು ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ಎಡವಿತು. ಈ ಮೂಲಕ 222 ರನ್‌ಗಳಿಗೆ ತನ್ನೆಲ್ಲ ವಿಕೆಟ್​ಗಳನ್ನು ಕಳೆದುಕೊಂಡ ಪಶ್ಚಿಮ ವಲಯ ಅಂತಿಮವಾಗಿ ದಕ್ಷಿಣ ವಲಯಕ್ಕೆ ಶರಣಾಯಿತು. ಈ ಮೂಲಕ 14 ನೇ ಬಾರಿಗೆ ದಕ್ಷಿಣ ವಲಯವು ದುಲೀಪ್​ ಟ್ರೋಫಿಗೆ ಮುತ್ತಿಕ್ಕಿತು.

ಮೊದಲ ಇನ್ನಿಂಗ್ಸ್​ : ಟಾಸ್​ ಸೋತು ಬ್ಯಾಟಿಂಗ್​ ಮಾಡಿದ್ದ ದಕ್ಷಿಣ ವಲಯ ಮೊದಲ ಇನ್ನಿಂಗ್ಸ್​ನಲ್ಲಿ 213 ರನ್​ ಕಲೆ ಹಾಕಿತು. ಆರಂಭಿಕರಾಗಿ ಆಗಮಿಸಿದ ರವಿಕುಮಾರ್​ ಸಮರ್ಥ ಮತ್ತು ಮಾಯಾಂಕ್​ ಅಗರ್ವಾಲ್​ ಉತ್ತಮ ಆರಂಭ ನೀಡಲಿಲ್ಲ. ರವಿಕುಮಾರ್​ ಸಮರ್ಥ್​ 7 ರನ್​ ಗಳಿಸಿ ಚಿಂತನ್‌ಗೆ ವಿಕೆಟ್​​ ಒಪ್ಪಿಸಿದರೆ, ಮಾಯಾಂಕ್​ 28 ರನ್​ ಗಳಿಸಿ ಅತಿತ್​ ಸೇಠ್​ಗೆ ವಿಕೆಟ್​ ನೀಡಿದರು.

ಬಳಿಕ ಆಗಮಿಸಿದ ನಾಯಕ ಹನುಮ ವಿಹಾರಿ ಮತ್ತು ತಿಲಕ್​ ವರ್ಮಾ ಸ್ವಲ್ಪ ಮಟ್ಟಿಗೆ ತಂಡಕ್ಕೆ ಚೇತರಿಕೆ ಕೊಟ್ಟರು. ಹನುಮ ವಿಹಾರಿ 9 ಬೌಂಡರಿಗಳೊಂದಿಗೆ 63 ರನ್​ ಗಳಿಸಿದರೆ, ತಿಲಕ್​ ವರ್ಮಾ 40 ರನ್​ ಸೇರಿಸಿ ಓಟಾದರು. ನಂತರದಲ್ಲಿ ರಿಕ್ಕಿ (9 ರನ್​​), ಸಚಿನ್​ ಬೇಬಿ (7) , ವಾಷಿಂಗ್ಟನ್​ ಸುಂದರ್​ (22), ಸಾಯಿ ಕಿಶೋರ್​(5), ವೈಶಾಖ್ (13), ವಿದ್ವತ್ ಕಾವೇರಪ್ಪ (8) ರನ್​ ಗಳಿಸಿದರು. ಈ ಮೂಲಕ ದಕ್ಷಿಣ ವಲಯವು 213 ರನ್​ ಗಳಿಸಿತು. ಪಶ್ಚಿಮ ವಲಯ ಪರ, ಶಾಮ್ಸ್​ ಮುಲಾನಿ 3 ವಿಕೆಟ್​​, ಅರ್ಜಾನ್​, ಚಿಂತನ್​ ಗಾಜಾ, ಧರ್ಮೇಂದ್ರ ಸಿಂಗ್ ಜಡೇಜಾ ತಲಾ 2 ವಿಕೆಟ್​​ ಪಡೆದರು.

ಮೊದಲ ಇನ್ನಿಂಗ್ಸ್‌ನಲ್ಲಿ ಪಶ್ಚಿಮ ವಲಯ 146 ರನ್​ಗಳಿಗೆ ತನ್ನೆಲ್ಲ ವಿಕೆಟ್​ಗಳನ್ನು ಕಳೆದುಕೊಂಡಿತು. ಆರಂಭಿಕ ಪೃಥ್ವಿ ಶಾ 9 ಬೌಂಡರಿಗಳೊಂದಿಗೆ 65 ರನ್​ ಗಳಿಸಿ ತಂಡಕ್ಕೆ ಆಸರೆಯಾದರು. ಆದರೆ ಪ್ರಿಯಾಂಕ್​ ಪಾಂಚಾಲ್​ ನಾಯಕನ ಆಟ ಆಡಲಿಲ್ಲ. ಕೇವಲ 11 ರನ್​ ಗಳಿಸಿದ ಪ್ರಿಯಾಂಕ್,​ ವಿ. ಕೌಶಿಕ್​ ವಿಕೆಟ್​ ಒಪ್ಪಿಸಿ ಪೆವಿಲಿಯನ್​ ಸೇರಿದರು. ಬಳಿಕ ಬಂದ ಯಾವೊಬ್ಬ ಆಟಗಾರನೂ ನಿರೀಕ್ಷಿತ ಆಟ ಪ್ರದರ್ಶಿಸಲಿಲ್ಲ. ಟಿ20 ಪ್ರಮುಖ ಬ್ಯಾಟರ್​ ಸೂರ್ಯ ಕುಮಾರ್​ ಯಾದವ್​​ 8 ರನ್​ಗೆ ಔಟಾಗುವ ಮೂಲಕ ನಿರಾಸೆ ಮೂಡಿಸಿದರು. ಇದರಿಂದಾಗಿ ಪಶ್ಚಿಮ ವಲಯ 146 ರನ್​ಗೆ ಆಲೌಟ್‌ ಆಯಿತು.

ಎರಡನೇ ಇನ್ನಿಂಗ್ಸ್​ : ಎರಡನೇ ಇನ್ನಿಂಗ್ಸ್ ಬ್ಯಾಟಿಂಗ್​ ಮಾಡಿದ ದಕ್ಷಿಣ ವಲಯ ಆರಂಭಿಕ ಆಘಾತ ಎದುರಿಸಿತು. ಆರಂಭಿಕ ಬ್ಯಾಟರ್​ಗಳಾದ ರವಿಕುಮಾರ್​ 5 ರನ್​ ಗಳಿಸಿ ಔಟಾದರೆ ಮಾಯಾಂಕ್​ 35 ರನ್​ ಗಳಿಸಿ ಔಟಾದರು. ಬಳಿಕ ಬಂದ ತಿಲಕ್​ ವರ್ಮಾ 3 ರನ್​, ಹನುಮ ವಿಹಾರಿ (42) , ರಿಕ್ಕಿ (37) , ಸಚಿನ್​ ಬೇಬಿ (28)​, ವಾಷಿಂಗ್ಟನ್​ ಸುಂದರ್​ (37) ಗಳಿಸಿ ತಂಡ 230 ರನ್‌ಗಳಿಸಲು ನೆರವಾದರು.

298 ರನ್​ಗಳ ಗುರಿಯನ್ನು ಬೆನ್ನತ್ತಿದ್ದ ಪಶ್ಚಿಮ ವಲಯ, ಪ್ರಿಯಾಂಕ್​ ಪಾಂಚಾಲ್​ ಅವರ ಅದ್ಭುತ ಬ್ಯಾಟಿಂಗ್ ಪ್ರದರ್ಶನದ ಹೊರತಾಗಿಯೂ ಸೋಲು ಅನುಭವಿಸಿತು. ಪ್ರಿಯಾಂಕ್​ 95 ರನ್​ ಮತ್ತು ಸರ್ಫರಾಜ್ ಖಾನ್​ 48 ರನ್​ ಗಳಿಸಿದ್ದು ಬಿಟ್ಟರೆ ಬೇರಾವ ಆಟಗಾರನೂ ಉತ್ತಮ ಪ್ರದರ್ಶನ ನೀಡಲಿಲ್ಲ. ಇದರಿಂದಾಗಿ ಪಶ್ಚಿಮ ವಲಯ 222 ರನ್​ಗೆ ತನ್ನೆಲ್ಲ ವಿಕೆಟ್​ ಕಳೆದುಕೊಂಡು ದಕ್ಷಿಣ ವಲಯಕ್ಕೆ ಶರಣಾಯಿತು. ಈ ಮೂಲಕ ದಕ್ಷಿಣ ವಲಯವು 75 ರನ್​ಗಳಿಂದ ವಿಜಯ ಸಾಧಿಸಿತು.

ದಕ್ಷಿಣ ವಲಯ ಪರ ವಿ. ಕೌಶಿಕ್​ ಮತ್ತು ಸಾಯಿ ಕಿಶೋರ್​ ತಲಾ 4 ವಿಕೆಟ್​ ಪಡೆದರು. ವಿದ್ವತ್​ ಕಾವೇರಪ್ಪ ಮತ್ತು ವೈಶಾಖ್​ ತಲಾ 1 ವಿಕೆಟ್​ ಪಡೆಯುವ ಮೂಲಕ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. 2022ರ ದುಲೀಪ್​ ಟ್ರೋಫಿಯ ಫೈನಲ್​ ಪಂದ್ಯದಲ್ಲಿ ಪಶ್ಚಿಮ ವಲಯವು ದಕ್ಷಿಣ ವಲಯವನ್ನು 294 ರನ್​ಗಳಿಂದ ಮಣಿಸಿತ್ತು.

ಇದನ್ನೂ ಓದಿ : ಜೈಸ್ವಾಲ್​ 'ಯಶಸ್ವಿ' ಬ್ಯಾಟಿಂಗ್​ಗೆ ರೋಹಿತ್​ ಫಿದಾ: ಅಶ್ವಿನ್​ - ಜಡ್ಡು ಸ್ಪಿನ್​ ದಾಳಿ ಹೊಗಳಿದ ನಾಯಕ

ಬೆಂಗಳೂರು : ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ದುಲೀಪ್​ ಟ್ರೋಫಿಯ ಫೈನಲ್​ ಪಂದ್ಯಾಟದಲ್ಲಿ ದಕ್ಷಿಣ ವಲಯವು ಪಶ್ಚಿಮ ವಲಯವನ್ನು 75 ರನ್​ಗಳಿಂದ ಸೋಲಿಸಿತು. 298 ರನ್​ಗಳ ಗುರಿ ಬೆನ್ನತ್ತಿದ್ದ ಪಶ್ಚಿಮ ವಲಯ ತಂಡ ಶನಿವಾರ ದಿನದಂತ್ಯಕ್ಕೆ 182 ರನ್‌ಗಳಿಗೆ 5 ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಅಂತಿಮ ದಿನ ಮತ್ತೆ ಬ್ಯಾಟ್​ ಬೀಸಿದ ಪಶ್ಚಿಮ ವಲಯವು ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ಎಡವಿತು. ಈ ಮೂಲಕ 222 ರನ್‌ಗಳಿಗೆ ತನ್ನೆಲ್ಲ ವಿಕೆಟ್​ಗಳನ್ನು ಕಳೆದುಕೊಂಡ ಪಶ್ಚಿಮ ವಲಯ ಅಂತಿಮವಾಗಿ ದಕ್ಷಿಣ ವಲಯಕ್ಕೆ ಶರಣಾಯಿತು. ಈ ಮೂಲಕ 14 ನೇ ಬಾರಿಗೆ ದಕ್ಷಿಣ ವಲಯವು ದುಲೀಪ್​ ಟ್ರೋಫಿಗೆ ಮುತ್ತಿಕ್ಕಿತು.

ಮೊದಲ ಇನ್ನಿಂಗ್ಸ್​ : ಟಾಸ್​ ಸೋತು ಬ್ಯಾಟಿಂಗ್​ ಮಾಡಿದ್ದ ದಕ್ಷಿಣ ವಲಯ ಮೊದಲ ಇನ್ನಿಂಗ್ಸ್​ನಲ್ಲಿ 213 ರನ್​ ಕಲೆ ಹಾಕಿತು. ಆರಂಭಿಕರಾಗಿ ಆಗಮಿಸಿದ ರವಿಕುಮಾರ್​ ಸಮರ್ಥ ಮತ್ತು ಮಾಯಾಂಕ್​ ಅಗರ್ವಾಲ್​ ಉತ್ತಮ ಆರಂಭ ನೀಡಲಿಲ್ಲ. ರವಿಕುಮಾರ್​ ಸಮರ್ಥ್​ 7 ರನ್​ ಗಳಿಸಿ ಚಿಂತನ್‌ಗೆ ವಿಕೆಟ್​​ ಒಪ್ಪಿಸಿದರೆ, ಮಾಯಾಂಕ್​ 28 ರನ್​ ಗಳಿಸಿ ಅತಿತ್​ ಸೇಠ್​ಗೆ ವಿಕೆಟ್​ ನೀಡಿದರು.

ಬಳಿಕ ಆಗಮಿಸಿದ ನಾಯಕ ಹನುಮ ವಿಹಾರಿ ಮತ್ತು ತಿಲಕ್​ ವರ್ಮಾ ಸ್ವಲ್ಪ ಮಟ್ಟಿಗೆ ತಂಡಕ್ಕೆ ಚೇತರಿಕೆ ಕೊಟ್ಟರು. ಹನುಮ ವಿಹಾರಿ 9 ಬೌಂಡರಿಗಳೊಂದಿಗೆ 63 ರನ್​ ಗಳಿಸಿದರೆ, ತಿಲಕ್​ ವರ್ಮಾ 40 ರನ್​ ಸೇರಿಸಿ ಓಟಾದರು. ನಂತರದಲ್ಲಿ ರಿಕ್ಕಿ (9 ರನ್​​), ಸಚಿನ್​ ಬೇಬಿ (7) , ವಾಷಿಂಗ್ಟನ್​ ಸುಂದರ್​ (22), ಸಾಯಿ ಕಿಶೋರ್​(5), ವೈಶಾಖ್ (13), ವಿದ್ವತ್ ಕಾವೇರಪ್ಪ (8) ರನ್​ ಗಳಿಸಿದರು. ಈ ಮೂಲಕ ದಕ್ಷಿಣ ವಲಯವು 213 ರನ್​ ಗಳಿಸಿತು. ಪಶ್ಚಿಮ ವಲಯ ಪರ, ಶಾಮ್ಸ್​ ಮುಲಾನಿ 3 ವಿಕೆಟ್​​, ಅರ್ಜಾನ್​, ಚಿಂತನ್​ ಗಾಜಾ, ಧರ್ಮೇಂದ್ರ ಸಿಂಗ್ ಜಡೇಜಾ ತಲಾ 2 ವಿಕೆಟ್​​ ಪಡೆದರು.

ಮೊದಲ ಇನ್ನಿಂಗ್ಸ್‌ನಲ್ಲಿ ಪಶ್ಚಿಮ ವಲಯ 146 ರನ್​ಗಳಿಗೆ ತನ್ನೆಲ್ಲ ವಿಕೆಟ್​ಗಳನ್ನು ಕಳೆದುಕೊಂಡಿತು. ಆರಂಭಿಕ ಪೃಥ್ವಿ ಶಾ 9 ಬೌಂಡರಿಗಳೊಂದಿಗೆ 65 ರನ್​ ಗಳಿಸಿ ತಂಡಕ್ಕೆ ಆಸರೆಯಾದರು. ಆದರೆ ಪ್ರಿಯಾಂಕ್​ ಪಾಂಚಾಲ್​ ನಾಯಕನ ಆಟ ಆಡಲಿಲ್ಲ. ಕೇವಲ 11 ರನ್​ ಗಳಿಸಿದ ಪ್ರಿಯಾಂಕ್,​ ವಿ. ಕೌಶಿಕ್​ ವಿಕೆಟ್​ ಒಪ್ಪಿಸಿ ಪೆವಿಲಿಯನ್​ ಸೇರಿದರು. ಬಳಿಕ ಬಂದ ಯಾವೊಬ್ಬ ಆಟಗಾರನೂ ನಿರೀಕ್ಷಿತ ಆಟ ಪ್ರದರ್ಶಿಸಲಿಲ್ಲ. ಟಿ20 ಪ್ರಮುಖ ಬ್ಯಾಟರ್​ ಸೂರ್ಯ ಕುಮಾರ್​ ಯಾದವ್​​ 8 ರನ್​ಗೆ ಔಟಾಗುವ ಮೂಲಕ ನಿರಾಸೆ ಮೂಡಿಸಿದರು. ಇದರಿಂದಾಗಿ ಪಶ್ಚಿಮ ವಲಯ 146 ರನ್​ಗೆ ಆಲೌಟ್‌ ಆಯಿತು.

ಎರಡನೇ ಇನ್ನಿಂಗ್ಸ್​ : ಎರಡನೇ ಇನ್ನಿಂಗ್ಸ್ ಬ್ಯಾಟಿಂಗ್​ ಮಾಡಿದ ದಕ್ಷಿಣ ವಲಯ ಆರಂಭಿಕ ಆಘಾತ ಎದುರಿಸಿತು. ಆರಂಭಿಕ ಬ್ಯಾಟರ್​ಗಳಾದ ರವಿಕುಮಾರ್​ 5 ರನ್​ ಗಳಿಸಿ ಔಟಾದರೆ ಮಾಯಾಂಕ್​ 35 ರನ್​ ಗಳಿಸಿ ಔಟಾದರು. ಬಳಿಕ ಬಂದ ತಿಲಕ್​ ವರ್ಮಾ 3 ರನ್​, ಹನುಮ ವಿಹಾರಿ (42) , ರಿಕ್ಕಿ (37) , ಸಚಿನ್​ ಬೇಬಿ (28)​, ವಾಷಿಂಗ್ಟನ್​ ಸುಂದರ್​ (37) ಗಳಿಸಿ ತಂಡ 230 ರನ್‌ಗಳಿಸಲು ನೆರವಾದರು.

298 ರನ್​ಗಳ ಗುರಿಯನ್ನು ಬೆನ್ನತ್ತಿದ್ದ ಪಶ್ಚಿಮ ವಲಯ, ಪ್ರಿಯಾಂಕ್​ ಪಾಂಚಾಲ್​ ಅವರ ಅದ್ಭುತ ಬ್ಯಾಟಿಂಗ್ ಪ್ರದರ್ಶನದ ಹೊರತಾಗಿಯೂ ಸೋಲು ಅನುಭವಿಸಿತು. ಪ್ರಿಯಾಂಕ್​ 95 ರನ್​ ಮತ್ತು ಸರ್ಫರಾಜ್ ಖಾನ್​ 48 ರನ್​ ಗಳಿಸಿದ್ದು ಬಿಟ್ಟರೆ ಬೇರಾವ ಆಟಗಾರನೂ ಉತ್ತಮ ಪ್ರದರ್ಶನ ನೀಡಲಿಲ್ಲ. ಇದರಿಂದಾಗಿ ಪಶ್ಚಿಮ ವಲಯ 222 ರನ್​ಗೆ ತನ್ನೆಲ್ಲ ವಿಕೆಟ್​ ಕಳೆದುಕೊಂಡು ದಕ್ಷಿಣ ವಲಯಕ್ಕೆ ಶರಣಾಯಿತು. ಈ ಮೂಲಕ ದಕ್ಷಿಣ ವಲಯವು 75 ರನ್​ಗಳಿಂದ ವಿಜಯ ಸಾಧಿಸಿತು.

ದಕ್ಷಿಣ ವಲಯ ಪರ ವಿ. ಕೌಶಿಕ್​ ಮತ್ತು ಸಾಯಿ ಕಿಶೋರ್​ ತಲಾ 4 ವಿಕೆಟ್​ ಪಡೆದರು. ವಿದ್ವತ್​ ಕಾವೇರಪ್ಪ ಮತ್ತು ವೈಶಾಖ್​ ತಲಾ 1 ವಿಕೆಟ್​ ಪಡೆಯುವ ಮೂಲಕ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. 2022ರ ದುಲೀಪ್​ ಟ್ರೋಫಿಯ ಫೈನಲ್​ ಪಂದ್ಯದಲ್ಲಿ ಪಶ್ಚಿಮ ವಲಯವು ದಕ್ಷಿಣ ವಲಯವನ್ನು 294 ರನ್​ಗಳಿಂದ ಮಣಿಸಿತ್ತು.

ಇದನ್ನೂ ಓದಿ : ಜೈಸ್ವಾಲ್​ 'ಯಶಸ್ವಿ' ಬ್ಯಾಟಿಂಗ್​ಗೆ ರೋಹಿತ್​ ಫಿದಾ: ಅಶ್ವಿನ್​ - ಜಡ್ಡು ಸ್ಪಿನ್​ ದಾಳಿ ಹೊಗಳಿದ ನಾಯಕ

Last Updated : Jul 16, 2023, 2:16 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.