ETV Bharat / sports

ಕರ್ನಾಟಕ ತಂಡಕ್ಕೆ ರಾಹುಲ್​ ಸೇರ್ಪಡೆ... ವರ್ಷದ ಮೂರನೇ ಟ್ರೋಫಿ ಕನಸಿಗೆ ಬಂತು ಆನೆಬಲ - ರಣಜಿ ಟ್ರೋಫಿ ಸೆಮಿಫೈನಲ್​

ಕ್ವಾರ್ಟರ್​ ಫೈನಲ್​ನಲ್ಲಿ ಕಣಿವೆ ನಾಡು ಜಮ್ಮು-ಕಾಶ್ಮೀರಕ್ಕೆ ನುಗ್ಗಿ ಗೆದ್ದು ಬಂದಿರುವ ಕರ್ನಾಟಕ ಯುವ ಪಡೆ ಇದೀಗ ಸೆಮಿಫೈನಲ್​ನಲ್ಲಿ ಕೋಲ್ಕತ್ತಾದ ಈಡನ್​ ಗಾರ್ಡನ್​ನಲ್ಲಿ ಪಶ್ಚಿಮ ಬಂಗಾಳ ತಂಡವನ್ನು ಎದುರಿಸಲಿದೆ.

Ranji trophy 2020
ಕೆಎಲ್​ ರಾಹುಲ್​
author img

By

Published : Feb 25, 2020, 11:24 PM IST

ಬೆಂಗಳೂರು: ಪ್ರಸಕ್ತ ವರ್ಷದ ಮೂರನೇ ಬಿಸಿಸಿಐ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಕರ್ನಾಟಕ ತಂಡಕ್ಕೆ ಕೆಎಲ್​ ರಾಹುಲ್​ ಸೇರ್ಪಡೆಗೊಂಡಿರುವುದು ತಂಡದ ಬಲ ಹೆಚ್ಚಿಸಿದೆ.

ಕ್ವಾರ್ಟರ್​ ಫೈನಲ್​ನಲ್ಲಿ ಕಣಿವೆ ನಾಡು ಜಮ್ಮು-ಕಾಶ್ಮೀರಕ್ಕೆ ನುಗ್ಗಿ ಗೆದ್ದು ಬಂದಿರುವ ಕರ್ನಾಟಕ ಯುವ ಪಡೆ ಇದೀಗ ಸೆಮಿಫೈನಲ್​ನಲ್ಲಿ ಕೋಲ್ಕತ್ತಾದ ಈಡನ್​ ಗಾರ್ಡನ್​ನಲ್ಲಿ ಪಶ್ಚಿಮ ಬಂಗಾಳ ತಂಡವನ್ನು ಎದುರಿಸಿಲಿದೆ.

ಭಾರತ ತಂಡದಲ್ಲಿ ಅದ್ದೂರಿ ಬ್ಯಾಟಿಂಗ್​ ಪ್ರದರ್ಶನ ತೋರಿರುವ ರಾಹುಲ್​ ಕರ್ನಾಟಕ ತಂಡ ಸೇರಿರುವುದು ಬ್ಯಾಟಿಂಗ್​ ವಿಭಾಗಕ್ಕೆ ಆನೆಬಲ ಬಂದಂತಾಗಿದೆ. ಈಗಾಗಲೇ ಅನುಭವಿ ಮನೀಷ್​ ಪಾಂಡೆ ಕ್ವಾರ್ಟರ್​ ಫೈನಲ್​ ವೇಳೆ ತಂಡಕ್ಕೆ ಸೇರಿಕೊಂಡಿದ್ದರು.

ಈಗಾಗಲೇ ಪ್ರಸಕ್ತ ವರ್ಷದ ಬಿಸಿಸಿಐ ಆಯೋಜಿಸಿರುವ ವಿಜಯ ಹಜಾರೆ(ಏಕದಿನ), ಸಯ್ಯದ್​ ಮುಷ್ತಾಕ್​ ಅಲಿ(ಟಿ20) ಟ್ರೋಫಿಗಳನ್ನು ಕರ್ನಾಟಕ ತಂಡಕ್ಕೆ ತಂದುಕೊಡುವಲ್ಲಿ ರಾಹುಲ್​, ಮನೀಷ್​ ಪಾಂಡೆ ಪ್ರಮುಖ ಪಾತ್ರವಹಿಸಿದ್ದರು. ಇದೀಗ ಪ್ರಥಮ ದರ್ಜೆ ಟೂರ್ನಿಯಲ್ಲೂ ಮತ್ತೆ ಇವರಿಬ್ಬರ ನೇತೃತ್ವದಲ್ಲಿ ಕರುಣ್​ ನಾಯರ್​ ಪಡೆ ಮತ್ತೊಂದ ಟ್ರೋಫಿಯನ್ನು ಕರ್ನಾಟಕ ತಂದುಕೊಡಲು ಸಜ್ಜಾಗಿದ್ದಾರೆ.

ಕರ್ನಾಟಕ 8 ಬಾರಿ ರಣಜಿ ಟ್ರೋಫಿ ಎತ್ತಿ ಹಿಡಿದಿರುವ ಕರ್ನಾಟಕ ತಂಡ ಅತಿ ಹೆಚ್ಚು ಪ್ರಶಸ್ತಿ ಗೆದ್ದ ಎರಡನೇ ತಂಡ ಎನಿಸಿಕೊಂಡಿದೆ. ಮುಂಬೈ 41 ಬಾರಿ ಪ್ರಶಸ್ತಿ ಪಡೆದಿದ್ದರೆ, ದೆಹಲಿ 7 ಪ್ರಶಸ್ತಿಗಳೊಂದಿಗೆ 3 ಸ್ಥಾನದಲ್ಲಿದೆ.

ಬೆಂಗಳೂರು: ಪ್ರಸಕ್ತ ವರ್ಷದ ಮೂರನೇ ಬಿಸಿಸಿಐ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಕರ್ನಾಟಕ ತಂಡಕ್ಕೆ ಕೆಎಲ್​ ರಾಹುಲ್​ ಸೇರ್ಪಡೆಗೊಂಡಿರುವುದು ತಂಡದ ಬಲ ಹೆಚ್ಚಿಸಿದೆ.

ಕ್ವಾರ್ಟರ್​ ಫೈನಲ್​ನಲ್ಲಿ ಕಣಿವೆ ನಾಡು ಜಮ್ಮು-ಕಾಶ್ಮೀರಕ್ಕೆ ನುಗ್ಗಿ ಗೆದ್ದು ಬಂದಿರುವ ಕರ್ನಾಟಕ ಯುವ ಪಡೆ ಇದೀಗ ಸೆಮಿಫೈನಲ್​ನಲ್ಲಿ ಕೋಲ್ಕತ್ತಾದ ಈಡನ್​ ಗಾರ್ಡನ್​ನಲ್ಲಿ ಪಶ್ಚಿಮ ಬಂಗಾಳ ತಂಡವನ್ನು ಎದುರಿಸಿಲಿದೆ.

ಭಾರತ ತಂಡದಲ್ಲಿ ಅದ್ದೂರಿ ಬ್ಯಾಟಿಂಗ್​ ಪ್ರದರ್ಶನ ತೋರಿರುವ ರಾಹುಲ್​ ಕರ್ನಾಟಕ ತಂಡ ಸೇರಿರುವುದು ಬ್ಯಾಟಿಂಗ್​ ವಿಭಾಗಕ್ಕೆ ಆನೆಬಲ ಬಂದಂತಾಗಿದೆ. ಈಗಾಗಲೇ ಅನುಭವಿ ಮನೀಷ್​ ಪಾಂಡೆ ಕ್ವಾರ್ಟರ್​ ಫೈನಲ್​ ವೇಳೆ ತಂಡಕ್ಕೆ ಸೇರಿಕೊಂಡಿದ್ದರು.

ಈಗಾಗಲೇ ಪ್ರಸಕ್ತ ವರ್ಷದ ಬಿಸಿಸಿಐ ಆಯೋಜಿಸಿರುವ ವಿಜಯ ಹಜಾರೆ(ಏಕದಿನ), ಸಯ್ಯದ್​ ಮುಷ್ತಾಕ್​ ಅಲಿ(ಟಿ20) ಟ್ರೋಫಿಗಳನ್ನು ಕರ್ನಾಟಕ ತಂಡಕ್ಕೆ ತಂದುಕೊಡುವಲ್ಲಿ ರಾಹುಲ್​, ಮನೀಷ್​ ಪಾಂಡೆ ಪ್ರಮುಖ ಪಾತ್ರವಹಿಸಿದ್ದರು. ಇದೀಗ ಪ್ರಥಮ ದರ್ಜೆ ಟೂರ್ನಿಯಲ್ಲೂ ಮತ್ತೆ ಇವರಿಬ್ಬರ ನೇತೃತ್ವದಲ್ಲಿ ಕರುಣ್​ ನಾಯರ್​ ಪಡೆ ಮತ್ತೊಂದ ಟ್ರೋಫಿಯನ್ನು ಕರ್ನಾಟಕ ತಂದುಕೊಡಲು ಸಜ್ಜಾಗಿದ್ದಾರೆ.

ಕರ್ನಾಟಕ 8 ಬಾರಿ ರಣಜಿ ಟ್ರೋಫಿ ಎತ್ತಿ ಹಿಡಿದಿರುವ ಕರ್ನಾಟಕ ತಂಡ ಅತಿ ಹೆಚ್ಚು ಪ್ರಶಸ್ತಿ ಗೆದ್ದ ಎರಡನೇ ತಂಡ ಎನಿಸಿಕೊಂಡಿದೆ. ಮುಂಬೈ 41 ಬಾರಿ ಪ್ರಶಸ್ತಿ ಪಡೆದಿದ್ದರೆ, ದೆಹಲಿ 7 ಪ್ರಶಸ್ತಿಗಳೊಂದಿಗೆ 3 ಸ್ಥಾನದಲ್ಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.