ETV Bharat / sports

ಆರ್​ಸಿಬಿ ಟೀಂಗೆ ಈ ಸಲ ಕಪ್​ ಗೆಲ್ಲೋಕೆ ಸಲಹೆ ನೀಡಿದ್ರು ವಿಜಯ್​ ಮಲ್ಯ​!

author img

By

Published : Feb 16, 2020, 6:01 PM IST

ಆರ್​ಸಿಬಿ ತಂಡದ ನಾಯಕನಾಗಿರುವ ವಿರಾಟ್​ ಕೊಹ್ಲಿಗೆ ಹೆಚ್ಚಿನ ಸ್ವಾತಂತ್ರ್ಯ ನೀಡಿದ್ರೆ ಕಪ್​ ಗೆಲ್ಲಬಹುದು ಎಂದು ಈ ಹಿಂದೆ ಆರ್​ಸಿಬಿ ತಂಡದ ಮಾಲೀಕರಾಗಿದ್ದ ವಿಜಯ್ ಮಲ್ಯ ಹೇಳಿದ್ದಾರೆ.

Vijay Mallya Takes a Dig at RCB,ಆರ್​ಸಿಬಿಗೆ ವಿಜಯ್​ ಮಲ್ಯ​ ಸಲಹೆ
ಆರ್​ಸಿಬಿಗೆ ವಿಜಯ್​ ಮಲ್ಯ​ ಸಲಹೆ

ಹೈದರಾಬಾದ್(ತೆಲಂಗಾಣ): ನೂತನ ಲೋಗೋ, ಜರ್ಸಿಯೊಂದಿಗೆ ಕಣಕ್ಕಿಳಿಯಲಿರುವ ರಾಯಲ್​ ಚಾಲೆಂಜರ್ಸ್​​ ಬೆಂಗಳೂರು ತಂಡ ಈ ಬಾರಿ ಹೊಸ ಹುರುಪಿನೊಂದಿಗೆ ಐಪಿಎಲ್​ ಟೂರ್ನಿಯಲ್ಲಿ ಕಣಕ್ಕಿಳಿಯಲಿದೆ. ಈ ಮಧ್ಯೆ ಆರ್​ಸಿಬಿಗೆ ಮದ್ಯದ ದೊರೆ ವಿಜಯ್​ ಮಲ್ಯ ಗೆಲುವಿನ​ ಕುರಿತು ಸಲಹೆ ನೀಡಿದ್ದಾರೆ.

  • Virat came to RCB from the India U 19 squad. Virat has led India to great success and has been an outstanding performer himself. Leave it to him and give him the freedom. All RCB fans want that long overdue IPL trophy. https://t.co/RT7cNdWgWN

    — Vijay Mallya (@TheVijayMallya) February 15, 2020 " class="align-text-top noRightClick twitterSection" data=" ">

ಈ ಹಿಂದೆ ಆರ್​ಸಿಬಿ ತಂಡದ ಮಾಲೀಕರಾಗಿದ್ದ ವಿಜಯ್ ಮಲ್ಯ ತಂಡಕ್ಕೆ ಸಲಹೆ ನೀಡಿದ್ದಾರೆ. ಈ ಬಗ್ಗೆ ಟ್ವೀಟ್​ ಮಾಡಿರುವ ವಿಜಯ್​ ಮಲ್ಯ, 'ವಿರಾಟ್​ ಕೊಹ್ಲಿ ಅಂಡರ್​-19 ತಂಡದಿಂದ ಆರ್​ಸಿಬಿ ತಂಡಕ್ಕೆ ಬಂದಿದ್ದಾರೆ. ಸ್ವತಃ ಉತ್ತಮ ಪ್ರದರ್ಶನ ನೀಡುತ್ತಿರುವ ವಿರಾಟ್​ ಟೀಂ ಇಂಡಿಯಾವನ್ನ ಮುತ್ತಮವಾಗಿ ಮುನ್ನಡೆಸುತ್ತಿದ್ದಾರೆ. ವಿರಾಟ್​ ಕೊಹ್ಲಿಗೆ ಸ್ವಾತಂತ್ರ್ಯ ನೀಡಿ. ಆರ್​ಸಿಬಿ ಅಭಿಮಾನಿಗಳು ದೀರ್ಘ ಕಾಲದಿಂದ ಐಪಿಎಲ್​ ಟ್ರೋಫಿಗೆ ಎದುರು ನೋಡುತ್ತಿದ್ದಾರೆ' ಎಂದು ಟ್ವೀಟ್ ಮಾಡಿದ್ದಾರೆ.

ಆರ್​ಸಿಬಿ ತಂಡದ ನಾಯಕನಾಗಿರುವ ವಿರಾಟ್​ ಕೊಹ್ಲಿಗೆ ಹೆಚ್ಚಿನ ಸ್ವಾತಂತ್ರ್ಯ ನೀಡಿದ್ರೆ ಕಪ್​ ಗೆಲ್ಲಬಹುದು ಎಂದು ವಿಜಯ್​ ಮಲ್ಯ ಹೇಳಿದ್ದಾರೆ. ಮೊದಲನೇ ಆವೃತ್ತಿಯಿಂದ 2011ರ ವರೆಗೆ ವಿಜಯ್ ಮಲ್ಯ ಆರ್​ಸಿಬಿ ತಂಡದ ಮಾಲೀಕರಾಗಿದ್ದರು.

ಅಲ್ಲದೆ ಅರ್​ಸಿಬಿ ಅಭಿಮಾನಿಗಳು ಬಹಳ ಕಾಲದಿಂದ ಕಪ್​ಗಾಗಿ ಎದುರು ನೋಡುತ್ತಿದ್ದಾರೆ ಈ ಬಾರಿ ಕಪ್​ ಗೆದ್ದು ತನ್ನಿ ಎಂದು ಮಲ್ಯ ಶುಭ ಹಾರೈಸಿದ್ದಾರೆ.

ಹೈದರಾಬಾದ್(ತೆಲಂಗಾಣ): ನೂತನ ಲೋಗೋ, ಜರ್ಸಿಯೊಂದಿಗೆ ಕಣಕ್ಕಿಳಿಯಲಿರುವ ರಾಯಲ್​ ಚಾಲೆಂಜರ್ಸ್​​ ಬೆಂಗಳೂರು ತಂಡ ಈ ಬಾರಿ ಹೊಸ ಹುರುಪಿನೊಂದಿಗೆ ಐಪಿಎಲ್​ ಟೂರ್ನಿಯಲ್ಲಿ ಕಣಕ್ಕಿಳಿಯಲಿದೆ. ಈ ಮಧ್ಯೆ ಆರ್​ಸಿಬಿಗೆ ಮದ್ಯದ ದೊರೆ ವಿಜಯ್​ ಮಲ್ಯ ಗೆಲುವಿನ​ ಕುರಿತು ಸಲಹೆ ನೀಡಿದ್ದಾರೆ.

  • Virat came to RCB from the India U 19 squad. Virat has led India to great success and has been an outstanding performer himself. Leave it to him and give him the freedom. All RCB fans want that long overdue IPL trophy. https://t.co/RT7cNdWgWN

    — Vijay Mallya (@TheVijayMallya) February 15, 2020 " class="align-text-top noRightClick twitterSection" data=" ">

ಈ ಹಿಂದೆ ಆರ್​ಸಿಬಿ ತಂಡದ ಮಾಲೀಕರಾಗಿದ್ದ ವಿಜಯ್ ಮಲ್ಯ ತಂಡಕ್ಕೆ ಸಲಹೆ ನೀಡಿದ್ದಾರೆ. ಈ ಬಗ್ಗೆ ಟ್ವೀಟ್​ ಮಾಡಿರುವ ವಿಜಯ್​ ಮಲ್ಯ, 'ವಿರಾಟ್​ ಕೊಹ್ಲಿ ಅಂಡರ್​-19 ತಂಡದಿಂದ ಆರ್​ಸಿಬಿ ತಂಡಕ್ಕೆ ಬಂದಿದ್ದಾರೆ. ಸ್ವತಃ ಉತ್ತಮ ಪ್ರದರ್ಶನ ನೀಡುತ್ತಿರುವ ವಿರಾಟ್​ ಟೀಂ ಇಂಡಿಯಾವನ್ನ ಮುತ್ತಮವಾಗಿ ಮುನ್ನಡೆಸುತ್ತಿದ್ದಾರೆ. ವಿರಾಟ್​ ಕೊಹ್ಲಿಗೆ ಸ್ವಾತಂತ್ರ್ಯ ನೀಡಿ. ಆರ್​ಸಿಬಿ ಅಭಿಮಾನಿಗಳು ದೀರ್ಘ ಕಾಲದಿಂದ ಐಪಿಎಲ್​ ಟ್ರೋಫಿಗೆ ಎದುರು ನೋಡುತ್ತಿದ್ದಾರೆ' ಎಂದು ಟ್ವೀಟ್ ಮಾಡಿದ್ದಾರೆ.

ಆರ್​ಸಿಬಿ ತಂಡದ ನಾಯಕನಾಗಿರುವ ವಿರಾಟ್​ ಕೊಹ್ಲಿಗೆ ಹೆಚ್ಚಿನ ಸ್ವಾತಂತ್ರ್ಯ ನೀಡಿದ್ರೆ ಕಪ್​ ಗೆಲ್ಲಬಹುದು ಎಂದು ವಿಜಯ್​ ಮಲ್ಯ ಹೇಳಿದ್ದಾರೆ. ಮೊದಲನೇ ಆವೃತ್ತಿಯಿಂದ 2011ರ ವರೆಗೆ ವಿಜಯ್ ಮಲ್ಯ ಆರ್​ಸಿಬಿ ತಂಡದ ಮಾಲೀಕರಾಗಿದ್ದರು.

ಅಲ್ಲದೆ ಅರ್​ಸಿಬಿ ಅಭಿಮಾನಿಗಳು ಬಹಳ ಕಾಲದಿಂದ ಕಪ್​ಗಾಗಿ ಎದುರು ನೋಡುತ್ತಿದ್ದಾರೆ ಈ ಬಾರಿ ಕಪ್​ ಗೆದ್ದು ತನ್ನಿ ಎಂದು ಮಲ್ಯ ಶುಭ ಹಾರೈಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.