ETV Bharat / sitara

ಯಶಸ್ವಿ 500 ಎಪಿಸೋಡ್​​​​​ಗಳನ್ನು ಪೂರೈಸಿದ 'ಕಮಲಿ' - Kamali completed 500 episodes

ತಮ್ಮ ಮೊದಲ ಸೊಸೆ ಗೌರಿಯನ್ನು ನೋಡಿ ಅನ್ನಪೂರ್ಣಮ್ಮನಿಗೆ ಬಹಳ ಸಂತಸವಾಗುತ್ತದೆ. ಈ ಖುಷಿಯ ಜೊತೆ ಕಮಲಿಯೇ ತನ್ನ ಮೊಮ್ಮಗಳು ಎಂದು ತಿಳಿದಾಗ ಅವರು ಸಂತೋಷದಲ್ಲಿ ತೇಲಾಡುತ್ತಾರೆ.

Kamali
ಕಮಲಿ
author img

By

Published : Jan 16, 2020, 4:26 PM IST

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅರವಿಂದ್ ಕೌಶಿಕ್ ನಿರ್ದೇಶನದ ಜನಪ್ರಿಯ ಧಾರಾವಾಹಿ 'ಕಮಲಿ' ಯಶಸ್ವಿ 500 ಸಂಚಿಕೆಗಳನ್ನು ಪೂರೈಸಿದೆ. ವಿಭಿನ್ನ ಕಥೆಯ ಮೂಲಕ ಕಿರುತೆರೆ ಪ್ರಿಯರ ಮನ ಸೆಳೆದಿರುವ ಈ ಧಾರಾವಾಹಿಯಲ್ಲಿ ನಾಯಕ ರಿಷಿ ಮತ್ತು ನಾಯಕಿ ಕಮಲಿಯ ಪ್ರೀತಿಯನ್ನು ನೋಡುವುದೇ ಚೆಂದ.

ಹಳ್ಳಿ ಹುಡುಗಿ ಕಮಲಿ, ವಿದ್ಯಾಭ್ಯಾಸ ಮಾಡಲು ಪಟ್ಟಣಕ್ಕೆ ಬರುತ್ತಾಳೆ. ಅಲ್ಲಿ ವಿಲನ್ ಅನಿಕಾಳಿಂದ ಸಾಕಷ್ಟು ಕಷ್ಟವನ್ನು ಕೂಡಾ ಅನುಭವಿಸುತ್ತಾಳೆ. ಆದರೆ ಪ್ರತಿ ಬಾರಿಯೂ ಕಷ್ಟದಿಂದ ಹೊರಬರುವ ಕಮಲಿ ಯಾವುದಕ್ಕೂ ಎದೆಗುಂದುವುದಿಲ್ಲ. ಬದಲಿಗೆ ಎಲ್ಲವನ್ನು ಸಲೀಸಾಗಿ ನಿಭಾಯಿಸುತ್ತಾಳೆ. ಮಾತ್ರವಲ್ಲ ಅನಿರೀಕ್ಷಿತವಾಗಿ ಇಂಗ್ಲೀಷ್ ಲೆಕ್ಚರರ್ ರಿಷಿಯೊಂದಿಗೆ ಪ್ರೀತಿಯ ಬಲೆಯಲ್ಲಿ ಬೀಳುತ್ತಾಳೆ. ಇನ್ನು ಆಶ್ರಮದಲ್ಲಿ ಇರುವ ತನ್ನ ತಾಯಿ ಗೌರಿಯನ್ನು ಮನೆಗೆ ಬರುವಂತೆ ಕಮಲಿ ಒತ್ತಾಯಿಸುತ್ತಿರುವಾಗ ಗೌರಿ ಒಲ್ಲೆ ಎನ್ನುತ್ತಾಳೆ. ನಾನು ಬಂದರೆ ಅಪಾಯ ಮತ್ತಷ್ಟು ಹೆಚ್ಚಾಗುತ್ತದೆ ಎಂದು ಹೇಳುತ್ತಾಳೆ. ಆ ಸಮಯದಲ್ಲಿ ಆಶ್ರಮಕ್ಕೆ ಬರುವ ಸದಾನಂದ ಗೌರಿಯನ್ನು ಮತ್ತೆ ಮನೆಗೆ ಮರಳಿ ಬರುವಂತೆ ಒತ್ತಾಯ ಮಾಡುತ್ತಾನೆ.

PC: Zee Kannada
'ಕಮಲಿ' (ಫೋಟೋಕೃಪೆ: ಜೀ ಕನ್ನಡ)

ಇತ್ತ ಚಂದ್ರು ಮತ್ತು ಊರ್ಮಿಳಾಗೆ ಮರು ಮದುವೆ ಏರ್ಪಾಡಾಗಿರುತ್ತದೆ. ಇನ್ನು ತಾಳಿ ಕಟ್ಟಬೇಕು ಎನ್ನುವಾಗ ಕಮಲಿ ತಾಯಿ ಗೌರಿಯೊಂದಿಗೆ ಬಂದು ಮದುವೆ ನಿಲ್ಲಿಸುತ್ತಾಳೆ. ತಮ್ಮ ಮೊದಲ ಸೊಸೆ ಗೌರಿಯನ್ನು ನೋಡಿ ಅನ್ನಪೂರ್ಣಮ್ಮನಿಗೆ ಬಹಳ ಸಂತಸವಾಗುತ್ತದೆ. ಇದರೊಂದಿಗೆ ತಮ್ಮ ಪತಿ ಸದಾನಂದ ನಡೆಯುವುದು, ಮಾತನಾಡುವುದನ್ನು ನೋಡಿದಾಗ ಸಂತಸ ಅನ್ನಪೂರ್ಣಮ್ಮನಿಗೆ ಸಂತೋಷ ಇಮ್ಮಡಿಯಾಗುತ್ತದೆ. ಗೌರಿಯನ್ನು ನೋಡಿ ಅನ್ನಪೂರ್ಣಮ್ಮ ನಿಗೆ ಮಾತೇ ಬರುವುದಿಲ್ಲ. ಈ ಖುಷಿಯ ಜೊತೆ ಕಮಲಿಯೇ ತನ್ನ ಮೊಮ್ಮಗಳು ಎಂದು ತಿಳಿದಾಗ ಅವರು ಸಂತೋಷದಲ್ಲಿ ತೇಲಾಡುತ್ತಾರೆ. ನಂತರ ಅನ್ನಪೂರ್ಣಮ್ಮ ಚಂದ್ರು ಮತ್ತು ಗೌರಿಗೆ ಮರು ಮಾಂಗಲ್ಯಧಾರಣೆ ಮಾಡಿಸುತ್ತಾರೆ. ಮುಂದೇನಾಗುತ್ತದೆ, ಕಥೆ ಯಾವ ರೀತಿ ಸಾಗುತ್ತದೆ ಎಂದು ತಿಳಿಯಲು ನೀವು ಧಾರಾವಾಹಿಯ ಮುಂದಿನ ಎಪಿಸೋಡ್​​​​ಗಳನ್ನು ನೋಡಬೇಕು.

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅರವಿಂದ್ ಕೌಶಿಕ್ ನಿರ್ದೇಶನದ ಜನಪ್ರಿಯ ಧಾರಾವಾಹಿ 'ಕಮಲಿ' ಯಶಸ್ವಿ 500 ಸಂಚಿಕೆಗಳನ್ನು ಪೂರೈಸಿದೆ. ವಿಭಿನ್ನ ಕಥೆಯ ಮೂಲಕ ಕಿರುತೆರೆ ಪ್ರಿಯರ ಮನ ಸೆಳೆದಿರುವ ಈ ಧಾರಾವಾಹಿಯಲ್ಲಿ ನಾಯಕ ರಿಷಿ ಮತ್ತು ನಾಯಕಿ ಕಮಲಿಯ ಪ್ರೀತಿಯನ್ನು ನೋಡುವುದೇ ಚೆಂದ.

ಹಳ್ಳಿ ಹುಡುಗಿ ಕಮಲಿ, ವಿದ್ಯಾಭ್ಯಾಸ ಮಾಡಲು ಪಟ್ಟಣಕ್ಕೆ ಬರುತ್ತಾಳೆ. ಅಲ್ಲಿ ವಿಲನ್ ಅನಿಕಾಳಿಂದ ಸಾಕಷ್ಟು ಕಷ್ಟವನ್ನು ಕೂಡಾ ಅನುಭವಿಸುತ್ತಾಳೆ. ಆದರೆ ಪ್ರತಿ ಬಾರಿಯೂ ಕಷ್ಟದಿಂದ ಹೊರಬರುವ ಕಮಲಿ ಯಾವುದಕ್ಕೂ ಎದೆಗುಂದುವುದಿಲ್ಲ. ಬದಲಿಗೆ ಎಲ್ಲವನ್ನು ಸಲೀಸಾಗಿ ನಿಭಾಯಿಸುತ್ತಾಳೆ. ಮಾತ್ರವಲ್ಲ ಅನಿರೀಕ್ಷಿತವಾಗಿ ಇಂಗ್ಲೀಷ್ ಲೆಕ್ಚರರ್ ರಿಷಿಯೊಂದಿಗೆ ಪ್ರೀತಿಯ ಬಲೆಯಲ್ಲಿ ಬೀಳುತ್ತಾಳೆ. ಇನ್ನು ಆಶ್ರಮದಲ್ಲಿ ಇರುವ ತನ್ನ ತಾಯಿ ಗೌರಿಯನ್ನು ಮನೆಗೆ ಬರುವಂತೆ ಕಮಲಿ ಒತ್ತಾಯಿಸುತ್ತಿರುವಾಗ ಗೌರಿ ಒಲ್ಲೆ ಎನ್ನುತ್ತಾಳೆ. ನಾನು ಬಂದರೆ ಅಪಾಯ ಮತ್ತಷ್ಟು ಹೆಚ್ಚಾಗುತ್ತದೆ ಎಂದು ಹೇಳುತ್ತಾಳೆ. ಆ ಸಮಯದಲ್ಲಿ ಆಶ್ರಮಕ್ಕೆ ಬರುವ ಸದಾನಂದ ಗೌರಿಯನ್ನು ಮತ್ತೆ ಮನೆಗೆ ಮರಳಿ ಬರುವಂತೆ ಒತ್ತಾಯ ಮಾಡುತ್ತಾನೆ.

PC: Zee Kannada
'ಕಮಲಿ' (ಫೋಟೋಕೃಪೆ: ಜೀ ಕನ್ನಡ)

ಇತ್ತ ಚಂದ್ರು ಮತ್ತು ಊರ್ಮಿಳಾಗೆ ಮರು ಮದುವೆ ಏರ್ಪಾಡಾಗಿರುತ್ತದೆ. ಇನ್ನು ತಾಳಿ ಕಟ್ಟಬೇಕು ಎನ್ನುವಾಗ ಕಮಲಿ ತಾಯಿ ಗೌರಿಯೊಂದಿಗೆ ಬಂದು ಮದುವೆ ನಿಲ್ಲಿಸುತ್ತಾಳೆ. ತಮ್ಮ ಮೊದಲ ಸೊಸೆ ಗೌರಿಯನ್ನು ನೋಡಿ ಅನ್ನಪೂರ್ಣಮ್ಮನಿಗೆ ಬಹಳ ಸಂತಸವಾಗುತ್ತದೆ. ಇದರೊಂದಿಗೆ ತಮ್ಮ ಪತಿ ಸದಾನಂದ ನಡೆಯುವುದು, ಮಾತನಾಡುವುದನ್ನು ನೋಡಿದಾಗ ಸಂತಸ ಅನ್ನಪೂರ್ಣಮ್ಮನಿಗೆ ಸಂತೋಷ ಇಮ್ಮಡಿಯಾಗುತ್ತದೆ. ಗೌರಿಯನ್ನು ನೋಡಿ ಅನ್ನಪೂರ್ಣಮ್ಮ ನಿಗೆ ಮಾತೇ ಬರುವುದಿಲ್ಲ. ಈ ಖುಷಿಯ ಜೊತೆ ಕಮಲಿಯೇ ತನ್ನ ಮೊಮ್ಮಗಳು ಎಂದು ತಿಳಿದಾಗ ಅವರು ಸಂತೋಷದಲ್ಲಿ ತೇಲಾಡುತ್ತಾರೆ. ನಂತರ ಅನ್ನಪೂರ್ಣಮ್ಮ ಚಂದ್ರು ಮತ್ತು ಗೌರಿಗೆ ಮರು ಮಾಂಗಲ್ಯಧಾರಣೆ ಮಾಡಿಸುತ್ತಾರೆ. ಮುಂದೇನಾಗುತ್ತದೆ, ಕಥೆ ಯಾವ ರೀತಿ ಸಾಗುತ್ತದೆ ಎಂದು ತಿಳಿಯಲು ನೀವು ಧಾರಾವಾಹಿಯ ಮುಂದಿನ ಎಪಿಸೋಡ್​​​​ಗಳನ್ನು ನೋಡಬೇಕು.

Intro:Body: ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅರವಿಂದ್ ಕೌಶಿಕ್ ನಿರ್ದೇಶನದ ಜನಪ್ರಿಯ ಧಾರಾವಾಹಿ ಕಮಲಿ ಯಶಸ್ವಿ 500 ಸಂಚಿಕೆಗಳನ್ನು ಪೂರೈಸಿದೆ. ವಿಭಿನ್ನ ಕತೆಯ ಮೂಲಕ ಕಿರುತೆರೆ ಪ್ರಿಯರನ ಸೆಳೆದಿರುವ ಕಮಲಿ ಧಾರಾವಾಹಿಯಲ್ಲಿ ನಾಯಕ ರಿಷಿ ಮತ್ತು ನಾಯಕಿ ಕಮಲಿಯ ಪ್ರೇಮ ಸಲ್ಲಾಪವನ್ನೇ ನೋಡುವುದೇ ಚೆಂದ!

ಹಳ್ಳಿ ಹುಡುಗಿ ಕಮಲಿ, ಓದುವುದಕ್ಕೆ ಪಟ್ಟಣಕ್ಕೆ ಬರುತ್ತಾಳೆ. ಅಲ್ಲಿ ವಿಲನ್ ಅನಿಕಾಳಿಂದ ಸಾಕಷ್ಟು ಕಷ್ಟವನ್ನು ಕೂಡಾ ಪಡುತ್ತಾಳೆ. ಆದರೆ ಪ್ರತಿಬಾರಿಯೂ ಕಷ್ಟದಿಂದ ಹೊರಬರಿವ ಕಮಲಿ ಯಾವುದಕ್ಕೂ ಎದೆಗುಂದುವುದಿಲ್ಲ. ಬದಲಿಗೆ ಎಲ್ಲವನ್ನು ಸಲೀಸಾಗಿ ನಿಭಾಯಿಸುವ ಕಲೆ ಅವಳಿಗೆ ತಿಳಿದಿದೆ. ಮಾತ್ರವಲ್ಲ ಅನಿರೀಕ್ಷಿತವಾಗಿ ಇಂಗ್ಲೀಷ್ ಲೆಕ್ಚರರ್ ರಿಷಿಯೊಂದಿಗೆ ಪ್ರೀತಿಯಲ್ಲಿ ಬಿದ್ದಿರುವ ಕಮಲಿ ಹೀಗೆ ಪ್ರತಿದಿನವೂ ವೀಕ್ಷಕರಿಗೆ ಮನರಂಜನೆಯ ಮಹಾಪೂರವನ್ನೇ ಉಣಬಡಿಸುತ್ತಿರುವ ಕಮಲಿ ಧಾರಾವಾಹಿ ಇದೀಗ ಹೊಸ ಟ್ವಿಸ್ಟ್ ಕೂಡಾ ಪಡೆದಿದೆ.

ಆಶ್ರಮದಲ್ಲಿ ಇರುವ ಗೌರಿಯನ್ನು ಮನೆಗೆ ಬರುವಂತೆ ಕಮಲಿ ಒತ್ತಾಯಿಸುತ್ತಿರುವಾಗ ಗೌರಿ ಒಲ್ಲೆ ಎನ್ನುತ್ತಾಳೆ. ನಾನು ಬಂದರೆ ಅಪಾಯ ಮತ್ತು ಜಾಸ್ತಿ ಎಂದು ಹೇಳುತ್ತಾಳೆ. ಆ ಸಮಯದಲ್ಲಿ ಆಶ್ರಮಕ್ಕೆ ಬರುವ ಸದಾನಂದ ಗೌರಿಯನ್ನು ಮತ್ತೆ ಮನೆಗೆ ಮರಳಿ ಬರುವಂತೆ ಒತ್ತಾಯ ಮಾಡುತ್ತಾನೆ. ಇತ್ತ ಚಂದ್ರು ಮತ್ತು ಊರ್ಮಿಳಾಗೆ ಮರು ಮದುವೆ ಏರ್ಪಾಡಾಗಿರುತ್ತದೆ. ಕಾಮಿನಿ ಅನ್ನಪೂರ್ಣನಿಗೆ ಬೇಗ ಬೇಗ ಕಾರ್ಯಗಳು ನಡೆಯಲಿ ಎಂದು ಹೇಳಿ ಇನ್ನೇನು ತಾಳಿ ಕಟ್ಟಬೇಕು ಎನ್ನುವಾಗ ಕಮಲಿ ಬಂದು ಮದುವೆ ನಿಲ್ಲಿಸುತ್ತಾಳೆ. ನಂತರ ತಮ್ಮ ಮೊದಲ ಸೊಸೆ ಗೌರಿಯನ್ನು ನೋಡಿ ಅನ್ನಪೂರ್ಣನಿಗೆ ಬಹಳ ಸಂತಸವಾಗುತ್ತದೆ. ಮಾತ್ರವಲ್ಲ ತಮ್ಮ ಪತಿ ಸದಾನಂದ ನಡೆಯುವುದು, ಮಾತನಾಡುವುದನ್ನು ನೋಡಿದಾಗ ಸಂತಸ ಇಮ್ಮಡಿಯಾಗುತ್ತದೆ.

ಗೌರಿಯನ್ನು ನೋಡಿ ಅನ್ನಪೂರ್ಣಮ್ಮ ನಿಗೆ ಮಾತೇ ಬರುವುದಿಲ್ಲ. ಮುಂದೆ ತಮ್ಮ ಮೊಮ್ಮಗಳು ಯಾರು ಎಂದು ಕೇಳಿದಾಗ ಸದಾನಂದ ತಾನು ಹೇಳುತ್ತೇನೆ ಎಂದು ಹೇಳುತ್ತಾರೆ. ಮತ್ತೆ ತಮ್ಮ ಮೊಮ್ಮಗಳು ಬೇರಾರೂ ಅಲ್ಲ, ಕಮಲಿ ಎಂದು ಹೇಳುತ್ತಾರೆ. ಸಂತಸದಲ್ಲಿ ತೇಲಾಡುತ್ತಿರುವ ಅನ್ನಪೂರ್ಣ ಚಂದ್ರು ಮತ್ತು ಗೌರಿಗೆ ಮರು ಮಾಂಗಲ್ಯಧಾರಣೆ ಮಾಡುತ್ತಾರೆ. ಮುಂದೇನಾಗುತ್ತದೆ, ಕಥೆ ಯಾವ ರೀತಿ ಸಾಗುತ್ತದೆ ಎಂಬ ಕುತೂಹಲ ವೀಕ್ಷಕರಿಗಿದೆ.

https://www.instagram.com/p/B7QQpFAlsLU/?igshid=9m1fylmnlc6
Conclusion:

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.