ETV Bharat / sports

ರವೀಂದ್ರ ಜಡೇಜಾಗೆ ಚಹಾಲ್​ ಸರಿಸಮನಾದ ಆಟಗಾರನೇ?: ಆಸೀಸ್​ ತಂಡದ ಹೆನ್ರಿಕ್ಸ್ ಪ್ರಶ್ನೆ​

author img

By

Published : Dec 5, 2020, 5:12 PM IST

ಜಡೇಜಾ ಬದಲು ಮೈದಾನಕ್ಕಿಳಿದ ಚಾಹಲ್ 4 ಓವರ್‌ ಎಸೆದು 25 ರನ್‌ ನೀಡಿ ಫಿಂಚ್, ಸ್ಮಿತ್ ಹಾಗೂ ಮ್ಯಾಥ್ಯೂ ವೇಡ್ ವಿಕೆಟ್ ಪಡೆದಿದ್ದರು.

ರವೀಂದ್ರ ಜಡೇಜಾ- ಯುಜ್ವೇಂದ್ರ ಚಹಾಲ್
ರವೀಂದ್ರ ಜಡೇಜಾ- ಯುಜ್ವೇಂದ್ರ ಚಹಾಲ್

ಕ್ಯಾನ್ಬೆರಾ: ಆಸ್ಟ್ರೇಲಿಯಾ ವಿರುದ್ಧ ಮೊದಲ ಪಂದ್ಯದ ವೇಳೆ ಚೆಂಡು ತಲೆಗೆ ಬಡಿದ ಪರಿಣಾಮ ಪಂದ್ಯದಿಂದ ಹೊರಗುಳಿದಿದ್ದ ರವೀಂದ್ರ ಜಡೇಜಾ ಬದಲಿಗೆ ಕನ್​ಕ್ಯೂಸನ್ ಸಬ್​ಸ್ಟಿಟ್ಯೂಟ್​ ಆಗಿ ಯುಜ್ವೇಂದ್ರ ಚಹಾಲ್​ರನ್ನು​ ಆಯ್ಕೆ ಮಾಡಿದ್ದಕ್ಕೆ ಆಸ್ಟ್ರೇಲಿಯಾ ತಂಡದ ಆಲ್​ರೌಂಡರ್​ ಹೆನ್ರಿಕ್ಸ್​ ಪ್ರಶ್ನಿಸಿದ್ದಾರೆ.

ಶುಕ್ರವಾರ ನಡೆದ ಪಂದ್ಯದಲ್ಲಿ ರವೀಂದ್ರ ಜಡೇಜಾ ಬ್ಯಾಟಿಂಗ್ ಮಾಡುವ ವೇಳೆ ಗಾಯಕ್ಕೆ ತುತ್ತಾಗಿದ್ದರು. ಅವರನ್ನು ಪರೀಕ್ಷಿಸಿದ ವೈದ್ಯರು ಪಂದ್ಯದಲ್ಲಿ ಮುಂದುವರೆಯಲು ಸಾಧ್ಯವಿಲ್ಲ ಎಂದ ಕಾರಣ ಅವರ ಬದಲಿಗೆ ಕನ್​ಕ್ಯೂಸನ್​ ಸಬ್​ಸ್ಟಿಟ್ಯೂಟ್​ ಆಗಿ ಸ್ಪಿನ್ನರ್ ಚಹಾಲ್​ರನ್ನು ತಂಡಕ್ಕೆ ಸೇರಿಸಿಕೊಂಡು ಬೌಲಿಂಗ್ ಮಾಡಿಸಲಾಗಿತ್ತು. ಆದರೆ ಇದಕ್ಕೆ ಆ ಸಮಯದಲ್ಲಿ ಆಸೀಸ್ ಕೋಚ್​ ಲ್ಯಾಂಗರ್​ ಅಪಸ್ವರ ಎತ್ತಿದ್ದರು. ಪಂದ್ಯದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಲ್​ರೌಂಡರ್ ಮೋಯಿಸಸ್ ಹೆನ್ರಿಕ್ಸ್ ಕೂಡ ಚಹಾಲ್ ಆಯ್ಕೆಯನ್ನು ಪ್ರಶ್ನಿಸಿದ್ದಾರೆ.​

ಮೊಯಿಸಸ್​ ಹೆನ್ರಿಕ್ಸ್​

ಇದನ್ನೂ ಓದಿ: ಟೀಮ್ ಇಂಡಿಯಾ ಮುಂದಿದೆ ಸರಣಿ ಗೆಲುವಿನ ಗುರಿ... ತಿರುಗಿ ಬೀಳುವ ಆಲೋಚನೆಯಲ್ಲಿ ಕಾಂಗರೂ ಪಡೆ

"ರವೀಂದ್ರ ಜಡೇಜಾ ಹೆಲ್ಮೆಟ್‌ಗೆ ಚೆಂಡು ಅಪ್ಪಳಿಸಿದ್ದರಲ್ಲಿ ಯಾವುದೇ ಅನುಮಾನವಿಲ್ಲ. ಆದ್ದರಿಂದ ಐಸಿಸಿ ನಿಯಮದಡಿ ಕನ್​ಕ್ಯೂಸನ್​ ತೆಗೆದುಕೊಳ್ಳಬಹುದು. ಇದರಲ್ಲಿ ನಮಗೆ ಯಾವುದೇ ಅನುಮಾನ ಕಂಡು ಬಂದಿಲ್ಲ. ಆದರೆ ಇಲ್ಲಿ ಬದಲಿ ಆಟಗಾರನ ಆಯ್ಕೆ ಮಾಡಿರುವುದು ನಮ್ಮ ಪ್ರಶ್ನೆಯಾಗಿದೆ"

  • A game-changing performance from the substitute? #AUSvIND

    — cricket.com.au (@cricketcomau) December 4, 2020 " class="align-text-top noRightClick twitterSection" data=" ">

ಏಕೆಂದರೆ ಜಡೇಜಾ ಆಲ್‌ರೌಂಡರ್ ಆಗಿದ್ದಾರೆ. ಆದರೆ ಅವರ ಬದಲಿಗೆ ಬಂದ ಚಹಾಲ್ ಸಂಪೂರ್ಣ ಸ್ಪಿನ್ ಬೌಲರ್‌. ಅವಿರಬ್ಬರು ಹೇಗೆ ಸರಿಸಮನಾದ ಬದಲಿ ಆಟಗಾರರಾಗುತ್ತಾರೆಂಬುದು ನಮ್ಮ ಪ್ರಶ್ನೆಯಾಗಿದೆ ಎಂದು 30 ರನ್ ​ಗಳಿಸಿದ್ದಲ್ಲದೆ, ಬೌಲಿಂಗ್​ನಲ್ಲೂ 3 ವಿಕೆಟ್ ಪಡೆದಿದ್ದ ಹೆನ್ರಿಕ್ಸ್ ಹೇಳಿದ್ದಾರೆ.

ಐಸಿಸಿ ನಿಯಮವೂ ಚೆನ್ನಾಗಿದೆ. ನಾನು ಇಲ್ಲಿ ನಿಯಮದ ಬಗ್ಗೆ ಮಾತನಾಡುತ್ತಿಲ್ಲ. ಆದರೆ ಕನ್​ಕ್ಯೂಸನ್ ಆಟಗಾರನ ಆಯ್ಕೆಯ ಕುರಿತು ಮಾತನಾಡುತ್ತಿದ್ದೇವೆ. ಈ ವಿಷಯದಲ್ಲಿ ಯಾವ ರೀತಿ ನಿರ್ಧರಿಸಲಾಗುತ್ತಿದೆ, ಇಂತಹ ಸಂದರ್ಭದಲ್ಲಿ ಬದಲಿ ಆಟಗಾರನನ್ನು ಆಯ್ಕೆ ಮಾಡಬೇಕಲ್ಲವೇ ಎಂದು 33 ವರ್ಷದ ಹೆನ್ರಿಕ್ಸ್ ಕೇಳಿದ್ದಾರೆ.

ಜಡೇಜಾ ಬದಲು ಮೈದಾನಕ್ಕಿಳಿದ ಚಾಹಲ್ 4 ಓವರ್‌ ಎಸೆದು 25 ರನ್‌ ನೀಡಿ ಫಿಂಚ್, ಸ್ಮಿತ್ ಹಾಗೂ ಮ್ಯಾಥ್ಯೂ ವೇಡ್ ವಿಕೆಟ್ ಪಡೆದಿದ್ದರು.

ಕ್ಯಾನ್ಬೆರಾ: ಆಸ್ಟ್ರೇಲಿಯಾ ವಿರುದ್ಧ ಮೊದಲ ಪಂದ್ಯದ ವೇಳೆ ಚೆಂಡು ತಲೆಗೆ ಬಡಿದ ಪರಿಣಾಮ ಪಂದ್ಯದಿಂದ ಹೊರಗುಳಿದಿದ್ದ ರವೀಂದ್ರ ಜಡೇಜಾ ಬದಲಿಗೆ ಕನ್​ಕ್ಯೂಸನ್ ಸಬ್​ಸ್ಟಿಟ್ಯೂಟ್​ ಆಗಿ ಯುಜ್ವೇಂದ್ರ ಚಹಾಲ್​ರನ್ನು​ ಆಯ್ಕೆ ಮಾಡಿದ್ದಕ್ಕೆ ಆಸ್ಟ್ರೇಲಿಯಾ ತಂಡದ ಆಲ್​ರೌಂಡರ್​ ಹೆನ್ರಿಕ್ಸ್​ ಪ್ರಶ್ನಿಸಿದ್ದಾರೆ.

ಶುಕ್ರವಾರ ನಡೆದ ಪಂದ್ಯದಲ್ಲಿ ರವೀಂದ್ರ ಜಡೇಜಾ ಬ್ಯಾಟಿಂಗ್ ಮಾಡುವ ವೇಳೆ ಗಾಯಕ್ಕೆ ತುತ್ತಾಗಿದ್ದರು. ಅವರನ್ನು ಪರೀಕ್ಷಿಸಿದ ವೈದ್ಯರು ಪಂದ್ಯದಲ್ಲಿ ಮುಂದುವರೆಯಲು ಸಾಧ್ಯವಿಲ್ಲ ಎಂದ ಕಾರಣ ಅವರ ಬದಲಿಗೆ ಕನ್​ಕ್ಯೂಸನ್​ ಸಬ್​ಸ್ಟಿಟ್ಯೂಟ್​ ಆಗಿ ಸ್ಪಿನ್ನರ್ ಚಹಾಲ್​ರನ್ನು ತಂಡಕ್ಕೆ ಸೇರಿಸಿಕೊಂಡು ಬೌಲಿಂಗ್ ಮಾಡಿಸಲಾಗಿತ್ತು. ಆದರೆ ಇದಕ್ಕೆ ಆ ಸಮಯದಲ್ಲಿ ಆಸೀಸ್ ಕೋಚ್​ ಲ್ಯಾಂಗರ್​ ಅಪಸ್ವರ ಎತ್ತಿದ್ದರು. ಪಂದ್ಯದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಲ್​ರೌಂಡರ್ ಮೋಯಿಸಸ್ ಹೆನ್ರಿಕ್ಸ್ ಕೂಡ ಚಹಾಲ್ ಆಯ್ಕೆಯನ್ನು ಪ್ರಶ್ನಿಸಿದ್ದಾರೆ.​

ಮೊಯಿಸಸ್​ ಹೆನ್ರಿಕ್ಸ್​

ಇದನ್ನೂ ಓದಿ: ಟೀಮ್ ಇಂಡಿಯಾ ಮುಂದಿದೆ ಸರಣಿ ಗೆಲುವಿನ ಗುರಿ... ತಿರುಗಿ ಬೀಳುವ ಆಲೋಚನೆಯಲ್ಲಿ ಕಾಂಗರೂ ಪಡೆ

"ರವೀಂದ್ರ ಜಡೇಜಾ ಹೆಲ್ಮೆಟ್‌ಗೆ ಚೆಂಡು ಅಪ್ಪಳಿಸಿದ್ದರಲ್ಲಿ ಯಾವುದೇ ಅನುಮಾನವಿಲ್ಲ. ಆದ್ದರಿಂದ ಐಸಿಸಿ ನಿಯಮದಡಿ ಕನ್​ಕ್ಯೂಸನ್​ ತೆಗೆದುಕೊಳ್ಳಬಹುದು. ಇದರಲ್ಲಿ ನಮಗೆ ಯಾವುದೇ ಅನುಮಾನ ಕಂಡು ಬಂದಿಲ್ಲ. ಆದರೆ ಇಲ್ಲಿ ಬದಲಿ ಆಟಗಾರನ ಆಯ್ಕೆ ಮಾಡಿರುವುದು ನಮ್ಮ ಪ್ರಶ್ನೆಯಾಗಿದೆ"

  • A game-changing performance from the substitute? #AUSvIND

    — cricket.com.au (@cricketcomau) December 4, 2020 " class="align-text-top noRightClick twitterSection" data=" ">

ಏಕೆಂದರೆ ಜಡೇಜಾ ಆಲ್‌ರೌಂಡರ್ ಆಗಿದ್ದಾರೆ. ಆದರೆ ಅವರ ಬದಲಿಗೆ ಬಂದ ಚಹಾಲ್ ಸಂಪೂರ್ಣ ಸ್ಪಿನ್ ಬೌಲರ್‌. ಅವಿರಬ್ಬರು ಹೇಗೆ ಸರಿಸಮನಾದ ಬದಲಿ ಆಟಗಾರರಾಗುತ್ತಾರೆಂಬುದು ನಮ್ಮ ಪ್ರಶ್ನೆಯಾಗಿದೆ ಎಂದು 30 ರನ್ ​ಗಳಿಸಿದ್ದಲ್ಲದೆ, ಬೌಲಿಂಗ್​ನಲ್ಲೂ 3 ವಿಕೆಟ್ ಪಡೆದಿದ್ದ ಹೆನ್ರಿಕ್ಸ್ ಹೇಳಿದ್ದಾರೆ.

ಐಸಿಸಿ ನಿಯಮವೂ ಚೆನ್ನಾಗಿದೆ. ನಾನು ಇಲ್ಲಿ ನಿಯಮದ ಬಗ್ಗೆ ಮಾತನಾಡುತ್ತಿಲ್ಲ. ಆದರೆ ಕನ್​ಕ್ಯೂಸನ್ ಆಟಗಾರನ ಆಯ್ಕೆಯ ಕುರಿತು ಮಾತನಾಡುತ್ತಿದ್ದೇವೆ. ಈ ವಿಷಯದಲ್ಲಿ ಯಾವ ರೀತಿ ನಿರ್ಧರಿಸಲಾಗುತ್ತಿದೆ, ಇಂತಹ ಸಂದರ್ಭದಲ್ಲಿ ಬದಲಿ ಆಟಗಾರನನ್ನು ಆಯ್ಕೆ ಮಾಡಬೇಕಲ್ಲವೇ ಎಂದು 33 ವರ್ಷದ ಹೆನ್ರಿಕ್ಸ್ ಕೇಳಿದ್ದಾರೆ.

ಜಡೇಜಾ ಬದಲು ಮೈದಾನಕ್ಕಿಳಿದ ಚಾಹಲ್ 4 ಓವರ್‌ ಎಸೆದು 25 ರನ್‌ ನೀಡಿ ಫಿಂಚ್, ಸ್ಮಿತ್ ಹಾಗೂ ಮ್ಯಾಥ್ಯೂ ವೇಡ್ ವಿಕೆಟ್ ಪಡೆದಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.