ETV Bharat / sports

ಸ್ಟಿಂಗ್​ ಮಾಸ್ಟರ್​ ಭುವಿಗೆ ಯಶಸ್ವಿ ಶಸ್ತ್ರಚಿಕಿತ್ಸೆ... ಕಿವೀಸ್​ ಸರಣಿಗೂ ಮುನ್ನ ಎನ್​ಸಿಎದಲ್ಲಿ ದೈಹಿಕ ಪರೀಕ್ಷೆ - ಎನ್​ಸಿಎನಲ್ಲಿ ಭುವಿ ಪರೀಕ್ಷೆ

ಲಂಡನ್​ನಲ್ಲಿ ಶಸ್ತ್ರ ಚಿಕಿತ್ಸೆ ಮುಗಿಸಿಕೊಂಡು ಬಂದಿರುವ ಭುವನೇಶ್ವರ್​ ಕುಮಾರ್​ ಪುನಶ್ಚೇತನ ಕ್ರಮಕ್ಕಾಗಿ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್​ ಆಕಾಡೆಮಿಗೆ ತೆರಳಲಿದ್ದಾರೆ. ಈ ವೇಳೆ ಅವರು ಫಿಟ್​ ಎನಿಸಿದರೆ ನ್ಯೂಜಿಲ್ಯಾಂಡ್​ ವಿರುದ್ಧದ ಸರಣಿಗೆ ಅವರನ್ನು ಪರಿಗಣಿಸುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.

Bhuvaneshwar Kumar
Bhuvaneshwar Kumar
author img

By

Published : Jan 16, 2020, 1:55 PM IST

ಬೆಂಗಳೂರು: ಸ್ಪೋರ್ಟ್ಸ್​ ಹರ್ನಿಯಾದಿಂದ ಬಳಲುತ್ತಿದ್ದ ಭಾರತದ ಸ್ಟಾರ್​ ಬೌಲರ್​ ಭುವನೇಶ್ವರ್​ ಕುಮಾರ್​ಗೆ ಲಂಡನ್​ನಲ್ಲಿ ಯಶಸ್ವಿ ಸರ್ಜರಿ ಮುಗಿದಿದ್ದು, ಪುನಶ್ಚೇತನ ಕ್ರಮಕ್ಕಾಗಿ ಬೆಂಗಳೂರಿನ ಎನ್​ಸಿಎಗೆ ಸೇರಲಿದ್ದಾರೆ.

ವೆಸ್ಟ್​ ಇಂಡೀಸ್​ ವಿರುದ್ಧದ ಟಿ20 ಸರಣಿವೇಳೆ ಭುವನೇಶ್ವರ್​ ಕುಮಾರ್​ಗೆ​ ಸ್ಪೋರ್ಟ್ಸ್​ ಹರ್ನಿಯಾ ಇರುವುದು ಪತ್ತೆಯಾಗಿತ್ತು. ನಂತರ ಏಕದಿನ ಸರಣಿಯಿಂದ ಹೊರಬಿದ್ದಿದ್ದರು. ಇದೀಗ ಭಾರತದ ಪಿಸಿಯೋಥೆರಫಿಸ್ಟ್​ ಯೋಗೇಶ್​ ಕುಮಾರ್​ ಅವರ ಜೊತೆ ಲಂಡನ್​ಗೆ ತೆರಳಿ ಜನವರಿ 11 ರಂದು ಯಶಸ್ವಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ.

ಭುವಿ ಭಾರತಕ್ಕೆ ಹಿಂತಿರುಗಿದ ಮೇಲೆ ತಮ್ಮ ಪುನಶ್ಚೇತನ ಕ್ರಮಕ್ಕಾಗಿ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್​ ಆಕಾಡೆಮಿಗೆ ತೆರಳಲಿದ್ದಾರೆ. ಈ ವೇಳೆ, ಅವರು ಫಿಟ್​ ಎನಿಸಿದರೆ ನ್ಯೂಜಿಲ್ಯಾಂಡ್​ ವಿರುದ್ಧದ ಸರಣಿಗೆ ಅವರನ್ನು ಪರಿಗಣಿಸುವ ಸಾಧ್ಯತೆಯಿದೆ ಎಂದು ಬಿಸಿಸಿಐ ಮೂಲಗಳಿಂದ ತಿಳಿದುಬಂದಿದೆ.

2018ರಲ್ಲಿ ಜೋಹಾನ್ಸ್​​​​ಬರ್ಗ್​ನಲ್ಲಿ ನಡೆದಿದ್ದ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್​ ಪಂದ್ಯದಲ್ಲಿ ಪಂದ್ಯಶ್ರೇಷ್ಠ ಪ್ರದರ್ಶನ ತೋರಿದ್ದ ಅವರು ಅದೇ ಪಂದ್ಯದಲ್ಲಿ ಗಾಯಕ್ಕೆ ತುತ್ತಾಗಿದ್ದರು. ನಂತರ ಚೇತರಿಸಿಕೊಂಡು ವಿಂಡೀಸ್​ ವಿರುದ್ಧ ಟಿ20 ಸರಣಿಗೆ ಆಯ್ಕೆಯಾದರಾದರು ಸ್ಪೋರ್ಟ್ಸ್​ ಹರ್ನಿಯಕ್ಕೆ ತುತ್ತಾಗಿದ್ದರು.

ಬೆಂಗಳೂರು: ಸ್ಪೋರ್ಟ್ಸ್​ ಹರ್ನಿಯಾದಿಂದ ಬಳಲುತ್ತಿದ್ದ ಭಾರತದ ಸ್ಟಾರ್​ ಬೌಲರ್​ ಭುವನೇಶ್ವರ್​ ಕುಮಾರ್​ಗೆ ಲಂಡನ್​ನಲ್ಲಿ ಯಶಸ್ವಿ ಸರ್ಜರಿ ಮುಗಿದಿದ್ದು, ಪುನಶ್ಚೇತನ ಕ್ರಮಕ್ಕಾಗಿ ಬೆಂಗಳೂರಿನ ಎನ್​ಸಿಎಗೆ ಸೇರಲಿದ್ದಾರೆ.

ವೆಸ್ಟ್​ ಇಂಡೀಸ್​ ವಿರುದ್ಧದ ಟಿ20 ಸರಣಿವೇಳೆ ಭುವನೇಶ್ವರ್​ ಕುಮಾರ್​ಗೆ​ ಸ್ಪೋರ್ಟ್ಸ್​ ಹರ್ನಿಯಾ ಇರುವುದು ಪತ್ತೆಯಾಗಿತ್ತು. ನಂತರ ಏಕದಿನ ಸರಣಿಯಿಂದ ಹೊರಬಿದ್ದಿದ್ದರು. ಇದೀಗ ಭಾರತದ ಪಿಸಿಯೋಥೆರಫಿಸ್ಟ್​ ಯೋಗೇಶ್​ ಕುಮಾರ್​ ಅವರ ಜೊತೆ ಲಂಡನ್​ಗೆ ತೆರಳಿ ಜನವರಿ 11 ರಂದು ಯಶಸ್ವಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ.

ಭುವಿ ಭಾರತಕ್ಕೆ ಹಿಂತಿರುಗಿದ ಮೇಲೆ ತಮ್ಮ ಪುನಶ್ಚೇತನ ಕ್ರಮಕ್ಕಾಗಿ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್​ ಆಕಾಡೆಮಿಗೆ ತೆರಳಲಿದ್ದಾರೆ. ಈ ವೇಳೆ, ಅವರು ಫಿಟ್​ ಎನಿಸಿದರೆ ನ್ಯೂಜಿಲ್ಯಾಂಡ್​ ವಿರುದ್ಧದ ಸರಣಿಗೆ ಅವರನ್ನು ಪರಿಗಣಿಸುವ ಸಾಧ್ಯತೆಯಿದೆ ಎಂದು ಬಿಸಿಸಿಐ ಮೂಲಗಳಿಂದ ತಿಳಿದುಬಂದಿದೆ.

2018ರಲ್ಲಿ ಜೋಹಾನ್ಸ್​​​​ಬರ್ಗ್​ನಲ್ಲಿ ನಡೆದಿದ್ದ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್​ ಪಂದ್ಯದಲ್ಲಿ ಪಂದ್ಯಶ್ರೇಷ್ಠ ಪ್ರದರ್ಶನ ತೋರಿದ್ದ ಅವರು ಅದೇ ಪಂದ್ಯದಲ್ಲಿ ಗಾಯಕ್ಕೆ ತುತ್ತಾಗಿದ್ದರು. ನಂತರ ಚೇತರಿಸಿಕೊಂಡು ವಿಂಡೀಸ್​ ವಿರುದ್ಧ ಟಿ20 ಸರಣಿಗೆ ಆಯ್ಕೆಯಾದರಾದರು ಸ್ಪೋರ್ಟ್ಸ್​ ಹರ್ನಿಯಕ್ಕೆ ತುತ್ತಾಗಿದ್ದರು.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.